tag:blogger.com,1999:blog-49257201261761980202024-03-05T13:50:48.059+05:30ಹೇಳಬೇಕೆನಿಸುತ್ತಿದೆ...Jayalaxmihttp://www.blogger.com/profile/00230397964148079817noreply@blogger.comBlogger102125tag:blogger.com,1999:blog-4925720126176198020.post-91175595331339940452021-04-16T18:13:00.009+05:302021-04-16T21:24:23.196+05:30ಪುಟಗಳಾಚೆ ತೇಲಿದ ಪದ - ಕಥೆ - ೨೦೨೧ರ ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ<p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEi2GwzPyvwglhGYo7eZi8TvcTjjlSiAXffh5OQvcDkLAQw1xeAUqHGHBZtvpnIrnWN5CPmNjWnUeY9W5xNJ6YZLUbRPyjbcqt7NPnO_E7e29yUAUdOm-sc8LgTKj4toEg-ATw9Cm2NGPBgR/s1280/PHOTO-2021-04-12-17-00-00.jpg" style="margin-left: 1em; margin-right: 1em;"><img border="0" data-original-height="833" data-original-width="1280" height="405" src="https://blogger.googleusercontent.com/img/b/R29vZ2xl/AVvXsEi2GwzPyvwglhGYo7eZi8TvcTjjlSiAXffh5OQvcDkLAQw1xeAUqHGHBZtvpnIrnWN5CPmNjWnUeY9W5xNJ6YZLUbRPyjbcqt7NPnO_E7e29yUAUdOm-sc8LgTKj4toEg-ATw9Cm2NGPBgR/w622-h405/PHOTO-2021-04-12-17-00-00.jpg" width="622" /></a></div><p dir="ltr" style="line-height: 1.38; margin-bottom: 0pt; margin-left: 36pt; margin-top: 0pt; text-align: center;"><span style="background-color: transparent; font-family: Tunga; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #cc0000; font-size: medium;"><br /></span></span></p><p dir="ltr" style="line-height: 1.38; margin-bottom: 0pt; margin-left: 36pt; margin-top: 0pt; text-align: center;"><span style="background-color: transparent; font-family: Tunga; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #cc0000; font-size: large;">ಕಥೆ</span></span></p><p dir="ltr" style="line-height: 1.38; margin-bottom: 0pt; margin-left: 36pt; margin-top: 0pt; text-align: center;"><span style="background-color: transparent; font-family: Tunga; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #38761d; font-size: x-large;">ಪುಟಗಳಾಚೆ ತೇಲಿದ ಪದ</span></span></p><p dir="ltr" style="line-height: 1.38; margin-bottom: 0pt; margin-left: 36pt; margin-top: 0pt; text-align: center;"><span style="background-color: transparent; font-family: Tunga; font-size: 16pt; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #2b00fe;"><br /></span></span></p><blockquote style="border: none; margin: 0 0 0 40px; padding: 0px;"><blockquote style="border: none; margin: 0px 0px 0px 40px; padding: 0px;"><blockquote style="border: none; margin: 0px 0px 0px 40px; padding: 0px;"><blockquote style="border: none; margin: 0px 0px 0px 40px; padding: 0px;"><blockquote style="border: none; margin: 0px 0px 0px 40px; padding: 0px;"><blockquote style="border: none; margin: 0px 0px 0px 40px; padding: 0px;"><blockquote style="border: none; margin: 0px 0px 0px 40px; padding: 0px;"><blockquote style="border: none; margin: 0px 0px 0px 40px; padding: 0px;"><blockquote style="border: none; margin: 0px 0px 0px 40px; padding: 0px;"><blockquote style="border: none; margin: 0px 0px 0px 40px; padding: 0px;"><blockquote style="border: none; margin: 0px 0px 0px 40px; padding: 0px;"><blockquote style="border: none; margin: 0px 0px 0px 40px; padding: 0px;"><p style="line-height: 1.38; margin-bottom: 0pt; margin-left: 36pt; margin-top: 0pt; text-align: left;"><span style="color: #cc0000; font-family: Tunga; font-size: 12pt; font-weight: 700; text-align: right; white-space: pre-wrap;"> - ಜಯಲಕ್ಷ್ಮಿ ಪಾಟೀಲ್</span></p></blockquote></blockquote></blockquote></blockquote></blockquote></blockquote></blockquote></blockquote></blockquote></blockquote></blockquote></blockquote><span style="color: #cc0000; font-family: Tunga;"><span style="white-space: pre-wrap;"><b><br /></b></span></span><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಆಂಟಿ, ಕ್ಯಾ ಮೆ ಆಪ್ಕಾ ಛಜ್ಜಾ ಪೇ ಯೇ ಡಿಬ್ಬಾ ರಖ್ ಸಕ್ತಿಹೂಂ? ಬಿಲ್ಲಿ ಔರ್ ಉಸ್ಕಾ ಕಾ ಬಚ್ಚಾ ಬಾರಿಶ್ ಮೇ ಭೀಗ್ ರಹೆ ಹೈಂ ವಂಹಾ’ ನಮ್ಮ ಹಿಂದಿನ ಮನೆಯ ಹುಡುಗಿ ಆಭಾ, ಪಕ್ಕದ ಮನೆಯ ಮಹಗಾಂವ್ಕರ್ ಬಾಭಿ ಹತ್ತಿರ ರಿಕ್ವೆಸ್ಟ್ ಮಾಡ್ಕೊಳ್ತಿದ್ದುದು ಕೇಳಿಸ್ತಿದ್ದಂತೆಯೇ ಅದ್ಯಾಕೋ ಗತಕಾಲದ ದನಿಯೊಂದು ಪ್ರತಿಧ್ವನಿಸಿದಂತೆನಿಸಿ ಎದೆಯಲ್ಲಿ ಚುಳ್ ಎಂದ ಅನುಭವ. ಆಗಷ್ಟೇ ತಿಂಡಿ ತಿಂದ ತಟ್ಟೆಗಳನ್ನು ಸಿಂಕಿಗೆ ಹಾಕಿ, ಮಳೆಯ ಇರಸಲಿಗೆ ತೊಯ್ದ ಗ್ಯಾಸ್ ಕಟ್ಟೆಯನ್ನು ಒರೆಸುತ್ತಿದ್ದ ನಾನು ರಪ್ಪನೆ ಕಿಟಿಕಿಯ ಬಾಗಿಲನ್ನು ಮುಚ್ಚಿದವಳೇ ನೆಲದ ಮೇಲೆ ಗೋಡೆಗಾತುಕೊಂಡು ಕುಳಿತೆ. ಹೊರಗೆ ಗಾಳಿ ಮಳೆ ಎರಡೂ ಸೇರಿ ಎಬ್ಬಿಸಿದ ರಂಪ ನನ್ನೊಳಗೇ ಸೇರಿಕೊಂಡುಬಿಟ್ಟಿದೆಯೇನೋ ಎನ್ನುವಂತೆ ನೆನಪಿಗಂಟಿಕೊಂಡ ಪುಟಗಳು ಸರ್ ಪರ್ ಸರ್ ಪರ್ ಸದ್ದು ಮಾಡುತ್ತಾ ನನ್ನನ್ನು ನಡುಗಿಸತೊಡಗಿದವು. ಹೊರಗೆ ಮಹಾಗಾಂವ್ಕರ್ ಭಾಭಿ ಎದುರು, ‘ಬಾರಿಶ್ ಕಥಮ್ ಹೋತೆ ಹೀ ಮೆ ಉಸೆ ವಂಹಾ ಸೆ ಹಠಾದೂಂಗಿ. ಕಬ್ ಸೆ ಅಪ್ನಿ ಪಿಲ್ಲೂ ಕೊ ಲೇಕರ್ ಭಟಕ್ ರಹಿ ಹೈ ವೋ…’ಆಭಾ ವಿವರಿಸುವ ದನಿ ತೆಳುವಾಗುತ್ತಾ ಹೋಗಿ ನನ್ನೊಳಗಿನ ಅಂದಿನ ದಿನಗಳ ದನಿಯ ಸದ್ದು ಹೆಚ್ಚಾಗತೊಡಗಿತು. ಗಾಳಿಗೆ ಸಿಲುಕಿ ಅಂಕೆಗೆ ಸಿಗದ ಕೂದಲನ್ನು ಹಿಡಿದಿಡುವ ಯತ್ನದಂತೆ ಮನಸ್ಸನ್ನು ತಹಬದಿಗೆ ತರಲು ಯತ್ನಿಸಿ ಪ್ರಯತ್ನಿಸಿ ಸೋಲತೊಡಗಿದೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಮಮ್ಮಾ... ಮಮ್ಮಾ, ಎದ್ದೇಳು. ಮಾ ಎದ್ದೇಳು’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಮಗನ ದನಿಗೆ ಎಚ್ಚರಗೊಂಡು,‘ಇಷ್ಟು ಜಲ್ದಿ ಬೆಳಗಾತಾ ?!’ ಕೇಳಿದೆ.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಚಕ್ಕರ್ ಬಂದಿತ್ತೇನು? ಬಾ ಕೈ ಹಿಡ್ಕೋತೀನಿ’ ಎನ್ನುತ್ತಾ ಕೈ ನೀಡಿದ ಎಂಟು ವರ್ಷದ ಮಗ. ಥಟ್ಟನೆ ನೆನಪಾಯಿತು, ಇದು ರಾತ್ರಿಯಲ್ಲ ಹಗಲು! ಮತ್ತು ನಾನು ಅಡುಗೆಮನೆ ಗೋಡೆಗೊರಗಿ ನಿದ್ದೆ ಹೋಗಿದ್ದೇನೆ. ನನ್ನವಸ್ಥೆಗೆ ಲಜ್ಜೆ ಎನಿಸಿ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಇಲ್ಲೇಳಪ್ಪಿ ಎದ್ದೇಳ್ತೀನಿ., ಹಂಗ ಸ್ವಲ್ಪ ಹೊತ್ತು ಕುಂದ್ರೂನು ಅಂತ ಗ್ವಾಡಿಗೆ ಆನ್ಸಿ ಕುಂತ್ರ ನಿದ್ದಿ ಹತ್ತಿ ಬಿಟ್ಟತಿ ನೋಡು!’ ಪೆದ್ದುಪೆದ್ದಾಗಿ ನಕ್ಕೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಮಗ ಗಲಗಲ ನಗುತ್ತಾ, ‘ಎಲ್ಲೆಂದ್ರ ಅಲ್ಲಿ ಮಕ್ಕೊಳ್ಳಾಕ ನೀ ಪಾಪು ಅದಿ ಪಾಪೂ?! ಮಮ್ಮಾ ಪಾsಪೂ ಮಮ್ಮಾ ಪಾsಪೂ’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅವನ ನಗುವಿನ ಸುಖದಲ್ಲಿ, ಅಷ್ಟೊತ್ತು ನರಳಿದ್ದು ಮರೆತೇ ಹೋದಂತೆನಿಸಿ ನಾನೂ ನಗುತ್ತಾ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಹೂಂ ನಾನು ಪಾಪು ಅದೀನಿ ನೀ ನನ್ನ ಬಾಪು ಅದಿ. ಬಾಪೂ ಬಾಪೂ ನನ್ನನ್ನ ಎತ್ಗೋ ಪೀಜ್, ಪೀಜ್ ಎತ್ಗೊ.’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">’ನಾ ವಲ್ಲೆವಾ ನೀ ಈssಟುದ್ದದಿದಿ! ನಿನ್ನ ಎತ್ಕಗೊಳ್ಳಾಕ ಹ್ವಾದ್ರ ನಾನ ದಬಕ್ ಅಂತ ಬಿದ್ದಬಿಡ್ತೀನಿ.’ ಮಗ ತನ್ನ ಬೆರಳ ತುದಿಗಳ ಮೇಲೆ ನಿಲ್ಲುತ್ತಾ, ಹಿಮ್ಮಡಿ ಎತ್ತರಿಸಿ ಕೈಯನ್ನು ಮೇಲೆ ಎತ್ತಿ ನಂತರ ಮುಂದೆ ಮುಗ್ಗರಿಸಿದಂತೆ ನಟಿಸಿದಾಗ ಮನಸಾರೆ ನಕ್ಕೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಹಾಲ್ ನಲ್ಲಿದ್ದ ಮೊಬೈಲ್ ಕುಣುಕುಣು ಅನ್ನತೊಡಗಿತು. ಅಡುಗೆ ಮನೆಯಿಂದ ಹೊರಗೆ ಬಂದೆ. ಸ್ಕ್ರೀನ್ ಮೇಲೆ ಅಶ್ವಿನ್ ಕಾಲಿಂಗ್ ಎಂದು ಕಾಣಿಸಿತು. ಎತ್ತುವುದೋ ಬೇಡವೋ ಎಂದುಕೊಳ್ಳುತ್ತಿರುವಾಗಲೇ ಶಂತನು, ‘ಮಮ್ಮಾ, ಇನ್ಮುಂದ ಪಪ್ಪಾ ಒಟ್ಟೇ ನಮ್ಜೋಡಿ ಇರೂದ ಇಲ್ಲೇನು? ಇಲ್ಲಿಗಂವಾ ಬರೂದೇಯಿಲ್ಲೇನು?’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಏನು ಹೇಳುವುದೆಂದು ತಿಳಿಯದೆ ಸುಮ್ಮನೆ ನಿಂತವಳು ಸಾವರಿಸಿಕೊಂಡು, ‘ಪಪ್ಪಾನ ನೆನಪು ಭಾಳ ಆಕ್ಕತಿ ನಿನಗ? ಮಿಸ್ಸಿಂಗ್ ಹಿಮ್?’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಮಗನ ಮನದಿಂಗಿತವನ್ನು ತಿಳಿದುಕೊಳ್ಳದೇ ನಾನೇನಾದರೂ ಹೇಳುವುದು ಸೂಕ್ತವಲ್ಲ ಅನಿಸಿ ಕೇಳಿದೆ. ಹೀಗೆ ಕೇಳಿಯಾದ ಮೇಲೆ ಅಕಸ್ಮಾತ್ ಅವನು ಹೂಂ ಅಂದುಬಿಟ್ಟರೆ…? ಒಳಗುದಿ ಶುರುವಾಯಿತು. ಶಂತನುವನ್ನು ನೀನು ನಮ್ಮಪ್ಪ ಎನ್ನುವ ಮೂಲಕ ನಾನೇ ಅವನ ಅಪ್ಪನ ನೆನಪಿಗೆ ಕಾರಣಳಾದವಳು. ಈಗ ಹೊಯ್ದಾಡುತ್ತಿರುವೆ.. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಭಾಳಿಲ್ಲ ಖರೆ ಆದ್ರ ಹಾಂ ಪಪ್ಪಾ ನಮ್ಜತಿ ಇದ್ದಿದ್ದ್ರ ಚೊಲೊ ಇರ್ತಿತ್ತು ಅಂತನಸ್ತತಿ’ ತನ್ನ ಉದ್ದುದ್ದ ರೆಪ್ಪೆಗಳನ್ನು ಪಟಪಟನೆ ಬಡೆಯುತ್ತಾ ನನ್ನ ಮುಖವನ್ನೇ ದಿಟ್ಟಿಸಿತು ಕಂದ. ಅವನು ಹೂಂ ಅಂದಾಗಿತ್ತು. ‘ಯಾರಿಗಾಗಿ ನೀನು ಹಂಬಲಿಸುತ್ತಿರುವೆಯೋ ಅವನ ಅತ್ಯಾಚಾರಕ್ಕೆ ಹುಟ್ಟಿದ ಮಗು ನೀನು’ ಎಂದು ಯಾವ ಬಾಯಿಂದ ಮಗನಿಗೆ ಹೇಳಬಹುದಿತ್ತು ನಾನು…? ಏನೂ ತೋಚದವಳಾಗಿ ಹ್ಮ್… ಎಂದು ನಿಡುಸೊಯ್ದು ಮಗನನ್ನು ಹತ್ತಿರಕ್ಕೆಳೆದುಕೊಂಡು ಅಪ್ಪಿ ನೆತ್ತಿಗೊಂದು ಹೂಮುತ್ತನಿತ್ತೆ. ನನ್ನ ಪ್ರತಿಕ್ರಿಯೆಯಿಂದ ಮಗುವಿಗೆ ಏನನಿಸಿತೋ.. ಮಾತು ಬೆಳೆಸದೆ ನನ್ನ ಕೈಯಿಂದ ನುಣುಚಿಕೊಂಡುಹೋಗಿ ಟಿವಿ ರಿಮೋಟ್ ಕೈಗೆತ್ತಿಕೊಂಡ.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ದಿಟ್ಟಿಸಿದೆ ಅವನನ್ನು. ಶಂತನುವಿನ ಕಣ್ಣು ಥೇಟ್ ನನ್ನ ಕಣ್ಣುಗಳೇ. ಅಗಲವಾಗಿ ಇಷ್ಟುದ್ದುದ್ದ ಚಾಮರದಂತೆ ದಟ್ಟವಾದ ರೆಪ್ಪೆಯ, ನಿರ್ಲಿಪ್ತತೆಯೂ ಸಹ ಬಿಳಿಪರದೆಯಾಚೆ ಏನನ್ನೋ ಅಡಗಿಸಿಟ್ಟ ಭಾವದೊಂದಿಗೇ ವ್ಯಕ್ತವಾಗುವಂಥ ಅಗಲ ಕಣ್ಣುಗಳು. ಏನನ್ನೂ ಬಚ್ಚಿಡಲಾಗದು ಅಲ್ಲಿ! ಮೆಚ್ಚುವವರ ಜೊತೆಗೆ ಶಾಲೆ ಕಾಲೇಜಿನಲ್ಲಿ ಅವು ನಕಲಿ ಇರಬಹುದಾ ಎಂದು ನನ್ನ ರೆಪ್ಪೆ ಎಳೆದುನೋಡಿ ಪರೀಕ್ಷಿಸಿದವರೂ ಇದ್ದರು! ಕಣ್ಣಿನ ಎಲ್ಲ ಭಾವಗಳಿಗೂ ನಿನಗೆ ಸಾಥ್ ಕೊಡುತ್ತೇನೆ ಎನ್ನುವಂಥ ನೆಟ್ಟಗಿನ ಮೂಗು. ಶಂತನುವಿನ ಕಣ್ಣು ಮೂಗು ಬಾಯಿ ನನ್ನವಾದರೆ, ನಾದಿದ ಕಣಕದಂಥ ಬಣ್ಣ, ಅಗಲ ಹಣೆ ಅವನಪ್ಪನದು. ಒಟ್ಟಿನಲ್ಲಿ ಇಬ್ಬರಿಂದಲೂ ಮಾಟವಾಗಿರುವುದನ್ನು ಆಯ್ದು ರೂಪುಗೊಂಡು ಹುಟ್ಟಿದ್ದ ಮಗ. ಅವನ ಅಪ್ಪನ ಚಿತ್ರ ಮನದಲ್ಲಿ ಮೂಡುತ್ತಿದ್ದಂತೆಯೇ ಮತ್ತೆ ಫೋನ್ ರಿಂಗಣಿಸಿತು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಮಮ್ಮಾ, ಫೋನೂ’ ಟಿವಿ ನೋಡುತ್ತಲೇ ಕೂಗಿಕೊಂಡ ಶಂತನು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಹೂಂ ಎನ್ನುತ್ತಲೇ ನಿಧಾನವಾಗಿ ಫೋನ್ ಕೈಗೆತ್ತಿಕೊಂಡೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಬೋಲೊ ಅಶ್ವಿನ್’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಮುಝೆ ಲಗಾ ಕಿ ಆಪ್ ಬ್ಯೂಸಿ ಹೋಂಗಿ… ಯಾಡ್ ಮಿನಟ್ ಮಾತಾಡಾಕಿತ್ತು.’ ಇನ್ನೇನು ಕಾಲ್ ಕಟ್ಟಾಗುವ ಕ್ಷಣದಲ್ಲಿ ಫೋನ್ ಎತ್ತಿಕೊಂಡಿದ್ದಕ್ಕವನು ಅಂದ ಮಾತಿದು ಎಂದು ಬಲ್ಲೆ ನಾನು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಹಾಂ ಹೇಳ್ರಿ’ ನನ್ನ ಚುಟುಕಾದ ಉತ್ತರದಿಂದ ಅಶ್ವಿನ್ ಪೆಚ್ಚಾದನೇನೋ. ಕ್ಷಣ ಕಾಲ ಆ ಕಡೆಯಿಂದ ಏನೂ ಸದ್ದಿಲ್ಲ. ಅಶ್ವಿನ್ ನನ್ನ ಕಲೀಗ್. ಅವನೂ ಕನ್ನಡದವನೇ. ಪುಣೆಯಲ್ಲೇ ಅವನು ಹುಟ್ಟಿ ಬೆಳೆದಿದ್ದಂತೆ. ಅವನ ತಂದೆ ತಾಯಿ ಬಿಜಾಪುರದವರಂತೆ. ಇವ ಹುಟ್ಟುವ ಮೊದಲೇ ಅವರು ಪುಣೆಯಲ್ಲಿ ನೆಲೆಸಿದ್ದರಿಂದ ಸಹಜವಾಗಿಯೇ ಬಿಜಾಪುರದ ಕನ್ನಡಕ್ಕೆ ಪುಣೇರಿ ಘಮಲಿರುತ್ತಿತ್ತು ಅವನ ಮಾತಲ್ಲಿ. ತುಂಬಾ ಮಾತುಗಾರನೇನಲ್ಲದಿದ್ದರೂ ಗುಮ್ಮನಗುಸುಗನೂ ಆಗಿರ್ಲಿಲ್ಲವಾದ್ದರಿಂದ ಅವನ ಭಾಷೆಯ ಹಿನ್ನೆಲೆ ತುಸು ಮಟ್ಟಿಗೆ ಆಫೀಸಲ್ಲಿ ಎಲ್ಲರಿಗೂ ಗೊತ್ತು. ಅವನ ಮನೆಮಾತು ಕನ್ನಡವಾದ್ದ್ರಿಂದ ನನ್ನ ಜೊತೆ ಕನ್ನಡದಲ್ಲಿ ಮಾತಾಡುವಾಗಲೆಲ್ಲ ಒಂಥರದ ಸಂಭ್ರಮ ಕಾಣಿಸುತ್ತಿತ್ತು ಅವನ ದನಿಯಲ್ಲಿ. ಕನ್ನಡದ ನಂಟೊಂದು ಸಿಕ್ಕ ಸಂಭ್ರಮ ಅದು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಏನಿಲ್ಲಾ, ಇವತ್ತ ಸಂಜೀಕೆ ನಮ್ಮನಿ ಒಳಗ ಸಣ್ಣದೊಂದು ಗೆಟ್ಟುಗೆದರ್ ಇಟ್ಕೊಂಡೀದ. ನೀವೂ ಬರ್ರಿ ಹೇಳಾಕ್ ಫೋನ್ ಮಾಡಿದ್ದ. ಪ್ಲೀಸ್ ಕಮ್’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಓಹ್. ತ್ಯಾಂಕ್ಸ್ ಫಾರ್ ಇನ್ವಿಟೇಶನ್. ಬಟ್ ಸಾರಿ, ಬರಾಕಾಗಂಗಿಲ್ಲ ಅಶ್ವಿನ್. ನೀವ್ ಎಂಜಾಯ್ ಮಾಡ್ರಿ, ಬೈ’ ಫೋನ್ ಕಟ್ ಮಾಡಲು ಹೋಗುತ್ತಿದ್ದಂತೆಯೇ ಆ ಕಡೆಯಿಂದ,</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ರೀ ರೀ ರೀ ಪ್ಲೀಸ್. ನನ್ನ ಮಾತು ಪೂರಾ ಕೇಳಿ ಆಮ್ಯಾಲೆ ಬೇಕಾದ್ರ ಕಟ್ ಮಾಡ್ರಿ’ ಯಾಕೋ ಅಗತ್ಯವೇ ಇಲ್ಲದೆ ಅವನೊಂದಿಗೆ ಒರಟಾದೆ ಅನಿಸಿ, ‘ಸಾರಿ, ವೆರ್ರೀ ಸಾರಿ. ಹೇಳ್ರಿ’ ಅಂದೆ.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಇಲ್ಲಾ ಆಫೀಸಿಂದ ಎಲ್ಲಾರೂ ಬರಾಕತ್ತಾರ್ರಿ. ನೀವೊಬ್ಬ್ರು ಬರ್ಲಿಲ್ಲಂದ್ರ ಚೊಲೊ ಅನ್ಸಂಗಿಲ್ಲ. ಸುಮ್ನೆ ಏನೆಲ್ಲಾ ಪುಕಾರ್ ಹುಟ್ಕೋತಾವ. ಬೇಕಾರ ನಿಮ್ಮ ಪೇರಂಟ್ಸ್ ಜೋಡಿ ಮಾತಾಡಂದ್ರ ನಾ ಮಾತಾಡ್ತೀನಿ. ರಾತ್ರಿ ಹತ್ತರೊಳಗ ಸುರಕ್ಷಿತ್ ನಿಮ್ಮನ್ನ ಮನಿಗೆ ಮುಟ್ಟ್ಸೂ ಜಿಮ್ಮಾ ನಂದು.’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಪೇರೆಂಟ್ಸ್ ಜೋಡೀನಾ?’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಬ್ಯಾಡಂತೀರಿ..? ಅಲ್ಲಾ.. ನಿಮ್ಮ ಪೇರೆಂಟ್ಸ್ ದು ಏನರೆ ಆಬ್ಜೆಕ್ಷನ್ ಇದ್ದ್ರ ಅಂತನಿಶಿ…’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಹಂಗೇನಿಲ್ಲ. ಸರಿ ಬರ್ತೀನಿ ಬಿಡ್ರಿ. ಆದ್ರ ಅಲ್ಲಿ ಭಾಳಹೊತ್ತು ಇರಾಕಾಗಂಗಿಲ್ಲ ಅಶ್ವಿನ್. ನಾಳೀದು ತಯಾರಿ ಇರ್ತತಲ್ಲಾ, ಸೊ..’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಆಯ್ತು ಬರ್ರಿ. ಇರ್ರಿ ಅಂತ ಫೋರ್ಸ್ ಮಾಡಂಗಿಲ್ಲ ಬರ್ರಿ ಬರ್ರಿ.’ ಖುಷಿಯಿತ್ತು ಅವನ ದನಿಯಲ್ಲಿ. ಫೋನಿಟ್ಟ.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಶಂತನು, ಸಂಜಿಮುಂದ ನಾನು ನೀನು ಪಾರ್ಟಿಗೆ ಹೋಗೂದು’ ಎಂದೆ. ಮಗ ಖುಷಿ ಆದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಚಲೊ, Tv ಆಫ್ ಮಾಡಿ ಜಲ್ದಿ ಜಲ್ದಿ ನಿನ್ನ ಹೋಮ್ವರ್ಕ್ ಮುಗ್ಸು. ನಾನು ನಿನ್ನ ಯೂನಿಫಾರ್ಮ್ ಇಸ್ತ್ರಿ ಮಾಡಿಟ್ಟು ಮದ್ಯಾಹ್ನದೂಟಕ್ಕ ಪುಲಾವ್ ಮಾಡ್ತೀನಿ’. ಎನ್ನುತ್ತಾ ಒಳ ನಡೆದೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #cc0000; font-size: large;">***</span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅಶ್ವಿನ್ ನ ಮನೆಯಿಂದ ಮರಳಿ ಬಂದವಳೇ ಅದಾಗಲೇ ದಾರಿಯಲ್ಲೇ ನಿದ್ದೆಯಿಂದ ತೂಕಡಿಸುತ್ತಿದ್ದ ಶಂತನುವಿನ ಬಟ್ಟೆ ಬದಲಿಸುವ ಗೋಜಿಗೆ ಹೋಗದೆ ಹಾಗೇ ಗಾದಿಯ ಮೇಲೆ ಮಲಗಿಸಿದೆ. ನಾನು ಬಟ್ಟೆ ಬದಲಿಸಿ ನಾಳೆಗಾಗಿ ತರಕಾರಿ ಹೆಚ್ಚಲು ನಿಂತೆ. ಈಗ ಹಿಟ್ಟು ನಾದಿ, ತರಕಾರಿ ಹೆಚ್ಚಿ ಫ್ರಿಜ್ಜಲ್ಲಿಟ್ಟುಕೊಂಡರೆ ಬೆಳಗ್ಗೆ ಬೇಗ ಅಡುಗೆ ಮುಗಿಸಿ, ಡಬ್ಬಿ ಕಟ್ಟಿಕೊಂಡು ಸರಿಯಾದ ಹೊತ್ತಲ್ಲಿ ಮನೆಯಿಂದ ಹೊರಟು, ಶಂತನುವನ್ನು ಸ್ಕೂಲಲ್ಲಿ ಬಿಟ್ಟು ಆಫೀಸ್ ತಲುಪಲು ಅನುಕೂಲವಾಗುತ್ತಿತ್ತು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"> ಬೆಳಿಗಿನ ಧಾರೆಯಿಂದ ಮೋಡಗಳಿಗೆ ತೃಪ್ತಿಯಾಗಿರಲಿಲ್ಲವೇನೋ, ರಾತ್ರಿಯ ಕತ್ತಲೊಡನೆ ಮೋಡಗಳ ಘರ್ಷಣೆಗೆ ಆಗಾಗ ಮಿಂಚು ಫಳ್ ಫಳ್ ಫಳಾಯಿಸುತ್ತ ಹನಿಗಳನ್ನುದುರಿಸತೊಡಗಿದವು. ಬೆಳಿಗ್ಗೆ ಬಟ್ಟೆ ಒಣಗಿಲ್ಲವೆಂದು ಹಾಗೇ ಬಿಟ್ಟಿದ್ದು ಈಗ ನೆನಪಾಗಿ ಎಂಥಾ ಕೆಲಸ ಮಾಡಿಕೊಂಡೆ ಎಂದು ಪೇಚಾಡುತ್ತಿರುವಾಗಲೇ, ಅಶ್ವಿನ್ ಇವತ್ತು ಅವರ ಮನೆಯಲ್ಲಿ ಅವನ ಅಸೈನ್ಮೆಂಟೊಂದನ್ನು ನಾನು ಮುಗಿಸಿಕೊಟ್ಟ ಉಪಕಾರಕ್ಕೆ ಪ್ರತಿಯಾಗಿ ಉಡುಗೊರೆಯಾಗಿ ಕೊಟ್ಟ ಕವರನ್ನು ಅಲ್ಲೇ ಮರೆತು ಬಂದಿದ್ದು ನೆನಪಾಯಿತು. ನಾನದನ್ನು ಮುದ್ದಾಂ ಅಲ್ಲಿ ಬಿಟ್ಟುಬಂದೆ ಎಂದು ಅಶ್ವಿನ್ ಎಲ್ಲಿ ತಪ್ಪು ತಿಳಿಯುತ್ತಾನೋ ಅದನ್ನು ನೋಡಿ, ಎನ್ನುವ ಕಳವಳ ಹುಟ್ಟಿ ತರಕಾರಿ ಹೆಚ್ಚುವುದನ್ನು ನಿಲ್ಲಿಸಿ, ಅಶ್ವಿನ್ ಗೆ ಈ ಕುರಿತು ಮೆಸೇಜ್ ಹಾಕಿದೆ. ನಾಳೆ ತಪ್ಪದೆ ಅದನ್ನು ಆಫೀಸಿಗೆ ತರಬೇಕೆಂದೂ ವಿನಂತಿಸಿಕೊಂಡೆ.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅಷ್ಟೊಂದು ಒತ್ತಾಯ ಮಾಡಿ ಕರೆದಿದ್ದ ಅಶ್ವಿನ್ ಮನೆಗೆ ಹೋದಾಗ ಆದರದಿಂದ ಕೊಂಚ ಹೆಚ್ಚೇ ಮುತುವರ್ಜಿಯಿಂದ ಬರಮಾಡಿಕೊಂಡಿದ್ದ. ಅವನ ತಾಯಿಯೂ ಅಕ್ಕರೆಯಿಂದ ಮಾತಾಡಿಸಿದ್ದರು. ನನ್ನ ಜೊತೆಗಿರುವ ಶಂತನುವನ್ನು ಕಂಡು, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಯಾರ್ರೀ ಈ ಹೀರೊ? ಭಾರಿ ಐತಿ ಗಡಿ’ ಎನ್ನುತ್ತಾ ಅವನನ್ನು ತನ್ನತ್ತ ಎಳೆದುಕೊಂಡ ಅಶ್ವಿನ್. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನನ್ನ ಮಗ ಶಂತನು’ ಎಂದಾಗ ತಾಯಿ ಮಗ ಮುಖ ಮುಖ ನೋಡಿಕೊಂಡರು. ಅಶ್ವಿನ್ ಮುಖ ಸಪ್ಪಗಾಗಿದ್ದನ್ನು ಗಮನಿಸಿದೆ ನಾನು. ‘ಏನಾತ್ರಿ ಅಶ್ವಿನ್?’ ಎಂದೆ.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಹೇಯ್ ಹೇಹೇ ಏನೂ ಆಗಿಲ್ರಿ. ಬಂದೆ ಇರ್ರಿ’ ಎನ್ನುತ್ತಾ ಇನ್ನೊಂದು ಕೋಣೆಗೆ ಹೋದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅಶ್ವಿನ್ ತಾಯಿ, ‘ನಿಮಗ ಮದುವಿ ಆಗೇತಿ ಅನ್ಸೂದ ಇಲ್ಲ ನೋಡ್ರಿ. ಹಿಂಗಾಗಿ ನಿಮ್ಮ ಹುಡುಗನ್ನ, ನಿಮ್ಮ ಅಕ್ಕ ಇಲ್ಲಾ ಅಣ್ಣನ ಮಗ ಇರ್ಬೇಕು ಅಂಕೊಂಡಿದ್ದೆ ನಾ. ಅಶ್ವಿನ್ ಸೈತ ಏನೂ ಹೇಳಿರ್ಲಿಲ್ಲ’ ಎಂದರು. ಅವರ ಮಾತಿನಿಂದ ಅವರಿಬ್ಬರ ಮನದಲ್ಲೇನಿತ್ತು ಅನ್ನುವುದು ಅರಿವಾಗಿ ಮನಸಿಗೆ ಕ್ಷಣಕಾಲ ಮುದವೆನಿಸಿತಾದರೂ ಮರುಕ್ಷಣವೇ ಆಗೋದೆಲ್ಲ ಒಳ್ಳೆಯದಕ್ಕೇ. ಯಾವದೂ ವಿಪರೀತಕ್ಕೆ ಹೋಗುವ ಮೊದಲೇ ಅಂತ್ಯವಾಯಿತು ಅನಿಸಿ ನಿರಾಳವಾದೆ. ಕಲೀಗ್ಸ್ ಜೊತೆ ಹರಟೆ ಊಟ ಮುಗಿಸಿ ಎಲ್ಲರಿಗಿಂತ ಬೇಗ ಅಲ್ಲಿಂದ ಹೊರಟುಬಂದಿದ್ದೆ. ಅರಿಯದ ಜನರ ನಡುವೆಯೂ ಶಂತನು ಖುಷಿಯಾಗೇ ಇದ್ದ.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"> ಸಧ್ಯ ಉಡುಗೊರೆ ಮರೆತು ಬಂದಿರುವೆ ಅನ್ನೋದು ನೆನಪಾಗಿದ್ದು ಒಳ್ಳೆದಾಯ್ತು ಎಂದುಕೊಳ್ಳುತ್ತಾ ಮರಳಿ ತರಕಾರಿ ಹೆಚ್ಚತೊಡಗಿದೆ. ಹೊರಗಿನಿಂದ ಮಿಯಾಂವ್ ಎನ್ನುವ ಬೆಕ್ಕಿನಮರಿಯ ದನಿ ಕೇಳುತ್ತಿದ್ದಂತೆಯೇ ಬೆಳಿಗ್ಗೆ ಆಭಾ, ಮಹಗಾಂವ್ಕರ್ ಭಾಭಿಯ ಛಜ್ಜಾ ಮೇಲೆ ಅವುಗಳಿಗೆ ಮನೆ ಮಾಡಿದ್ದು ನೆನಪಾಯಿತು. ಅಲ್ಲೇ ಇದ್ದಾವೋ ಅಥ್ವಾ ಜಾಗ ಏನಾದ್ರು ಬದಲಿಸಿತಾ ಮರಿಯೊಂದಿಗೆ ಎನ್ನುವ ಅನುಮಾನ ಕಾಡಿತು. ಏನೇ ಆಗ್ಲಿ ಬೆಳಿಗ್ಗೆ ಅವು ಕಾಣಿಸಿಕೊಂಡರೆ ಅವುಗಳಿಗೆ ಇಂದು ಮದ್ಯಾಹ್ನದ ಚಪಾತಿಯನ್ನ ಹಾಲಿನೊಂದಿಗೆ ಹಾಕಬೇಕು ಎಂದುಕೊಳ್ಳುತ್ತಾ ಚಪಾತಿಗೆ ಹಿಟ್ಟು ನಾದತೊಡಗಿದೆ. ಹೊರಗೆ ಮಳೆ ಧಾರಾಕಾರ. ಆರದ ಗಾಯ ಆಗಷ್ಟೇ ಕೂಡಿಕೊಳ್ಳುತ್ತಿರುವಾಗಲೇ ಬೆರಳು ತಾಗಿ, ಪುನಃ ಬಾಯಿ ಬಿಟ್ಟುಕೊಂಡಂತೆ ಮಳೆಯೊಂದಿಗೆ ಅಂಟಿಕೊಂಡ ಮರೆಯಬೇಕೆಂದಷ್ಟೂ ಜೀವಕ್ಕಂಟಿ ಕುಳಿತ ಮತ್ತದೇ ನೆನಪುಗಳು ನುಗ್ಗಿ ಬಂದವು…</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #cc0000; font-size: large;">***</span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"> ‘ಪ್ಲೀಸ್ ಬಾಗ್ಲಾ ತಗಿ. ನನಗಂತ ಬ್ಯಾಡ ನಿನ್ನ ಕೂಸಿನ್ನ ಮಾರಿ ನೋಡೆರೆ ಬಾಗ್ಲಾ ತಗಿ. ಹೊರಗ ಸಿಳ್ಳಗಾಳಿ, ಮಳಿ ಜೋರೈತಿ. ಕೂಸು ನಡಗಾಕತ್ತತಿ. ಪ್ಲೀಸ್’. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ತಗಿಯಂಗಿಲ್ಲ. ಹೋಗು ಎಲ್ಲ್ಯೊ ತಿರಾಗಾಕ ಹೋಗಿದ್ದೆಲ್ಲ ಯಾವನ ಜತಿನೋ, ಹೋಗಲ್ಲೇ. ಇಲ್ಲ್ಯಾಕ ಬಂದಿ?’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"> ‘ಹೇ ರಮಣಾಭವಾನಿ!! ನಾ ಇಲ್ಲೇ ಕೆಳಗ ಮೃದುಲಾ ದೀದಿ ಮನಿಗೆ ಹೋಗಿದ್ನೋ ಮಾರಾಯ ನಾಕ್ ಕಾಳ್ ಹಾಲ ಇಸ್ಕೊಂಡು ಬರಾಕಂತ. ಕೂಸಿಗೆ ಥಂಡಿ ಆಕ್ಕತಿ, ಬಾಗ್ಲಾ ತಗಿ ಮದಲ.’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನಾಲ್ಕು ತಿಂಗಳ ಶಂತನುವನ್ನು ಬಳಸಿ ಸೆರಗ ಹೊದೆಸಿ ಎದೆಗೊತ್ತಿಕೊಂಡು ನಿಂತಿದ್ದರೂ, ಹೊರಗಿನ ಸಿಳ್ಳುಗಾಳಿಯ ಎದುರು ನನ್ನ ಬಡಕಲು ದೇಹದ ಶಾಖ ಸಾಲಾದಾಗಿ ನಡುಗತೊಡಗಿತ್ತು ಕೂಸು. ಇನ್ನೂ ಸ್ವಲ್ಪ ಹೊತ್ತು ಅವರ ಮನೇಲೇ ಇದ್ದಿದ್ದರೆ ಒಳ್ಳೆಯದಿತ್ತೇನೋ, ಹೇಗೂ ಆಗಲೂ ಹೀಗೇ ಒದರಾಡುತ್ತಿದ್ದ. ಅಟ್ಲೀಸ್ಟ್ ಕೂಸು ಥಂಡಿಗೆ ನಡಗೋದಾದ್ರು ತಪ್ಪತಿತ್ತು ಎಂದು ಅನಿಸತೊಡಗಿತ್ತು. ಒಳಗಿನಿಂದ ಇವನ ಬಡಬಡ ಮುಂದುವರೆದೇ ಇತ್ತು. ‘ನೀ ಊರ ಹಾದರಗಿತ್ತಿ, ನೀನು ಅಂಥವಳು ನೀನು ಇಂಥವಳು’ ಎಂದೆಲ್ಲ. ಕೊನೆಯ ಪ್ರಯತ್ನವೆಂಬಂತೆ ನಾನು,</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಮತ್ತ ಬಾಯಿಗ್ ಬಂದಂಗೆಲ್ಲ ಮಾತಾಡಬ್ಯಾಡ. ಹೊರಗ ನಿಂತೀನಿ. ಆಜೂಬಾಜು ಫ್ಲ್ಯಾಟಿನ ಮಂದಿ ಕೇಳಸ್ಕೊಂಡ್ರ ನಿಂದs ಮರ್ಯಾದಿ ಕಮ್ಮಿ ಆಕ್ಕತಿ ಮಂದ್ಯಾಗ. ತಗಿ ಬಾಗ್ಲಾ’ ಎಂದೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನನ್ನ ಈ ಮಾತು ಕೆಲಸ ಮಾಡಿತ್ತು. ಮರ್ಯಾದೆ ಅಂದರೇನು ಎಂದೇ ಗೊತ್ತಿಲ್ಲದವ ಪೊಳ್ಳು ಮರ್ಯಾದೆಗೆ ಹೆದರಿ ಬಾಗಿಲು ತೆರೆದಿದ್ದ. ಬಾಗಿಲಿನ ಎರಡೂ ತೋಳುಗಳಿಗೆ ಕೈಯಾನಿಸಿ ಅಡ್ಡಗಟ್ಟಿ ನಿಂತವನ ಎಡ ಕೈ ಕೆಳಗಿನಿಂದ ನುಸುಳಿ ಒಳಗೋಡಿ, ಮಗುವಿನ ತಲೆಗೆ ಕುಂಚಗಿ ಕಟ್ಟಿ, ಒಗೆದು ಮಡಿಚಿಟ್ಟ ಸೀರೆಯನ್ನೆ ದಪ್ಪಗೆ ಹೊದೆಸಿ ಮಂಚದ ಮೇಲೆ ಮಲಗಿಸಿದೆ. ಪಾಟೀಲ್ ದೀದಿ ಕೊಟ್ಟ ಹಾಲು ಪೂರ್ತಿ ಕಾವು ಕಳೆದುಕೊಂಡಿರಲಿಲ್ಲವಾಗಿ ಮತ್ತೆ ಬಿಸಿ ಮಾಡಲು ಹೋಗದೆ ಮಗುವಿನ ಬಾಟಲಿಗೆ ಹಾಕಿ ಕುಡಿಸಿದೆ. ತಲಬಾಗಿಲು ಹಾಕಿಕೊಂಡು ಬಂದವನು ಬೆಡ್ರೂಮಿನ ಬಾಗಿಲಲ್ಲಿ ಕಾಯುತ್ತಾ ನಿಂತಿದ್ದಾನೆಂದು, ಅತ್ತ ಕಡೆಗೆ ಬೆನ್ನು ಮಾಡಿ ಮಗುವಿನ ಆರೈಕೆಯಲ್ಲಿ ತೊಡಗಿದ್ದರೂ ಅನುಭವಕ್ಕೆ ಬಂದಿತ್ತು. ಮಗುವಿನ ಬಳಿ ಇರುವಷ್ಟು ಹೊತ್ತೂ ಅವನು ನನ್ನನ್ನೇನೂ ಮಾಡಲಾರ ಎನ್ನುವುದು ಗೊತ್ತಿತ್ತಾದ್ದರಿಂದ, ಆಗಷ್ಟೆ ಕುಡಿಸಿದ ಮೇಲಿನ ಹಾಲಿಗೆ ಶಂತನುವಿನ ಹೊಟ್ಟೆ ತುಂಬಿದ್ದರೂ ನಾನು ಜಂಪರನ್ನು ಮೇಲೆತ್ತುತ್ತಾ ಅವನ ಪಕ್ಕದಲ್ಲಿ ಮಲಗಿ ಕೂಸಿಗೆ ಮೊಲೆಯೂಡಿದೆ. ಜಂಪರಿನ ಹುಕ್ಕು ಬಿಚ್ಚಬೇಕಾದ ಅವಶ್ಯಕತೆಯೇ ಇಲ್ಲವೆನ್ನುವಷ್ಟು ಕೃಶವಾಗಿ ಹೋಗಿದ್ದೆ ನಾನು. ಬತ್ತಿದ ಹಾಲಿಲ್ಲದ ಮೊಲೆಯ ಚೀಪುತ್ತ ಮಗು ನಿಧಾನಕ್ಕೆ ನಿದ್ದೆಗಿಳಿಯತೊಡಗಿತ್ತು. ಅಷ್ಟೊತ್ತು ಬಾಗಿಲ ಬಳಿಯೇ ನಿಂತಿದ್ದವನು ಹತ್ತಿರ ಬಂದಿದ್ದ ಅವನು ‘ಸಾಕೆದ್ದೇಳು ಅಲ್ಲಿಂದ’ ಎಂದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಇನ್ನು ಪ್ರಯೋಜನವಿಲ್ಲವೆಂದರಿತಿದ್ದ ನಾನು ನಿಧಾನಕ್ಕೆ ಕೂಸಿಂದ ಬಿಡಿಸಿಕೊಂಡು ಮೇಲೆದ್ದೆ. ಪಡಸಾಲೆಗೆ ನನ್ನನ್ನು ದರದರ ಎಳೆದುಕೊಂಡು ಬಂದವನು ವಿಚಾರಣೆಗೆ ತೊಡಗಿದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಖರೆ ಹೇಳು ಯಾಂವನ ಜತಿ ಹೋಗಿದ್ದಿ ನೀ? ನಾ ಅಕಡೆ ಆಫೀಸಿಗೆ ಹೋಗೂದ ಕಾಯ್ತಿರ್ತಿಯಲ್ಲ? ಖರೆ ಬೊಗಳು ಎಲ್ಲಿ ಹರಗಾಕ ಹೋಗಿದ್ದಿ?’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಮೈಯೆಲ್ಲ ಉರಿಯ ತೊಡಗಿತ್ತಾದರೂ ಉತ್ತರಿಸಿದಷ್ಟೂ ಅವನ ಹೊಲಸು ಮಾತುಗಳು ಉಕ್ಕಿ ಉಕ್ಕಿ ಬರ್ತವೆ ಮತ್ತು ಬೈಗುಳದ ಜೊತೆಗೆ ಹೊಡೆತ ಒದೆತಗಳೂ ನಿಶ್ಚಿತ ಅನ್ನುವುದು ಈ ಒಂದೂವರೆ ವರ್ಷದಲ್ಲಿ ಅನುಭವಕ್ಕೆ ಬಂದ ಮಾತಾಗಿದ್ದರಿಂದ ಏನೂ ಹೇಳದೆ ಸುಮ್ಮನೆ ನಿಂತೆ. ನಾನು ಸುಮ್ಮನಿದ್ದರೆ ಅವನು ಒದರಾಡಿ ಸುಮ್ಮನಾಗುತ್ತಾನೆ ಎನ್ನುವುದು ನನ್ನ ತಪ್ಪು ಕಲ್ಪನೆಯಾಗಿತ್ತೆಂದು ಮರು ಘಳಿಗೆ ನನ್ನ ತಲೆ ಗೋಡೆಗಪ್ಪಳಿಸಿದಾಗಲೇ ತಿಳಿದಿದ್ದು. ಝಾಡಿಸಿ ನನ್ನ ಕಿಬ್ಬೊಟ್ಟೆಗೆ ಒದ್ದಿದ್ದ. ಅವನು ಒದ್ದ ಜೋರಿಗೆ ನನ್ನ ಇಡೀ ದೇಹ ಹಾರಿ, ನಾಲ್ಕಡಿ ಹಿಂದೆ ಇದ್ದ ಗೋಡೆಗೆ ಅಪ್ಪಳಿಸಿ ತಲೆಗೂ ತಾಗಿ ಕೆಳಗೆ ಬಿದ್ದಿದ್ದೆ ನಾನು. ನೋವಿನಿಂದ ನಾನು ಕಿರುಚಿಕೊಂಡಿದ್ದು ಗ್ರೌಂಡ್ ಫ್ಲೋರಿನವರೆಗೂ ಕೇಳಿಸಿತ್ತೆಂದು ಕಾಣುತ್ತದೆ. ಮೃದುಲಾ ದೀದಿ, ಭೋಸ್ಲೆ ಭಾಭಿ ಮೇಲೋಡಿ ಬಂದಿದ್ದರು. ಅಕ್ಕಪಕ್ಕದ ಫ್ಲ್ಯಾಟಿನವರೂ ಬಂದು ನಮ್ಮ ಬಾಗಿಲು ತಟ್ಟುವಷ್ಟರಲ್ಲಿ ನಾನು ಮೂರ್ಛೆ ಹೋಗಿದ್ದೆ. ಎಚ್ಚರವಾದಾಗ ಇವನು ಗಂಡನೆನಿಸಿಕೊಂಡ ಮಹಾನುಭಾವ ಸುಶೀಲ್, ನಾನು ತಲೆ ಸುತ್ತಿ ಬಿದ್ದೆನೆಂದೂ, ತಾನೋಡಿ ಬಂದು ನನ್ನನ್ನು ಹಿಡಿಯುವಷ್ಟರಲ್ಲಿ ಹೀಗಾಗಿ ಹೋಯಿತೆಂದೂ ಬಂದವರೆದುರು ವಿವರಿಸುತ್ತಿದ್ದ. ನಾಲ್ಕು ಗೋಡೆಗಳ ನಡುವೆ ಅವನಿಂದಾಗುತ್ತಿದ್ದ ಅವಮಾನ ಸಾಲದೆಂದು ಈ ತಮಾಶಾ ಬೇರೆ. ಅಳಲು ಕಣ್ಣೀರೂ ಉಳಿದಿರಲಿಲ್ಲ. ಸುಮ್ಮನೆ ಮಾತು ಬಾರದವಳಂತೆ, ಛಾವಣಿಯನ್ನು ನೋಡುತ್ತಾ ಮಲಗಿದ್ದೆ. ನನ್ನ ತಲೆ ನೇವರಿಸುತ್ತಿದ್ದ ಮೃದುಲಾ ದೀದಿ ಅಳುತ್ತಿದ್ದರು. ಭೋಸ್ಲೆ ಭಾಭಿ ನನಗಾಗಿ ಚಹಾ ಮಾಡಿ ತರಲೆಂದು ತಮ್ಮ ಮನೆಗೆ ಹೋಗಿದ್ದರು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನಮ್ಮ ಫ್ಲೋರಿನ ಜನ ತಮ್ತಮ್ಮ ಮನೆಗೆ ತೆರಳಿದ ಮೇಲೆ, ನನ್ನ ಗಂಡನೆನಿಸಿಕೊಂಡವನಿಗೆ ಮೃದುಲಾ ದೀದಿ, ‘ಆಪ್ ಅಪನೆ ಬೀವಿ ಸೆ ಬಹುತ್ ಪ್ಯಾರ್ ಕರ್ತೆ ಹೋ, ಯೇ ಮೆ ಜಾನ್ತಿ ಥಿ ಭಯ್ಯಾ. ಆದ್ರ ಈ ಪರಿ ಪ್ರೀತಿ ಮಾಡ್ತೀರಂತ ಗೊತ್ತಿರ್ಲಿಲ್ಲ ಬಿಡ್ರಿ ನನಗ!’ ಎಂದರು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ದೀದಿಯ ವ್ಯಂಗ್ಯದ ಮೊನಚು ಅವನಿಗೆ ತಾಗಿತ್ತು. ‘ನಹಿ ಬಾಯಿ, ನೀವು ತಪ್ಪು ತಿಳ್ಕೊಂಡೀರಿ. ನಾ ಅಕಿಗೆ ಏನೂ ಮಾಡಿಲ್ಲ. ಖರೇನ ಚಕ್ಕರ್ ಬಂದು ಬಿದ್ದಾಳ’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಈಗ ದೀದಿ ಹುಬ್ಬೇರಿಸಿ ಮತ್ತೂ ಮೊನಚಾಗಿ ‘ಓಹೋ!’ ಎಂದರು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಆ ರೀತಿ ಮೃದುಲಾ ದೀದಿ ವ್ಯಂಗ್ಯವಾಡಲು ಕಾರಣವಿತ್ತು. ಅದು ಇಂದಿನ ಘಟನೆಗಲ್ಲ, ನಾಲ್ಕು ತಿಂಗಳ ಹಿಂದಿನದು. ಅಂದರೆ ಶಂತನು ಹುಟ್ಟಿ ವಾರದ ನಂತರದ ಒಂದು ದಿನದ್ದು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #cc0000; font-size: large;">***</span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನಾನು ತವರಿನಿಂದ ಇವನೊಂದಿಗೆ ಮೊದಲ ಬಾರಿ ಇಲ್ಲಿಗೆ ಬಂದಾಗ ಮೊದಲು ಎದುರಿಗೇ ಸಿಕ್ಕವರು ಮೃದುಲಾ ದೀದಿ. ಮೂಲತಃ ಔರಂಗಾಬಾದಿನವರಾದ ಪಾಟೀಲ್ ದಂಪತಿ ತಮ್ಮ ಮೂರು ಮಕ್ಕಳ ಜೊತೆಗೆ ನಾವಿದ್ದ ಅಪಾರ್ಟ್ಮೆಂಟಿನ ಗ್ರೌಂಡ್ ಫ್ಲೋರಿನ 2BHK ಫ್ಲಾಟಿನಲ್ಲಿದ್ದರು. ಅವರಲ್ಲಿಗೆ ಬಂದು ಅದಾಗಲೇ ೮-೧೦ ವರ್ಷಗಳಾಗಿದ್ದವು. ತವರಿನವರು ಹರಸಿ ಉಡಿಸಿದ್ದ, ಕೆಂಪಂಚಿನ ಹಸಿರು ರೇಶಿಮೆ ಸೀರೆಯನ್ನುಟ್ಟು ಶ್ರೀ ಸಾಯಿ ಅಪಾರ್ಟ್ಮೆಂಟಿನೊಳಗೆ ಕಾಲಿಟ್ಟಿದ್ದೆ ನಾನು. ನನ್ನನ್ನು ನೋಡಿದ ಅವರ ಕಣ್ಣಲ್ಲಿ ಮೆಚ್ಚುಗೆ ಮೂಡಿತ್ತು. ಮೆಚ್ಚುಗೆಯ ನೋಟಗಳು ನನಗೆ ಹೊಸದಲ್ಲವೆಂಬ ಹಮ್ಮು ನನಗಿದ್ದಿದ್ದು ನಿಜ. ಹೊಸಬರು ಎದುರಾದಾಗ ಆದಷ್ಟು ತಮ್ಮ ಬಿಗುಮಾನವನ್ನೇ ತೋರಿಸುವವರು ಹೆಚ್ಚಿರುವಾಗ ದೀದಿಯ ಸ್ವಚ್ಛ ಮನಸು ಅವರ ಕಣ್ಣ ಹೊಳಪಲ್ಲಿ ಕಾಣಿಸಿತ್ತು. ಬಹುಶಃ ಅಂದೇ ಕೊನೆಯನಿಸುತ್ತೆ ನಾನು ನೀಟಾಗಿ ಸೆರಗು, ನೆರಿಗೆ ಪಿನ್ ಮಾಡಿ ಉಟ್ಟಿದ್ದು. ಮುಂದೆ ಯಾವಾಗಲೂ ಮೈತುಂಬ ಸೆರಗು ಹೊದ್ದಿರುವುದು ಅನಿವಾರ್ಯವಾಯಿತು…</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಕೋಣ್ ಪಾಯ್ಜೆ?’(ಯಾರು ಬೇಕಿತ್ತು) ಹಸನ್ಮುಖಿಯಾಗಿ ಮರಾಠಿಯಲ್ಲಿ ಕೇಳಿದ್ದರು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ತಿಂಗಳ ಹಿಂದೆಯಷ್ಟೇ ತಾನು ಈ ಅಪಾರ್ಟ್ಮೆಂಟಲ್ಲಿ ಮನೆಯೊಂದನ್ನು ಬಾಡಿಗೆ ಹಿಡಿದಿರುವುದಾಗಿ ನಮಗೆ ಮೊದಲೇ ಹೇಳಿದ್ದನಾದ್ದರಿಂದ, ಅವನನ್ನು ಮೃದುಲಾ ಅವರು ಅಪರಿಚಿತರೊಂದಿಗೆ ಮಾತಾಡುವಂತೆ ಮಾತಾಡಿದ್ದು ಸಹಜವೇ ಆಗಿತ್ತು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನಹಿ, ಹಮ್ ಯಹಾಂ ರಹನೆ ಕೆ ಲಿಯೆ ಆಯೆ ಹೈಂ’ ಮರಾಠಿ ಬಾರದ ಇವನು ಹಿಂದಿಯಲ್ಲಿ ಉತ್ತರಿಸಿದ್ದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅಚ್ಚಾಜೀ. ಮೆ ಹೂಂ ಮೃದುಲಾ ಪಾಟೀಲ್. ನಿಮ್ಮ ಹೆಸರು? ಯಾವ ಫ್ಲೋರು ನಿಮ್ದು?’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನಾನು ಸುಶೀಲ್ ಚವ್ಹಾಣ್. ಮತ್ತಿಕಿ ನನ್ನ ಮಿಸಸ್ಸು. ನಮ್ದು ಮೂರನೇ ಫ್ಲೋರ್’ ಚುಟುಕಾಗಿ ಉತ್ತರಿಸಿದ್ದ ಇವನು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅಚ್ಚಾ ಅಚ್ಚಾ. ಹೊಸಾ ಮದುಮಕ್ಕಳಗತೆ ಕಾಣ್ತೀರಿ. ಆಜಾವ್ ದೋನೊ ಅಂದರ್. ಆರಾಮ್ಸೆ ಒಂದ್ಕಪ್ ಚಾ ಕುಡ್ದು ನಿಮ್ಮನಿ ಸೆಟ್ ಮಾಡ್ಕೊಳ್ಳು ಕೆಲ್ಸಕ್ಕ ಕೈ ಹಚ್ಚೂವಂತ್ರಿ ಬರ್ರಿ.’ ಎಂದರು ದೀದಿ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಇವನು ‘ಈಗ ಬ್ಯಾಡ್ರಿ ಮತ್ತ ಬರ್ತೀವ್ರಿ, ತ್ಯಾಂಕ್ಸ್’ ಎಂದವನೇ ದುಡುದುಡು ಮೆಟ್ಟಿಲೇರತೊಡಗಿದ್ದ. ನಾಲ್ಕಂತಸ್ತಿನ ಆ ಅಪಾರ್ಟ್ಮೆಂಟಿಗೆ ಲಿಫ್ಟ್ ಇರಲಿಲ್ಲ. ಪ್ರಯಾಣದ ಆಯಾಸಕ್ಕೆ ನನಗೆ ಚಹಾ ಬೇಕೆನಿಸಿದ್ದರೂ ಅವರಿಗೆ ತ್ಯಾಂಕ್ಸ್, ಬೈ ಎಂದು ಹೇಳುತ್ತಾ, ಸುಶೀಲ್ ನ ಹಿಂಬಾಲಿಸಿದ್ದೆ. ಮುಂದೆಲ್ಲ ಯಾರಾದರೂ ಇವನ ಕಡೆಯವರು ಊರಿಂದ ಬಂದಾಗ, ಅವರನ್ನು ಕಳಿಸಲು ನಾನು ಕೆಳಗೆ ಬಂದಾಗ ಮಾತ್ರ ಮೃದುಲಾ ದೀದಿಯ ಭೇಟಿಯಾಗುತ್ತಿತ್ತು. ಅದೂ ಅವರಾಗೇ ಮಾತಾಡಿಸಿ ಏನನ್ನಾದರು ಕೇಳಿದಾಗ, ಹೇಳುವುದು ಅನಿವಾರ್ಯವಾಗಿ ನಾಲ್ಕಾರು ನಿಮಿಷ ನಿಂತು ಅವರು ಕೇಳಿದ್ದಕ್ಕೆ ಉತ್ತರಿಸಿದವಳೇ ಬರ್ತೀನಿ ದೀದಿ ಎನ್ನುತ್ತಾ ಅಲ್ಲಿಂದ ಹೊರಟುಬಿಡುತ್ತಿದ್ದೆ. ಕೆದರಿದ ತಲೆ, ಸುಕ್ಕುಸುಕ್ಕಾದ ಸೀರೆಯುಟ್ಟು ಯಾರಾದರು ಎಷ್ಟೊತ್ತು ಬೇರೆಯವರೆದುರು ನಿಲ್ಲಲು ಸಾಧ್ಯ! ಮೂರೊತ್ತೂ ಮನೇಲಿ ಈ ಅವತಾರದಲ್ಲಿರುವ ನಾನು ಇಂಜಿನಿಯರಿಂಗ್ ನಲ್ಲಿ ಮೂರನೇ ರ್ಯಾಂಕ್ ಪಡೆದಾಕೆ ಎಂದರೆ ಯಾರಾದರೂ ನಂಬುತ್ತಾರಾದರೂ ಹೇಗೆ?! ಮೃದುಲಾ ದೀದಿ ಕೂಡ ನಂಬಿರಲಿಲ್ಲ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನಮ್ಮ ಲಂಬಾಣಿ ಸಮಾಜದಲ್ಲಿ ಓದಿದವರ ಸಂಖ್ಯೆ ಕಮ್ಮಿ. ಅದರಲ್ಲೂ ಹುಡುಗಿಯರ ಸಂಖ್ಯೆ ಇನ್ನೂ ಕಡಿಮೆ ಇರುವಾಗ, ಹೀಗೆ ತಂದೆಯ ಬೆಂಬಲದಿಂದ ಇಂಜಿನಿಯರಿಂಗ್ ಓದಿ ರ್ಯಾಂಕ್ ಪಡೆದುಕೊಂಡುಬಿಟ್ಟರೆ, ಆ ಲೆವಲ್ಲಿನ ಗಂಡೆಲ್ಲಿಂದ ಹುಡುಕೋದು?! </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅದ್ಕ ಬಡ್ಕೊಂಡೆ, ಹೆಣ್ಣಿಗ್ಯಾಕ ಅದೆಲ್ಲಾ ಬಡಿವಾರ ಅಂತ. ಎಲ್ಲಿ ಕೇಳೀದಿ ಆಗ ನನ್ನ ಮಾತ್ನ ನೀನು’ ಬಾಪೂನ ಸ್ವಾಟಿ ತಿವಿದಿದ್ದಳು ನನ್ನ ಯಾಡಿ. ಆಕೆ ಮೊದಲಿನಿಂದಲೂ ಅಷ್ಟೇ. ‘ನಮ್ಮಂದಿ ಹೆಣ್ಮಕ್ಳು ಅಂದ್ರ, ಮನ್ಯಾಗ ಅಡ್ಗಿ ಮಾಡ್ಕೊಂಡು, ಗಂಡ ಹೇಳ್ದಂಗ ಕೇಳ್ಕೊಂಡು ಇದ್ದ್ರ ಸಾಕು’ ಅನ್ನುವಾಕೆ. ಅಂಥವಳಿಂದ ಹೆಚ್ಚಿಗೆ ನಿರೀಕ್ಷಿಸೋದಾದ್ರೂ ಏನು ನಾನು? ಊರಲ್ಲಿ ನನ್ನ ಯಾಡಿ ಮತ್ತು ಬಾಪೂ ಇಬ್ಬರದೂ ಒಳ್ಳೆಯ ಹೆಸರಿದೆ. ನನ್ನ ಬಾಪೂ ಕದರಾಪುರದಲ್ಲಿ ರೈತನಾಗಿ ನಲವತ್ತು ಎಕರೆ ನೀರಾವರಿ ಜಮೀನಿನ ಮಾಲಿಕನಾಗಿದ್ದರಿಂದ, ಆಗಾಗ ಅಡತಿಯ ವಹಿವಾಟಿಗಾಗಿ ಬಿಜಾಪುರಕ್ಕೆ ಹೋಗಿಬಂದು ಮಾಡುತ್ತಿದ್ದ. ಹೊರ ಜಗತ್ತನ್ನು ಕಂಡವನು ಅವನು. ಹೀಗಾಗಿ ಇತರರ ಮಕ್ಕಳಂತೆ ತನ್ನ ಮಕ್ಕಳೂ ಶಾಲೆಗೆ ಹೋಗಬೇಕೆಂದು ಬಯಸಿ ತನ್ನ ಆರೂ ಜನ ಮಕ್ಕಳನ್ನು ಶಾಲೆಗೆ ಹಾಕಿದ್ದ. ಬಾಪೂನ ಆಸೆಗೆ ತಕ್ಕಂತೆ ನಮ್ಮಲ್ಲಿ ನಾಲ್ಕು ಜನ ಶಾಲೆಯಲ್ಲಿ ಚೆನ್ನಾಗಿಯೇ ಓದಿ ಜಾಣ ಮಕ್ಕಳು ಎನಿಸಿಕೊಂಡವರು. ಉಳಿದಿಬ್ಬರಲ್ಲಿ ನನ್ನ ದೊಡ್ಡ ತಮ್ಮ ಉಡಾಳನಾಗಿ ತಿರುಗುವುದು ಚಂದ ಕಂಡು, ಓದದೇ ಟೆನ್ತಲ್ಲಿ ಲಾಗಾ ಒಗೆದು ಒಕ್ಕಲುತನಕ್ಕೆ ನಿಂತಿದ್ದ. ನಾಲ್ಕನೇ ನಂಬರಿನ ತಂಗಿಗೆ ಓದು ತಲೆಗೇ ಹತ್ತದೆ, ಒಂದೇ ಕ್ಲಾಸಲ್ಲಿ ಮೂರು ಮೂರು ಸಲ ಕುಳಿತಾಗ, ಅವಳನ್ನು ಶಾಲೆ ಬಿಡಿಸುವುದು ಬಾಪೂಗೆ ಅನಿವಾರ್ಯವಾಗಿತ್ತು. ಯಾಡಿಗೆ ಅಡುಗೆಗೆ ಸಹಾಯ ಮಾಡಿಕೊಂಡು ಆರಾಮಾಗಿದ್ದುಬಿಟ್ಟಿದ್ದಳು ಅವಳು. ಇನ್ನಿಬ್ಬರು ತಮ್ಮಂದಿರು ಮತ್ತು ಒಬ್ಬ ತಂಗಿಗೆ ನನ್ನಂತೆಯೇ ಓದಿನಲ್ಲಿ ಆಸಕ್ತಿ. ನಾನು ಪಿಯುಸಿ ಮತ್ತು ಸಿಇಟಿಯಲ್ಲಿ ಒಳ್ಳೆಯ ಮಾರ್ಕ್ಸ್ ತೊಗೊಂಡಿದ್ದರಿಂದ, ಇಂಜಿನಿಯರಿಂಗ್ ನ ಫ್ರೀ ಸೀಟ್ ಸಿಕ್ಕಿತ್ತು. ಎಲೆಕ್ಟ್ರಾನಿಕ್ & ಕಮ್ಯೂನಿಕೇಷನ್ ನ್ನು ವಿಷಯವಾಗಿ ಆರಿಸಿಕೊಂಡು ಮನಸ್ಸಿಟ್ಟು ಓದಿದ್ದೆ, ರ್ಯಾಂಕ್ ಬಂದಿದ್ದೆ. ಹೀಗಾಗಿ ಹಿರಿಯ ಮಗಳಾದ ನನ್ನ ಮೇಲೆ ವಿಶೇಷ ಅಭಿಮಾನ ಬಾಪೂಗೆ. ಓದು ಮುಗಿಯಿತಲ್ಲ, ಈಗ ತನ್ನ ಈ ಮುದ್ದಿನ ಮಗಳಿಗೆ ತಕ್ಕ ವರನನ್ನು ಹುಡುಕಿಯೇ ಹುಡುಕಿದ. ಇಂಜಿನಿಯರಿಂಗ್ ನಲ್ಲಿ ಡಿಗ್ರಿ ಮಾಡಿದವರು ಒಬ್ಬರೂ ಸಿಗಲಿಲ್ಲ ನಮ್ಮ ಜನಾಂಗದಲ್ಲಿ. ಕಾಯುತ್ತ ಕೂತರೆ ವಯಸ್ಸಾಗುವುದು ಎಂದು ಹೆದರಿ, ಕೊನೆಗೂ ಎಲೆಕ್ಟಿಕಲ್ ನಲ್ಲಿ ಡಿಪ್ಲೋಮಾ ಮಾಡಿದ್ದ ಇಂಜಿನಿಯರ್ ವರ ಸಿಕ್ಕು, ಇಷ್ಟರ ಮಟ್ಟಿಗಾದರೂ ಸೈ, ನಮ್ಮ ಜಾತಿಯಲ್ಲಿ ಅಂತೂ ತನ್ನ ಮಗಳಿಗೂ ಇಂಜಿನಿಯರ್ ಗಂಡನನ್ನೇ ಹುಡುಕಿದೆ ಎಂದು ಹೆಮ್ಮೆಪಟ್ಟ. ಬೆಳ್ಳಗೆ ಹಾಲಿನ ಬಣ್ಣದ ನುಣುಪು ಚರ್ಮದ, ಗಿಡ್ಡ ಮೂಗು, ಉಬ್ಬುಗೆನ್ನೆಯ, ಆರಡಿಯ ಈ ಗಂಡನೆಂಬ ಸುಶೀಲ್ ಆ ವಯಸ್ಸಿಗೇ ಇಷ್ಟು ದಪ್ಪ ಹೊಟ್ಟೆ ಬಿಟ್ಟಿದ್ದ. ಬಾಪೂ ನನ್ನನ್ನು ಇಂಜಿನಿಯರಿಂಗ್ ಓದಿಸಿದ ಕೃತಜ್ಞತೆಗೆ ಮತ್ತು ನಮ್ಮ ಮಂದಿಯಲ್ಲಿ ಇಷ್ಟು ಓದಿದ ಗಂಡು ಸಿಗುವುದು ಕಷ್ಟ ಎನ್ನುವ ಅನುಭವ ಈಗಾಗಲೇ ಆಗಿದ್ದರಿಂದ ತುಟಿ ಪಿಟಕ್ಕೆನ್ನದೆ ಮದುವೆಯಾಗಿದ್ದೆ. ಮದುವೆಯಾದ ಮೇಲೆ ಹುಡುಗಿ ಒಮ್ಮೆ ತವರಿನಿಂದ ಗಂಡನ ಮನೆಗೆ ಹೋದಳೆಂದರೆ, ಮತ್ತೆಂದೂ ತವರಿನ ಮುಖ ನೋಡುವ ಹಾಗಿಲ್ಲವೆಂಬ ನಮ್ಮಲ್ಲಿನ ಸಂಪ್ರದಾಯನ್ನು ನಮ್ಮ ತಾಂಡಾದ ಜನ ಪಾಲಿಸಿಕೊಂಡು ಬಂದಿದ್ದರಾದ್ದರಿಂದ, ಒಮ್ಮೆ ಮನೆಯಿಂದಾಚೆ ಹೋದರೆ ಮಗಳು ಮರಳಿ ಇಲ್ಲಿಗೆ ಬರಲಾರಳು ಎಂದು, ಬಾಪೂ ನಮ್ಮಿಬ್ಬರನ್ನೂ ತಿಂಗಳು ಕಾಲ ತನ್ನಲ್ಲಿಯೇ ಉಳಿಸಿಕೊಂಡಿದ್ದ. ಅಳಿಯದೇವರಿಗೆ ತಲೆಯಿಂದ ಕಾಲಿನವರೆಗೆ ಉಪಚಾರವೋ ಉಪಚಾರ. ನಮ್ಮ ಕುಲಗುರು ಸೇವಾಲಾಲ್ ಗೂ ಅಷ್ಟೊಂದು ನಡೆದುಕೊಂಡಿದ್ದನ್ನ ನೋಡಿರಲಿಲ್ಲ ನಾನು. ಸೇವೆಯಿಂದ ಬಾಪೂನ ಅಳಿಯದೇವರು ಪ್ರಸನ್ನಚಿತ್ತರಾಗಿದ್ದರಾದ್ದರಿಂದ ನನ್ನೊಂದಿಗೆ ಚೆನ್ನಾಗಿದ್ದರು. ಹಾಗಾಗಿ ನಾನೂ ಖುಷಿಯಾಗಿಯೇ ಇದ್ದೆ. ಅವನ ದೇಹವಿಕಾರ ಗಣನೆಗೇ ಬರದಷ್ಟು ಮತ್ತು ಹಾಗೆಲ್ಲ ಹೊರಗಿನಾಕಾರ ನೋಡಿ ಮನುಷ್ಯನನ್ನ ಅಳೆದು ತಪ್ಪು ಮಾಡಿದ್ದೆ ಅನ್ನುವಷ್ಟು. ಬಾಪೂ ನನಗಾಗಿ ಮದುವೆಯಲ್ಲಿ ಪಾತ್ರೆ ಪಗಡಿ, ಪ್ಲೇನ್ ಶೀಟಿನ ಕಬ್ಬಿಣದ ಪಲ್ಲಂಗ, ಹಾಸಿಗೆ, ಒಂದು ಹಾಲು ಕರಿಯುವ ಆಕಳು ಎಲ್ಲವನ್ನೂ ನನಗಾಗಿ ಹೊಂದಿಸಿಟ್ಟಿದ್ದ. ಸುಶೀಲ್ ಅವೆಲ್ಲವನ್ನೂ ಊರಿಗೆ ಸಾಗಿಸುವುದಾಗಿಯೂ, ತಾನು ಕೆಲಸ ಮಾಡುತ್ತಿರುವ ಅಹಮದನಗರ ನ ಮನೆಯಲ್ಲಿ ಎಲ್ಲ ವ್ಯವಸ್ಥೆಯೂ ಇರುವುದರಿಂದ ಅದರ ಅಗತ್ಯವಿಲವೆಂದೂ ಎಂದಾಗ ಅಳಿಯನಿಗೆ ಸಂಸಾರದ ಬಗ್ಗೆ ಇರುವ ಆಸ್ಥೆ ನೋಡಿ, ಯಾಡಿ ಬಾಪೂ ಖುಷಿಯಾದರಾದರೂ, ಮಗಳಿಗಾಗಿ ತಂದ ಸಾಮಾನುಗಳು ಅವಳಿಗೆ ಸಲ್ಲುತ್ತಿಲ್ಲ ಎನ್ನುವುದು ಅವರಿಗೆ ಬೇಸರವನ್ನುಂಟು ಮಾಡಿತ್ತು. ಆದರೆ ಏನೂ ಅನ್ನುವ ಹಾಗಿರಲಿಲ್ಲ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ತಿರುಗಿ ನೋಡಲಾಗದ ತವರಿನ ಕರುಳುಬಳ್ಳಿಯನ್ನು ಕತ್ತರಿಸಿಕೊಂಡು ಸುಶೀಲನ ಹಿಂದೆ ಹೊರಟು ಬಂದು, ನಗರ್ ಎಂದು ಕರೆಸಿಕೊಳ್ಳುವ ಮಹಾರಾಷ್ಟ್ರದ ಅಹಮದನಗರದ ಶ್ರೀಸಾಯಿ ಅಪಾರ್ಟ್ಮೆಂಟಿಗೆ ಸಂಜೆ ವೇಳೆಗೆ ಬಂದಾಗ, ಮನೆಯೊಳಗಿನ ಸಾಮಾನುಗಳನ್ನು ನೋಡಿ ಹೌಹಾರಿದ್ದೆ ನಾನು. 1BHK ಮನೆಯಲ್ಲಿ ಬರಿಮೈಯಲ್ಲಿದ್ದ ಒಂದು ಪಟ್ಟಾಪಟ್ಟಿ ಕಬ್ಬಿಣದ ಪಲ್ಲಂಗ, ಒಂದು ಕುರ್ಚಿ, ಟೇಬಲ್, ಒಂದು ಘಾಸ್ಲೆಟ್ ಸ್ಟೋವ್ ಮತ್ತು ಎರಡು ಬೋಗೋಣಿ, ಎರಡು ತಟ್ಟೆ, ಮತ್ತೊಂದು ನೀರು ಕುಡಿಯುವ ಸ್ಟೀಲ್ ಲೋಟ ಬಿಟ್ಟರೆ ಆ ಮನೆಯಲ್ಲಿ ಏನೆಂದರೆ ಏನೂ ಇರಲಿಲ್ಲ! ಈಗ ನಮ್ಮ ಜೊತೆಗೆ ತಂದಿರುವ ನನ್ನವೆರಡು ಮತ್ತು ಅವನದೊಂದು ಸೂಟ್ಕೇಸುಗಳು ಅವುಗಳ ಜೊತೆ ಸೇರಿ ಮೂರು ಸಂಖ್ಯೆ ಹೆಚ್ಚಾಯಿತು ಅಷ್ಟೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಇಲ್ಲಿ ನೀನು ಎಲ್ಲಾ ವ್ಯವಸ್ಥಾ ಐತಿ ಅಂದಿದ್ದಿ ಸುಶೀಲ್. ಆದ್ರ…’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ತರೂನಂತ ಏನವಸ್ರಾ?’ ನಗುತ್ತಾ ನುಡಿದ. ಆ ನಗು ಸಹಜವಾಗಿಲ್ಲ ಎಂದು ಆಗಲೇ ಗಮನಿಸಿದ್ದರೆ ಗೊತ್ತಾಗುತ್ತಿತ್ತೇನೋ. ಹಿಂದಿನ ದಿನದವರೆಗಿನ ಸುಖದ ಅಮಲಿತ್ತಲ್ಲ ಇನ್ನೂ, ಹೀಗಾಗಿ ಅರಿವಿಗೆ ಬಂದಿರಲಿಲ್ಲ. ದಣಿವಾಗಿತ್ತು, ಮಲಗ್ತೀನಿ ಎಂದೆ. ಸರಿ ಊಟ ತರ್ತೀನಿ ಎಂದವನು ಹೊರಗಿನ ಬಾಗಿಲಿಗೆ ಚಾವಿ ಹಾಕಿ ಲಾಕ್ ಮಾಡಿಕೊಂಡು ಹೋದ. ನನಗೆ ಡಿಸ್ಟರ್ಬ್ ಆಗಬಾರ್ದು ಎಂದು ಎಷ್ಟೆಲ್ಲ ಮುಂಜಾಗ್ರತೆ ವಹಿಸ್ತಿದಾನೆ! ಬೆಳಿಗ್ಗೆ ಅವನಿಗೆ ಮಸ್ತ್ ಉಪ್ಪಿಟ್ಟು ಶಿರಾ ಮಾಡಿಕೊಡಬೇಕು. ಓದಿನಲ್ಲಿ ಮಾತ್ರ ಅಲ್ಲ ಅಡುಗೆಯಲ್ಲೂ ಮಿಸ್ ವನಮಾಲಾ ರಾಠೋಡ್ ಅಲ್ಲಲ್ಲ ಮಿಸಸ್ ಚವ್ಹಾಣ್ ಎತ್ತಿದ ಕೈ ಎಂದು ಮಿಸ್ಟರ್ ಚವ್ಹಾಣ್ ಅವರಿಗೆ ತೋರಿಸಬೇಕು. ಹೀಗೆ ಅಂದುಕೊಳ್ಳುತ್ತಾ ಪಲ್ಲಂಗದ ಮೇಲೆ ಜಮಖಾನವನ್ನು ಹಾಸಿಕೊಂಡು ನಿದ್ದೆಹೋದೆ. ಅದ್ಯಾವಾಗ ಸುಶೀಲ್ ಊಟದ ಪಾರ್ಸಲ್ಲಿನೊಂದಿಗೆ ಮರಳಿದ್ದನೋ ಗೊತ್ತಿಲ್ಲ, ಪಕ್ಕದಲ್ಲಿ ಮಲಗಿ ನನ್ನನ್ನು ಅವನ ತೋಳಿನಲ್ಲಿ ಬಳಿಸಿದಾಗ ಎಚ್ಚರವಾಯ್ತು. ಮಾತಿಗವಕಾಶವಿಲ್ಲದಂತೆ ನನ್ನನ್ನಾವರಿಸಿಕೊಂಡ. ಪುಳಕಗೊಂಡೆ. ಜಮಖಾನೆಯ ಕೆಳಗಿರುವ ಪಲ್ಲಂಗದ ಪಟ್ಟಿಗಳು ನನ್ನ ಬೆನ್ನಿಗೆ ಒತ್ತುತ್ತಿದ್ದವು, ಇವನು ಜೀಕುತ್ತಲೇ ಇದ್ದ. ನೋವಾಗುತ್ತಿದ್ದರೂ ಖುಷಿಯಿಂದಲೇ ಅವನಿಗೆ ಸಹಕರಿಸಿದೆ. ಮಗ್ಗುಲಿಗೆ ಹೊರಳಿದವನು ಸುಮ್ಮನೆ ಸ್ವಲ್ಪ ಹೊತ್ತು ಛಾವಣಿಯನ್ನು ದಿಟ್ಟಿಸಿ, ನಿಧಾನವಾಗಿ ನನ್ನತ್ತ ತಿರುಗಿ ಕೇಳಿದ್ದ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಎಷ್ಟು ಮಂದಿ ಬಾಯ್ಫ್ರೆಂಡ್ಸ್ ಅದಾರ ನಿನಗ ಬಿಜಾಪುರದಾಗ?’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅನಿರೀಕ್ಷಿತವಷ್ಟೇ ಅಲ್ಲ, ಅವನಿಂದ ಈ ಪ್ರಶ್ನೆ ಬರಬಹುದೆಂಬ ಊಹೆಗೂ ನಿಲುಕದ ಪ್ರಶ್ನೆ ನನ್ನ ಮುಖಕ್ಕೆ ರಾಚಿತ್ತು. ದಿಗ್ಗನೆ ಎದ್ದು ಕುಳಿತೆ. ‘ಏನ್ ಮಾತಾಡಾಕತ್ತಿ ಅನ್ನು ಖಬರ್ ಐತಿ ನಿನಗ?’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಹ್ಹೆಹ್ಹೆಹ್ಹೆ ಜಸ್ಟ್ ಮಜಾಕ್ ಮಾಡಿದೆ. ಅದಕ್ಕ್ಯಾಕ ಅಷ್ಟ್ ಸಿಟ್ಟಾಕ್ಕಿ! ಎದ್ದೇಳು ಊಟಾ ಮಾಡು. ನಾ ಅಲ್ಲೇ ಉಂಡು ಬಂದೀನಿ’ ಎಂದು ಹಲ್ಲು ಕಿಸಿದ. ಏನು ಹೇಳುವುದು ತಿಳಿಯದೇ ಸುಮ್ಮನೆ ಕುಳಿತವಳು, ಹಿಂಗೂ ಯಾರರ ಮಜಾಕ್ ಮಾಡ್ತಾರಾ… ಎಂದು ಮನದಲ್ಲಿ ಅಂದುಕೊಳ್ಳುತ್ತಲೇ ಬಚ್ಚಲಿಗೆ ನಡೆದೆ.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅಂದಿನಿಂದ ನನ್ನ ಪಾಲಿನ ನರಕದ ಬಾಗಿಲುಗಳು ಒಂದೊಂದಾಗಿ ತೆರೆದುಕೊಳ್ಳತೊಡಗಿದವು. ಅಡುಗೆಮನೆಗೆ ಪಾತ್ರೆಗಳು ಬೇಕು, ದಿನಸಿ ಬೇಕು ಎಂದು ಲಿಸ್ಟ್ ಮಾಡಿ ಅವನ ಕೈಯಲ್ಲಿಟ್ಟಾಗ, ‘ರೊಕ್ಕಿಲ್ಲ’ ಎಂದ. ಕಕ್ಕಾಬಿಕ್ಕಿಯಾದೆ. ‘ಯಾಕ?! ಅಂದೆ. ‘ಮದವ್ಯಾಗ ಎಲ್ಲಾ ಖಾಲಿ ಆದ್ವು’ ಅಂದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಹಂಗಿದ್ದ್ರ…’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನಿನ್ನ ಕೈಯಾನ ಬಳಿ ಕೊಡು. ಪಗಾರ ಬಂದ ಮ್ಯಾಲೆ ಮಾಡೀಸಿ ಕೊಡ್ತೀನಿ ನಿನಗ’ ಅಂದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನಿರ್ವಾಹವಿಲ್ಲದೆ ಕೊಟ್ಟೆ. ಹೊರಗೆ ಹೋಗುತ್ತಾ ಬಾಗಿಲಿಗೆ ಮತ್ತೆ ಚಾವಿ ಹಾಕತೊಡಗಿದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅರ್ರೇ, ನಾ ಎದ್ದೇ ಅದೀನಲ್ಲ ಬಿಡು ಹಾಕ್ಕೋತೀನಿ’ ಅಂದೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅರೀದ್ ಊರು. ಸುಮ್ನ ರಿಸ್ಕ್ ಯಾಕ ಆರಾಮಿರು ನೀ ಒಳಗ’ ಎನ್ನುತ್ತಾ ಚಾವಿ ಹಾಕ್ಕೊಂಡು ನಡದೇಬಿಟ್ಟ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅವನು ವಾಪಸ್ ಬಂದ ಮೇಲೆ ಕೈಯಲ್ಲಿನ ಸಾಮಾನುಗಳನ್ನು ತೆಗೆದುಕೊಳ್ಳುತ್ತಲೇ ನಗುತ್ತಾ ಸುಶೀಲ್ ನ ಕಾಲೆಳೆದೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅಲ್ಲಾ ಚಾವಿ ಹಾಕ್ಕೊಂಡು ಹೋದೆಲ್ಲಾ ಬಾಗ್ಲಿಗೆ, ನಾ ಏನ್ ಸಣ್ಣ ಪಾಪಾ ಏನು? ಯಾರರ ಬಂದು ನನ್ನ ಎತಗೊಂಡುಹೋಗಾಕ? ಎಷ್ಟರ ಪೊಸೆ…’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನನ್ನ ಮಾತನ್ನು ಅವನ ತೀಕ್ಷ್ಣ ನೋಟ ಕತ್ತರಿಸಿತ್ತು. ನಾನು ಏನು ತಪ್ಪು ಮಾತನಾಡಿದೆ ಅರ್ಥವೇ ಆಗದೆ ಅವಮಾನವದಂತೆನಿಸಿ ದೃಷ್ಟಿ ಬದಲಿಸುತ್ತಾ, ತಂದ ಸಾಮಾನುಗಳ ಕಡೆಗೆ ನೋಡಿದರೆ ಲಿಸ್ಟಿನಲ್ಲಿಯ ಅರ್ಧಕ್ಕರ್ಧ ಸಾಮಾನುಗಳಿರಲೇಯಿಲ್ಲ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಇಷ್ಟೇ?! ಉಳದ ಸಾಮಾನು?’ ನನಗೇ ಗೊತ್ತಿಲ್ಲದಂತೆ ಉದ್ಗಾರ ಹೊರಟಿತ್ತು ನನ್ನ ಬಾಯಿಂದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಮತ್ತೇನ್ ಗೋಳಗುಮ್ಮಟ ಕೊಡ್ತಾರೇನ್ ನಿನ್ನ ಸೊಟ್ಟ ನಾಕ್ ಬಳಿಗೆ?’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನಾಲ್ಕು ತೊಲೆಯ ಬಳೆಗಳಿಗೆ ಅಂದ್ರೆ ಸುಮಾರು ಇಪ್ಪತ್ತು ಸಾವಿರ ರೂಪಾಯಿಗೂ ಹೆಚ್ಚು ಬೆಲೆ! ಅಷ್ಟು ಬೆಲೆ ಬಾಳುವ ಬಳೆಗಳಿಗೆ, ಎರಡು ಸಾವಿರ ರೂಪಾಯಿಗಳಷ್ಟೂ ಆಗದ ಪಾತ್ರೆಗಳು ಮತ್ತು ದಿನಸಿ ಸಾಮಾನು! ಉಳಿದ ಹಣ ಏನಾಯಿತು?! ಎಲ್ಲಿ ಹೋಯಿತು...? </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅದು ಬಾಪೂ ಹಗಲೂ ರಾತ್ರಿ ತೋಟಕ್ಕೆ ನೀರಿನಷ್ಟೇ ಬೆವರನ್ನೂ ಹರಿಸಿ ಗಳಿಸಿದ ಸಂಪತ್ತು. ನನ್ನ ಮೇಲಿನ ಪ್ರೀತಿಯಿಂದ ನಾಲ್ಕು ಬಳೆ, ಕತ್ತಲ್ಲಿ ಎರಡೆಳೆಯ ಚಪಲ್ಹಾರ, ಒಂದು ನೆಕ್ಲೆಸ್ ಮತ್ತು ಝುಮಕಿ ಮಾಡಿಸಿದ್ದ. ಮದುವೆಯಲ್ಲಿ ನಾನು ಇವೆಲ್ಲವನ್ನೂ ಧರಿಸಿ ನಿಂತಾಗ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನನ್ನ ಮಗಳು ಥೇಟ್ ಗುಡ್ಯಾನ ಅಂಬಾಭವಾನಿ, ಥೇಟ್ ಅಂಬಾಭವಾನಿ. ಸುಕವಾಗಿರ್ ಬೇಟಿ ಸುಕವಾಗಿರು’ ಎನ್ನುತ್ತಾ ಧೋತರದ ಚುಂಗಿನಿಂದ ಕಣ್ಣೊರೆಸಿಕೊಂಡಿದ್ದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಯಾಡಿ ಅಂತೂ ಅತ್ತಿತ್ತ ಹೋದಾಗೊಮ್ಮೆ ಬಂದಾಗೊಮ್ಮೆ ಹತ್ತಿಪ್ಪತ್ತು ಸಲವಾದರೂ, ಜ್ವಾಕಿ ಜ್ವಾಕಿ ಎಂದು ಎಚ್ಚರಿಸುತ್ತಲೇ ಇದ್ದಳು. `ಗುಡಿಯಾ ಮಾಹ್ರೊ ಬೇಟಿ’ ಎನ್ನುತ್ತಾ ತುಟಿಯ ಕೆಳಗೆ, ಕೊರಳ ಬದಿಗೆ, ಅಂಗಾಲಿಗೆ, ಮೊಳಕೈ ಕೆಳಗೆ ಇಷ್ಟಿಷ್ಟಗಲ ಕಾಡಿಗೆ ಬೊಟ್ಟಿಟ್ಟೂ ಸಮಾಧಾನಗೊಳ್ಳದೆ, ದಸ್ತಿಯಲ್ಲಿ ನಿಂಬೆಹಣ್ಣು ಕಟ್ಟಿ, ನನ್ನ ಸೊಂಟದಲ್ಲಿ ಸೆರಗಿನ ಮರೆ ಮಾಡಿ ತುರುಕಿ, ಮುಖ ಸವರಿ ನೆಟಗಿ ಮುರಿದಿದ್ದಳು ನೆದರು ಹತ್ತಬಾರದೆಂದು. ಉಳಿದವರದು ಒತ್ತಟ್ಟಿಗಿರಲಿ, ಅಳಿಯನ ನೆದರು ಸೀದಾ ಬಂಗಾರದ ಮೇಲೆಯೇ ನೆಟ್ಟಿತ್ತು ಅನ್ನುವುದು ಅವರಿಗೆಲ್ಲಿ ಗೊತ್ತಿತ್ತು…?</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಸುಖ ಸಂಸಾರದ ಅಮಲು ಇಳಿದು ನನ್ನ ರಕ್ತ ಕುದಿಯತೊಡಗಿತು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಖರೆ ಹೇಳು, ಎಲ್ಲಿ ಉಳ್ಕಿದ ರೊಕ್ಕ?’ ಸಿಟ್ಟಿನಲ್ಲಿ ನನ್ನ ದನಿ ನಡುಗುತ್ತಿತ್ತು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಕೆನ್ನೆಗೆ ರಪ್ಪನೇ ಬಿದ್ದ ಏಟಿಗೆ ತಲೆ ಧಿಮ್ಮೆಂದಿತು. ಅವನು ಕೈ ಎತ್ತುತ್ತಾನೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಲೆಕ್ಕಾ ಕೇಳ್ತಿ ಲೆಕ್ಕಾ ನನಗ? ಖಬರ್ದಾರ್! ಬಾಯಿ ಮುಚ್ಕೊಂಡು ಬಿದ್ದಿರ್ಬೇಕ್ ಅಷ್ಟ.’ ಅಬ್ಬರಿಸಿದ ಅವನು. ಕಾಲ ಕೆಳಗಿನ ನೆಲ ಕುಸಿದ ಅನುಭವ. ತವರಿನಲ್ಲಿ ತಿಂಗಳೊಪ್ಪತ್ತು ಚೆಂದದಿಂದ ಸಂಸಾರ ಮಾಡಿದ್ದು ಇದೇ ವ್ಯಕ್ತಿ ಜೋಡೀನಾ ನಾನು! ಇವನಿಗೆ ಎಥಿಕ್ಸ್ ಅನ್ನುವುದೇ ಇಲ್ಲ. ಇಲ್ಲಿಗೆ ಬರುವುದಕ್ಕೂ ಮೊದಲಿನ ಅವನ ನಡುವಳಿಕೆ ಎಲ್ಲವೂ ಬರೀ ಸೋಗು! ಪ್ರತ್ಯೇಕ ಸಂಸಾರ ಆರಂಭಿಸಿದ ಇಪ್ಪತ್ನಾಲ್ಕು ಗಂಟೆಗಳಲ್ಲಿಯೇ ಇವನ ಮುಖದ ಬಣ್ಣ ಹಕಳಿ ಹಕಳಿಯಾಗಿ ಉದುರತೊಡಗಿತ್ತು. ಅಗತ್ಯದ ಸಾಮಾನುಗಳೇ ಇಲ್ಲದ ಮನೆಯಲ್ಲಿ ಮನರಂಜನೆಯ ಟಿವಿ ರೇಡಿಯೊಗಳನ್ನು ನಿರೀಕ್ಷಿಸುವುದಾದರೂ ಹೇಗೆ! ಹೊರಗೆ ಯಾರನ್ನಾದರು ಸಂಪರ್ಕಿಸಲೊಂದು ಫೋನೂ ಇಲ್ಲದಂತೆ ಅಸಹಾಯಕ ಸ್ಥಿತಿಯಲ್ಲಿಟ್ಟುಬಿಟ್ಟಿದ್ದ ನನ್ನನ್ನವನು. </span></span></p><p style="text-align: left;"><span style="color: #2b00fe; font-family: Tunga; font-size: large; white-space: pre-wrap;">ಬಾಗಿಲಿಗೆ ಚಾವಿ ಹಾಕಿಕೊಂಡು ಹೋಗುವುದರ ಮುಂದಿನ ಹಂತ, ಅವನಿಲ್ಲದಿರುವಾಗ ಎಲ್ಲ ಕಿಟಕಿಗಳೂ ಮುಚ್ಚಿರಲೇಬೇಕೆಂಬ ನಿಯಮ! ನನಗೆ ಬಾಯ್ ಫ್ರೆಂಡ್ ಇದ್ದಾನಂತೆ, ಅವನು ಕಿಟಕಿ ಮೂಲಕವೂ ನನ್ನನ್ನು ಸಂಪರ್ಕಿಸುವ ಸಾಧ್ಯತೆ ಇರೋದ್ರಿಂದ ಕಡ್ಡಾಯವಾಗಿ ಇವನಿಲ್ಲದಾಗ ಕಿಟಕಿಗಳು ಮುಚ್ಚಿರಲೇಬೇಕು ಎಂದ. ಸೀರೆ ಮಾತ್ರ ಉಡಬೇಕು ಎಂಬ ಆದೇಶ. ಪೌಡರ್, ಕ್ರೀಮ್ ಏನೂ ಹಚ್ಚುವಂತಿಲ್ಲ. ಹಚ್ಚಿದರೆ ಅವುಗಳ ವಾಸನೆಗೆ ಯಾರ್ಯಾರೋ ನಮ್ಮ ಮನೆ ಬಾಗಿಲಿಗೆ ಎಡತಾಕುತ್ತಾರಂತೆ! ನನ್ನ ಎಲ್ಲ ಚೂಡಿದಾರ್ ಸೆಟ್ ಗಳನ್ನು, ಸೆಂಟ್ ಬಾಟಲಿಯನ್ನು ಎತ್ತಿ ಮೇಲಿಟ್ಟ. ಮುಂದೆ ಅವನ ತಂಗಿ ಮನೆಗೆ ಬಂದಾಗ ನಾನೇ ಅವುಗಳನ್ನು ಅವಳಿಗೆ ಕೊಟ್ಟುಬಿಟ್ಟೆ. ಮದುವೆಯಲ್ಲಿ ಕೊಟ್ಟ ಐದು ಸೀರೆಗಳಲ್ಲಿ ಎರಡು ರೇಶಿಮೆಯವು. ನಿತ್ಯ ಉಡುವುದು ಹೋಗಲಿ ಈಗಿನ ಸ್ಥಿತಿಯಲ್ಲಿ ಹಾಗೆ ಯೋಚಿಸುವುದೂ ಸಾಧ್ಯವಿರಲಿಲ್ಲ. ಉಳಿದ ಮೂರು ಸೀರೆಗಳು ನಿತ್ಯದುಡುಗೆಯಾದವು. ಕನ್ನಡಿಯ ಅಗತ್ಯವಿಲ್ಲ ಎನ್ನುತ್ತಾ ಅದನ್ನವನು ತರಲೇಯಿಲ್ಲ. ಅಂದಾಜಲ್ಲೇ ಬೈತಲ ತೆಗೆದು ತಲೆಬಾಚಿ, ಸ್ನಾನ ಮಾಡಿ ಬಂದ ಮೇಲೆ ಅಂದಾಜಿನ ಮೇಲೆಯೇ ಹಣೆಗೆ ಬಿಂದಿ ಇಟ್ಟುಕೊಳ್ಳುತ್ತಿದ್ದೆ. ತಲೆ ಬಾಚಿ ಸ್ನಾನ ಮಾಡುವುದೂ ಅವನ ಅನುಮಾನಕ್ಕೆ ಈಡಾಗುತ್ತಿತ್ತು ಕೆಲವೊಮ್ಮೆ. ರಾತ್ರಿ ಗಾದಿ ಇಲ್ಲದ ಕಬ್ಬಿಣದ ಪಟ್ಟಾಪಟ್ಟಿ ಪಲ್ಲಂಗದ ಮೇಲೆ ಹಾಸಿದ ಜಮಖಾನವನ್ನೂ ತೆಗೆದಿಟ್ಟು ನನ್ನನ್ನು ಅನುಭವಿಸುತ್ತಿದ್ದ. ನೋವಿನಿಂದ ನರಳಿದಷ್ಟೂ ಅವನ ಜೀಕುವಿಕೆ ಹೆಚ್ಚಾಗುತ್ತಿತ್ತು. ಕೆಲವೊಮ್ಮೆ ಬಾಯಿ ಒತ್ತಿ ಹಿಡಿದು ನನ್ನ ಕಣ್ಣಲ್ಲಿನ ಭಯವನ್ನು, ನೋವಿಗೆ ಇಳಿಯುವ ಕಣ್ಣೀರನ್ನು ಆನಂದಿಸುತ್ತ ಉನ್ಮತ್ತನಾಗುತ್ತಿದ್ದ. ಮ್ಯಾರಿಟಲ್ ರೇಪ್! ಯಾರದೋ ಮೇಲಿನ ಸೇಡನ್ನು ತೀರಿಸಿಕೊಳ್ಳುವವನಂತೆ ಅವನು ನನ್ನನ್ನು ಭೋಗಿಸುತ್ತಿದ್ದ. ಅದು ಸಿರಿತನದ ಮೇಲಿನ ಸೇಡಾ? ಬಡತನಕ್ಕೆ ನೆರವಾಗದ ವ್ಯವಸ್ಥೆ ಮೇಲಿನ ಸೇಡಾ? ಅಥವಾ ಅವನನ್ನು ಹಿಂದೆ ಯಾವುದೋ ಹೆಣ್ಣು ಪ್ರೀತಿಸಿ ಕೈಕೊಟ್ಟು ವಂಚಿಸಿದ ಪರಿಣಾಮವಾಗಿ ಹುಟ್ಟಿಕೊಂಡ ಸೇಡಾ? ಆದರದಕ್ಕೆ ಬಲಿಯಾಗುತ್ತಿರುವುದು ಮಾತ್ರ ನಾನಾಗಿದ್ದೆ. ಸತತವಾಗಿ ಅವ್ಯಾಹತವಾಗಿ ಎಲ್ಲ ರೀತಿಯಲ್ಲೂ ಅತ್ಯಾಚಾರವಾಗ ತೊಡಗಿತ್ತು. ನಾಲ್ಕು ತಿಂಗಳ ಕಾಲ, ಅವನ ತಾಯಿ ಮತ್ತು ತಂಗಿ ಎರಡು ತಿಂಗಳ ಮಟ್ಟಿಗೆ ಇಲ್ಲಿ ಇರಲು ಬರುವವರೆಗೆ ಎಳ್ಳಷ್ಟೂ ಹೊರಗಿನ ಸಂಪರ್ಕವೇ ಇಲ್ಲದಂತೆ ಮಾಡಿಬಿಟ್ಟಿದ್ದ, ಅಷ್ಟರಲ್ಲಿ ಸುಮಾರು ಹದಿನೈದು ಕಿಲೊ ಕಮ್ಮಿಯಾಗಿತ್ತು ನನ್ನ ತೂಕ… ಯಾವ ತಪ್ಪೂ ಮಾಡದೇ ಗೃಹಬಂಧಿ ನಾನು! </span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನನ್ನ ಅತ್ತೆ, ನಾದಿನಿ ಬಂದ ನಂತರದಲ್ಲಿ ಅದೊಂದು ದಿನ ಅಚಾನಕ್ಕಾಗಿ ಮೃದುಲಾ ದೀದಿ ನಮ್ಮನೆಯ ಬಾಗಿಲೆದುರು ನಿಂತಿದ್ದರು ನಗುತ್ತಾ. ನನಗೋ ಅವರನ್ನು ಒಳಗೆ ಕರೆಯುವುದೋ ಬೇಡವೋ ಎನ್ನುವ ಗಲಿಬಿಲಿ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅವರಾಗೇ ಕೇಳಿದರು. ‘ಒಳಗ ಬರಬಹುದ ನಾನು?’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅರೇ ಮೇಡಂ ಬರ್ರಿ ಬರ್ರಿ. ಸಾರಿ, ಪ್ಲೀಸ್ ಬರ್ರಿ’ ಎನ್ನುತ್ತಾ ಅವರನ್ನು ಕರೆದು ಇದ್ದ ಒಂದೇ ಕುರ್ಚಿಯ ಮೇಲೆ ಕುಳ್ಳರಿಸಿದೆ. ಸ್ಮಶಾನಕ್ಕಿಂತಲೂ ಕಡೆಯಾದ ಮನೆ ನನ್ನದು. ರಣ ರಣ ಎನ್ನುತ್ತಿತ್ತು. ಜೊತೆಗೆ ಕೆದರಿದ ತಲೆಯ ನಾನು, ಅತ್ತೆ, ನಾದಿನಿ, ನೀಟುನೀಟಾದ ಅವರೆದುರು ಭಿಕ್ಷುಕರಂತೆ ಕಾಣುತ್ತಿದ್ದೆವು. ಮುಜಗರದಿಂದ ಹಿಡಿಯಾಗತೊಡಗಿದ್ದೆ. ಇದ್ಯಾವುದೂ ತಮ್ಮ ಗಮನಕ್ಕೇ ಬಂದಿಲ್ಲವೆನ್ನುವಂತೆ ಇದ್ದರು ಮೃದುಲಾ ದೀದಿ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನೀವು ನನ್ನ ಮೇಡಂ ಗೀಡಂ ಎಲ್ಲಾ ಅನ್ನಬ್ಯಾಡ್ರಿ. ನಾ ಯಾ ನೌಕ್ರಿ ಮಾಡಾಕಿ ಅಂತ ನನ್ನನ್ನ ಮೇಡಂ ಅನಬೇಕು? ಮೃದುಲಾ ಅನ್ನ್ರಿ ಸಾಕು’ ಎಂದರು ನಗುತ್ತ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಸುಮ್ಮನೆ ನಕ್ಕೆ ನಾನು. ಮುಂದೆ ಏನು ಮಾತಾಡುವುದು ತಿಳಿಯದೆ ಎಲ್ಲರೂ ಸುಮ್ಮನಿದ್ದೆವು ಸ್ವಲ್ಪ ಹೊತ್ತು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಮೃದುಲಾ ದೀದಿನೇ, ‘ನಿಮ್ಮ ಹೆಸರೇನ್ರಿ? ಅವತ್ತ ನಿಮ್ಮನಿಯವ್ರು ನನ್ನ ಮಿಸಸ್ ಅಂತಂದೋರ ಹೊಂಟಬಿಟ್ಟ್ರು. ನೀವೂ ಹೇಳ್ಲಿಲ್ಲ. ಏನ್ ಓದ್ಕೊಂಡೀರಿ?’ ನಗುತ್ತ ಕೇಳಿದರು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನನ್ನ ಬದಲಿಗೆ ನನ್ನತ್ತೆಯೇ ಕನ್ನಡದಲ್ಲಿ ‘ವನಮಾಲಾ ಅಂತ ನಮ್ ಸೊಸಿ ಹೆಸರ್ರೀ ಬಾಯಿ. ಇಂಜಿನರ್ ಓದ್ಯಾಳ್ರಿ. ಇವ್ರಪ್ಪ ದೊಡ್ಡ ಸಾವ್ಕಾರ. ಇಕಿ ನನ್ನ ಮಗಳು ಶಾಂತಾಬಾಯಿರೀ. ಗಂಡು ನೋಡಾಕತ್ತೀವ್ರಿ ಇಕಿಗೆ’. ಅವರಂಥ ಸುಶೀಕ್ಷಿತ ಮಂದಿ ನಮ್ಮನೆಗೆ ಬಂದಿದ್ದು ನನ್ನ ವಿಚಾರಿಸಿದ್ದು ಕಂಡು ತಮ್ಮ ಪರಿಚಯವನ್ನೂ ಮಾಡಿಕೊಳ್ಳುವ ಹುರುಪು ಅತ್ತೆಗೆ. ನಮ್ಮ ಲಂಬಾಣಿ ಭಾಷೆಯಲ್ಲಿ ಅಷ್ಟಿಷ್ಟು ಹಿಂದಿಯೂ ಬೆರೆತಿರುತ್ತಾದ್ದರಿಂದ ದೀದಿಯ ಮಾತುಗಳು ಅತ್ತೆಗೆ ಅರ್ಥವಾಗಿದ್ದವು. ಪಾಪದವರು ನನ್ನತ್ತೆ ಮತ್ತು ನಾದಿನಿ. ಗಂಡ ಹೊಡೆಯುವುದು ಮತ್ತು ಹೆಂಡತಿ ಅವನು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು ಅನ್ನುವ ಪುರುಷಪ್ರಧಾನ ಸಮಾಜದ ಅಲಿಖಿತ ನಿಯಮವನ್ನ ತಕರಾರಿಲ್ಲದೇ ಒಪ್ಪಿಕೊಂಡಿರುವವರು. ಅವರೇನು, ಈಗ ನಾನು ಮಾಡುತ್ತಿರುವುದೂ ಅದನ್ನೇ ಅಲ್ಲವೇ? ವಿರೋಧಿಸಿದಾಗೊಮ್ಮೆ ನೆಲಕ್ಕೆ ಒತ್ತಿ ಹಿಡಿದು ಗುಮ್ಮುತ್ತಿದ್ದ ಸುಶೀಲ್. ಅದರ ಬದಲು ಸುಮ್ಮನಿದ್ದು ಹೊಡೆಸಿಕೊಳ್ಳುವುದು ಬೆಟರ್ ಅಂದುಕೊಂಡು ನಾನೂ ಅವರಂತೆಯೇ ಆಗಿದ್ದೆನ್ನಲವೇ? ಕನ್ನಡ ಅರ್ಥವಾಗದಿದ್ದರೂ ನನ್ನ ಹೆಸರು ಮತ್ತು ನಾನು ಇಂಜಿನಿಯರಿಂಗ್ ಓದಿದ್ದು ಎಂದು ಕೇಳುತ್ತಿದ್ದಂತೆ ಕಣ್ಣರಳಿಸಿದ್ದ ದೀದಿ, ಏನೋ ಸರಿಯಿಲ್ಲ ಎಂದರಿತವರಂತೆ ಗಂಭೀರವಾಗಿದ್ದರು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ದೀದಿ ಚಾಯ್?’ ಔಪಚಾರಿಕ ಮಾತಂದೆ.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನಹಿ, ಈಗರ ಕುಡುದು ಬಂದೀನಿ. ನೀವು ದೀದಿ ಅಂದ್ರೆಲ್ಲ ಹಂಗ ಕರೀರಿ. ನನಗೂ ಖುಷಿನೇ ಅದು.’ ಎಂದರು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನೀವೂ ನನಗ ರೀ ಹಾಕಬ್ಯಾಡ್ರಿ ದೀದಿ. ಹಂಗ ಮಾಲಾ ಅನ್ನ್ರಿ ಸಾಕು’ ಎಂದೆ ನಾನು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಡನ್’ ಎಂದವರೇ, ‘ನಿಮ್ಮನಿಗೆ ಯಾರೋ ಪೌಣ್ಯಾರು ಬಂದಾರಂತ ಅಂಕೊಂಡಿದ್ದೆ. ನಿಮ್ಮತ್ತಿಯವ್ರು ಅಂತ ಗೊತ್ತಿರ್ಲಿಲ್ಲ. ಈ ಸಂಡೆ ನೀವೆಲ್ಲಾ ತಪ್ಪದ ಮದ್ಯಾಹ್ನ ನಮ್ಮನಿಗೆ ಊಟಕ್ಕ ಬರಬೇಕು, ಕಾಯ್ತಿರ್ತೀನಿ.’ ಎನ್ನುತ್ತಾ ನಮ್ಮ ಒಪ್ಪಿಗೆಗೂ ಕಾಯದೆ ಬರ್ತೀನಿ ಎಂದು ಹೊರಟೇಬಿಟ್ಟರು. ಕುಂಕುಮ ಕೊಡ್ತೀನಿ ಇರಿ ಎನ್ನಲು ನಮ್ಮನೇಲಿ ಕುಂಕುಮವೂ ಇರ್ಲಿಲ್ಲ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಮುಂದೊಮ್ಮೆ ದೀದಿ ‘ಅಷ್ಟು ಕಲ್ತು ಮನ್ಯಾಗ್ಯಾಕದಿ? ಕೆಲಸಕ್ಕ ಹೋಗೂದಲ್ಲಾ?’ ಎಂದಾಗ ಬರೀದೆ ನಕ್ಕು ಸುಮ್ಮನಾಗಿದ್ದೆ. ನಾನು ಬಸುರಿ ಎಂದು ಗೊತ್ತಾದಾಗ ನಮ್ಮನ್ನೆಲ್ಲ ಮತ್ತೆ ಮನೆಗೆ ಊಟಕ್ಕೆ ಕರೆದು, ಕುಬಸಾ ಮಾಡಿ ಸೀರೆ ಉಡಿಸಿ ಹರಸಿದ್ದರು. ಕಣ್ತುಂಬಿ ಬಂದಿತ್ತು ಆಗ. ಮನೆಗೆ ಬಂದವಳೇ ಬಿಕ್ಕಿಬಿಕ್ಕಿ ಅತ್ತಿದ್ದೆ ನಾನು. ಈ ಪ್ರಪಂಚದಲ್ಲಿ ಒಂದಾದರೂ ಜೀವ ನನಗಾಗಿ ಮಿಡಿಯುತ್ತಿದೆ ಎನ್ನುವುದು ನನ್ನ ಪಾಲಿಗೆ ತಡೆದುಕೊಳ್ಳಲಾಗದ ಆನಂದದ ವಿಷಯವಾಗಿತ್ತು. ದೀದಿಯಿಂದ ವಿಷಯ ತಿಳಿದು ಅದರ ಮುಂದಿನವಾರ ಅವರ ಪಕ್ಕದ ಫ್ಲ್ಯಾಟಿನ ಭೋಸ್ಲೆ ಭಾಭಿ ಕೂಡ ನಮ್ಮೆಲ್ಲರನ್ನು ಊಟಕ್ಕೆ ಕರೆದಿದ್ದರು. ಎರಡು ತಿಂಗಳಿಗೆಂದು ಬಂದ ಅತ್ತೆ ಮತ್ತು ನಾದಿನಿಯನ್ನು ನಾನೇ ಬಲವಂತದಿಂದ ನಮ್ಮ ಜೊತೆಗೇ ಇರಿಸಿಕೊಂಡಿದ್ದೆ. ಹಾಗೆ ಇರಿಸಿಕೊಳ್ಳಲು ನನ್ನ ಸ್ವಾರ್ಥವೂ ಇತ್ತು. ಅದು, ನಮ್ಮ ಬಾಗಿಲು ಮತ್ತು ಕಿಟಕಿಗಳು ಆ ದಿನಗಳಲ್ಲಿ ಮುಚ್ಚಿಕೊಂಡಿರುವುದಿಲ್ಲ ಮತ್ತು ಮಾತಾಡಲು ನನಗೂ ಯಾರೋ ಒಂದಿಬ್ಬರು ಇರುತ್ತಾರೆ ಎನ್ನುವುದು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #cc0000; font-size: large;">***</span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಶಂತನುವಿನ ಜನ್ಮ, ಮೃದುಲಾ ದೀದಿಯ ಪತಿ ಡಾ. ಶೈಲೇಶ್ ಪಾಟೀಲರು ವೈದ್ಯರಾಗಿ ಕೆಲಸ ಮಾಡುತ್ತಿದ್ದ, ಹತ್ತಿರವೇ ಇದ್ದ ನರ್ಸಿಂಗ್ ಹೋಮಿನಲ್ಲಿ ಆಗಿತ್ತಾದ್ದರಿಂದ, ಮೊದಲ ದಿನ ಪಾಟೀಲ್ ದಂಪತಿ ಬಂದು ಮಗುವನ್ನು ನೋಡಿ ಅವನ ಕೈಗೆ ಐನೂರರ ನೋಟೊಂದನ್ನಿಟ್ಟು ಆಶೀರ್ವದಿಸಿದ್ದರು. ನನ್ನ ಜೊತೆಗೆ ಯಾರೂ ಇರದುದ್ದನ್ನು ಕಂಡು ಅಚ್ಚರಿಗೊಂಡ ದೀದಿ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ವನಮಾಲಾ, ಎಲ್ಲಿ ನಿಮ್ಮತ್ತಿ ಮತ್ತ ನಿನ್ನ ನಾದಿನಿ? ಮನೀಗೆ ಹೋಗ್ಯಾರೇನು?’ ಕೇಳಿದರು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅಲ್ಲೇ ನಿಂತಿದ್ದ ನನ್ನ ಗಂಡ ಸುಶೀಲ್, ‘ನಾರ್ಮಲ್ ಡೆಲವರಿ ಆಯ್ತಲ್ಲ ಬಾಯಿ, ಅದಕ್ಕ ಅವ್ರೆಲ್ಲಾ ವಾಪಸ್ ಊರಿಗೆ ಹೋದ್ರು’ ಎಂದ. ಯಾರೆಲ್ಲರ ಬಗ್ಗೆ ಇವನಿಗೆ ಗೌರವ ಇದೆಯೋ ಅವರನ್ನು ಮಾತ್ರ ಬಾಯಿ ಎಂದು ಸಂಬೋಧಿಸುವುದು ಸುಶೀಲನ ಅಭ್ಯಾಸ. ಬಾಯಿ ಎಂದರೆ ಅಕ್ಕ ಎಂದರ್ಥ ನಮ್ಮಲ್ಲಿ. ದೀದಿಗೆ ಈಗ ಮತ್ತೂ ಅಚ್ಚರಿ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನಾರ್ಮಲ್ ಆದ್ರೇನಾತು? ಡೆಲವರಿ ಆಗೇತಿ, ಬಾಣಂತಿ ಜೋಡಿ ಯಾರರೇ ಇರ್ಬೇಕಲ್ಲಾ ಹೆಣ್ಮಕ್ಕ್ಳು? ಬಿಸಿದೇನರೆ ಮಾಡ್ಕೊಂಡು ಬರಾಕ ಮನಿಗೆ ಹೋಗಿರ್ಬೇಕು ಅನ್ಕೊಂಡಿದ್ದೆ ನಾ. ನೀವ್ ನೋಡಿರ ಊರಿಗ್ ಹೋದ್ರು ಅಂತೀರಿ! ನೀವು ಗಂಡಸ್ರು. ಇದೆಲ್ಲಾ ತಿಳ್ಯಂಗಿಲ್ಲ ಅನ್ಕೊಂಡ್ರೂ, ಅವ್ರಾದ್ರೂ ಕೂಸು ಬಾಣಂತಿನ್ನ ಬಿಟ್ಟು ಅಧೆಂಗ ಹೋದ್ರು ಅಂತ!?’ ಎಂದ ದೀದಿ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಇರ್ಲಿ, ನಾಳಿಯಿಂದ ನಾನು ಮತ್ತ ಭೋಸ್ಲೆ ಭಾಭಿ ಇಬ್ಬ್ರೂ ಪಾಳೆ ಮ್ಯಾಲೆ ಮಾಲಾಗ ನಾಷ್ಟಾ, ಊಟ ಕಳಸ್ತೀವಿ. ನೀವು ಇಲ್ಲೇ ಇದ್ದು ಇವರಿಬ್ರೂನು ಚಂದಂಗೆ ನೋಡ್ಕೋರಿ.’ ಹುಕುಂ ಹೊರಡಿಸಿದರು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಬೇರೆ ದಾರಿ ಇಲ್ಲದೆ ನನ್ನ ಗಂಡ ಆಯ್ತು ಎನ್ನುವಂತೆ ತಲೆಯಾಡಿಸಿದ. ಆಕೆ ಹಾಗೆನೇ ನೇರ ಮಾತಿನವರು. ಹಚ್ಚಿಕೊಂಡವರ ನಡುವೆ ಶಿಷ್ಟಾಚಾರದ ಅಗತ್ಯವಿಲ್ಲ ಎಂದು ಭಾವಿಸುವವರು. ಯಾರಿಗೂ ಕೇಡು ಬಗೆಯುವವರಲ್ಲ. ವಯಸ್ಸಿನಲ್ಲಿ ನನಗಿಂತ ನಾಲ್ಕೈದು ವರ್ಷ ದೊಡ್ಡವರಿರಬಹುದೇನೋ ಅಷ್ಟೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಹೇಳಿದಂತೆ ದೀದಿ ಮತ್ತು ಭೋಸ್ಲೆ ಭಾಭಿ ಇಬ್ಬರೂ ನಾನು ಆಸ್ಪತ್ರೆಯಲ್ಲಿದ್ದ ನಾಲ್ಕು ದಿನವೂ ತಿಂಡಿ ಊಟ ಕಳಿಸಿದರು. ಅದರಲ್ಲಿ ಅರ್ಧ ಇವನೇ ಮುಕ್ಕುತ್ತಿದ್ದನಾದ್ದರಿಂದ ನನ್ನ ಪಾಲಿಗೆ ಮತ್ತೆ ಅರೆಹೊಟ್ಟೆಯೇ ಗತಿಯಾಯಿತಾದರೂ ಅಷ್ಟಾದರೂ ಸಿಕ್ಕಿದ ಸಮಾಧಾನ ನನಗೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಮಗ ಹುಟ್ಟಿದ ಮೇಲಾದರೂ ಒಳ್ಳೆಯದು ಘಟಿಸಬಹುದು, ಸುಶೀಲನ ಬದಲಾದ ಚಿತ್ರದ ಸಾಕ್ಷಾತ್ಕಾರವಾಗಬಹುದು ಎಂದು ನಾನು ಕಾದಿದ್ದೇ ಬಂತು. ವಿಕೃತಿ ವಿಪತರೀತವಾಗುತ್ತಲೇ ಹೋಯಿತೇ ವಿನಹ ಅವನ ಕಡೆಯಿಂದ ಯಾವ ಸುಖದ ನೆರಳೂ ಮನೆಯೊಳಗೆ ಕಾಲಿಡಲಿಲ್ಲ.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಮನೆಗೆ ಬಂದ ಮೇಲೆ ಯಥಾ ಪ್ರಕಾರ ಬಾಗಿಲು ಕಿಟಕಿಗಳು ಮುಚ್ಚತೊಡಗಿದ್ದು ಸಾಲದೆಂಬಂತೆ ಬೆಡ್ ರೂಮ್ ಕಿಚನ್ ಗೆ ಪ್ರವೇಶಿಸುವ ಹಾಲ್ ನ ಬಾಗಿಲನ್ನೂ ಹಾಕಿಕೊಂಡು ಹೋಗತೊಡಗಿದ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಮೊದಲಿಗೆ ನಮ್ಮನೆಯ ಹೊರಗಿನ ಬಾಗಿಲಿಗೆ ಬೀಗ ಇರುವುದನ್ನು ಕಂಡ ದೀದಿ, ನನ್ನನ್ನು ತವರಿಗೆ ಬಾಣಂತನಕ್ಕೆ ಕಳಿಸಿರಬೇಕು ಅಂದುಕೊಂಡಿದ್ದರಂತೆ. ಹಾಗೇ ಒಮ್ಮೆ ಎದುರಾದ ಸುಶೀಲನ ನಿಲ್ಲಿಸಿ ಕೇಳಿದ್ದಾರೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಆಗ ಇವನು, ‘ಇಲ್ರೀ ಇಲ್ಲೇ ಅದಾಳ. ನಮ್ಕಡೆ ಒಮ್ಮೆ ಮದವಿ ಮಾಡಿಕೊಟ್ಟ ಮ್ಯಾಲೆ ತಿರಗಿ ತವರಮನಿ ನೋಡಂಗಿಲ್ಲ ಹೆಣ್ಮಕ್ಳು’ ಎಂದಿದ್ದಾನೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅಚ್ಚಾ, ಐಸಾ ಕ್ಯಾ.. ಆದ್ರ ಬಾಗ್ಲಿಗೆ ಕೀಲಿ ಯಾಕ ಹಾಕೀರಿ?’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅವರಿಂದ ಬಂದ ಈ ಅನಿರೀಕ್ಷಿತ ಪ್ರಶ್ನೆಗೆ ಬಾಯಿ ಸವರಾಡಿದ್ದಾನೆ ಸುಶೀಲ್. ‘ಏನಿಲ್ರೀ ಬಾಯಿ, ಸುಮ್ನ ಬಾಣ್ತಿಗೆ ಡಿಸ್ಟರ್ಬ್ ಆಗಬಾರ್ದಂತ…’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಹಂಗಾ? ಹಂಗಾರ ಇವತ್ತಿಂದ ಹಾಕಬ್ಯಾಡ್ರಿ. ನಾನ ಬಿಸಿ ಬಿಸಿ ಸಜ್ಜಕ ಮಾಡಿ ತಂದುಕೊಡ್ತೀನಿ. ಡಿಸ್ಟರ್ಬ್ ಏನ್ ಮಾಡಂಗಿಲ್ಲ ನಾ’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅವರ ಆದೇಶದಂಥ ದನಿಗೆ ಇಲ್ಲ ಎಂದು ಹೇಳಲಾಗದೆ ಇವನು ಹೂಂ ಎಂದು ಬಂದವನು, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅವ್ರು ಬರ್ತೀನಂದಾರ. ಅದನ್ನ ಎನ್ ಕ್ಯಾಶ್ ಮಾಡ್ಕೊಂಡು ಹೊರಗ ಕಾಲಿಟ್ಟೆಂದ್ರ ಹುಶ್ಶಾರ್, ಕೊಂದ ಹಾಕಿಬಿಡ್ತೀನಿ’ ಎಂದ. ಅವತ್ತು ರಾತ್ರಿ ತಾನೇ ಅವರ ಮನೆಗೆ ಹೋಗಿ ಅವರು ಮಾಡಿಕೊಟ್ಟ ಅನ್ನ ತಿಳಿ ಸಾರು, ಸಜ್ಜಕ ತೊಗೊಂಡು ಬಂದಿದ್ದ. ಮರುದಿನ ದೀದಿ ತಾವೇ ಸ್ವತಃ ಬಂದರು ಊಟ ತೆಗೆದುಕೊಂಡು. ಮೊದಲ ಬಾರಿಗೆ ಅವರು ನಮ್ಮ ಬೆಡ್ರೂಂ, ಕಿಚನ್ ನೋಡುತ್ತಿರುವುದು. ಮನೆಯ ಮತ್ತು ನನ್ನ ಅವಸ್ಥೆಯನ್ನು ಕಂಡು ಅವರ ಕಣ್ಣಲ್ಲಿ ನೀರು. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅಲ್ಲ ವನಮಾಲಾ, ಮನ್ಯಾಗ ಏನಂದ್ರ ಏನೂ ಇಲ್ಲ. ಅದೇನ್ ಅಡಗಿ ಮಾಡ್ಕೋತೀ? ಅದೇನ್ ಉಣ್ತಿ?’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"> ಇವನ ಸಂಶಯ ಸ್ವಭಾವ ಮತ್ತು ಜಿಪುಣತನದ ಬಗ್ಗೆ ಹೇಳಲೋಬೇಡವೋ ಎಂದು ಅನುಮಾನಿಸುತ್ತಿರುವಾಗಲೇ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಖರೇ ಹೇಳು. ಯಾಕ ಹಿಂಗೈತಿ ನಿಮ್ಮನಿ? ಏನು ಮಜಕೂರ್?’ ಕೇಳಿದರು ದೀದಿ. ಸಂಕ್ಷಿಪ್ತವಾಗಿ ನನ್ನ ಅವಸ್ಥೆಯನ್ನು ತಿಳಿಸಿದೆ. ಮೃದುಲಾ ದೀದಿ ಸಿಟ್ಟಿನಲ್ಲಿ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಇಷ್ಟೆಲ್ಲಾ ಅನುಭವಿಸಿನೂ ಇನ್ನೂ ಇಲ್ಲೆ ಯಾಕದಿ ಮಾಲಾ ನೀನು? ಬಿಟ್ಟು ನಡಿಯತ್ತಾಗ. ಅಷ್ಟು ಓದಿದೆಕಿ ಅದಿ, ಎಲ್ಲೆರೆ ಚೊಲೊ ನೌಕ್ರಿ ಸಿಕ್ಕ ಸಿಗತೈತಿ ನಿನಗ.’ ಅಂದರು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಎಲ್ಲೆಂತ ಹೋಗ್ಲಿ ದೀದಿ ನಾನು? ಚೂರೂ ಮೈಮ್ಯಾಲೆ ಬಂಗಾರ ಉಳೀಲಾರ್ದಂಗ ಎಲ್ಲಾ ಕಸಗೊಂಡಾನ ಇಂವಾ. ತವರಮನಿ ಇದ್ದೂ ನಾ ಅಲ್ಲಿಗೆ ಹೋಗಂಗಿಲ್ಲ. ಅಕಸ್ಮಾತ್ ನಿಯಮಾ ಮುರ್ದು ಅಲ್ಲಿಗೆ ಹೋದ್ರುನೂ, ಊರಾಗ ಅಪ್ಪಾ ಅವ್ವ ತಲಿ ಎತ್ತಿ ಹೆಂಗ ತಿರಗ್ಯಾರು? ಮದ್ಲ ಎಲ್ಲಾರ್ನೂ ಎದರ ಹಾಕ್ಕೊಂಡು ನಮ್ಮನ್ನೆಲ್ಲಾ ಓದಿಸ್ಯಾರ. ಅಲ್ಲಿಗೆ ಹೋಗಿ ಅವ್ರಿಗೆ ಮುಳುವಾಗ್ಲಾರೆ ನಾ… ನನ್ನ ನಸೀಬಿನ್ಯಾಗ ಇದs ಬರ್ದೈತಿ ಅನುಭೋಗಸ್ತೀನ್ರೀ.’ ನಿಟ್ಟುಸಿರಿಟ್ಟೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಸಮಾಧಾನದ ನಾಲ್ಕು ಮಾತಾಡಿ, ದೀದಿ ತಾವೇನಾದರು ಮಾಡಿ ಸರಿಪಡಿಸುವುದಾಗಿ ಹೇಳಿ ಹೋದರು. ಇದಾಗಿ ಮುಂದೆರಡು ದಿನಕ್ಕೆನೇ ಇವನ ತಲೆಗೇನು ಹೊಕ್ಕಿತೋ, ಮತ್ತೆ ಬಾಗಿಲಿಗೆ ಬೀಗ ಜಡಿದು ಹೋಗತೊಡಗಿದ. ಅದು ಸಾಲದು ಎಂಬಂತೆ ಮದ್ಯಾಹ್ನದ ಹೊತ್ತಲ್ಲಿ ನಮ್ಮ ಅಪಾರ್ಟ್ಮೆಂಟಿನ ಹಿಂಬದಿಗೆ ಹೋಗಿ, ದೂರದಿಂದ ಸುಮಾರು ಹೊತ್ತು ನಮ್ಮ ಮನೆಯ ಕಿಟಕಿಯನ್ನೇ ನೋಡುತ್ತಾ ಇವನು ನಿಲ್ಲುವುದನ್ನ, ಮೂರ್ನಾಲ್ಕು ದಿನ ಸತತ ಗಮನಿಸಿದ್ದಾರೆ ಮೃದುಲಾ ದೀದಿ ಮತ್ತು ಭೋಸ್ಲೆ ಭಾಭಿ. ಇದು ಸಂಶಯ ಪಿಶಾಚಿ ಎನ್ನುವುದು ಅವರಿಗೆ ಮನದಾಟ್ಟಾಗಿದೆ ಆಗ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"> ಒಂದು ಸಂಜೆ ಮೃದುಲಾ ದೀದಿ ಇವನು ಆಫೀಸಿಂದ ಬರುವುದನ್ನೇ ತಮ್ಮ ಬಾಗಿಲಲ್ಲಿ ನಿಂತು ಕಾದವರು, ತಡೆದು ನಿಲ್ಲಿಸಿ, ತಮಗೇನೂ ತಿಳಿದೇ ಇಲ್ಲವೆನ್ನುವಂತೆ ತುಂಬಾ ಅನುನಯದ ದನಿಯಲ್ಲಿ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಕ್ಯೂಂ ಭಾಯ್, ವನಮಾಲಾನ್ನ ಅಷ್ಟು ಪ್ರೀತಿ ಮಾಡೊ ನೀವು ಯಾಕ ಹೊರಗಿಂದ ಚಾವಿ ಹಾಕ್ಕೊಂಡು ಹೋಕ್ಕೀರಿ? ಎನಿ ಪ್ರಾಬ್ಲಮ್?’ ಎಂದಿದ್ದಕ್ಕೆ ಮೊದಲು ಮೊದಲು ಹಾರಿಕೆಯ ಉತ್ತರ ಕೊಟ್ಟವನು ನಿಧಾನವಾಗಿ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಹೌದು ಬಾಯಿ ನಾ ಅಕಿನ್ನ ಭಾಳ ಜೀವ್ ಮಾಡ್ತೀನಿ. ಆದ್ರ ನಿಮ್ಗ ಗೊತ್ತಿಲ್ಲ ಬಾಯಿ, ಅಕಿ ಮದ್ಲ ಕೆಲಸಾ ಮಾಡ್ತಿದ್ದ ಆಫೀಸಿನ್ಯಾಗ ಒಬ್ಬನ ಜತಿಗೆ ಅಕಿನ್ ಲಫಡಾ ಐತ್ರಿ. ಅಂವಾ ಇಕಿನ್ನ ಭೆಟ್ಟಿ ಆಗಾಕ ಬರ್ತಾನ. ಅದಕ್ಕ..’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಓಹೋ ಅದs ಅಂತೀನಿ! ಇಲ್ದಿದ್ದ್ರ ಪಾಪ ನೀವ್ಯಾಕ ಹಿಂಗೆಲ್ಲ ಮಾಡಾಕ ಹೋಗ್ತಿದ್ದ್ರಿ. ಖರೆ ಖರೆ. ಇದರ ಮ್ಯಾಲೆ ಗೊತ್ತಾಕ್ಕತಿ ನೀವಕ್ಕಿನ ಎಷ್ಟು ಜೀವ್ ಮಾಡ್ತೀರಿ ಅಂತ.’ ಎಂದು ಕ್ಷಣಕಾಲ ಸುಮ್ಮನಿದ್ದು, ನಂತ್ರ ‘ಆದ್ರ…’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಆದ್ರೇನ್ ಬಾಯಿ?’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಅಲ್ಲಾ, ನೀವು ಹಿಂಗ ಚಾವಿ ಹಾಕ್ಕೊಂಡು ಹೋದ್ರ, ನೀವು ಅವ್ರನ್ನ ರೆಡ್ ಹ್ಯಾಂಡ್ ಆಗಿ ಹಿಡ್ಯಾಕ ಹೆಂಗ ಸಾಧ್ಯ ಅಂತೀನಿ! ಹೌದಿಲ್ಲೊ ನೀವ ವಿಚಾರ ಮಾಡ್ರಿ’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅರೇ ಹೌದಲ್ಲಾ! ಈ ಬಗ್ಗೆ ತಾನು ಯೋಚಿಸಿಯೇ ಇರಲಿಲ್ಲವಲ್ಲ ಅನಿಸಿರಬೇಕು ಅವನಿಗೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಹಂಗಾರ ಏನ್ ಮಾಡಂತೀರಿ ಬಾಯಿ ನನಗ?’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಸ್ವಲ್ಪ ಹೊತ್ತು ಯೋಚಿಸಿದಂತೆ ಮಾಡಿದ ಮೃದುಲಾ ದೀದಿ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನೀವು ಮನಿ ಚಾವಿ ಹಾಕ್ಕೊಂಡು ಹೋಗ್ತಿದ್ದ್ರ ಅಕಿಗೆ ನಿಮ್ಮ್ಯಾಲೆ ಇನ್ನೂ ಸಿಟ್ಟು ಜಾಸ್ತಿ ಆಗಿ, ಪ್ರೀತಿ ಕಮ್ಮಿ ಆಕ್ಕತಿ ಖರೆ ಹೆಚ್ಚಾಗಂಗಿಲ್ಲ. ಸಡ್ಲ್ ಬಿಟ್ಟು ನೋಡ್ರಿ. ಅಕಸ್ಮಾತ್ ನಿಮ್ಮ ಅನುಮಾನ ಖರೆ ಇದ್ದ್ರ, ಬಾಗ್ಲಿಗೆ ಕೀಲಿಕಪ್ಪಿ ಇಲ್ದಿದ್ದು ಗೊತ್ತಾಗಿ ಅಂವ ಯಾರೋ ಅದಾನ ಅಂದ್ರೆಲ್ಲಾ ಅಂವ ಬಂದs ಬರ್ತಾನ. ಹೆಂಗೂ ನಮ್ಮನಿ ಗ್ರೌಂಡ್ ಫ್ಲೋರಿನ್ಯಾಗ ಇರೂದ್ರಿಂದ ನಾನೂ ಮ್ಯಾಲೆ ಹೋಗಿ ಬರೋರ ಮ್ಯಾಲೆ ನಜರ್ ಇಟ್ಟಿರ್ತೀನಿ. ಹಂಗೇನರ ಯಾರರ ಬಂದಿದ್ದು ಗೊತ್ತಾದ್ರ ತುರಂತ್ ನಿಮಗ ಫೋನ್ ಮಾಡ್ತೀನಿ, ನೀವು ನನಗ ನಿಮ್ಮ ಆಫೀಸ್ ನಂಬರ್ ಕೊಟ್ಟ್ರ. ಆದ್ರ ಒಂದ್ ಮಾತು. ನೀವು ಇನ್ನ ಮುಂದ ಅಕಿ ಮುಂದ ತಪ್ಪೀನೂ ನಿಮಗ ಅಕಿ ಮ್ಯಾಲ ಸಂಶೆ ಐತಿ ಅನ್ನೂದು ತೋರಸ್ಕೊಬ್ಯಾಡ್ರಿ. ಪ್ರೀತಿಯಿಂದ ನಡ್ಕೋರಿ. ಹೆಂಗೂ ನೀವಕ್ಕಿನ ಭಾಳ ಜೀವ್ ಮಾಡ್ತೀರಿ. ಅದೇನ್ ತ್ರಾಸ್ ಅಲ್ಲ ನಿಮಗ. ಹೌದಿಲ್ರಿ?’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ದೀದಿ ಈ ಮಾತು ಹೇಳಿದಾಗ ತುಂಬಾ ಖುಷಿಯಿಂದ ಒಪ್ಪಿಕೊಂಡು ಮನೆಗೆ ಬಂದವನ ವರ್ತನೆಯಲ್ಲಿ ಬದಲಾವಣೆ ಕಂಡಿತ್ತು. ಬಾಗಿಲಿಗೆ ಬೀಗ ಹಾಕುವುದನ್ನು ನಿಲ್ಲಿಸಿದ ಮತ್ತು ಹಾಲ್ ನಡುಬವಿನ ಬಾಗಿಲ ಚಿಲಕ ಹಾಕುವುದನ್ನೂ ನಿಲ್ಲಿಸಿದ. ಕಿಟಕಿಗಳು ತೆರೆದುಕೊಂಡವು. ಉಳಿದಂತೆ ಮನೆ ಸಾರಿಸಿಗುಡಿಸಿದ ಹಾಗೆ ಖಾಲಿಖಾಲಿ. ಅಡುಗೆ ಮನೆಯ ಪಾತ್ರೆಗಳೂ ಸಹ.. ಆಗಾಗ ತಂದಿಟ್ಟಿದ್ದನ್ನೇ ನಾನು ಅಷ್ಟಷ್ಟೇ ಬಳಸುತ್ತಿದ್ದೆನಾದ್ದರಿಂದ ಸಾಯದೆ ಬದುಕಿದ್ದೆ. ಮಗುವಿಗಾಗಿ ಪಾವ್ ಲಿಟರ್ ಹಾಲು ತರುತ್ತಿದ್ದ ಆಫೀಸಿನಿಂದ ಬರುವಾಗ. ಅದಕ್ಕೇ ನೀರು ಬೆರೆಸಿ ಕುಡಿಸುತ್ತಿದ್ದೆನಾದ್ದರಿಂದ ಮಗುವೂ ಬದುಕಿತ್ತು. ಕೀಲಿಕಪ್ಪಿ ಹಾಕುವುದನ್ನು ನಿಲ್ಲಿಸಿದ ಮೇಲೆ ಆಗಾಗ ದೀದಿ, ಭೋಸ್ಲೆ ಭಾಭಿ ನಮ್ಮನೆಗೆ ಬಂದುಹೋಗತೊಡಗಿದರು. ಬರುವಾಗ ತಿಂಡಿ ಊಟ ಏನಾದರೂ ಹೊತ್ತೇ ಬರುತ್ತಿದ್ದರು. ಹಾಗೆ ಅವರು ಊಟ ತಿಂಡು ತರುವುದು ನನಗೆ ಸಂಕೋಚವಾಗುತ್ತಿತ್ತಾದರೂ ಹಸಿವೆಂಬುದು ನಾಚಿಕೆಯಿಲ್ಲದ ನಾಯಿಯಂತೆ. ‘ನನ್ನಿಂದ ಸುಮ್ನ ನಿಮ್ಮಿಬ್ಬರ್ಗೂ ತ್ರಾಸು’ ಎಂದೆನ್ನುತ್ತಲೇ ಅವರು ತಂದುಕೊಟ್ಟಿದ್ದನ್ನ ತೆಗೆದುಕೊಳ್ಳುತ್ತಿದ್ದೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಒಂದಿಷ್ಟು ದಿನಗಳಾದ ಮೇಲೆ ದೀದಿ ಬಾಗಿಲಿನ ಬೀಗ ತೆರೆದ ಈ ರಹಸ್ಯ ಹೇಳಿ, </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಮುಳ್ನ ಮುಳ್ಳಿಂದಾನ ತಗೀಬೇಕು ಅಂತಾರ ನೋಡು ಮಾಲ, ಅದು ಖರೆ ಆತು ನೋಡು ನಿನ್ನ ಗಂಡನ ವಿಷಯದಾಗ’ ಎಂದು ಹೇಳಿ ನಕ್ಕರು. ಒಂಚೂರು ನಿರಾಳವಾದೆ ನಾನು. ಅವನದೇ ಯೋಚನೆಯ ಧಾಟಿಯಲ್ಲಿ ಮಾತಾಡಿದ್ದ ಮೃದುಲಾ ದೀದಿಯ ಮೇಲಿನ ಗೌರವ ನಂಬಿಕೆ ಹೆಚ್ಚಾಗಿತ್ತು ಸುಶೀಲನಿಗೆ. ನನಗೂ ಸಹ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #cc0000; font-size: large;">*** </span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಹೀಗಿರುವಾಗಲೇ ಮಳೆಗಾಲದ ಒಂದು ದಿನ ಆ ಘಟನೆ ನಡೆದಿತ್ತು. ಶಂತನು ಆಗ ನಾಲ್ಕು ತಿಂಗಳ ಮಗು. ಸುಶೀಲ್ ತರುತ್ತಿದ್ದ ಪಾವು ಲಿಟರ್ ಹಾಲು ಸಾಲದಾಗಿ, ಬಾಗಿಲನ್ನು ಮುಂದು ಮಾಡಿಕೊಂಡು, ಅಂದು ಅನಿವಾರ್ಯವಾಗಿ ಮೃದುಲಾ ದೀದಿಯ ಮನೆಗೆ ಹೋಗಿದ್ದೆ ಹಾಲು ಕೇಳಲು. ಹೊರಗೆ ಮಳೆ ಜಿಟುಗುಡುತ್ತಿತ್ತು. ಮಾತನಾಡುತ್ತ ಆಡುತ್ತಾ ಅರ್ಧ ಮುಕ್ಕಾಲು ಗಂಟೆಯಾಗಿ ಹೋಗಿತ್ತು. ಪಾತ್ರೆಯೊಂದರಲ್ಲಿ ಹಾಲು ಪಡೆದುಕೊಂಡು ಅವರ ಮನೆಯಿಂದಾಚೆ ಬಂದರೆ ಹೊರಗೆ ಮಳೆಯ ಜೊತೆ ಗಾಳಿ ಸುಂಯ್ಗುಡುತ್ತಿತ್ತು. ಮೆಟ್ಟಿಲೇರಿದೆ. ಬಂದು ಬಾಗಿಲನ್ನು ತಳ್ಳಲು ನೋಡಿದರೆ ಒಳಗಿನಿಂದ ಬೋಲ್ಟ್ ಹಾಕಿದ್ದು ಗೊತ್ತಾಗುತ್ತಿದ್ದಂತೆಯೇ ಎದೆ ನಡುಗಿತ್ತು… ಇವನು ಬಂದು, ಬೀಗ ಹಾಕದ ಬಾಗಿಲು ತಳ್ಳಿ ಒಳಹೋಗಿದ್ದಾನೆ. ನಾನು ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಅವನ ಸಂಶಯ ನಿಜವಾಗಿಬಿಟ್ಟಿದೆ. ಅವನಲ್ಲಿ ಒಳಗೆ ಬುಸುಗುಡುತ್ತಿದ್ದಾಗಲೇ ನಾನು ಮನೆಗೆ ಬಂದಿದ್ದು. ನಂತರ ಕೂಗಾಟ, ಒದೆ.. ನಾನು ಕಿರುಚಿಕೊಂಡಿದ್ದನ್ನು ಕೇಳಿ ಮೇಲೆ ಓಡಿ ಬಂದು ನನ್ನನು ಉಪಚರಿಸುತ್ತಿದ್ದ ಮೃದುಲಾ ದೀದಿ ನನ್ನ ಗಂಡನೆನಿಸಿಕೊಂಡವನಿಗೆ, ‘ಆಪ್ ಅಪನೆ ಬೀವಿ ಸೆ ಬಹುತ್ ಪ್ಯಾರ್ ಕರ್ತೆ ಹೋ, ಯೇ ಮೆ ಜಾನ್ತಿ ಥಿ ಭಯ್ಯಾ. ಆದ್ರ ಈ ಪರಿ ಪ್ರೀತಿ ಮಾಡ್ಟತೀರಂತ ಗೊತ್ತಿರ್ಲಿಲ್ಲ ಬಿಡ್ರಿ ನನಗ!’ ಎಂದಿದ್ದು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ದೀದಿಯ ವ್ಯಂಗ್ಯದ ಮೊನಚು ಅವನಿಗೆ ತಾಗಿ. ‘ನಹಿ ಬಾಯಿ, ನೀವು ತಪ್ಪು ತಿಳ್ಕೊಂಡೀರಿ. ನಾ ಅಕಿಗೆ ಏನೂ ಮಾಡಿಲ್ಲ. ಖರೇನ ಚಕ್ಕರ್ ಬಂದು ಬಿದ್ದಾಳ’ ಎಂದವನು ಅಂದಾಗ ದೀದಿ ಮತ್ತೂ ಮೊನಚಾಗಿ ‘ಓಹೋ!’ ಎಂದಿದ್ದು...</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ನನ್ನನ್ನು ಸಮಾಧಾನಿಸುತ್ತ ತಲೆ ನೇವರಿಸುತ್ತಿದ್ದ ದೀದಿ ‘ಬೆನ್ನಿಗೇನಾದರೂ ಪೆಟ್ಟಾಗೇತೇನು?’ ಎನ್ನುತ್ತಾ ಬೆನ್ನು ಸವರಿದರು. ‘ಯಾಡೀರೇ..’ ಕಿರುಚಿದೆ ನಾನು! ಬೆಚ್ಚಿಬಿದ್ದ ದೀದಿ, ನನ್ನ ಬೆನ್ನ ಮೇಲಿನ ಸೆರಗು ಸರಿಸಿ ಬೆನ್ನು ನೋಡಿದವರೇ ‘ಆಯಿಗ!!’ ಎಂದು ಉದ್ಘಾರ ತೆಗೆದರು. ಅವರು ನಡುಗುತ್ತಿದ್ದುದು ಸ್ಪಷ್ಟವಾಗಿ ನನ್ನನ್ನು ಹಿಡಿದುಕೊಂಡಿದ್ದ ಅವರ ಕೈನಡುಕದಿಂದ ಗೊತ್ತಾಗುತ್ತಿತ್ತು ನನಗೆ. ಗಾದಿ ಇಲ್ಲದ ಪಟ್ಟಾಪಟ್ಟಿ ಮಂಚದ ಮೇಲೆ ನಾನು ಆಗಾಗ ಅತ್ಯಾಚಾರಕ್ಕೊಳಗಾಗುತ್ತಲೇ ಇದ್ದ ಪರಿಣಾಮವಾಗಿ ಬೆನ್ನು ಮೂಳೆಯ ಮೇಲಿನ ಚರ್ಮವೆಲ್ಲ ಕಿತ್ತುಹೋಗಿ ಗಾಯ ಮಾಯುತ್ತಲೇ ಇರಲಿಲ್ಲ. ಅಂಥಾ ಹಸಿಗಾಯಗಳನ್ನು ದೀದಿ ನೋಡಿ ನಡುಗಿದ್ದರು. ಸುಶೀಲನ ಮೇಲೆ ಪೋಲಿಸ್ ಕಂಪ್ಲೇಂಟ್ ಕೊಡುವುದಾಗಿ ಗುಡುಗಿದ್ದರು. ಅವರ ಗಟ್ಟಿ ದನಿಯ ಧಮ್ಕಿ ಕೇಳಿ ತೋಯ್ದ ಬೆಕ್ಕಾಗಿದ್ದ ಸುಶೀಲ್, ತಪ್ಪಾಯಿತೆಂದು ಅವರ ಕಾಲು ಹಿಡಿದ. ಕಾಲನ್ನು ಹಿಂದಕ್ಕೆಳೆದುಕೊಂಡ ದೀದಿ, ‘ನನ್ನ ಕಾಲಲ್ಲ ಅಕಿನ್ ಕಾಲ್ ಹಿಡ್ದು ಕ್ಷಮಾ ಕೇಳ್ರಿ. ನಂದೇನು ನೀವು ಕಾಲ್ ಹಿಡ್ಯೂದು ನೀವು!’ ಎಂದರು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಆಗವನು ಸುಮ್ಮನೆ ತಲೆ ತಗ್ಗಿಸಿ ನಿಂತ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನಾಚ್ಗಿ ಬರ್ಬೇಕು ನಿಮಗ. ಯಾ ಬಾಯಿಂದ ಇಕಿನ್ನ ಭಾಳ ಪ್ರೀತಿಸ್ತೀನಿ ಅಂತೀರೋ. ಥೂ’ ಎಂದವರೇ ಮನೆಗೆ ಹೋಗಿ, ಮುಲಾಮು ತಂದು ಬೆನ್ನಗೆ ಸವರಿದರು. ಭೋಸ್ಲೆ ಭಾಭಿ ತಂದ ಚಹಾದಲ್ಲಿ ಬಿಸ್ಕಿಟ್ ಅದ್ದಿ ತಿನ್ನಿಸಿ ಮನೆಯಿಂದ ಅವರ ಗಂಡನನ್ನು ಕೇಳಿ ತಂದಿದ್ದ ಎರಡು ಗುಳಗಿ ನುಂಗಿಸಿದರು ನನಗೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅದಾದ ನಂತರ ಸುಶೀಲ್ ಗೆ ತುಂಬಾ ಕಟುವಾಗಿ ವಾರ್ನಿಂಗ್ ಮಾಡಿದರು ದೀದಿ. ಮನೆಗೆ ಸರಿಯಾಗಿ ದಿನಸಿ ತರಬೇಕು, ಮಗುವಿಗೆ ಅಗತ್ಯವಾದ ವಸ್ತುಗಳನ್ನೆಲ್ಲ ತರಬೇಕು, ನನ್ನನ್ನು ಯಾವುದೇ ಕಾರಣಕ್ಕೂ ಬಲವಂತವಾಗಿ ಅನುಭವಿಸುವಂತಿಲ್ಲ ಇತ್ಯಾದಿಯಾಗಿ ಹಲವು ವಿಷಯಗಳನ್ನು ಕಡ್ದಾಯ ಮಾಡಿ, ತಾವು ಆಗಾಗ ಬಂದು ನೋಡುವುದಾಗಿಯೂ, ಅಕಸ್ಮಾತ್ ತಾವು ಹೇಳಿದಂತೆ ನಡೆದುಕೊಳ್ಳದೇ ಹೋದರೆ ಪೋಲಿಸ್ ಕಂಪ್ಲೇಂಟ್ ಕೊಡುವುದು ಗ್ಯಾರೆಂಟಿ ಎಂದೂ ಹೆದರಿಸಿದರು. ಪೋಲಿಸ್ ಎನ್ನುತ್ತಿದ್ದಂತೆಯೇ ಅಂಜಿ ಸತ್ತಿದ್ದ ಸುಶೀಲ್ ಎಲ್ಲದಕ್ಕೂ ಒಪ್ಪಿಕೊಂಡ. ಸಿಕ್ಕ ಭರವಸೆಗೋ, ಒದೆಸಿಕೊಂಡ ದಣಿವಿಗೋ ಇಲ್ಲಾ ಗುಳಗಿಯ ಪ್ರಭಾವವೋ ಗೊತ್ತಿಲ್ಲ ಅವರಿನ್ನೂ ಮಾತಾಡುತ್ತಿದ್ದಾಗಲೇ ನಿದ್ದೆಗೆ ಜಾರಿದ್ದೆ ನಾನು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಮರುದಿನ ಕಣ್ಣು ಬಿಟ್ಟಾಗ ನಿಜವಾಗಲೂ ಹೊಸ ಬೆಳಗು ನನ್ನ ಬದುಕಿಗೆ. ತಕ್ಕಮಟ್ಟಿಗೆ ದಾರಿಗೆ ಬಂದಿದ್ದ ಸುಶೀಲ್. ನಿತ್ಯ ನರಕದ ಎದುರು ಬದಲಾವಣೆಗಳ ನಂತರದ ಕಿರುಕುಳಗಳನ್ನು ಸಹಿಸಿಕೊಳ್ಳುವ ಮಟ್ಟಿಗೆ ಅದಾಗಲೇ ಮುಂಚಿನ ನೋವುಗಳು ನನ್ನನ್ನು ತಯಾರು ಮಾಡಿದ್ದವು. ಸುಶೀಲನ ಪಾಲಿಗೆ ಈ ಬದಲಾವಣೆ ಸುಲಭವಾಗಿರಲಿಲ್ಲ. ತುಂಬಾ ಒತ್ತಾಯಪೂರ್ವಕವಾಗಿಯೇ ಮೃದುಲಾ ದೀದಿಯ ಆಜ್ಞೆಗಳನ್ನು ಪಾಲಿಸಲು ಯತ್ನಿಸುತ್ತಿದ್ದ. ಅದರ ಹಿಂದೆ ಪೋಲಿಸ್ ಭಯ ಇರುವುದು ಸ್ಪಷ್ಟವಿತ್ತು. ನೋಡ ನೋಡುತ್ತಲೇ ಶಂತನುವಿನ ಮೊದಲ ಬರ್ತ್ ಡೇ ಬಂದಿತ್ತು. ಎಲ್ಲ ಒಂದು ಹದಕ್ಕೆ ಬರುವ ದಾರಿಯಲ್ಲಿದ್ದ ಕಾರಣ, ಬರ್ತ್ ಡೇ ದಿನ ‘ಹತ್ತಿರದಲ್ಲೇ ಇದ್ದ ಅಂಬಾಭವಾನಿ ದೇವಿಗೆ ಸೀರೆ ಕೊಡೋಕಾಗುತ್ತಾ ನೋಡು ಆಕೆಯ ಆಶೀರ್ವಾದವಿರಲಿ ನಿನ್ನ ಮತ್ತು ಮಗುವಿನ ಮೇಲೆ’ ಎಂದರು ದೀದಿ. ಆಯಿತೆಂದು ಒಪ್ಪಿಕೊಂಡು ಸುಶೀಲ್ ಗೆ ದೀದಿಯ ಮಾತುಗಳನ್ನು ಹೇಳಿದೆ. ತಪ್ಪಿಯೂ ನಿನಗೂ ಒಂದು ಸೀರೆ ಕೊಂಡುಕೊ ಎಂದವನ ಬಾಯಿಂದ ಬರಲಿಲ್ಲ. ಅವನೊಟ್ಟಿಗೇ ಹೋಗಿ ಮಗುವಿಗೆ ಬಟ್ಟೆ ಮತ್ತು ಒಂದು ಸೀರೆ ತಂದೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಶಂತನು ಬರ್ತ್ ಡೇ ದಿನ ಬೆಳಿಗ್ಗೆ ಎದ್ದವಳೇ ಮಗನಿಗೆ ಎಣ್ಣೆಸ್ನಾನ ಮಾಡಿಸಿ ನಾನೂ ಸ್ನಾನ ಮಾಡಿ ಮಗನಿಗೆ ಹೊಸ ಬಟ್ಟೆ ತೊಡಿಸಿ, ಅವನನ್ನು ಎತ್ತಿಕೊಂಡು ಮೃದುಲಾ ದೀದಿಯ ಮನೆಯ ಬಾಗಿಲು ತಟ್ಟಿದೆ. ಬಾಗಿಲು ತೆರೆದ ದೀದಿ, ಖುಷಿಯಿಂದ ಶಂತನುವನ್ನೆತ್ತಿಕೊಂಡು ಮುತ್ತಿಟ್ಟು ‘ಹ್ಯಾಪ್ಪಿ ಬರ್ತ್ ಡೇ ರಾಜ್ಕುಮಾರ’ ಎಂದರು. ಅವರನ್ನು ಅಲ್ಲೇ ಇದ್ದ ಸೋಫಾ ಮೇಲೆ ಕೂರಿಸಿ ನನ್ನ ಜೊತೆಗೆ ತಂದಿದ್ದ ಹೊಸ ಸೀರೆಯನ್ನು ಮಡಿಲಲ್ಲಿಟ್ಟು, ಅವರ ಪಾದಕೆ ಹಣೆಹಚ್ಚಿ ನಮಸ್ಕರಿಸಿದೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಏನ್ ಮಾಡೀದಿ ಇದು ನೀ ಮಾಲಾ! ನನಗ್ಯಾಕ!?’ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ನೀವs ನನ್ನ ಅಂಬಾಭವಾನಿ ದೀದಿ. ಮತ್ತ್ಯಾಕ ಗುಡೀಗೆ ಹೋಗ್ಲಿರೀ ನಾ? ನನ್ನ ಮತ್ತ ನನ್ನ ಮಗನ ನೆತ್ತಿ ಮ್ಯಾಲ ಹಿಂಗ ಮುಂದೂನೂ ನಿಮ್ಮಾಶೀರ್ವಾದ ಇರ್ಲಿರೀ’</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಅನಿರೀಕ್ಷಿತವಾಗಿ ನಡೆದ ಈ ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೇ ದೀದಿ ನನ್ನನ್ನು ಸುಮ್ಮನೆ ಅಪ್ಪಿಕೊಂಡರು.</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #cc0000; font-size: large;">***</span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಸಭ್ಯನಾಗುವ ತನ್ನ ಪ್ರಯತ್ನದಲ್ಲಿ ಸೋತಿದ್ದ ಸುಶೀಲ್ ಮತ್ತೆ ಮೊದಲಿನಂತೆ ಕಿರುಕುಳ ಕೊಡಲು ಆರಂಭಿಸಿದ್ದನಾದರೂ ಈಗ ನನ್ನೊಳಗೊಂದು ಬಲ ಬಂದಿತ್ತು. ಪ್ರತಿರೋಧಿಸುತ್ತಿದ್ದೆ. ಕಿರುಕುಳ ವಿಪರೀತವಾದಾಗ ದೀದಿ ಎದುರು ಹೇಳುವುದಾಗಿ ಹೆದರಿಸುತ್ತಿದ್ದೆ. ಆಗ ಒಂದೆರಡು ದಿನ ದಾರಿಗೆ ಬಂದಂತೆ ಕಾಣುತ್ತಿದ್ದವನು ಮತ್ತೆ ತನ್ನ ಚಾಳಿ ಮುಂದುವರೆಸುತ್ತಿದ್ದ. ಹೀಗೆ ಸೆಣಸಾಡುತ್ತಲೇ ನಾಲ್ಕಾರು ವರ್ಷ ಕಳೆದವು. ಬೆಳೆಯುತ್ತಿರುವ ಮಗನ ಎದುರೇ ಎಲ್ಲ ಅವಾಂತರಗಳು… ಅದರಿಂದ ಮಗನ ಮನಸಿನ ಮೇಲಾಗಬಹುದಾದ ಪರಿಣಾಮಗಳನ್ನು ಯೋಚಿಸಿ ಕಂಗೆಟ್ಟಿದ್ದೆ. ಏನೂ ಮಾಡಿದರೂ ಎಡವಟ್ಟಾಗುವ ಪರಿಸ್ಥಿತಿ ಎದುರು ಹತಾಶಳಾದೆ. ಈ ನಡುವೆ ನನಗೆ ಒಂದು ಅಬಾರ್ಷನ್ ಕೂಡ ಆಗಿಹೋಗಿತ್ತು. ಪುಟಕ್ಕಂಟಿಕೊಂಡು ಅಂದವಾಗಿ ಅಚ್ಚುಕಟ್ಟಾಗಿ ಹದವೊಂದರಲ್ಲಿ ಮೂಡಬೇಕಾದ ಅಕ್ಷರ, ಪದ, ವಾಕ್ಯಗಳೆಲ್ಲ ಹಿಡಿತ ತಪ್ಪಿ ಗಾಳಿಯಲ್ಲಿ ಆವಿಯಾಗುತ್ತಿದೆ ಎನಿಸುವ ಅಸಹಾಯಕತೆ. ಇನ್ನು ಸಹಿಸಲಾಗದು ಎನಿಸಿದಾಗ, ಮೃದುಲಾ ದೀದಿಯ </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಒತ್ತಾಸೆಯಿಂದ ಅವರ ಮನೆಗೆ ತರಿಸುತ್ತಿದ್ದ ಪತ್ರಿಕೆಯಲ್ಲಿನ ಜಾಹೀರಾತುಗಳನ್ನು ನೋಡಿ ಅಲ್ಲಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕತೊಡಗಿದೆ. ಓದಿನ ನಂತರದ ನಾಲ್ಕು ವರ್ಷಗಳ ಗ್ಯಾಪ್ ಮತ್ತು ಅನುಭವ ಎರಡನ್ನೂ ಗಮನಿಸಿ ನನ್ನ ಅರ್ಜಿಯನ್ನು ವಜಾ ಮಾಡಿದವರೇ ಹೆಚ್ಚು. ಅಂತೂ ಕೊನೆಗೆ ಒಂದು ಕಂಪನಿಯಲ್ಲಿ ಅಹಮದನಗರ್ ನಲ್ಲೇ ಕೆಲಸ ಸಿಕ್ಕಾಗ ಸುಶೀಲ್ ಕೆಲಸಕ್ಕೆ ಹೋಗುವುದು ಬೇಡವೆಂದು ತಕರಾರು ತೆಗೆದ. ಮತ್ತೆ ದೀದಿ ಮಧ್ಯಸ್ಥಿಕೆವಹಿಸುವುದು ಅನಿವಾರ್ಯವಾಯಿತು. ಸುಶೀಲ್ ನೇ ನನ್ನನ್ನು ಆಫೀಸಿಗೆ ಬಿಟ್ಟು, ಕರೆದುಕೊಂಡು ಬರುವುದು ಎಂದಾಗ, ಅವನ ಕರಾರನ್ನು ಸಂತೋಷದಿಂದ ಒಪ್ಪಿಕೊಂಡೆ. ಶಂತನು ಶಾಲೆಗೆ ಹೋಗತೊಡಗಿದ್ದನಾದ್ದರಿಂದ ನಾವು ಮರಳಿ ಬರುವವರೆಗೆ ಅವನನ್ನು ತಮ್ಮ ಮನೆಯಲ್ಲಿ ಇರಿಸಿಕೊಳ್ಳುವುದಾಗಿ ಹೇಳಿದರು ದೀದಿ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">ಕೆಲಸಕ್ಕೆ ಹೋಗಲು ಆರಂಭಿಸಿ ತಿಂಗಳೂ ಕಳೆದಿರಲಿಲ್ಲ, ಸುಶೀಲನ ಸಂಶಯದ ಭೂತ ಮತ್ತೆ ತಾಂಡವವಾಡತೊಡಗಿತು. ಆಫೀಸಿನ ಎಲ್ಲ ಪುರುಷ ಸಹೋದ್ಯೋಗಿಗಳ ಮೇಲೂ ಅನುಮಾನಪಡತೊಡಗಿದ. ಮತ್ತೆ ಹಿಂಸಿಸುವುದಕ್ಕೆ ಶುರು ಮಾಡಿದ. ಹೊಡೆತ ಬಡೆತ ಆರಂಭಗೊಂಡು ಮಗನನ್ನೂ ವಿನಾ ಕಾರಣ ಹೊಡೆಯಲಾರಂಭಿಸಿದ. ಅದನ್ನು ತಿಳಿದ ದೀದಿಯ ಪತಿ ಡಾ. ಶೈಲೇಶ್ ಪಾಟೀಲ್, ‘ಇದು ಮಾನಸಿಕ ಖಾಯಿಲೆ, ಚಿಕಿತ್ಸೆ ಇಲ್ಲದೇ ಗುಣವಾಗದು. ಆರಂಭದಲ್ಲೇ ಹೇಳೋಣವೆಂದುಕೊಂಡಿದ್ದೆ. ಆದರೆ ನೀವೆಲ್ಲಿ ತಪ್ಪು ತಿಳೀತೀರೋ ಅಂದುಕೊಂಡು ಸುಮ್ಮನಿದ್ದೆ’ ಎಂದರು. ಎಷ್ಟೇ ಹರಸಾಹಸ ಮಾಡಿದರೂ ಕೌನ್ಸಲಿಂಗಿಗೆ ಒಪ್ಪದ ಸುಶೀಲನನ್ನು ಆಸ್ಪತ್ರೆಗೆ ಸೇರಿಸುವುದು ಅನಿವಾರ್ಯ ಎನ್ನುವ ಸಲಹೆ ಡಾ. ಶೈಲೇಶ್ ಪಾಟೀಲರಿಂದ ಬಂದಾಗ ಕಸಿವಿಸಿಗೊಂಡೆ. ಒಮ್ಮೆ ಆಸ್ಪತ್ರೆಗೆ ಹೋಗಿ ಬಂದರೆ ಈ ಜಗತ್ತು ಅವನನ್ನು ಹುಚ್ಚ ಎನ್ನುತ್ತದೆ. ಅದನ್ನು ಹೇಗೆ ಸಹಿಸುವುದು? ಬದಲಿಗೆ ನನ್ನನ್ನು ಹಿಂಸಿಸುತ್ತಾನಾದರೆ ಹಿಂಸಿಸಲಿ, ಸಹಿಸಿಕೊಳ್ಳುವೆ ಎಂದೆ. ಅಷ್ಟೊಂದು ಕಷ್ಟ ಕೊಡುವ ಅವನನ್ನು ನಾನು ಇಷ್ಟು ಪ್ರೀತಿಸುತ್ತೆನೆಯೇ?! ನನಗೇ ಅಚ್ಚರಿಯಾಯ್ತು. ಇರ್ಲಿಕ್ಕಿಲ್ಲ ಅದು ಕರುಣೆ ಇರಬಹುದು… ಅಥವಾ…</span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"> ಡಾ. ಶೈಲೇಶ್ ಪಾಟೀಲ್ ನನ್ನನ್ನು ಮನೆಗೆ ಕರೆದು ಕೂರಿಸಿ ಮಾತಾಡಿದರು. ಈಗ ಸುಶೀಲನನ್ನು ಆಸ್ಪತ್ರೆಗೆ ಸೇರಿಸದಿದ್ದಲ್ಲಿ ಮುಂದೆ ಮಗುವಿನ ಮೇಲಾಗಬಹುದಾದ ಪರಿಣಾಮಗಳನ್ನು ವಿವರಿಸಿದರು. ಸುಶೀಲ್ ನಾರ್ಮಲ್ ಆದ ಮೇಲೆ ಸಹಜ ಜೀವನ ಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟರು. ಮಗನ ಭವಿಷ್ಯದ ವಿಷಯ ಬಂದಾಗ ಅವರ ಮಾತನ್ನು ಒಪ್ಪುವುದೇ ಸರಿ ಅನಿಸಿತು ನನಗೆ… ಮನಸು ಗಟ್ಟಿ ಮಾಡಿಕೊಂಡು, ಅವನ ಊರಿಗೆ ಹತ್ತಿರ ಅನ್ನುವ ಕಾರಣಕ್ಕೆ ಹರಸಾಹಸದಿಂದ ಮೀರಜಿನಲ್ಲಿರುವ ಮಾನಸಿಕ ಆಸ್ಪತ್ರೆಯಲ್ಲಿ ಸುಶೀಲ್ ನನ್ನು ಭರ್ತಿ ಮಾಡಲಾಯಿತು. ಧಿಡೀರ್ ಬದಲಾವಣೆಗಳಿಗೆ ಹೊಂದಿಕೊಳ್ಳಲಾಗದೆ ತೊಳಲಾಡಿದೆ. ಸುಶೀಲ್ ಹುಚ್ಚಾಸ್ಪತ್ರೆಗೆ ಸೇರುವಂತಾಗಿದ್ದಕ್ಕೆ ಸಲ್ಲದ ಅಪರಾಧಿ ಪ್ರಜ್ಞೆಯಿಂದ ಬಳಲತೊಡಗಿದೆ. ಅವನ ಕಡೆಯವರಿಂದಲೂ ಏನೆಲ್ಲ ಕೇಳಬೇಕಾಯಿತು ನಾನು. ಅವರೆಲ್ಲರ ತಿರಸ್ಕಾರಕ್ಕೊಳಗಾದೆ. ಇದರಿಂದಾಗಿ ಮಾನಸಿಕವಾಗಿ ನಾನು ಮತ್ತೂ ಕುಗ್ಗುವಂತಾಯಿತು. ಆದರೆ ಮಗನಿಗಾಗಿ ಕೆಲಸಕ್ಕೆ ಹೋಗುವುದೂ ಅನಿವಾರ್ಯವಾಗಿತ್ತು. ಮೃದುಲಾ ದೀದಿ ಮತ್ತು ಡಾ. ಪಾಟೀಲ್ ನನಗಾಸರೆಯಾಗದೆ ಹೋಗಿದ್ದರೆ ಸುಶೀಲ್ ನೊಂದಿಗೆ ನಾನೂ ಅದೇ ಆಸ್ಪತ್ರೆಯ ಇನ್ನೊಂದು ಹಾಸಿಗೆ ಮೇಲಿರುತ್ತಿದ್ದೆನೋ ಏನೋ... ಅವರಿಂದಾಗಿ ನಿಧಾನವಾಗಿ ಚೇತರಿಸಿಕೊಂಡೆ. ಜಾಗದ ಬದಲಾವಣೆಯ ಅಗತ್ಯವಿತ್ತು. ಪುಣೆಯ ಬ್ರಾಂಚಿಗೆ ಕೇಳಿ ವರ್ಗ ಮಾಡಿಸಿಕೊಂಡು, ನನ್ನ ಪಾಲಿನ ಅಂಬಾಭವಾನಿ ಮೃದುಲಾ ದೀದಿಗೆ ನಮಸ್ಕರಿಸಿ ಅವರಿಂದ ಬೀಳ್ಕೊಂಡಿದ್ದೆ. </span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #cc0000; font-size: large;">***</span></span></p><p dir="ltr" style="line-height: 1.38; margin-bottom: 0pt; margin-top: 0pt; text-align: center;"><span style="background-color: transparent; font-family: Arial; font-style: normal; font-variant: normal; font-weight: 700; text-decoration: none; vertical-align: baseline; white-space: pre-wrap;"><span style="color: #2b00fe; font-size: large;"><br /></span></span></p><p dir="ltr" style="line-height: 1.38; margin-bottom: 0pt; margin-top: 0pt;"><span style="background-color: transparent; font-family: Tunga; font-style: normal; font-variant: normal; font-weight: 400; text-decoration: none; vertical-align: baseline; white-space: pre-wrap;"><span style="color: #2b00fe; font-size: large;">‘ಮಮ್ಮಾ…. ಮಮ್ಮಾ… ಎಲ್ಲೆದಿ…? ಸುಸ್ಸೂ ಬಂದಾವ… ಮಮ್ಮಾ…’ ಶಂತನು ಎದ್ದು ನಿದ್ದೆಗಣ್ಣಲ್ಲಿ ಹಾಸಿಗೆಯಲ್ಲಿ ನನ್ನನ್ನು ಹುಡುಕಿ, ನಾನಲ್ಲಿ ಕಾಣದೆ ಹೆದರಿಕೆಯಿಂದ ಕರೆಯುತ್ತಿದ್ದ. ‘ಬಂದೆ ಬಾಳಾ’ ಎನ್ನುತ್ತಾ ಎದ್ದು, ನಾದಿಟ್ಟ ಹಿಟ್ಟನ್ನು ಮತ್ತು ಹೆಚ್ಚಿದ್ದ ತರಕಾರಿಯನ್ನು ಫ್ರಿಜ್ಜಿನೊಳಗಿಟ್ಟು ಧಾವಿಸಿದೆ ಮಗನೆಡೆಗೆ. ಹೊರಗಿನ ಮಳೆ ನಿಂತಿತ್ತು. ಒಳಗಿನ ಪುಟಗಳ ಸದ್ದೂ… </span></span></p><p style="text-align: left;"><span style="color: #2b00fe; font-size: large;">------------------------------------------------------------------------------------------------------------------</span></p><p style="text-align: left;"></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhtpLLyNF0juH_UTs-PxV08JXH0_e2CoC6DCdpDevk54Ot8FJdkC9F9dz4IH0wh3vCpoPQU9bGKfSPIIv5pVxy0vsg78a553uLkkJ9NhfbYeKG_I6oe_bbvck5SAFrsDHSYu5wDPZCD6bTr/s1280/PHOTO-2021-04-12-17-00-00.jpg" style="margin-left: 1em; margin-right: 1em;"></a></div><span style="font-size: large;"><br /></span><div class="separator" style="clear: both; text-align: center;"><span style="font-size: large;"><img border="0" data-original-height="833" data-original-width="1280" height="402" src="https://blogger.googleusercontent.com/img/b/R29vZ2xl/AVvXsEhtpLLyNF0juH_UTs-PxV08JXH0_e2CoC6DCdpDevk54Ot8FJdkC9F9dz4IH0wh3vCpoPQU9bGKfSPIIv5pVxy0vsg78a553uLkkJ9NhfbYeKG_I6oe_bbvck5SAFrsDHSYu5wDPZCD6bTr/w618-h402/PHOTO-2021-04-12-17-00-00.jpg" width="618" /></span><a href="https://blogger.googleusercontent.com/img/b/R29vZ2xl/AVvXsEjxW39R1m54hDPvcOt1T2R8ve5-pRqclvimqrXNPr2oMgNXGCyGeJO_BjF_sDBO1kDJy2maIfj8NOVao-A1Trj34KhdqcFJDRgYjSAFYttAZaWcHdQpnDZ-FVSeHeIYQN9DY5GdC0UuUtKf/s1280/PHOTO-2021-04-12-17-00-00_1.jpg" style="margin-left: 1em; margin-right: 1em;"></a></div><span style="font-size: large;"><br /></span><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEirBbFmLFA-EJ8jKIDmieHZYhMvKDpcPBVWQA33WbxfRJvm9XB9TX5UETJSuJjJskgTbk6jwH9lki5v7EaTcdJ-lmYlChUpMwfVqoGE1gr7EcYFdaxLSb_019GGSn7ZV3iwrJY02FRaWQKu/s1280/PHOTO-2021-04-12-17-00-01.jpg" style="margin-left: 1em; margin-right: 1em;"><span style="font-size: large;"><img border="0" data-original-height="1228" data-original-width="1280" src="https://blogger.googleusercontent.com/img/b/R29vZ2xl/AVvXsEirBbFmLFA-EJ8jKIDmieHZYhMvKDpcPBVWQA33WbxfRJvm9XB9TX5UETJSuJjJskgTbk6jwH9lki5v7EaTcdJ-lmYlChUpMwfVqoGE1gr7EcYFdaxLSb_019GGSn7ZV3iwrJY02FRaWQKu/s320/PHOTO-2021-04-12-17-00-01.jpg" width="320" /><span style="font-size: large;"><img border="0" data-original-height="1230" data-original-width="1280" src="https://blogger.googleusercontent.com/img/b/R29vZ2xl/AVvXsEjxW39R1m54hDPvcOt1T2R8ve5-pRqclvimqrXNPr2oMgNXGCyGeJO_BjF_sDBO1kDJy2maIfj8NOVao-A1Trj34KhdqcFJDRgYjSAFYttAZaWcHdQpnDZ-FVSeHeIYQN9DY5GdC0UuUtKf/s320/PHOTO-2021-04-12-17-00-00_1.jpg" width="320" /></span></span></a></div><span style="font-size: large;"><br /></span><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgOwWJW1qtV_COvGY2zSAQclQ01keivPQSNd9mMVKRmHxydMJCaZ_aZOaARQOZwYIQ2gLE1kKD2TNQ5vfztwT44TcG7Y3GdSeD39N7BL7BRbkDD0hFQONjJ7DP5P5smMC4KIIotCkvnnCdX/s1280/PHOTO-2021-04-12-17-00-01_1.jpg" style="margin-left: 1em; margin-right: 1em;"><span style="font-size: large;"><img border="0" data-original-height="1229" data-original-width="1280" height="631" src="https://blogger.googleusercontent.com/img/b/R29vZ2xl/AVvXsEgOwWJW1qtV_COvGY2zSAQclQ01keivPQSNd9mMVKRmHxydMJCaZ_aZOaARQOZwYIQ2gLE1kKD2TNQ5vfztwT44TcG7Y3GdSeD39N7BL7BRbkDD0hFQONjJ7DP5P5smMC4KIIotCkvnnCdX/w658-h631/PHOTO-2021-04-12-17-00-01_1.jpg" width="658" /></span></a></div><span style="font-size: large;"><br /></span><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhRjCeipCpuZvTpRlfxA5-ATx2_uRjScaOE-xXDPQR9mMg49NlmltsK7qFuBT567aUCxFys9bAGg9QviSI8pU4zb5HDR8fppzY9midRenLx69bQk8BxaRBmP5fjemoZGBCbIkSg3xRVDV4X/s1280/PHOTO-2021-04-12-17-00-01_2.jpg" style="margin-left: 1em; margin-right: 1em;"><span style="font-size: large;"><img border="0" data-original-height="1233" data-original-width="1280" height="639" src="https://blogger.googleusercontent.com/img/b/R29vZ2xl/AVvXsEhRjCeipCpuZvTpRlfxA5-ATx2_uRjScaOE-xXDPQR9mMg49NlmltsK7qFuBT567aUCxFys9bAGg9QviSI8pU4zb5HDR8fppzY9midRenLx69bQk8BxaRBmP5fjemoZGBCbIkSg3xRVDV4X/w663-h639/PHOTO-2021-04-12-17-00-01_2.jpg" width="663" /></span></a></div><span style="font-size: large;"><br /></span><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjCKOh-uDQopIMhCqhmwg820xFQX-ZLg2U1rbEYxe2dtxKUpU9evBbD2oVuZCzYITJtNvNQI1HTqZ0K_R5kGHdWEPrhG-kc1Rbjn4sus3DjgZXLIdSyW16je9GDnSW5d5LxRWv7Yj2nMQvK/s1280/PHOTO-2021-04-12-17-00-02.jpg" style="margin-left: 1em; margin-right: 1em;"><span style="font-size: large;"><img border="0" data-original-height="1236" data-original-width="1280" height="624" src="https://blogger.googleusercontent.com/img/b/R29vZ2xl/AVvXsEjCKOh-uDQopIMhCqhmwg820xFQX-ZLg2U1rbEYxe2dtxKUpU9evBbD2oVuZCzYITJtNvNQI1HTqZ0K_R5kGHdWEPrhG-kc1Rbjn4sus3DjgZXLIdSyW16je9GDnSW5d5LxRWv7Yj2nMQvK/w647-h624/PHOTO-2021-04-12-17-00-02.jpg" width="647" /></span></a></div><span style="font-size: large;"><br /></span><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjQZL4R4myMYgLQe3XwVYZEMuVTwJ79j5n9FeShjyd6xKRaDktmCQGpC0Zp_WFdD6Z-5afXevXG5_AipKCznqBBkob_PQagDNxKLw73KMqoOKspTQa0AVF_NFB3ShrnEMfj4lBBPOPk6z-D/s1280/PHOTO-2021-04-12-17-00-02_1.jpg" style="margin-left: 1em; margin-right: 1em;"><span style="font-size: large;"><img border="0" data-original-height="1240" data-original-width="1280" height="642" src="https://blogger.googleusercontent.com/img/b/R29vZ2xl/AVvXsEjQZL4R4myMYgLQe3XwVYZEMuVTwJ79j5n9FeShjyd6xKRaDktmCQGpC0Zp_WFdD6Z-5afXevXG5_AipKCznqBBkob_PQagDNxKLw73KMqoOKspTQa0AVF_NFB3ShrnEMfj4lBBPOPk6z-D/w663-h642/PHOTO-2021-04-12-17-00-02_1.jpg" width="663" /></span></a></div><span style="font-size: large;"><br /></span><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjPOV7FeBu9uiVMz7Wq9r6FVhOx_QNE33vz8CZxZjz84Hn_ZINNaBcXpK1bV8LmCvmww0cD32dxm3wZJ6lHBcpwxY5rMJ8UmS1COXxJtMWOhHHvYSX_BqV61shstPZUlKBqZ6tENKNDUiPx/s1280/PHOTO-2021-04-12-17-00-02_2.jpg" style="margin-left: 1em; margin-right: 1em;"><span style="font-size: large;"><img border="0" data-original-height="1239" data-original-width="1280" height="639" src="https://blogger.googleusercontent.com/img/b/R29vZ2xl/AVvXsEjPOV7FeBu9uiVMz7Wq9r6FVhOx_QNE33vz8CZxZjz84Hn_ZINNaBcXpK1bV8LmCvmww0cD32dxm3wZJ6lHBcpwxY5rMJ8UmS1COXxJtMWOhHHvYSX_BqV61shstPZUlKBqZ6tENKNDUiPx/w661-h639/PHOTO-2021-04-12-17-00-02_2.jpg" width="661" /></span></a></div><span style="font-size: large;"><br /></span><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjVp0aRULTptcuZcmF8FK1ZAbOOjBOp0qY7PNzxztf7JSeE-Qhlo2nYNj-ViZW9KXn1KxmVqvOvXyceUXjh04Q6Ed1RLtmSVzCV29NcZ0lWdEgdQe8BP_2W-ryOCfg-nTqO0SJmvsQh_3mL/s1280/PHOTO-2021-04-12-17-00-03.jpg" style="margin-left: 1em; margin-right: 1em;"><span style="font-size: large;"><img border="0" data-original-height="1259" data-original-width="1280" height="657" src="https://blogger.googleusercontent.com/img/b/R29vZ2xl/AVvXsEjVp0aRULTptcuZcmF8FK1ZAbOOjBOp0qY7PNzxztf7JSeE-Qhlo2nYNj-ViZW9KXn1KxmVqvOvXyceUXjh04Q6Ed1RLtmSVzCV29NcZ0lWdEgdQe8BP_2W-ryOCfg-nTqO0SJmvsQh_3mL/w668-h657/PHOTO-2021-04-12-17-00-03.jpg" width="668" /></span></a></div><span style="font-size: large;"><br /><span style="color: #2b00fe;"><br /></span></span><p></p><p style="text-align: left;"><span style="color: #2b00fe; font-size: medium;"><br /></span></p><div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com22tag:blogger.com,1999:blog-4925720126176198020.post-34651594889620110242018-08-07T12:54:00.002+05:302018-08-08T19:26:56.084+05:30*ಕನಸಿನ ಲೋಕ*<div dir="ltr" style="text-align: left;" trbidi="on">
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEj8V01CpwD_9JqaAzs1fkOdQ3BnSBEolN4w_dM63dzSwtcuGZa0xAW699WR4h9tbf7x3CHOlmZuwXl5i33cYetSNsQeMbqEUt8MlIvVuv5jdwvkaNZBPsoGE_y-m3htU4E7zb31P9FaSpuf/s1600/38639262_10216473972112643_6358280631654285312_n.jpg" imageanchor="1" style="margin-left: auto; margin-right: auto;"><img border="0" data-original-height="693" data-original-width="693" height="320" src="https://blogger.googleusercontent.com/img/b/R29vZ2xl/AVvXsEj8V01CpwD_9JqaAzs1fkOdQ3BnSBEolN4w_dM63dzSwtcuGZa0xAW699WR4h9tbf7x3CHOlmZuwXl5i33cYetSNsQeMbqEUt8MlIvVuv5jdwvkaNZBPsoGE_y-m3htU4E7zb31P9FaSpuf/s320/38639262_10216473972112643_6358280631654285312_n.jpg" width="320" /></a></td></tr>
<tr><td class="tr-caption" style="text-align: center;">Photo courtesy: Google </td></tr>
</tbody></table>
<br />
ಅದ್ಯಾವುದೋ ನಾನು ಈವರೆಗೆ ನೋಡಿಯೇ ಇರದ ಪ್ರದೇಶ. ಪ್ರವಾಸಕ್ಕೆ ಬಂದಿದ್ದೇವೆ. ಅಲ್ಲಿ ನೆಲದಿಂದ ಮೂರ್ನಾಲ್ಕು ಫೂಟು ಎತ್ತರದಲ್ಲಿ ಕಟ್ಟಿಗೆಯ ಪಳಿಗಳಿಂದ ನಿರ್ಮಿಸಿದ, ಒಂದಕ್ಕೊಂದು ರೈಲಿನ ಡಬ್ಬಿಗಳಂತೆ ಅಂಟಿಕೊಂಡಿರುವಂಥ ಮನೆಗಳು. ಅಂಥ ಒಂದು ಮನೆಯಲ್ಲಿ ನನ್ನ ಗಂಡ ನಮ್ಮ ಸಾಮಾನುಗಳನ್ನಿರಿಸತೊಡಗಿದ್ದಾರೆ. ಅಂಥಲ್ಲಿ ನಮ್ಮ ವಾಸ್ತವ್ಯ! ಇರುಸುಮುರಿಸುಗೊಂಡು ಚಡಪಡಿಸತೊಡಗಿದೆ ನಾನು. ಇಂಥಲ್ಲಿ ನಾನಿರಲಾರೆ ಎಂದು ಸಿಡಿಮಿಡಿಗೊಳ್ಳುತ್ತಾ ನನ್ನ ಮನೆಯವರ ಮೇಲೆ ಹರಿಹಾಯ್ದೆ. ಇರಲ್ಲ ಅಂದ್ರ ಹೆಂಗ್ ಜಯಾ? ಅಡ್ಜಸ್ಟ್ ಮಾಡ್ಕೋಬೇಕು ಎಂದ ಇವರು ನನ್ನ ಅಹವಾಲನ್ನು ಕಿವಿಯ ಮೇಲೆ ಹಾಕಿಕೊಳ್ಳದೆ ತಮ್ಮ ಕಾಯಕ ಮುಂದುವರೆಸಿದರು. ನನಗೋ ಅದನ್ನು ಸಹಿಸಲಾಗುತ್ತಿಲ್ಲ. ಕೂಗಾಡಿ ಅಸಹನೆಯಿಂದ ಅಲ್ಲಿಂದ ದಾಪುಗಾಲು ಹಾಕಿ ಮನೆಯಾಚೆ ಬಂದರೆ, ಅಕ್ಕಪಕ್ಕದಲ್ಲೆಲ್ಲ ಎಂಥೆಂಥವರೋ ಗುಳೆ ಎದ್ದವರಂತೆ ಬಂದು ಉಳಿದ ಮನೆಗಳನ್ನು ಹೊಕ್ಕು ತಮ್ಮ ಜಾಗ ಫಿಕ್ಸ್ ಮಾಡಿಕೊಳ್ತಿದಾರೆ. ನನ್ನ ಗಂಡ ಹೀಗ್ಯಾಕಾಡ್ತಿದಾರೆ? ತೀರ ಇಂಥ ಮನೆಗಳಲ್ಲಿ ಇರುವಂಥ ದುರ್ಗತಿ ನಮಗೇನು? ಇಂಥಲ್ಲಿ ಅದು ಹೇಗ್ ಇರೋಕ್ ಮನಸು ಬರ್ತಿದೆ ಇವ್ರಿಗೆ? ಧುಮುಗುಡುತ್ತಾ ಆ ಮನೆಗಳ ಹಿಂಬದಿಯಲ್ಲಿ ಅಷ್ಟು ದೂರ ನಡೆದೆ. ಕಾಲಡಿಯಲ್ಲಿ ಬರೀ ಮರಳು. ಎದುರಿಗೂ ಅಷ್ಟು ದೂರದವರೆಗೆ ಮರಳ ಹಾಸು. ಅದರ ಮುಂದೆ ಕಂಪೌಂಡ್ ಕಟ್ಟಿದಂತೆ ಒತ್ತೊತ್ತಾಗಿ ಗಿಡಗಂಟಿಗಳ ಪೊದೆಗಳು ಕಾಣಿಸುತ್ತಿವೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಇಬ್ಬರು ಪರಿಚಿತರು ಎದುರಾದರು. ಸಿನಿಮಾ ಮೇಕಿಂಗ್ ಬಗ್ಗೆ ಏನೇನೋ ಮಾತಾಡಿದರು. ನಾನಿದೀನಾ ನಿಮ್ಮ ಸಿನಿಮಾದಲ್ಲಿ ಎಂದು ನಾನು ಕೇಳಿದ ಕೂಡಲೇ ಏನೊಂದೂ ಮಾತಾಡದೆ ಅಲ್ಲಿಂದ ಕಾಲ್ಕಿತ್ತರು. ಈಗ ನನ್ನ ಮನಸು ತುಸು ತಹಬದಿಗೆ ಬಂದಿದೆ. ನಾನು ನನ್ನ ನಡಿಗೆಯನ್ನು ಮುಂದುವರೆಸಿದೆ. ನಾಲ್ಕಾರು ಹೆಜ್ಜೆ ನಡೆದನೋ ಇಲ್ಲವೋ ಇದ್ದಕ್ಕಿದ್ದಂತೆ ಅಲ್ಲೊಂದು ಪ್ರವಾಹ ಉದ್ಭವವಾಗಿ ಉಕ್ಕಿ ನನ್ನೆಡೆಗೆ ಧಾವಿಸಿ ಬರತೊಡಗಿತು! <br />
ಅದೇನೆಂದು ನನ್ನರಿವಿಗೆ ಬರುವಷ್ಟರಲ್ಲಿ ನಾನದರಲ್ಲಿ ಕೊಚ್ಚಿಕೊಂಡು ಅಷ್ಟು ದೂರ ಅಲೆಗಳೊಂದಿಗೆ ಹೋರಾಡುತ್ತಾ, ಹರಿಯುತ್ತ ಮುಂದೆ ಒಂದೆಡೆಗೆ ದಡದಲ್ಲಿ ಸಿಕ್ಕ ಆಸರೆಗಂಟಿಕೊಂಡು ಎದ್ದು ನೋಡುತ್ತೇನೆ, ಒಂದೆಡೆ ಪ್ರವಾಹ ತೊನೆದಾಡುತ್ತಿದ್ದರೆ, ಇನ್ನೊಂದೆಡೆ ನಾನು ನಿಂತಲ್ಲಿ ದಿಬ್ಬವೊಂದರ ಮೇಲೆ ಆದಿವಾಸಿಗಳು ತಮ್ಮ ನಿತ್ಯದ ಕೆಲಸದಲ್ಲಿ ತೊಡಗಿಕೊಂಡು ಓಡಾಡುತ್ತಿದ್ದಾರೆ! ಇದೇನಿದು ಇವರ್ಯಾರಿಗೂ ಈ ಪ್ರವಾಹದ ಭಯವೇ ಇಲ್ಲವೇ?! ಎಂದು ಅವರಲ್ಲಿ ಕೆಲವರನ್ನು ನಿಲ್ಲಿಸಿ ವಿಚಾರಿಸಿದರೆ ಇದೆಲ್ಲ ಮಾಮೂಲು ನಮಗೆ ಎಂದರು! ಅಯ್ಯೋ ಮತ್ತೆ ಯಾರಾದ್ರು ಇದರಲ್ಲಿ ಹರಿದುಹೋಗಿ ಸತ್ತರೇನು ಗತಿ?! ಎಂದಿದ್ದಕ್ಕೆ, ಆಗ ಯಾರಾದ್ರು ಏನ್ ಮಾಡೋಕಾಗುತ್ತೆ? ನಮ್ಮ ನಮ್ಮ ಹಣೇಲಿದ್ದಂತಾಗುತ್ತೆ. ಅದನ್ನ ತಪ್ಪಿಸೋಕಾಗುತ್ತಾ? ಎನ್ನುವ ನಿರ್ಲಿಪ್ತ ಉತ್ತರ ಕೇಳಿ ದಂಗಾದೆ. ಅಲ್ಲಿಯವರೆಗೆ ಅವರ ಭಾಷೆಯನ್ನು ಕೇಳಿಯೂ ಇರದ ನನಗೆ ಅವರ ಭಾಷೆ ಪೂರ್ತಿ ಅರ್ಥವಾಗುತ್ತಿದೆ ಅನಿಸಿ ಸೋಜಿಗವಾಯ್ತು. ಇದ್ದಕ್ಕಿದ್ದಂತೆ, ಇಂಥ ದೊಡ್ಡ ನೆರೆ ಬಂದು ನಾನು ಕೊಚ್ಚಿಕೊಂಡು ಹೋದರೂ ನಮ್ಮನೆಯವರ್ಯಾರಿಗೂ ನನ್ನ ಬಗ್ಗೆ ಕಾಳಜಿಯೇ ಇಲ್ಲವಲ್ಲ ಎಂದುಕೊಳ್ಳುವಷ್ಟರಲ್ಲಿ ಅಮೋಲ್ ಬಂದ. ಅಮ್ಮಾ, ಇಲ್ಲೇನ್ ಮಾಡಾಕತ್ತಿ? ಬಾ ಮನಿಗೆ ಹೋಗೂನು. ಎಲ್ಲೆಲ್ಲಿ ಹುಡುಕ್ಯಾಡೂದು ನಿನ್ನ? ಅಂದ. ಮಗನಾದರೂ ನನ್ನ ಬಗ್ಗೆ ಕಾಳಜಿ ವಹಿಸಿದನಲ್ಲ ಅನಿಸಿ ನೆಮ್ಮದಿ ಮನಸಿಗೆ. <br />
ನಡಿ ಅಪ್ಪು ಮೊದ್ಲ ಇಲ್ಲಿಂದ ಹೊಂಡೂನು, ಮತ್ತ ಯಾವಾಗ ಈ ನೀರು ಏರ್ತತೋ ಗೊತ್ತಿಲ್ಲ. ನಿಮ್ಮಪ್ಪಗ ಹೇಳಿದ್ರ ಅವ್ರು ನನ್ನ ಮಾತು ಕೇಳ್ಲಿಲ್ಲ. ಇಲ್ಲಿ ಬಂದು ಮನಿ ಮಾಡ್ಯಾರ. ಮದ್ಲ ಅಲ್ಲಿ ಹೋಗಿ ಜಾಗಾ ಖಾಲಿ ಮಾಡೂನು. ಇಲ್ಲಿಕ್ಕಂದ್ರ ಯಾರೂ ಉಳ್ಯಂಗಿಲ್ಲ, ಎನ್ನುತ್ತಾ ಅವಸರ ಮಾಡಿ ಮಗನನ್ನು ಕರೆದುಕೊಂಡು ನಾವು ಉಳಿದುಕೊಂಡಲ್ಲಿ ಮರಳಿ ಬಂದು ನೋಡುತ್ತೇನೆ, ಅಲ್ಲಿ ನನ್ನ ಅಪ್ಪ, ಅವ್ವ, ತಮ್ಮ, ತಂಗಿಯರ ಸಮಸ್ತ ಕುಟುಂಬವಿದೆ! <br />
ಇವ್ರೆಲ್ಲ ಯಾವಾಗ್ ಬಂದ್ರಿಲ್ಲಿ? ಎಂದು ಅಚ್ಚರಿಗೊಳ್ಳುತ್ತಾ, ಎಲ್ಲರಿಗೂ ಪ್ರವಾಹದ ಬಗ್ಗೆ ಎಚ್ಚರಿಸುತ್ತಾ ಅಲ್ಲಿಂದ ಜಾಗ ಖಾಲಿ ಮಾಡಲು ಹೇಳಿದರೆ ಒಬ್ಬರೂ ನನ್ನ ಮಾತನ್ನು ನಂಬುತ್ತಿಲ್ಲ! ನಿಂದು ಎಲ್ಲಾನೂ ಅತೀನ ಎನ್ನುವ ಉಡಾಫೆ! ಇದ್ದಕ್ಕಿದ್ದಂಗ ಇಷ್ಟೆಲ್ಲಾ ಸಾಮಾನ್ ಹೊತಗೊಂಡು ನಡಿ ಅಂದ್ರ ಹೆಂಗಾಕ್ಕತಿ? ಸುಮ್ನ ತಲಿ ತಿನಬ್ಯಾಡ, ಇಲ್ಲದ್ದು ಏನನರ ಅನ್ಕೋಬ್ಯಾಡ ಎನ್ನುವ ಅಸಡ್ಡೆಯ ಉತ್ತರಗಳೇ ಎಲ್ಲರದು! ಪರಿಪರಿಯಾಗಿ ವಿನಂತಿಸಿ, ಕೂಗಾಡಿ ಹೇಳಿದರೂ ನನ್ನ ಮಾತಿಗೆ ಕ್ಯಾರೇ ಅನ್ನುವುವವರಿಲ್ಲ! ಸೋತು ಆ ಮನೆಯಿಂದ ಹೊರಬಂದು ನಿಸ್ಸಹಾಯಕಳಾಗಿ ನಿಂತೆ. ತಿರುಗಿ ನೋಡಿದರೆ ಬೆನ್ನ ಹಿಂದೆ ಧಾವಿಸಿ ಮುನ್ನುಗ್ಗಲು ಸಜ್ಜಾದ ಪ್ರವಾಹ ಒಂದೊಂದೇ ಹೆಜ್ಜೆ ಎತ್ತಿಡುತ್ತಾ ಅಬ್ಬರಿಸುತ್ತಿದೆ. ಇನ್ನೇನು ಎಲ್ಲರೂ ಜಲಸಮಾಧಿಯಾಗುವುದೇ ಸೈ ಎಂದುಕೊಳ್ಳುತ್ತಿದ್ದಂತೆಯೇ, ಅವ್ವ ಮತ್ತು ಮಂಜುಚಿಕ್ಕಮ್ಮ ಮನೆಯಿಂದಾಚೆ ಬಂದು ನನ್ನನ್ನು ಒಂಥರದ ಅಸಹನೆಯಿಂದ ನೋಡಿ ಅಲ್ಲಿಂದ ಇನ್ನೊಂದೆಡೆಗೆ ನಡೆದರು. ನಾನೇನು ತಪ್ಪು ಮಾಡಿದೆ ಎಂದು ತಿಳಿಯದೆ ಪೆಚ್ಚಾದೆ. ಸ್ವಲ್ಪ ಹೊತ್ತಿನ ನಂತರ ಪುವ್ವಿ ಮತ್ತು ಅದಿತಿ ಮನೆಯಿಂದಾಚೆ ಬಂದರು. ಪುವ್ವಿ, ‘ಎಲ್ಲಾರ ಕೈಯಾಗೂ ಸಾಧ್ಯ ಆದಷ್ಟು ಸಾಮಾನ್ ಕೊಟ್ಟು ಕಳ್ಸೀದೆ ಪಪ್ಪಕ್ಕಾ. ಎಲ್ಲಾರೂ ಏರ್ಪೋರ್ಟ್ ಕಡಿ ಹೋದ್ರು. ಇನ್ನ ಸ್ವಲ್ಪ ಸಾಮಾನು ಉಳದಾವು. ಹಗರದಾವು. ನಾವು ಮೂರು ಮಂದಿ ಅವನ್ನ ತೊಗೊಂಡು ಹೋಗೂನು, ಅಪ್ಪನ್ನ ಬಾಗಲ ಮುಂದ ಸಾಮಾನ್ ಕಾಯಾಕ ಕುಂದ್ರಿಸಿ ಬಂದೀನಿ’, ಎನ್ನುತ್ತಾ ಖುಷಿಯಿಂದ ಹೇಳಿದ್ದನ್ನು ಕೇಳಿ, ಕೊನೆಗೂ ಎಲ್ರೂ ಜಾಗ ಖಾಲಿ ಮಾಡಿದ್ರು ಎನ್ನುವ ನೆಮ್ಮದಿ ನನಗೆ. ಜೊತೆಗೆ ನಮಗಾಗಿ ಹಗುರ ವಸ್ತುಗಳನ್ನ ಉಳಿಸಿಕೊಂಡು ಭಾರವಾದುದೆಲ್ಲ ಅವರ ಕೈಯಲ್ಲಿ ಕಳಿಸಿದಳು ಅನಿಸಿ, ಹಂಗ್ಯಾಕ್ ಮಾಡಿದ್ಲು ಅನ್ನೊ ಪುಟ್ಟ ಕಿರಿಕಿರಿ ಪುವ್ವಿಯ ಬಗ್ಗೆ. ಅಷ್ಟರವರೆಗೆ ಕಬಳಿಸುವಂತೆ ಮುನ್ನುತ್ತಿದ್ದ ಪ್ರವಾಹ ಹಿಂದೆ ಹಿಂದೆ ಸರಿಯತೊಡಗಿತು. ಅಚ್ಚರಿಯ ಬದಲಿಗೆ, ಸಧ್ಯ ಎಲ್ರೂ ಪಾರಾದ್ರು. ಅಕಸ್ಮಾತ್ ಹಿಂದೆ ಸರಿಯೊ ಬದಲು ಬಂದು ಆವರಿಸಿದ್ದರೆ ಆಹುತಿಯಾಗುತ್ತಿದ್ದರು ಅನಿಸಿತು. ನಾನು ಮೆಟ್ಟಿಲೇರಿ ಆ ಸಾಲು ಮನೆಯ ಪ್ಯಾಸೇಜಿನಲ್ಲಿ ನಡೆದು ನಾವುಳಿದುಕೊಂಡಿದ್ದ ಮನೆಯ ಹತ್ತಿರ ಬಂದು ತಿರುಗಿ ನೋಡಿದರೆ, ದೂರದಿಂದ ಇನ್ನೊಂದು ದಿಕ್ಕಿನಿಂದ ಕಪ್ಪು ನೀರಿನ ದಟ್ಟ ಪ್ರವಾಹ ಇತ್ತಲೇ ಧಾವಿಸತೊಡಗಿದ್ದು ಕಾಣಿಸಿತು. ಇದಕ್ಕೆ ನಾನು ಆಹುತಿಯಾಗುವುದು ನಿಶ್ಚಿತ ಅನಿಸಿತು. ಬಾಗಿಲಲ್ಲಿ ಕುಳಿತ ಅಶೋಕ್ ಮಾಮಾನನ್ನು ದಾಟಿಕೊಂಡು ಆ ಮನೆಯೊಳಗೆ ಹೆಜ್ಜೆ ಇಟ್ಟೆ…<br />
<br />
<br />
ನಮ್ಮ ಈ ಹೊತ್ತಿಗೆಯ ೫ನೇ ಹೊನಲು ಕಾರ್ಯಕ್ರಮವನ್ನು ಮುಗಿಸಿಕೊಂಡು ಬಂದು ಮಲಗಿದ ರಾತ್ರಿ, ಅಂದ್ರೆ ದಿನಾಂಕ ೧೧ ಫೆಬ್ರವರಿ ೨೦೧೮ರ ರಾತ್ರಿ ನನಗೆ ಬಿದ್ದ ಅಪ್ಪಟ ಹಾಲಿವುಡ್ ಶೈಲಿಯ ಕನಸಿದು!<br />
<br />
<br />
ನಿದ್ದೇಲಿ ಬೀಳೊ (ಎಚ್ಚರವಾಗುವ!) ಕನಸು ಒಂಥರಾ ನಾವುಗಳೇ ಹೀರೊ ಹೀರೋಯಿನ್ಗಳಾಗಿರುವ unscripted, non edited ಸಿನಿಮಾ ಇದ್ದಂಗೆ! ಘನ ನಿರ್ದೇಶಕರು ಸದಾ ತೆರೆಮರೆಯಲ್ಲಿ. ಟಿಕ್ನಿಕಲ್ ಕ್ರ್ಯೂ ಇರುತ್ತಲ್ಲ ವಾಸ್ತವದಲ್ಲಿ, ತಾಂತ್ರಿಕತೆಯ ಬಗ್ಗೆ ನಿರ್ದೇಶನದ ಬಗ್ಗೆ ತಲೆಯೇ ಕೆಡಿಸಿಕೊಳ್ಳದ ಜನರ ಪಾಲಿಗೆ, ಹಾಗೆ ಇಲ್ಲಿಯೂ. ನಾವು ನೋಡೊ ಸಿನಿಮಾದಲ್ಲಿ ನಾವೇ ನಾಯಕ ನಾಯಕಿಯರಾಗಿದ್ದ್ರೂ ನಾವು ಹಾಗೆಲ್ಲ ಅಭಿನಯಿಸಿದ್ದ್ಯಾವಾಗ ಅಂತನ್ನೋದು ನೆನಪಿರೋದು ಬಿಡಿ ನಮಗೊಂದೈಡಿಯಾ ಸಹ ಇರೊಲ್ಲ ನಮ್ಮೆದುರು ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳಲಿರುವ(ಈ ಡಿಜಿಟಲ್ ಯುಗದಲ್ಲೂ ಸಿನಿಮಾ ಅಂದ್ರೆ ರೀಲ್ ಸುತ್ತೋದು ಅದರ ಸುರುಳಿ ಬಿಚ್ಚಿಕ್ಕೊಳ್ಳುತ್ತಾ ಹೋಗುತ್ತೆ ಅಂತನ್ನೋದೇ ಎಷ್ಟು ಹಿತ ನೀಡುತ್ತೆ ಮನಸಿಗೆ!) ಸಿನಿಮಾದ ಕತೆ ಏನು, ನಮ್ಮ ಪಾತ್ರ ಏನು ಅನ್ನೋದರ ಬಗ್ಗೆ ಕಿಂಚಿತ್ತೂ ಅಂದಾಜಿರಲ್ಲ ನಮಗೆ. ಯಾವ್ಯಾವುದೋ ದೃಶ್ಯಗಳು, ಪರಿಚಿತ ಅಪರಿಚಿತ ಜನ, ಸ್ಥಳಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಹಗಲೊತ್ತಲ್ಲಿ ಅಂದ್ರೆ ಎಚ್ವರದ ಸ್ಥಿತಿಯಲ್ಲಿದ್ದಾಗ ನಮಗರಿವಿಲ್ಲದಂತೆ ಸೀರೆ ಒಂಚೂರು ಅತ್ತಿತ್ತ ಸರಿದು, ಕುಪ್ಪಸವೊ ಹೊಟ್ಟೆಯೊ ಸೊಂಟವೋ ಕಂಡರೆ ಯಾರೂ ನೋಡಿರದಿದ್ದ್ರೆ ಸಾಕು ಎಂದುಕೊಳ್ಳುತ್ತಾ ಸರಕ್ಕನೆ ಸರಿಪಡಿಸಿಕೊಂಡು, ನೆಮ್ಮದಿಯ ಉಸಿರುಬಿಡುವ ನಾವು ಕೆಲವೊಮ್ಮೆ ಕನಸಲ್ಲಿ ಮಾತ್ರ ಯಾವುದೋ ಮದುವೆ, ಸಮಾರಂಭ, ಜಾತ್ರೆ, ಸಂತೆ, ಶಾಲೆ ಕಾಲೇಜಿನಲ್ಲಿ, ಎಲ್ಲೋ ಒಂದೆಡೆ ಮೈತುಂಬಾ ಬಟ್ಟೆ ಧರಿಸಿ ಓಡಾಡಿಕೊಂಡಿದ್ದವರು ಅಚಾನಕ್ ಆಗಿ ಮೈಮೇಲೆ ನೂಲಿನೆಳೆಯೂ ಇಲ್ಲದವರಾಗಿ ದಿಗಂಬರ ಸ್ಥಿತಿಯಲ್ಲಿರುತ್ತೇವೆ! ಅದೇ ಸ್ಥಿತಿಯಲ್ಲಿ ಓಡಾಡುತ್ತಿರುತ್ತೇವೆ, ಮಾತಾಡುತ್ತಿರುತ್ತೇವೆ. ಆ ದೃಶ್ಯ ಕಣ್ಣೆದುರು ಕಾಣುತ್ತಿದ್ದಂತೆಯೆ ಸುಪ್ತ ಮನಸು ಮುಜುಗರ ಲಜ್ಜೆ ಅನುಭವಿಸತೊಡಗುತ್ತದೆ.. ಕನಸಲ್ಲಿ ಮೈಯನ್ನು ಹಿಡಿಯಾಗಿಸುವ ಪ್ರಯತ್ನದಲ್ಲಿ ಮುದ್ದೆಯಾಗಿಸಿಕೊಂಡು ಯಾರೂ ನೋಡದಿರಲಿ ಎಂದು ಹಂಬಲಿಸುತ್ತಾ ಅಡಿಗಿಕೊಳ್ಳಲು ಕತ್ತಲಿನ ಮೂಲೆ ಹುಡುಕತೊಡಗುತ್ತೇವೆ. ಮನಸು ಕನಸಿಗೆ ಜಂಪ್ ಹೊಡೆದು ದೃಶ್ಯವನ್ನು ಸರಿಪಡಿಸಲು ಯತ್ನಿಸುತ್ತಿರುತ್ತದೆ. ಆದರೆ ಕನಸು ಮಣಿಯುವುದಿಲ್ಲ. ಧರಿಸಲು ಹುಡುಕುವ ಬಟ್ಟೆ ಕೈಗೆ ಸಿಗದಂತೆ ಪರದಾಡಿಸುತ್ತಲೇ ಇರುತ್ತದೆ. ಎಷ್ಟೇ ಕಾಣಬಾರದೆಂದು ಅಡಗಿ ಕುಳಿತರೂ ಜನ ಹುಡುಕ್ಕೊಂಡು ಬಂದು ಮಾತಾಡಿಸ್ತಾರೆ as if ನಾವು ಬಟ್ಟೆ ಧರಿಸದೆ ಇದ್ದುದು ಅವರ ಗಮನಕ್ಕೇ ಬಂದಿಲ್ಲವೆಂಬಂತೆ. ನಾವು ಅವರಲ್ಲಿ ಬಟ್ಟೆಗಾಗಿ ಅಂಗಲಾಚುತ್ತೇವೆ. ತರುತ್ತೇನೆಂದು ಹೋದವರು ನಾಪತ್ತೆಯಾಗಿಬಿಡುತ್ತಾರೆ. ಹಳವಂಡ ಶುರುವಾಗುತ್ತದೆ. ಆ ಕಸಿವಿಸಿ ತಾಳಲಾಗದೆ ಎಚ್ಚರವಾಗಿಬಿಡುತ್ತದೆ ಇಲ್ಲವೆ ದೃಶ್ಯ ಬದಲಾಗುತ್ತದೆ. ಲೆಕ್ಕವಿಲ್ಲದಷ್ಟು ಸಲ ಈ ಹಿಂಸೆಯನ್ನ ನಾನು ಅನುಭವಿಸಿದೀನಿ, ಕನಸಿನ ಡೈರೆಕ್ಟರ್ನ ಕಿತಾಪತಿಯಿಂದಾಗಿ.<br />
ಇನ್ನೂ ಕೆಲವೊಮ್ಮೆ ಮಲಗಿದ್ದಾಗಲೇ ಮಗ್ಗಲು ಬದಲಿಸುತ್ತಿದ್ದೇನೆ ಎನಿಸಿ, ಹಾಗೆ ಮಾಡಲು ಹೋದಂತಾಗಿ ಇಲ್ಲವೆ ಮಂಚದ ತುದಿಗೆ ಮಲಗಿದ್ದೇನೆಂಬಂತೆ ಭಾಸವಾಗಿ, ದಬಕ್ ಅಂತ ಬಿದ್ದಂತೆ ಕನಸಾಗಿ, ಟುಣುಕ್ ಅಂತ ಎದೆ ಹಾರಿ ಮೈ ಅದುರಿ ಎಚ್ಚರವಾಗಿಬಿಡುತ್ತೆ.<br />
ಕನಸಲ್ಲಿ ಯಾರಿಗೋ ಏನೋ ಹೇಳಬೇಕಿರುತ್ತೆ ಇಲ್ಲವೆ ಕೊಡಬೇಕಿರುತ್ತೆ, ಮಲಗಿರುತ್ತೇನೆ. ಅಲ್ಲಿರುವವರ ಮಾತುಗಳೆಲ್ಲ ಕೇಳುತ್ತಲೇ ಇರುತ್ತವೆ. ಪ್ರತಿಕ್ರಿಸಲು ನಿದ್ದೆಯಿಂದ ಎಚ್ಚರಗೊಳ್ಳಲು ಸತತವಾಗಿ ಪ್ರಯತ್ನಿಸುತ್ತಲೇ ಇರುತ್ತೇನೆ ಆದರೆ ಕಣ್ಣು ಬಿಡಲೇ ಆಗದೆ ಒದ್ದಾಡುತ್ತಿರುತ್ತೇನೆ. ಬಹುಶಃ ಅದರಂಥಾ ಹಿಂಸೆ ಮತ್ತೊಂದಿಲ್ಲ. ಬರೀ ಮಾನಸಿಕ ಹಿಂಸೆ ಮಾತ್ರವಲ್ಲ ದೇಹವೂ ಹಿಂಸೆಪಡುತ್ತಿರುವ ಅನುಭವ. ಕನಸಿನ ಈ ಭಯಾನಕ ಹಿಡಿತದಿಂದ ಪಾರಾದ ಮರುಕ್ಷಣ ಎಚ್ಚರಾಗಿ ದೊರೆಯೊ ನಿರಾಳತೆ ಇದೆಯಲ್ಲ ಅದನ್ನ ಅನುಭವಿಸಿದೋರೇ ಬಲ್ಲರು.<br />
ವಿಜ್ಞಾನಿಗಳು/ಸಂಶೋಧಕರು ಕನಸನ್ನು ಬೆನ್ನಟ್ಟಿ, ಅದರ ಸ್ಪಷ್ಟ ಹಿನ್ನೆಲೆಯನ್ನು, ನೆಲೆಯನ್ನು ಕಂಡುಕೊಳ್ಳಬಯಸಿ ಈ ಕಾರಣಕ್ಕಾಗಿ, ಆ ಕಾರಣಕ್ಕಾಗಿಯೇ ಎಂದು ಬರೆದ ಪ್ರಬಂಧಗಳನ್ನು, ಆಗಾಗ ಅಲ್ಲೊಂದು ಇಲ್ಲೊಂದು ಪತ್ರಿಕೆಗಳಲ್ಲಿ ಎಲ್ಲರೂ ಒಮ್ಮೆಯಲ್ಲ ಒಮ್ಮೆ ಓದಿಯೇ ಇರುತ್ತೇವೆ. ಹಗಲಿನಲ್ಲಿಯ ನಮ್ಮ ಆಲೋಚನೆಗಳು, ಅವುಗಳ ಮಂಥನ ಕನಸಾಗಿ ರಾತ್ರಿ ನಿದ್ದೆಯಲ್ಲಿ ಮುಚ್ಚಿದ ಕಣ್ಣ ಪರದೆಯ ಮೇಲೆ ಬರುತ್ತವೆ ಎಂದು ಕೆಲವರೆಂದರೆ, ಇನ್ನೂ ಕೆಲವರು ನಮ್ಮ ಸುಪ್ತಮನದ ಆಸೆಗಳು ಕನಸಾಗಿ ಕಾಡುತ್ತವೆ ಎನ್ನುತ್ತಾರೆ. ಇನ್ನ್ಯಾರೋ, ಇಂಥದೇ ಕಾರಣದ ಹಿನ್ನೆಲೆಯಲ್ಲಿ ಕನಸುಗಳು ಬೀಳುತ್ತವೆ ಅನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಬರೆದುದನ್ನೂ ಎಲ್ಲೋ ಓದಿದ ನೆನಪು ನನಗೆ.. <br />
ಪ್ರತೀ ಜೀವಿಯ ಕಣ್ಣರೆಪ್ಪೆಯಡಿಯೇ ವಾಸವಾಗಿರುವ ಕನಸಿನ ಸಾಮಾರ್ಜ್ಯ ವಿಜ್ಞಾನಿಗಳಿಗೆ ನಿಲುಕದ ಲೋಕವಾದ ಪ್ರಕೃತಿ ವಿಸ್ಮಯಗಳಲ್ಲಿ ಒಂದಾಗಿರಬಹುದೇ? ಅಥವಾ ಈ ಕುರಿತು ಅಂದರೆ ಸಂಶೋಧನೆಯ ನಿಶ್ಚಿತ ಫಲಿತಾಂಶ ದೊರೆತಾಗಿದೆ ಎಂದಾದಲ್ಲಿ, ಆ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲದಿರುವ ಸಾಧ್ಯತೆಯೂ ಇದೆ..<br />
ರಾತ್ರಿ ನಮ್ಮ ಬುದ್ದಿಯ ಕೈ ಮೀರಿ ಬೀಳುವ ಕನಸುಗಳು ಎಷ್ಟೋ ಬಾರಿ ನಮ್ಮ ಭವಿಷ್ಯದ ಮುನ್ಸೂಚನೆಯಾಗಿರುತ್ತವೆ.ಇಲ್ಲವೇ ನಮಗೆ ಸಂಬಂಧಪಟ್ಟವರ ಬದುಕಲ್ಲಿ ಆಗಷ್ಟೇ ನಡೆದ, ನಮ್ಮ ಕಿವಿಗೂ ಬಿದ್ದಿರದ ಘಟನೆಯೊಂದು ಸಾಂಕೇತಿಕವಾಗಿಯೋ ಇಲ್ಲವೇ ಸ್ಪಷ್ಟ ರೂಪದಲ್ಲೋ ಕನಸಲ್ಲಿ ಕಾಣಿಸಿಕೊಂಡು, ಎಚ್ಚರವಾಗಿ ಆ ಬಗ್ಗೆ ನಮ್ಮವರಲ್ಲಿ ವಿಚಾರಿಸಿದಾಗ ಹಾಗೊಂದು ಘಟನೆ ನಡೆದಿರುವುದೋ ಇಲ್ಲಾ ಆ ವಿಷಯದ (ಕನಸಲ್ಲಿ ಕಂಡ) ಕುರಿತು ಚರ್ಚೆಯಾಗಿರುವುದೋ ತಿಳಿದು ಬರುವುದೂ ಇದೆ. ಮತ್ತು ನನಗೀ ಅನುಭವ ಸುಮಾರು ಸಲ ಆಗಿದೆ! <br />
ಹಾಗಂತ ಹೇಳಿ ಎಲ್ಲ ಕನಸಗಳೂ ನಿಜವಾಗುತ್ತವೆ ಅಂತೇನು ಇಲ್ಲ. ಕೆಲವು ಕನಸುಗಳು ಬೆಳಗಾಗುವಷ್ಟರಲ್ಲಿ ಮರೆತುಹೋಗಿರುತ್ತವೆ. ಮತ್ತೆ ಕೆಲವು ಸುಖಾಸುಮ್ಮನೆ ನಮ್ಮನ್ನು ಬೆಚ್ಚಿಬೀಳಿಸಿ, ಮುಂದೆ ಹಗಲಲ್ಲೂ ಕೆಲವು ದಿನ ಕಾಡಿ, ಮನಸಿಂದ ಮರೆಯಾದರೆ, ಇನ್ನೂ ಕೆಲವು ನಿದ್ದೆಯಲ್ಲಿ ಬೆಚ್ಚನೆ ಭಾವವೊದಗಿಸಿ, ಮುದ ನೀಡಿ, ಮರುದಿನವೂ ಆ ಲಹರಿಯಲ್ಲೇ ಇರುವಂತೆ ಮಾಡುತ್ತವೆ. ಅಂಥದ್ದೊಂದು ಕನಸು ನಿನ್ನೆ ರಾತ್ರಿ ನನಗೆ ಬಿತ್ತು. :) <br />
ಅವನೊಬ್ಬ ಚೆಲುವ. ಅವನನ್ನು ಕಂಡರೆ ಎಲ್ಲ ಹೆಣ್ಣುಮಕ್ಕಳಿಗೂ ಇಷ್ಟವಂತೆ. ಕೆಲವರು ಅವನಿಗೆ ಹತ್ತಿರವಾದವರೂ ಇದ್ದಾರೆನ್ನುವುದು ಕನಸಲ್ಲಿ ಕಾಣುತ್ತಿದೆ. ಅವನೂ ಅವರೊಂದಿಗೆ ಸರಸವಾಗಿಯೇ ಇದ್ದಾನೆ. ಆ ಚಲುವನಿಗೆ ನನ್ನಲ್ಲಿ ಆಕರ್ಷಣೆ. ಅದು ನನ್ನ ಅರಿವಿಗೆ ಬರುತ್ತಲಿದೆ. ಹಾಗೆ ಅವನೊಳಗಿನ ಆ ಭಾವ ನನಗೂ ಇಷ್ಟವೆಂಬಂತೆ, ಅವನ ಪ್ರತಿ ನನ್ನ ಮುಖದಲ್ಲಿ ಒಂದು ಸಮ್ಮತಿಯ ನಗೆಯಿದೆ. ಆದರೆ ಪ್ರಕಟವಾಗಿ ಮುಗುಮ್ಮಾಗಿದೀನಿ. ಅವನು ನನ್ನನ್ನು ಒಲಿಸಿಕೊಳ್ಳಲು ನನ್ನ ಹಿಂದೆ ಬಿದ್ದಿದ್ದಾನೆ. ನನಗದು ಅರಿವಿಗೆ ಬಂದರೂ ತಿಳಿಯದವಳಂತೆ ಓಡಾಡುತ್ತಿದ್ದೇನೆ. ನಾನು ಹೋದಲೆಲ್ಲ ಅವನು ಅದ್ಯಾವುದೋ ಮಾಯದಲ್ಲಿ, ಯಾವುದೋ ನೆಪದೊಂದಿಗೆ ಹಾಜರ್. ಅದೆಲ್ಲೋ ಯಾರದೋ ಮನೆಗೆ ಹೋದರೆ ಅಲ್ಲಿ, ನಮ್ಮನೆಯ (ಹಳ್ಳಿಮನೆಯಂತೆ ಅದು) ಪಡಸಾಲೆಯಲ್ಲಿ, ಕಟ್ಟೆಯ ಮೇಲೆ ಹೀಗೆ ಎಲ್ಲೆಂದರಲ್ಲಿ ಕಾಣಿಸಿಕೊಂಡು ಅಲ್ಲಿ ತಾನೇನೋ ಕೆಲಸ ಮಾಡುತ್ತಿರುವವನಂತೆ ಓಡಾಡುತ್ತ ಎದುರಾಗಿ, ಒಂದು ಚೆಂದನೆ ಬೆಚ್ಚನೆಯ ನಗೆ ನಕ್ಕು, ನನ್ನೆದೆ ಬಡಿತ ಏರಿಸಿ ಅಲ್ಲಿಂದ ಹೊರಟುಬಿಡುತ್ತಾನೆ. <br />
ಒಮ್ಮೆ ಕೆಲಸವೊಂದರ ನಿಮಿತ್ತ ನಾನು ನಡೆದು ಹೋಗುತ್ತಿರುವಾಗ, ನಡುದಾರಿಯಲ್ಲಿ ಸಿಗುತ್ತಾನೆ. ನನ್ನೊಂದಿಗೆ ಮಾತಾಡುತ್ತಾ ಜೊತೆಗೆ ಹೆಜ್ಜೆ ಹಾಕಿದವನೊಂದಿಗೆ ಅದ್ಯಾರ ಕುರಿತೋ ಮಾತಾಡುತ್ತಿದ್ದೇನೆ ನಾನು. ನಾವು ಒಂದಿಷ್ಟು ದೂರ ನಡೆಯುತ್ತಲೂ ಅವನ ಗೆಳತಿಯರಲ್ಲಿ ಒಬ್ಬಳು, ಎದುರಿನ ಅರ್ಧಗೋಡೆಯ ಮೇಲೆ ಕುಳಿತವಳು, ಅವನನ್ನು ಕಾಣುತ್ತಲೇ ಹೇಯ್ ಅನ್ನುತ್ತಾಳೆ. ಅವನು ನನಗೆ ಬೈ ಹೇಳಿ ಲಗುಬಗೆಯಿಂದ ಅವಳತ್ತ ನಡೆಯುತ್ತಾನೆ. ಆಕೆ ಏನ್ ಮಾತಾಡ್ತಿದ್ದ್ರಿ ನೀವಿಬ್ರೂ? ಅನ್ನುತ್ತಾಳೆ. ಇವನು ನಾವು ಮಾತಾಡಿದ್ದನ್ನು ಹೇಳದೆ, ಇನ್ನೇನೊ ಬೇರೆ ಬೇರೆಯದನ್ನೆ ಕತೆಕಟ್ಟಿ ಹೇಳುತ್ತಿರುವುದು ಕಿವಿಗೆ ಬೀಳುತ್ತದೆ. ಕಳ್ಳ ಎಂದು ಮುಗುಳ್ನಗುತ್ತಾ ಮುಂದೆ ಸಾಗುತ್ತೇನೆ ನಾನು. <br />
ಮುಂದೆ ನಡೆದ ನಾನು ಅದೊಂದು ಅಂಗಳದಲ್ಲಿದ್ದೇನೆ. ಗುಡಿಯ ಆವರಣದೊಳಗೊಂದು ಪ್ರಾಂಗಣವಿರುತ್ತದಲ್ಲ ಆ ಥರದ್ದು. ಆದರೆ ಅಲ್ಲಿ ಗುಡಿ ಇಲ್ಲ. ದೊಡ್ದ ಪ್ರಾಂಗಣ ಮಾತ್ರವಿದೆ. ಅಲ್ಲಿ ಒಂದು ಎಡ ಮೂಲೆಯಿಂದ ಆರಂಭಿಸಿ ಒಂದಿಷ್ಟು ಪುಟ್ಟ ಪುಟ್ಟ ಹಣತೆಯಲ್ಲಿ ದೀಪಗಳನ್ನಂಟಿಸುವಲ್ಲಿ ಮಗ್ನಳಾಗಿ ಹಿಂದೆ ಹಿಂದೆ ಸರಿಯುತ್ತಿದ್ದೇನೆ. ಈಗಿನ್ನೂ ಪ್ರಾರಂಭ. ಇನ್ನೂ ಅದೆಷ್ಟೋ ದೀಪಗಳನ್ನಂಟಿಸಬೇಕಿದೆ. ತುಂಬಾ ಹೊತ್ತಿನ ಕೆಲಸವಿದು, ಬೇಗ ಮುಗಿಯುವುದಿಲ್ಲ ಅಂದುಕೊಳ್ಳುತ್ತಿದ್ದೇನೆ. ನಾನಿನ್ನೂ ಒಂದಿಷ್ಟು ದೀಪಗಳನ್ನು ಬೆಳಗಿಸಿದ್ದೆನ್ನಷ್ಟೇ, ನನ್ನ ಹಿಂದೆಲ್ಲ ಬೆಳಕು ಹರಡಿಕೊಂಡಂತಾಗಿ ತಿರುಗಿ ನೋಡಿದರೆ, ಅವನು ಅದ್ಯಾವ ಮಾಯೆಯಿಂದಲೋ ನನ್ನ ಹಿಂದೆಯೇ ಬಂದು ಅದಾಗಲೇ ಆ ಪ್ರಾಂಗಣದ ತುಂಬಾ ದೀಪಗಳನ್ನು ಹಚ್ಚಿಟ್ಟಿದ್ದಾನೆ. ನನ್ನ ಸುತ್ತಲೂ ದೀಪಾವಳಿ! ಅವನು ಈ ದೀಪಗಳೆನ್ನೆಲ್ಲ ಹಚ್ಚಿದ್ದು ನನಗಾಗಿ! ನನ್ನೊಳಗಿನ ಸಂತಸ ಮತ್ತು ಅವನೆಡೆಗಿನ ಪ್ರೀತಿ ಆ ದೀಪಗಳ ಬೆಳಕಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಅವನಿಗೆ. ಖುಷಿಯಿಂದ ನಗುತ್ತಾನೆ ಅವನು. ಲಜ್ಜೆಯಿಂದ ನನ್ನ ಕಣ್ರೆಪ್ಪೆಗಳು ಅಗಲಿರಲಾರೆವು ಎಂಬಂತೆ ಬೆಸೆದುಕೊಳ್ಳುತ್ತವೆ. ಹೊಂಬಿಸಿಲಿಗಿಂತಲೂ ಹದವಾದ ಆ ಪ್ರಭಾವಳಿಯ ನಡುವೆ ನಾನು ಮತ್ತು ಅವನು! ಮತ್ತೆ ದೀಪಗಳನ್ನಂಟಿಸಲು ತೊಡಗುತ್ತೇವೆ ಇಬ್ಬರೂ. ಬೆಳಗಾದ ಸೂಚನೆ ಎಂಬಂತೆ ನನಗೆ ಎಚ್ಚರವಾಯ್ತು. <br />
- ಜಯಲಕ್ಷ್ಮಿ ಪಾಟೀಲ್</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com3tag:blogger.com,1999:blog-4925720126176198020.post-20599557855625876132017-09-03T10:53:00.000+05:302017-09-03T10:53:19.721+05:30ನಾನು ನಿನ್ನೆ ನೆನಪು<div dir="ltr" style="text-align: left;" trbidi="on">
ಭೋರ್ಗರೆವ ನದಿಯ ನೊರೆಗಾವ ಸೋಪು<br />ನೆನಪುಗಳ ಓಘಿಗೂ ಅದೇ ನುಣುಪು<br />ನೊರೆ ಬದುಕ ಗಲ್ಲಕ್ಕೆ ನೆನಪಿನ ನೆರೆ<br /><br />ಮಾಸಿದ ದಿನಗಳವು ಮೋಡ ಕಟ್ಟಿವೆ<br />ಕಾಲ ಬಿರುಕಿನೊಳಗೆ ನೋವ ಸೆಲೆ<br />ಹನಿಯಬಾರದೆ ದಿನಗಳು ಕರಗಬಾರದೆ<br /><br />ಚಪ್ಪರದಡಿ ಕುಳಿತ ಜೀವ ಚಡಪಡಿಸುತಿದೆ<br />ಮಲ್ಲಿಗೆಯ ಕಂಪದು ಮನಕೆ ತಂಪು<br />ಹೊಯ್ದಾಡುತಿದೆ ಒಳಗಿನ ಬೆಂಕಿ ಬೆದರಿ<br /><br />ಒಂಟಿಕೊಂಬಿನ ಕಲ್ಲು ಸುತ್ತುತಿದೆ ಒಂದೇ ಸಮ<br />ಅಡಿಗೆ ಸಿಕ್ಕ ದಿನಗಳಿಗೆಲ್ಲ ಈಗ ಒಂದೇ ಆಕಾರ <br />ನೋವೂ ನಲಿವೂ ಕಲೆತು ಕುದ್ದು ಒಂದೇ ಪಾಕ<br /><br />ನೆನಪುಗಳ ಕಣಜಕ್ಕೀಗ ಹೆರಿಗೆ ನೋವು<br />ಎಸರಿಟ್ಟು ಅಟ್ಟುಣ್ಣಲೆ ಇಲ್ಲ ಗಾಳಿಗೆ ತೂರಲೆ<br />ಉಂಡರೆ ಉಬ್ಬಸ ತೂರಿದರೆ ಕಣ್ಣಾರಸ<div>
<br /><div>
ತೀವ್ರತೆಯ ಅಭಾವ ಆಗುತಿರೆ ಸ್ವಭಾವ<br />ಅದು ವೈರಾಗ್ಯವೊ ಸ್ಥಿತಪ್ರಜ್ಞೆಯೊ<br />ಅಯೋಮಯ ಮನಸು ಕನಸು</div>
<div>
<br />- ಜಯಲಕ್ಷ್ಮೀ ಪಾಟೀಲ್</div>
</div>
<div>
27 August 2017</div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com2tag:blogger.com,1999:blog-4925720126176198020.post-63422878511755343312017-05-22T00:48:00.003+05:302017-05-22T00:49:33.523+05:30ಬುದ್ದ<div dir="ltr" style="text-align: left;" trbidi="on">
ಮನಸು ಮಾಗತೈತಿ, <br />
ಮನಿಬಿಟ್ಟು ಹ್ವಾದ್ರೂ ಮನ್ಯಾಗಿದ್ದ್ರೂ<br />
ಮಾಯಿನಹಣ್ಣಿನ ಸುಗ್ಗೆಂತ ಹಣ್ಣಿನ <br />
ಬುಟ್ಟಿನ ಎದ್ರಿಗಿಟ್ಕೊಂಡು ಕುಂತೆ<br />
ಆಯಿ ಅಂದ್ಳು ಚೊಲೊ ಅಲ್ಲ ಅತೀ<br />
ತಗಿ ಹತ್ತೀತು ಹೊರಕಡಿಗಿ ವಾಂತಿ<br />
ಬುದ್ದ ಅಂದ ಆಸೆಯೆ ದುಃಖಕ್ಕೆ ಮೂಲ<br />
ಆಯಿಗೂ ಬುದ್ದಗೂ ಫರಕ್ ಕಾಣಲಿಲ್ಲ<br />
<br />
ಒಮ್ಮೊಮ್ಮೆ ಅನ್ಸ್ತೈತಿ ಇಟ್ಟ್ ಹೇಳಾಕ <br />
ಅಂವ ಮನಿ ಬಿಟ್ಟು ಹೊಂಟ್ಯಾಕ?<br />
ದೂರಿದ್ದು ಹೆಂಡ್ರಮಕ್ಕಳ ಜೀವಾ ತಿನ್ನಾಕ?<br />
<br />
ಬುಡ್ಡಿದೀಪಾನೂ ಬೆಳದಿಂಗ್ಳೂ ಒಂದs ಏನು<br />
ಯಾರೊ ಕೆಣಕಿ ಕೇಳಿ ನಕ್ಕಂಗಾತು<br />
ಬುಡ್ಡಿದೀಪದ ಆಸ್ರ್ಯಾಗ ಕಾಣು ಸೂಜಿ ಕಣ್ಣು<br />
ಬೆಳದಿಂಗ್ಳಿನ್ಯಾಗೂ ಕಂಡೀತು ಅಂತ ಸೂಜಿ<br />
ದಾರದ ಜೊತಿ ಹೊರಗ ಬಂದ್ರ ಹೂವೆಲ್ಲ<br />
ಓಡೋಡಿ ಬಂದು ಎದ್ರಿಗೆ ಪಾಳೇಕ ನಿಂತೂವು<br />
ಮುಗಿಳ್ನಗಿ ಸದ್ದು ಆಯೀದೋ? ಬುದ್ದಂದೋ?<br />
<br />
- ಜಯಲಕ್ಷ್ಮೀ ಪಾಟೀಲ್</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com0tag:blogger.com,1999:blog-4925720126176198020.post-80113890964788323612017-05-16T19:09:00.003+05:302017-05-16T19:09:50.951+05:30ಮಾಯೆ<div dir="ltr" style="text-align: left;" trbidi="on">
ಹೆಣ್ಣೆಂದರು ಜರಿದರು<br /><br />ಹೆಣ್ಣೆಂದರು ಕೊಂಡಾಡಿದರು<br /><br />ಹೆಣ್ಣೆಂದರು ಆಸೆಪಟ್ಟರು<br /><br />ಹೆಣ್ಣೆಂದರು ಕೊಂಡರು ಮಾರಿದರು<br /><br />ಹೊನ್ನು ಮಣ್ಣುಗಳ ಸಾಲಲ್ಲಿ ನಿಲ್ಲಿಸಿ<br /><br />ಬೇಕು ಬೇಕೆನ್ನುತಲೇ ಬೇಡವಾದುದೆಂದರು<br /><br /><br />ತಮ್ಮೊಳಗಿನ ಮೋಹ; ಮಾಯೆ ಎಂದರು<br /><br />ಮಾಯೆಗೆ ಹೆಣ್ಣ ರೂಪ ಕೊಟ್ಟರು<br /><br />ಮಾಯೆಯ ಗೆಲಿದವನು ಅವನು!<br /><br />ಬೀಗಿದರು ಮಾಯೆಗೆ ಸೋತವರೂ<br /><br />ಮಾಯೆ ಸ್ತ್ರೀಲಿಂಗವೇ ಆದುದ್ಯಾಕೆ<br /><br />ಮನಸಿನ ಕುದುರೆಗೆ ಕಡಿವಾಣವಿಲ್ಲದೆ<br /><br />ಚಾಬೂಕು ನಮ್ಮ ಬೆನ್ನ ಸವರುವುದೇಕೆ <br /><br />- ಜಯಲಕ್ಷ್ಮೀ ಪಾಟೀಲ್<div>
(01-04-2017)</div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com2tag:blogger.com,1999:blog-4925720126176198020.post-23013062329230660732017-04-26T16:43:00.001+05:302017-04-26T16:44:35.331+05:30 ನಮ್ಮೊಳಗಿನ ಇಂಗ್ಲಿಷ್ ವಿಂಗ್ಲಿಷ್<div dir="ltr" style="text-align: left;" trbidi="on">
<div class="separator" style="clear: both; text-align: center;">
ದಿನಾಂಕ ೨೩ ಎಪ್ರಿಲ್ ೨೦೧೭ರ ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಈ ಲೇಖನ. <a href="http://www.vijaykarnatakaepaper.com/Details.aspx?id=20825&boxid=135123851">http://www.vijaykarnatakaepaper.com/Details.aspx?id=20825&boxid=135123851</a></div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEimuM5l00ggp6gAf2Y5QBskX7CqUStBvwovt6dL8KOKe8FARoqOpChxXD1srWXIFcP8THB3ET5VrZ2LISz69XXEc8-1lHimEGMpivx0R9cFeYb_HCEU-mX6P4jq9s-4nYNlfER_Qw83lFgR/s1600/18076708_1718899041460376_4403384060710001129_o.jpg" imageanchor="1" style="margin-left: 1em; margin-right: 1em;"><img border="0" height="309" src="https://blogger.googleusercontent.com/img/b/R29vZ2xl/AVvXsEimuM5l00ggp6gAf2Y5QBskX7CqUStBvwovt6dL8KOKe8FARoqOpChxXD1srWXIFcP8THB3ET5VrZ2LISz69XXEc8-1lHimEGMpivx0R9cFeYb_HCEU-mX6P4jq9s-4nYNlfER_Qw83lFgR/s640/18076708_1718899041460376_4403384060710001129_o.jpg" width="640" /></a></div>
<br /></div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com4tag:blogger.com,1999:blog-4925720126176198020.post-24351093862100430422017-04-12T19:38:00.000+05:302017-04-12T19:53:40.311+05:30 ಮಳೆ ಮತ್ತು ಮಡ್ಡಿ<div dir="ltr" style="text-align: left;" trbidi="on">
ಕಾದ ನೆಲವಿದು ಹಸಿದ ಹೆಬ್ಬುಲಿ<br />
ಬಾಯ್ದೆರದು ನಿಂತಿದೆ ಹಂಗಿನಲಿ<br />
ಖಂಡವಿದೆ ಕೊ ಮಾಂಸವಿದೆ ಕೊ <br />
ಗುಂಡಿಗೆಯ ಬಿಸಿ ರಕ್ತವಿದೆ ಕೊ ಎನುವ <br />
ಕಾಮಧೇನುವ ಗದರಿಸಿ ಸುಮ್ಮನಿರಿಸಿ <br />
ಸುರಿವ ಮುಗಿಲಿಗೆ ಕಾದಿದೆ ಗದ್ದೆ <br />
ಗದ್ದವನೆತ್ತಿ ಹಣೆಗೆ ಕೈಯಿರಿಸಿ ಕಣ್ಣು ಕಿರಿಗೊಳಿಸಿ<br />
<br />
ಬಿರುಬಿಸಿಲ ನಾಡಲ್ಲಿ ಹನಿಯೊಡಬೇಕಿದೆ<br />
ಕಣ್ಣಾಲಿಯ ಹನಿ ಕೆನ್ನೆಗಿಳುವ ಮುನ್ನ<br />
ಮೋಡ ಕೊಡವಬೇಕು ಮುತ್ತುಗಳ ಮೈಯದುರಿಸಿ<br />
ನವಿರೇಳಬೇಕು ನವಿಲ ಗರಿ ಗರಿಗರಿಯಾಗಿ <br />
ಹೆಜ್ಜೆಯೂರಿದಲೆಲ್ಲ ಗೆಜ್ಜೆಯಲಂಕಾರದ ಕಂದು ಕನ್ನಡಿ <br />
ಪ್ರತಿಫಲಿಸಿ ಮೋಡ ಹಿಗ್ಗಿ ಮತ್ತೆ ಮೈದುಂಬಬೇಕು<br />
ಮಡ್ಡಿ ಮೆದುವಾಗಿ ಹದವಾಗಿ ಮತ್ತೆ ಹೆಣ್ಣಾಗಬೇಕು<br />
<br />
- ಜಯಲಕ್ಷ್ಮೀ ಪಾಟೀಲ್<br />
26 March 2017</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com2tag:blogger.com,1999:blog-4925720126176198020.post-2580166432846837642017-04-12T19:35:00.002+05:302017-04-12T19:39:03.263+05:30ಉಸ್ಸಂದ್ರೂ ಔಟು ಒಲ್ಲೆ ಅಂದ್ರೂ ಔಟು<div dir="ltr" style="text-align: left;" trbidi="on">
ಅಗ್ಗಿ ಹಾಯುತ್ತಲೇ ಇದ್ದೇವೆ<br />
ಅಂದಿನಿಂದ ಇಂದಿನವರೆಗೆ<br />
ನಾಲ್ಕು ಹೆಜ್ಜೆಗೊಂದು ಕೊಂಡ<br />
ಅದರ ತುಂಬಾ ಸಂಶಯದ ಕೆಂಡ<br />
ಅವರೂ ಇವರೂ ಕೊಂಡದ ದೇವರು<br />
ಲಿಂಗಬೇಧವರಿಯದ ಸಮಾನರವರು<br />
ಕೊಂಡ ದಾಟುವಲ್ಲಿ ಕಾಲಿಗಂಟುವ ಬಿಸಿ<br />
ಗೆ ಉಸ್ಸೆನ್ನುವಂಗಿಲ್ಲ ಒಲ್ಲೆಯೆನ್ನುವಂಗಿಲ್ಲ<br />
<br />
-ಜಯಲಕ್ಷ್ಮೀ ಪಾಟೀಲ್<br />
<div>
16 Feb 2017</div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com2tag:blogger.com,1999:blog-4925720126176198020.post-42250605424266971462017-03-12T13:54:00.001+05:302017-03-12T15:43:35.700+05:30 ಹೋಳಿ ಹುಣ್ಣಿಮೆ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjcQmAk7uDPuUpHraNgMIbeo9QgfNigGatlLKQY2j7H0R0EFcCLQi1OnozE63v-PFVrrCgCcNSFbt0faKItIabayTH5tNv9MW8CczLcrkIx27g7YDq3Z07Um7jbbfNUw3wOxt61yzf20yCr/s1600/05-1396681138-3holi.jpg" imageanchor="1" style="margin-left: 1em; margin-right: 1em;"><img border="0" height="240" src="https://blogger.googleusercontent.com/img/b/R29vZ2xl/AVvXsEjcQmAk7uDPuUpHraNgMIbeo9QgfNigGatlLKQY2j7H0R0EFcCLQi1OnozE63v-PFVrrCgCcNSFbt0faKItIabayTH5tNv9MW8CczLcrkIx27g7YDq3Z07Um7jbbfNUw3wOxt61yzf20yCr/s320/05-1396681138-3holi.jpg" width="320" /></a></div>
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh3_PqJ_Eje6byBu1WPPpG7JqzXX4GzWg0Bvq6xMv3IaV9G6FDmVzqg20ZGOhLhX1hBpDJfBngRI5W2gUss7dl2Q9MVQALgaQx9gMSskdLqShltHOR-PzPQquoNxcmgKlU6mCDuBbifr7n8/s1600/holi-wishes-2015.jpg" imageanchor="1" style="margin-left: 1em; margin-right: 1em;"><img border="0" height="181" src="https://blogger.googleusercontent.com/img/b/R29vZ2xl/AVvXsEh3_PqJ_Eje6byBu1WPPpG7JqzXX4GzWg0Bvq6xMv3IaV9G6FDmVzqg20ZGOhLhX1hBpDJfBngRI5W2gUss7dl2Q9MVQALgaQx9gMSskdLqShltHOR-PzPQquoNxcmgKlU6mCDuBbifr7n8/s320/holi-wishes-2015.jpg" width="320" /></a></div>
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEidAd80D2P_THzImugnph_rlHUSCXA9WFtGYC2GMH5J59AFCWUH3ZUEPxUwiTniUh1I6Z2rqHV9VGQJL8u5KdqsW06IRplLasEG-iNnqJ8PM9wY8-9Py-J5x8QYYKlHKXUr-PrIpBoE6TGo/s1600/15-holi4.jpg" imageanchor="1" style="margin-left: 1em; margin-right: 1em;"><img border="0" height="240" src="https://blogger.googleusercontent.com/img/b/R29vZ2xl/AVvXsEidAd80D2P_THzImugnph_rlHUSCXA9WFtGYC2GMH5J59AFCWUH3ZUEPxUwiTniUh1I6Z2rqHV9VGQJL8u5KdqsW06IRplLasEG-iNnqJ8PM9wY8-9Py-J5x8QYYKlHKXUr-PrIpBoE6TGo/s320/15-holi4.jpg" width="320" /></a></div>
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiQn2tlLndNmcz1cgyQ3Iv2bOfVHGvN7dJS9DsoC0O_pVJEues4vpU_KGIGdh-_p1vBojcO-awK1Jh5I0xKUbfoXrnQqUnzchEeLrnIBYDB3jOdV3_U49cOsGf85C7vjPW6N1386cL7SQwG/s1600/Holi.preview.JPG" imageanchor="1" style="margin-left: 1em; margin-right: 1em;"><img border="0" height="210" src="https://blogger.googleusercontent.com/img/b/R29vZ2xl/AVvXsEiQn2tlLndNmcz1cgyQ3Iv2bOfVHGvN7dJS9DsoC0O_pVJEues4vpU_KGIGdh-_p1vBojcO-awK1Jh5I0xKUbfoXrnQqUnzchEeLrnIBYDB3jOdV3_U49cOsGf85C7vjPW6N1386cL7SQwG/s320/Holi.preview.JPG" width="320" /></a></div>
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgAjm0X28n3NjOYDH21D1_tXWgqNM6JwOOFIFCxGnz_M16KMtx3aDXgC3_eRJv1Oie2oa5GLuB8zyHCJMuqDUF5CnrVWUjijrKOQnVx1ue9oibndFSePTA6wrLUBQxAyeyWJiWDtvL8YJkz/s1600/hvr-2akr1-a.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEgAjm0X28n3NjOYDH21D1_tXWgqNM6JwOOFIFCxGnz_M16KMtx3aDXgC3_eRJv1Oie2oa5GLuB8zyHCJMuqDUF5CnrVWUjijrKOQnVx1ue9oibndFSePTA6wrLUBQxAyeyWJiWDtvL8YJkz/s1600/hvr-2akr1-a.jpg" /></a></div>
<br />
<br /><br /><br /><br />ಇಂದು ಹೋಳಿಹುಣ್ಣಿಮೆ, ನಾಳೆ ಬೂದಿ ಚೆಲ್ಲುವ ದಿನ, ಐದನೇಯ ದಿನ ರಂಗಪಂಚಮಿ. ಆದ್ರೆ ನಾವು ಪುರುಸೂತ್ತುಗೇಡಿಗಳು ಬೂದಿಚೆಲ್ಲುವ ದಿನವೆ ಅಂದ್ರೆ ಕಾಮದಹನದ ಮರುದಿನವೇ ಬಣ್ಣ ಆಡುವ ಮೂಲಕ ರಂಗಪಂಚಮಿಯನ್ನಾಚರಿಸುತ್ತೇವೆ. :)<br /><br /><br />ಹೋಳಿಹುಣ್ಣಿಮೆ ಎಂದ ತಕ್ಷಣ ನನಗೆ ನನ್ನ ಬಾಲ್ಯದ ದಿನಗಳು ರಂಗುರಂಗೀನಾಗಿ ಕಣ್ಮುಂದೆ ಹಲಗಿ ಬಾರಿಸುತ್ತಾ ಕುಣಿಯತೊಡಗಿತ್ತವೆ. ಡಂಕ್ ನಕ್ಕ್ ನಕದಿಕನಕ್ಕ ಡಂಕ ನಕ್ಕ ನಕದಿಕನಕ್ಕ ಡಂಕ್ ನಕ್ಕ ಡಂಕ್ ನಕ್ಕ್ ಡಂಕ್ ನಕ್ಕ್....<br /> ಸಣ್ಣೋಳಿದ್ದಾಗ ಹೋಳಿಹುಣ್ಣಿಮೆಯ ದಿನಗಳಲ್ಲಿ ನಾನು ನನ್ನ ಸಣ್ಣ ಮಾವಂದಿರ ಬಾಲಂಗೋಸಿ! ಅವರೆಲ್ಲ ಹತ್ತು ಹದಿನೈದು ದಿನ ಮುಂಚೆಯೇ ಕಟಗಿ ಕುಳ್ಳು ಕದಿಯಲು ಪ್ಲಾನ್ ಮಾಡಿಕೊಳ್ಳುತ್ತಾ ಕೆಲಸ ಶುರುವಿಟ್ಟುಕೊಳ್ಳುತ್ತಿದ್ದರು. ಹಲಿಗೆ ಬಾರಿಸುವುದೆಂದರೆ ಆಗ ನನಗದೊಂದು ದೊಡ್ಡ ಆಕರ್ಷಣೆ. ಸಣ್ಣಮಾವ ನನ್ನ ಕೈಗೆ ತನ್ನ ಹಲಗೆ ಸಿಗದಂತೆ ಅದನ್ನು ಬಚ್ಚಿಡುತ್ತಿದ್ದ. ಅದನ್ನು ಹುಡುಕಿ, ಉದ್ದುದಕೆ ಎದೆಗಾನಿಸಿಕೊಂಡು, ಅದರ ಕಡ್ಡಿಗಳನ್ನು ಎರಡೂ ಕೈಗಳಲ್ಲಿ ಹಿಡಿದು ಡಂಕಣಕ ಬಾರಿಸಿದರೆ ಅದೆಂಥಾ ಖುಷಿಯಾಗುತ್ತಿತ್ತು ಅಂತೀರಿ! ಆಹಾ! ನಾಲ್ಕಾರು ಬಡಿತ ಆಗಿರುತ್ತಿತ್ತೋ ಇಲ್ಲವೋ ಅದರ ಸದ್ದಿಗೆ ಎಲ್ಲಿದ್ದರೂ ಓಡಿಬಂದು ನನ್ನ ಬೆನ್ನಿಗೆ ಗುದ್ದುತ್ತಿದ್ದ ಮಾವ! ಯಮ್ಮಾಆಆಆ ಅನ್ನೋ ನನ್ನ ಅರಚುವಿಕೆ ಕೇಳಲಾಗದೆ ನನ್ನಜ್ಜಿ ನನಗೂ ಒಂದು ಹಲಗಿ ತೆಗೆಸಿಕೊಡೋರು. ಆಗ ಮಾವ ನನ್ನನ್ನ ಪುಸಲಾಯಿಸಿ ತನ್ನ ಹಳೆಯ ಹಲಗಿಯನ್ನು ನನಗೆ ಒಗಾಯಿಸಲು ನೋಡುತ್ತಿದ್ದ. ಆಗ ಮತ್ತೆ ನನ್ನ ಸೈರನ್ "ಯಮ್ಮಾಆಆಆಆ ಬೇ, ಉಮಿ ನನ್ನ ಹಲಗಿ ಕಸಗೊಳ್ಳಾಕತ್ಯಾನ..." ‘ಸಾಯಿ ನಿಮ್ಮೌರ ಎಲ್ಲಾಕ್ಕೂ ಯಮ್ಮಾಆಆಆ’ ಎಂದು ಬೈಯುತ್ತಾ ಅಂವಾ ಕಾಲ್ಕೀಳುತ್ತಿದ್ದ ಅಲ್ಲಿಂದ. ಸಣ್ಣ ಮಾವನ ಹೆಸರು ಉಮೇಶ. ಮನೆಯ ಮೊದಲ ಮೊಮ್ಮಗು ನಾನಾದ್ದರಿಂದ ಅಚ್ಚೆ ಹೆಚ್ಚಾಗಿ ಕೊನೆಯ ಚಿಕ್ಕಮ್ಮನನ್ನು ಮತ್ತು ಸಣ್ಣಮಾವಂದಿರಿಬ್ಬರನ್ನೂ ಹೆಸರಿನಿಂದಲೆ ಕರೆಯುವಷ್ಟು ಸದರ. ಈಗಲೂ ಈ ಇಬ್ಬರೂ ಮಾವಂದಿರನ್ನು ಹೆಸರಿನಿಂದಲೇ ಕರೆಯುತ್ತೇನೆ. ಚಿಕ್ಕಮ್ಮನಿಗೆ ಮಾತ್ರ ವಿನಾಯಿತಿ ದೊರೆತಿದೆ ನನ್ನ ಉದ್ಧಟನದಿಂದ. :)<br /><br /><br /> ಶಿವರಾತ್ರಿ ಅಮವಾಸ್ಯೆ ಕಳೀತು ಅನ್ನುತ್ತಲೇ ಎಲ್ಲರ ಮನೆಯಲ್ಲೂ ಕುಳ್ಳು ಕಟ್ಟಿಗೆಗೆಗಳನ್ನು ಬಚಾವ್ ಮಾಡಿಕೊಳ್ಳುವ, ಅಡಗಿಸಿಡುವ ಎಚ್ಚರಿಕೆ ಜಾಗೃತವಾಗಿಬಿಡೋದು. ಆದರೇನು ಮನೆಮನೆಯಲ್ಲೂ ಕಾಮನ ಕಳ್ಳರೇ ತುಂಬಿರುತ್ತಿದ್ದರಿಂದ ಹಿರಿಯರು ಅವುಗಳನ್ನು ಅವಿಸಿಡುವುದು, ಈ ಚೋರರು ತಮ್ಮ ಸ್ನೇಹಿತರಿಗೆಲ್ಲ ಅವುಗಳ ಸುಳಿವು ಕೊಟ್ಟು ಮನೆಯವರಿಂದ ಒದೆ ತಿನ್ನೋದು ಸಾಮಾನ್ಯವಾಗಿದ್ದ ದಿನಗಳವು. :) ಹಗಲು ಬಲು ಸಭ್ಯರಂತೆ, ರಾತ್ರಿ ಕಳ್ಳತನ ಮಾಡಿದ್ದು ತಾವಲ್ಲವೇ ಅಲ್ಲ ಅನ್ನುವಂತೆ ಇದೇ ಮಕ್ಕಳು ಮನೆಮನೆಗೆ ಹೋಗಿ ೫-೫ ಇಲ್ಲಾ ೧೧-೧೧ ಕುಳ್ಳುಕಟ್ಟಿಗೆಗಳನ್ನು ಕಾಡಿ ಬೇಡಿ ವಸೂಲಿ ಮಾಡಲು ಬಂದಾಗ, ತಾವೀಗ ಕೊಟ್ಟರೂ ರಾತ್ರಿಯ ಕಳ್ಳತನ ತಪ್ಪಿದ್ದಲ್ಲ ಎಂದು ಗೊತ್ತಿದ್ದೂ ಎಲ್ಲ ಮನೆಯವರೂ ಕೊಡುತ್ತಿದ್ದರು. ಕೊಡದೆ ಬೈದು ಅಟ್ಟುವ ಮನೆಗಳ ಮುಂದೆ ಈ ಟೋಳಿಯ ಹೊಯ್ಕೊಳ್ಳುವಿಕೆ, ಹಲ್ಕಟ್ ಮಾತುಗಳ ಸುರಿಮಳೆ, ಹಲಗಿ ಬಾರಿಸುವಿಕೆ ಇನ್ನೂ ಜೋರಾಗುತ್ತಿತ್ತು. ಅಷ್ಟೇ ಅಲ್ಲ, ಈ ಗುಂಪು ಅಥವಾ ಟೋಳಿಯಲ್ಲಿ ಒಬ್ಬ ಹುಡುಗ ಹೆಣವಾಗುತ್ತಿದ್ದ, ಇನ್ನೊಬ್ಬ ಹುಡುಗ ಸೀರೆ ಉಟ್ಕೊಂಡು ಹೆಣ್ಣಾಗಿರುತ್ತಿದ್ದ (ರತಿ-ಮನ್ಮಥ). ಆ ಹೆಣ ಕಟ್ಟಿಗೆ ಕೊಡದವರ ಮನೆಯ ಗೇಟನ್ನು ತೆರೆದುಕೊಂಡು ಅಂಗಳಕ್ಕೆ ಹೋಗಿ ಲಕ್ಷಣವಾಗಿ ಕಾಲು ಮಡಚಿಕೊಂಡು ಆ ಮನ್ನೆಯ ಕಟ್ಟೆಯ ಮೇಲೆ ಮಲಗುತ್ತಿತ್ತು. ಸೀರೆ ಉಟ್ಟುಕೊಂಡ ಹುಡುಗ ಹಾಡ್ಯಾಡಿಕೊಂಡು ಅಳುತ್ತಾ, ಸತ್ತ ಗಂಡನನ್ನು ವರ್ಣಿಸುತ್ತಾ ಆ ಮನೆಯವರನ್ನ ಆಡಿಕೊಳ್ಳುತ್ತಾ, ಹೊಯ್ಕೊಳ್ತಾ (ಕೋರಸ್ ಥರಾ ಜೊತೆಗೆ ಬಂದ ಹುಡುಗರೂ ಹಲ್ಲುಕಿಸೀತಾ ಹೊಯ್ಕೊಳ್ಳೋರು) ಗೋಳಾಡುವುದನ್ನು ನೋಡಲಾಗದೆ ಕೀಸರಬ್ಯಾಸರಾಗಿಯಾದರೂ ಆ ಮನೆಯವರು ಹಾಳಾಗಿಹೋಗಿ ಎಂದು ಕನಿಷ್ಟ ೫-೫ ಕುಳ್ಳುಕಟ್ಟಿಗೆ ಕೊಟ್ಟು ಕಳಿಸಬೇಕು. ಗೇಟು ತೆಗೆಯದವರ ಮನೆಯ ಮುಂದೆ ಕಲ್ಲು ಮಣ್ಣಿನ ನೆಲದಲ್ಲೂ ಮಲಗಲು ಹಿಂದೆಮುಂದೆ ನೋಡುತ್ತಿರಲಿಲ್ಲ ಈ ಹುಡುಗರು. ಈ ಎಲ್ಲ ಆಟಕ್ಕೆ ಬಗ್ಗದ ಹಿರಿಯರೂ ಇದ್ದರು. ಅವರೆಲ್ಲ ಇವರ ಯಾವ ಸರ್ಕಸ್ಸಿಗೂ ಜಗ್ಗದೆ ಬಗ್ಗದೆ ಮನೆಯ ಅಗುಳಿ ಜಡಿದುಕೊಂಡು ತಾವು ಮನೆಯಲ್ಲಿಲ್ಲ ಎನ್ನುವಂತೆ ಗಪ್ಚುಪ್ ಇದ್ದುಬಿಡುತ್ತಿದ್ದರು. ಅಂಥವರಿಗಾಗಿ ಹೊರಗೆ ಕಾದೂ ಕಾದೂ ಬಸವಳಿದು, ಅವರಿಗೆ ಸಹರ್ಸ ನಾಮಾರ್ಚನೆ ಮಾಡುತ್ತಾ ಮುಂದಿನ ಮನೆಗೆ ಸಾಗುತ್ತಿದ್ದರು. ಮಜಾ ಅನಿಸೋದು ಅಂದ್ರೆ ಅಷ್ಟೆಲ್ಲ ಹಲ್ಕಟ್ ಮಾತುಗಳನ್ನು ಬಾಯಿಪಾಠ ಮಾಡಿದವರಂತೆ ಒದರುವ ಇದೇ ಹುಡುಗರು ತಮ್ಮ ತಮ್ಮ ಮನೆಯ ಸಾಲು ಬಂದ ತಕ್ಷಣ ಬಲು ಸಭ್ಯರಂತೆ ಸೈಲಂಟ್ ಆಗಿ ಬರೀ ಹಲಗಿ ಬಾರಿಸುತ್ತಾ ಕುಣಿಯೋರು. ಅದನ್ನು ಕಂಡು ಸಧ್ಯ ತಮ್ಮ ಮಗ ಹಾಳಾಗಿಲ್ಲ ಉಡಾಳ ಹುಡುಗರ ಜೊತೆ ಸೇರಿ ಅನ್ನೊ ಸಮಾಧಾನ ಅಮ್ಮಂದಿರದಾದರೆ ಅಪ್ಪಂದಿರು ಮನಸಲ್ಲೇ ಮಕ್ಕಳ ಸೋಗನ್ನು ಕಂಡು ನಗುತ್ತಿದ್ದರೋ ಏನೋ. ಅವರೂ ಇದನ್ನೆಲ್ಲ ಮಾಡಿಯೇ ಅಲ್ವಾ ದೊಡ್ಡೋರಾಗಿದ್ದು! :) <br />ಕಟ್ಟಿಗೆ ಕುಳ್ಳು ಬಚಾವು ಮಾಡಿಕೊಂಡೆವು ಎಂದು ದೊಡ್ಡವರು ನೆಮ್ಮದಿಯಿಂದ ಇರುವಾಗಲೇ ಈ ಕಳ್ಳಕಾಕರ ಗುಂಪು ಅವರ ಮನೆಯ ಬಿದರಿನ ಗೇಟನ್ನೋ, ಕೊಡ್ಡನ್ನೋ (ಕೊರಡು), ಕಂಪೌಂಡನ್ನೋ (ಆಗೆಲ್ಲ ಕೆಲವರು ಸಿಮೆಂಟಿನ ಕಂಪೌಂಡ್ ಬದಲಾಗಿ ಮನೆಯ ಸುತ್ತ ಕಟ್ಟಿಗೆ ನೆಟ್ಟು, ಮುಳ್ಳುತಂತಿಯ ಬೇಲಿ ಹಾಕಿಕೊಂಡಿರುತ್ತಿದ್ದರು), ಇಲ್ಲಾ ರೊಟ್ಟಿ ಮಾಡಿದ ಮೇಲೆ ಹಿತ್ತಲಲ್ಲಿ ನೆನಸಿಟ್ಟ ರೊಟ್ಟಿ ಕೊಮ್ಮಣ್ಗಿಯನ್ನೋ ಲಪಟಾಯಿಸಿ ಅದನ್ನು ಹುಣ್ಣಿಮೆಯವರೆಗೆ ಅಡಗಿಸಿಟ್ಟು, ಹುಡುಕಿಕೊಂಡು ಬಂದವರೆದುರು ಕದ್ದವರು ತಾವಲ್ಲವೇ ಅಲ್ಲ, ರೆಂಟ್ ಕಾಲನಿಯ (ಬಿಜಾಪುರದ ಕೆ.ಎಚ್.ಬಿ ಕಾಲನಿಯಲ್ಲಿ ನಮ್ಮ ಮನೆ. ಅದರ ಪಕ್ಕದಲ್ಲಿರೋದೇ ರೆಂಟ್ ಕಾಲನಿ) ಹುಡುಗರಿರಬೇಕೆಂದು ಸಾಧಿಸಿ ಸುಭಗರಂತಾಡಿ ಕಾಮನನ್ನು ಸುಡುವಾಗ ಅವೆಲ್ಲವನ್ನೂ ಕುಳ್ಳುಕಟ್ಟಿಗೆಯೊಳಗಡಗಿಸಿ ಇಷ್ಟೆತ್ತರ ಪೇರಿಸಿ ಗೋಪುರ ಮಾಡಿ, ಕಾಮದೇವನ ಪಟ ರಚಿಸಿ, ಪೂಜೆ ಮಾಡಿ ಸುಡೋರು. ಕಾಮಣ್ಣನನ್ನು ಸುಡಲು ಬೆಳಗಿನಿಂದ ಅಂಗಣ ಸಿದ್ಧಗೊಳ್ಳುತ್ತಿತ್ತು. ಆಟದ ಮೈದಾನವಾಗಿದ್ದ ಆ ಜಾಗವನ್ನು ಗುಡಿಸಿ, ನೀರು ಹೊಡೆದು ಸುತ್ತಲೂ ಕಟ್ಟಿಗೆ ಊರಿ ಅವುಗಳಿಗೆ ಪರಪರಿಯ ದಾರ ಕಟ್ಟಿ (ಮನೆಯಲ್ಲಿ ಹಿಟ್ಟಿನ ಸೆರೆ ಮಾಡಿಸಿಕೊಂಡು ಬಂದು ಬಣ್ಣ ಬಣ್ಣದ ತ್ರಿಕೋನಾಕಾರದ ಪರಪರಿಯ ಹಾಳೆಗಳನ್ನು ಕತ್ತರಿಸಿಕೊಂಡು ಅವುಗಳನ್ನ ಸಾಲಾಗಿ ಒಂದಂತರದಲ್ಲಿ ದಾರಕ್ಕೆ ಅಂಟಿಸುವ ಕೆಲಸವೂ ಹುಡುಗರದ್ದೇ. ಈಗಿನಂತೆ ಆಗೆಲ್ಲ ರೆಡಿಮೇಡ್ ಸಿಗುತ್ತಿರಲಿಲ್ಲ.) ಸಿಂಗಾರ ಮಾಡುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಎಲ್ಲರ ಮನೆಯಲ್ಲೂ ನೈವೇದ್ಯದ ಸಿದ್ಧತೆ. ಮನೆಯಲ್ಲಿ ಮಾಡಿದ ನೈವೇದ್ಯಗಳನ್ನು ಆ ಕಟ್ಟಿಗೆಯ ರಾಶಿಯ ಸುತ್ತಲೂ ಇರಿಸಿ, ಕಾಮಣ್ಣನನ್ನು ಪೂಜಿಸಿ ಬೆಂಕಿ ಇಡಲಾಗುತ್ತಿತ್ತು. ಅದರಲ್ಲೂ ಯಾರ ಓಣಿಯ ಬೆಂಕಿ ಎಷ್ಟೆತ್ತರಕ್ಕೇರಿತ್ತು ಅನ್ನೊ ಕಾಂಪಿಟೇಶನ್! ಆಗ ನೋಡಿ ಗೇಟಿಗೇ ಗೇಟನ್ನೇ ಕದ್ದವರು ನಮ್ಮವರಾ ಇಲ್ಲಾ ಪಕ್ಕದ ಓಣಿಯವರಾ ಅನ್ನೋದು ಗೊತ್ತಾಗ್ತಿದ್ದುದು. ಕಿಚ್ಚಿನ ಎದುರು ತಮ್ಮ ಪೌರುಷವನ್ನು ಮೆರೆಯುತ್ತಾ ನಗುವ ಹುಡುಗರೇ ಆ ಮೂಲಕ ಗೊತ್ತುಮಾಡಿಕೊಡುತ್ತಿದ್ದರು ಆಯಾ ಮನೆಯವರಿಗೆ. <br />ಕಾಮಣ್ಣನನ್ನು ಸುಡುವ ದಿನದವರೆಗೂ ಮಕ್ಕಳು ಹೊಯ್ಕೊಂಡರೆ ಏನೂ ಅನ್ನದ ಮನೆಯ ಹಿರಿಯರು, ತಾವೂ ಸುಡುವ ಜಾಗಕ್ಕೆ ಬಂದು, ಅರ್ಧ ಸಂಕೋಚ, ಅರ್ಧ ನಾಚಿಕೆಯಿಂದ ಬಾಯಿಗೆ ಕೈಹಚ್ಚಿ ಹೊಯ್ಕೊಳ್ಳುವ ಶಾಸ್ತ್ರ ಮಾಡಿ ಮುಂದಿನ ದಿನಗಳು ಸುಖಕರವಾಗಿರಲಿ ಹೊಯ್ಕೊಳ್ಳುವ ಪ್ರಸಂಗ ಬಾರದಿರಲಿ ಎಂದು ಆಶಿಸುತ್ತಿದ್ದರು. ಅವತ್ತೇ ಲಾಸ್ಟ್ ಮುಂದಿನ ಹೋಳಿಹುಣ್ಣಿಮೆಯವರೆಗೂ ಯಾರೂ ಬಾಯಿಗೆ ಕೈಹಚ್ಚುವಂತಿಲ್ಲ. ಅಕಸ್ಮಾತ್ ಬೇರೆ ದಿನಗಳಲ್ಲಿ ಯಾರ ಮನೆಯಲ್ಲಿಯಲ್ಲಾದ್ರೂ ಹಾಗೆ ಹೊಯ್ಕೊಳ್ಳುವ ಸದ್ದು ಕೇಳಿತೋ ಆ ಮನೆಯಲ್ಲಿ ಏನೋ ಅನಾಹುತ ಘಟಿಸಿದೆ ಅಂತಲೇ ಅರ್ಥ. ಹಾಗಿಲ್ಲದೆ ಮಕ್ಕಳು ಮೋಜಿಗೆ ಬಾಯಿಗೆ ಕೈ ಹಚ್ಚಿದರೂ ಅದು ಅಪಶಕುನ ಎಂದು ಭಾವಿಸಲಾಗುತ್ತೆ ಮತ್ತು ಆ (ದೊಡ್ಡ) ಮಕ್ಕಳಿಗೆ ಒದೆ ಗ್ಯಾರಂಟಿ! <br /><br /><br />ಹೊಯ್ಕೊಂಡ ಬಾಯಿಗೆ ಹೋಳಗಿ ತುಪ್ಪ! <br />ಕಾಮಣ್ಣನನ್ನು ಸುಟ್ಟ ಮರುದಿನ ಅದೇ ಕಿಚ್ಚನ್ನು ತಂದು ತಮ್ಮನೆಯ ಒಲೆಯನ್ನು ಉರಿಯುವುದು ನಮ್ಮಲ್ಲಿನ ವಾಡಿಕೆ. ಅದೆಷ್ಟು ಕಟ್ಟಿಗೆ ಜಮಾ ಆಗಿರುತ್ತಿತ್ತು ಅಂದರೆ ರಾತ್ರಿ ಹನ್ನೊಂದು ಹನ್ನೊಂದೂವರೆಗೆಲ್ಲ ಉರಿಯತೊಡಗಿದ ಕಾಮಣ್ಣನ ಕಿಚ್ಚು ಮಾರನೇಯ ದಿನ ಹಗಲು ಹತ್ತಾದರೂ ನಿಗಿನಿಗಿ ಅನ್ನುವಷ್ಟು. ಆದರೆ ಅಷ್ಟರೊಳಗೆ ಎಲ್ಲರೂ ನಸುಕಿನಲ್ಲೇ ಬಂದೂ ಬಂದೂ ಕಿಚ್ಚನ್ನು ತಮ್ಮ ಮನೆಗೆ ಒಯ್ಯುತ್ತಿದ್ದರಾದ್ದರಿಂದ ಬೆಳಗಿನ ಎಂಟರ ವೇಳೆಗೆ ಅಲ್ಲಿ ಬೆಚ್ಚನೆಯ ಬೂದಿ ಮಾತ್ರ ಉಳಿದಿರೋದು. ಈ ಮಾರನೇಯ ದಿನವನ್ನು ಬೂದಿ ಚೆಲ್ಲುವ ದಿನ ಅಂತಾರೆ. ಅಂದು ಮನೆಮನೆಯಲ್ಲೂ ಹೋಳಿಗೆ ಊಟ. ಹೊಯ್ಕೊಂಡ ಬಾಯಿಗೆ ಹೋಳ್ಗಿ ತುಪ್ಪಾ ಅನ್ನೊ ಆದರ. ಯಾವುದೇ ಶುಭಕಾರ್ಯಕ್ಕೂ ಪ್ರಶ್ಯಸ್ತವಾದ ದಿನವದು. ಶಿವರಾತ್ರಿ ಕಳೆದ ಮೇಲೆ ಹೋಳಿಹುಣ್ಣಿಮೆ ಆಗುವವರೆಗೂ ಉತ್ತರ ಕರ್ನಾಟಕದಲ್ಲಿ ಯಾವುದೇ ಶುಭಸಮಾರಂಭಗಳು ನಡೆಯುವುದಿಲ್ಲ. ಬೂದಿ ಚೆಲ್ಲುವ ದಿನದಿಂದ ಮೊದಲ್ಗೊಂಡು ಮತ್ತೆ ಸಮಾರಂಭಗಳ ಸಡಗರ ಶುರುವಾಗುತ್ತದೆ. <br /><br /><br />ಮೊದಲೆಲ್ಲ ರಂಗಪಂಚಮಿ ದಿನದಂದೇ ಬಣ್ಣ ಆಡುತ್ತಿದ್ದರಂತೆ. ನಾನು ಬಣ್ಣ ಆಡುವ ವೇಳೆಗಾಗಲೆ ಅದು ಬೂದಿಚೆಲ್ಲುವ ದಿನಕ್ಕೆ ಬಂದು ನಿಂತಿತ್ತು ಮತ್ತು ರಂಗಪಂಚಮಿಯ ದಿನ ಶಾಸ್ತ್ರಕ್ಕೆನ್ನುವಂತೆ ಗುಲಾಲ್ ಕೆಲವರ ಹಣೆ ಮತ್ತು ಕೆನ್ನೆಗಳನ್ನಲಂಕರಿಸುತ್ತಿತ್ತು. ಬಣ್ಣ ಆಡೋದು ಅಂದ್ರೆ ಈಗಿನಂತೆ ಪ್ಲಾಸ್ಟಿಕ್ ಕವರಿನಲ್ಲಿ ಬಣ್ಣದ ನೀರನ್ನು ತುಂಬಿಸಿ ಬೀಸಿ ಎಸೆದು ನೋಯಿಸುವುದಾಗಿರಲಿಲ್ಲ ಆಗ. ಆಗೇನಿದ್ದರೂ ಓಣಿಓಣಿಗಳಲ್ಲೂ ಗುಲಾಬಿ, ಹಸಿರು, ಜಾಂಬಳಿ, ಕೆಂಪು ಹಳದಿ ಬಣ್ಣಗಳನ್ನು ತುಂಬಿಸಿದ ಡ್ರಮ್ಮುಗಳ ಸಾಲು. ನಮ್ಮಂಥಾ ಚಿಲ್ಟುಗಳನ್ನು ಸೀದಾ ಅದರಲ್ಲಿ ಮುಳುಗೇಳಿಸಿ ಮನೆಗೆ ಕಳಿಸುತ್ತಿದ್ದರು ದೊಡ್ಡ ಹುಡುಗರು. ಅಲ್ಲೂ ತಮ್ಮ ಮನೆಯ ಪುಟ್ಟ ಮಕ್ಕಳನ್ನು ಅದರಿಂದ ಬಚಾವು ಮಾಡುವ ಕಾಳಜಿ ಹುಡುಗರಿಗೆ. ಬಣ್ಣದ ದಿನ ನಾವೆಲ್ಲ ಹುಡುಗಿಯರು ಹಳೆಯ ಪೆಟ್ಟಿಕೋಟ್ ಮೇಲೆ ಇರುತ್ತಿದ್ದೆವು, ಹುಡುಗರು ಗಂಟಿನಲ್ಲಿರುವ ಹಳೆಯ ಅಂಗಿ ಚೊಣ್ಣ ಪ್ಯಾಂಟುಗಳನ್ನು ಹಿರಿದೆಳೆದುಕೊಂಡು ಹಾಕಿಕೊಳ್ಳುತ್ತಿದ್ದರು. ಈಗಿನಂತೆ ಅಥವಾ ಸಿನಿಮಾದಲ್ಲಿ ತೋರಿಸುವಂತೆ ಹೊಚ್ಚಹೊಸ ಬಿಳಿ ಬಿಳಿ ಬಟ್ಟೆಗಳನ್ನು ಒಂದು ದಿನಕ್ಕೆಲ್ಲ ಹಾಕಿಕೊಂಡು ಕಳಚಿ ಎಸೆಯಲು ನಮಗೇನು ಹುಚ್ಚಾ? :) ಆದ್ರೆ ಆಗಲೂ ಈಗಲೂ ಪುಟ್ಟಹುಡುಗಿಯ ಪೆಟ್ಟಿಕೋಟ್ಸ್ ಮಾತ್ರ ಬಿಳಿಬಿಳಿಯೆ. ಒಮ್ಮೆಯಂತೂ ನನ್ನ ಮಾವಂದಿರೇ ನನ್ನನ್ನ ಕುಳ್ಳರಿಸಿ ಲಕ್ಷಣವಾಗಿ ವಾರ್ನಿಸಿನಿಂದ ನನ್ನ ಮುಖಕ್ಕೆ ಮೀಸೆ ದಾಡಿ ಬರೆದು ನಡುವೆ ಬಣ್ಣಗಳಿಂದ ಉಳಿದ ಮುಖವನ್ನು ತುಂಬಿಸಿ ಮನೆಯೊಳಗೆ ಬಿಟ್ಟಾಗ ನನ್ನಜ್ಜಿಯ ಗದರಿಕೆ ‘ನಿಮ್ಮಾರ್ಯಾಗರ ತಂದು! ಏನದು ಹೆಣ್ಣುಹುಡುಗೀಗೆ ಹಿಂಗ ಮಾಡೀರಿ. ಪಾಪ ಎಳೇ ಚರ್ಮ. ಏನರ ಆತಂದ್ರ ಗತಿ ಏನು?!" ಎನ್ನುತ್ತಾ ಕೊಬ್ಬರಿಯೆಣ್ಣೆಯಿಂದ ನನ್ನ ಮುಖ ಕ್ಲೀನ್ ಮಾಡುವಂತೆ ನನ್ನ ದೊಡ್ಡತ್ತೆಗೆ ಹೇಳಿ ಸ್ವಚ್ಛ ಮಾಡಿಸಿದ್ದರು. ಬಣ್ಣ ಸೋರಿಸಿಕೊಂಡು ಮನೆತುಂಬಾ ಓಡಾಡುವ ನಮ್ಮನ್ನು ‘ನಿಮ್ಮ ಹೆಣಾ ಎತ್ಲಿ. ಏನ್ ಆಡ್ಕೋತೀರಿ ಮನಿ ಹೊರಗs ಆಡ್ಕೋರಿ. ಎಷ್ಟ ಸಲಾ ಅಂತ ನೆಲಾ ವರಸ್ಲಿ ನಾ! ಇನ್ನೊಮ್ಮೆ ಮನ್ಯಾಗ ಕಾಲಿಟ್ರ ಒಬ್ಬೊಬ್ರ ಕಾಲ್ ಮುರೀತೀನಿ’ ಎಂದು ನನ್ನ ಚಿಕ್ಕಮ್ಮ ಬಯ್ಯದೆ ಹೋದರೆ ಬಣ್ಣ ಆಡಿದ ಖುಷಿ ಕಂಪ್ಲೀಟ್ ಆಗ್ತಾನೇ ಇರ್ಲಿಲ್ಲ ಮತ್ತಾಕೆ ಯಾವತ್ತೂ ನಮ್ಮನ್ನ ಈ ವಿಷಯದಲ್ಲಿ ನಿರಾಸೆಗೊಳಿಸಲಿಲ್ಲ! :D :) <br />ಬಣ್ಣ ಆಡೋದು ಕೇವಲ ಅವರವರ ಓಣಿಗಷ್ಟೇ ಸೀಮಿತವಾಗಿರಲಿಲ್ಲ. ಈ ಓಣಿಯ ಟೋಳಿ ಆ ಓಣಿಗೆ ಹೋಗಿ ಅಲ್ಲಿಯವರಿಗೆ ಬಣ್ಣ ಎರಚಿ ಅವರಿಂದ ಬಣ್ಣ ಎರಚಿಸಿಕೊಳ್ಳದೇ ಓಡಿ ಬರುವುದೂ, ಅಕಸ್ಮಾತ್ ಇನ್ನೊಂದು ಓಣಿಯವರು ಯಾರಾದರೂ ಪಾಪದವರು ಕೈಗೆ ಸಿಕ್ಕರೆ ಅವರನ್ನು ಬಣ್ಣಗಳಿಂದ ಅಂದಗೊಳಿಸಿ ಕಳಿಸುವುದೂ ಒಂದು ಮೋಜು. ಅದಕ್ಕೆ ಪ್ರತಿಕಾರ ತೆಗೆದುಕೊಳ್ಳಲು ಎದುರಿನವರೂ ಸಜ್ಜಾಗೇ ಇರುತ್ತಿದ್ದರು. ಸಂಜೆ ನಾಲ್ಕರ ಹೊತ್ತಿಗೆ ಮನೆಗೆ ಮರಳಿ ಉಜ್ಜಿ ಉಜ್ಜಿ ತೊಳೆದುಕೊಂಡರೂ ಹೋಗದೆ ಕಿವಿ, ಕತ್ತು, ಕಣ್ಣ ಕೊನೆ, ಅಂಗೈ, ಕಾಲು, ಬೆನ್ನು ಎನ್ನುತ್ತಾ ಸಂದುಗಳಲ್ಲಿ ಅಲ್ಲಲ್ಲಿ ಉಳಿದೇಬಿಡುವ ಬಣ್ಣ ಸಂಪೂರ್ಣ ಹೋಗಲು ವಾರವೇ ಬೇಕಾಗೋದು.<br /><br /><br />ಬಸುರಿಯಾಗಿದ್ದಾಗ ನಾನು ಆಡಿದ ಬಣ್ಣವೇ ನಾನಾಡಿದ ಕೊನೆಯ ಅದ್ದೂರಿಯ ಬಣ್ಣ... ಡಾಕ್ಟ್ರು ನನಗೆ ಕಟ್ಟುನಿಟ್ಟಿನ ಬೆಡ್ರೆಸ್ಟ್ ಹೇಳಿದ್ದನ್ನೂ ಕಡೆಗಣಿಸಿ ಗುಡ್ಡದಂಥಾ ಹೊಟ್ಟೆಯನ್ನು ಹೊತ್ತುಕೊಂಡೇ ಓಣಿ ತಿರುಗಿ ಬಣ್ಣ ಆಡಿದ್ದೆ. :) ನಂತರದ ದಿನಗಳಲ್ಲಿ ಬೇರೆಯವರು ಬಣ್ಣ ಆಡುವುದನ್ನು ನೋಡುತ್ತಾ ಸಂತಸಪಡುತ್ತಿದ್ದೇನೆ. ಈಗ ಪ್ರತೀ ಹೋಳಿಹುಣ್ಣಿಮೆಯಂದು ಮತ್ತೆ ಮತ್ತೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ, ನನ್ನ ಹಳಬರಂತೆ ನಾನೂ ”ಏನೇ ಅನ್ರಿ, ಆಗಿನ ದಿನಗೋಳ ಮಾಜಾನ ಬ್ಯಾರೆ’ ಅನ್ನುತ್ತಾ, ಹೊಯ್ಕೊಳ್ಳೋದು ಅಂದ್ರೆ ಅಸಹ್ಯ ಎಂದು ಭಾವಿಸುವ ಸೊ ಕಾಲ್ಡ್ ಸಫೋಸ್ಟಿಕೇಟೆಡ್ ಮನೆಯ ಜನರಿಗಾಗಿ ಹೋಳಿಗೆಯ ತಯಾರಿಯಲ್ಲಿ ತೊಡಗುತ್ತೇನೆ, ಅವರಿಗೆ ಗೊತ್ತಾಗದಂತೆ ಸಣ್ಣದಾಗಿ ಬಾಯಿಗೆ ಕೈಹಚ್ಚಿ ಹೊಯ್ಕೊಂಡು, ಹೊಯ್ಕೊಳ್ಳುವ ಪ್ರಸಂಗಗಳು ವರ್ಷವಿಡೀ ಯಾವತೂ ಬರದಿರಲಿ ಎಂದು ಕಾಮನನ್ನು ಪ್ರಾರ್ಥಿಸುತ್ತೇನೆ. :)<br /><br /><br />ಚಿತ್ರಕೃಪೆ: ಗೂಗಲ್ನಿಂದ ಮಲಯಾಳಂ ಬ್ಲಾಗ್ ಒಂದರಿಂದ ಹೆಕ್ಕಿಂಡಿದ್ದು.</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com3tag:blogger.com,1999:blog-4925720126176198020.post-1952836577225252862017-03-09T23:20:00.000+05:302017-03-09T23:20:42.612+05:30ಮೈಲಿಗೆ<div dir="ltr" style="text-align: left;" trbidi="on">
"ಈ ಜನ್ಮದಲ್ಲಿ ಒಂದೇ ಒಂದು ಬಾರಿಯಾದ್ರೂ ಸ್ವಲ್ಪ ಹೊತ್ತು ಸುಮ್ನೆ ನಿಮ್ಮ ಕೈ ಹಿಡ್ಕೊಂಡು ಕೂತ್ಕೋಬೇಕು ನಾನು. ನಿಮ್ಮೂರಿಗೆ ಬಂದಾಗ ಅದಕ್ಕೆ ಅವಕಾಶ ಮಾಡಿಕೊಡ್ತೀರಾ ಪ್ಲೀಸ್? ಪ್ಲೀಸ್..."<br />
<br />
ಮರಳಿ ತನ್ನೂರಿಗೆ ಹೋಗುತ್ತಿದ್ದವಳನ್ನು ಆ ಹತ್ತು ದಿನದಲ್ಲಿ ಇಪ್ಪತ್ತು ಬಾರಿ ಕೇಳಿದ್ದ ಅವನು ಆರ್ದ್ರತೆ ತುಂಬಿದ ಕಣ್ಣು ದನಿಯಲ್ಲಿ. ಆಕೆ ಮುಗುಳ್ನಗುತ್ತಾ ಸುಮ್ಮನಾಗುತ್ತಿದ್ದಳು, ಕೆಲವೊಮ್ಮೆ ಮೆಲ್ಲಗೆ ಹೂಂ ಎನ್ನುತ್ತಿದ್ದಳು. <br />
<br />
ಆಕೆ ಊರಿಗೆ ಹೋಗುವ ದಿನ ಕಳಿಸಲು ಬಂದವನು ಕೇಳಿದ, "ನೆನಪಿದೆಯಲ್ವಾ?" ಮತ್ತದೇ ಕೋರಿಕೆಯ ಕಣ್ಣು. <br />
<br />
ಮುಂದೆ ತಾವು ಮತ್ತೆ ಭೇಟಿಯಾಗುತ್ತೇವೋ ಇಲ್ಲವೋ ಅನ್ನುವ ಕಳವಳಕ್ಕೀಡಾಗಿ, ಅವನ ಕೋರಿಕೆ ಈಡೇರದೇ ಹೋದರೆ... ಎನಿಸಿ, ಬಸ್ ಬಿಡುವ ಮೊದಲು, "ಹೋಗ್ಬರ್ತೀನಿ" ಎನ್ನುತ್ತಾ ಅವನೆದುರು ನಿಧಾನ ಕೈ ಚಾಚಿದಳು ಸಂಕೋಚವನ್ನು ಅದುಮಿಟ್ಟುಕೊಂಡು. <br />
<br />
ಚಾಚಿದ ಕೈ ಸೇರಿದ ಅವನ ಅಂಗೈಯನ್ನು ಮೃದುವಾಗಿ ಒತ್ತಿ, ‘ಇಗೋ, ನಿಮ್ಮಾಸೆ ನೆರವೇರಿಸಿದೆ’ ಎನ್ನುವಂತೆ ನಸುನಗುತ್ತಾ ಅವನತ್ತ ನೋಡಿದಳು ಪ್ರೀತಿಯಿಂದ. <br />
<br />
ಅವನ ಮುಖದಲ್ಲಿ ಅಸಹ್ಯದ ಝಳ ಕಂಡು ಕೆನ್ನೆಗೆ ಬಾರಿಸಿಕೊಂಡ ಆಘಾತ! ಥಟ್ಟನೆ ಕೈ ಎಳೆದುಕೊಂಡವಳು, ಮುಖದಲ್ಲಿ ಇಂಗ ಹೊರಟ ನಗೆಯನ್ನು ಬಲವಂತವಾಗಿ ಎಳೆದು ನಿಲ್ಲಿಸಿಕೊಂಡಳು. ಬಸ್ ಚಲಿಸಿ ಅವನು ಕಣ್ಣಿಂದ ದೂರಾಗುತ್ತಿದ್ದಂತೆ ಹಿಡಿದಿಟ್ಟ ಕಣ್ಣೀರು ನಗೆಯನ್ನಳಿಸಿತು. <br />
<br />
ಅವನ ತಪ್ಪು ಕಲ್ಪನೆಯಿಂದಾಗಿ ನಿರ್ಮಲ ಪ್ರೀತಿಯೊಂದು ವಿನಾಕಾರಣ ಮೈಲಿಗೆಯ ಪಟ್ಟಿಯಲ್ಲಿ ಸೇರಿಹೋಯಿತು...<br />
<br />
<br />
- ಜಯಲಕ್ಷ್ಮೀ ಪಾಟೀಲ್</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com3tag:blogger.com,1999:blog-4925720126176198020.post-71140950440193163512017-03-06T09:28:00.000+05:302017-03-06T09:28:01.499+05:30 ಹಣತೆ<div dir="ltr" style="text-align: left;" trbidi="on">
ಹೊತ್ತೆನವ್ವ ಹಣತೆಯೊಂದ ಕಾರಿರುಳ ಸೆರಗಿನಲಿ<br />ಬೆಳಕ ಮೀಯಿಸುವೆನೆನುತ ಬಂದ ಸೂರ್ಯ ಮಿಂದು ಹೋದನವ್ವ<br />ಹಣತೆಯೆಂಬ ಸದರ ಅವಗೆ ತೊರೆದು ಹೋದನವ್ವ ನನ್ನ<br />ಮಡಿಲು ತುಂಬಿತವ್ವ!<br /><br /><br />ಚಂದ್ರ ತಾರೆಯರ ನಗರ ತೊರೆದು ಸೂರ್ಯನಗರಿಗೆ ಬಂದು <br />ಸರ್ವರ ಸಾಕ್ಷಿಯಲಿ ಹಣತೆ ಹೆತ್ತೆನವ್ವ, ಸೂರ್ಯಮರಿಯ ಹೆತ್ತೆನವ್ವ!<br />ಎಣ್ಣೆಯಿಲ್ಲ ನೀರಿಲ್ಲ ಹಸುಗಂದನ ನೆತ್ತಿಯಲಿ<br />ಉರಿಸಿ ಉಸಿರ ಮೈ ನೆಣವ ಎಣ್ಣೆಯಾಗಿಸಿದೆನವ್ವ<br /><br /><br />ಅಟ್ಟಿದನವ್ವ ಸೂರ್ಯ ಬಂದು ಉಟ್ಟ ದಟ್ಟಿಯ ಸೆಳೆದು<br />ಹೊರಗೆ ಅಟ್ಟಿದರವ್ವ ಜನರು ದೂರವಿಟ್ಟರವ್ವ <br />ತಮವ ಕಳೆದನೆಂದು ಹೊಗಳಿ ಅಟ್ಟಕ್ಕೇರಿಸಿದರು ರವಿಯ <br />ಒಡಲ ಕಂದನೊಡನೆ ನಾನು ಮೂಲೆ ಸೇರಿದೆನವ್ವ ಇತ್ತ ಮೂಲೆ ಸೇರಿದೆನವ್ವ!<br /><br /><br />- ಜಯಲಕ್ಷ್ಮೀ ಪಾಟೀಲ್.</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com3tag:blogger.com,1999:blog-4925720126176198020.post-9353146503810330082017-03-03T14:44:00.001+05:302017-03-03T14:44:26.630+05:30ಹೇಳಿ...<div dir="ltr" style="text-align: left;" trbidi="on">
ನಿಮ್ಮನೆಯ ಒಲೆಯಲ್ಲಿ ಬೆಕ್ಕು ಮಲಗಿದ್ದು<br />ನನ್ನಿಂದ ಎನ್ನುವುದಾದರೆ ಹೇಳಿ<br />ನಿಮ್ಮೋಣಿಯ ನಾಯಿ ಉಪವಾಸ ಸತ್ತಿದ್ದು<br />ನನ್ನಿಂದ ಎನ್ನುವುದಾದರೆ ಹೇಳಿ<br /><br />ನಿಮ್ಮ ಪ್ರತಿಭೆ ಪಾಂಡಿತ್ಯ ವಿದ್ವತ್ತನ್ನು ಕಸಿದು ಮೆರೆದು<br />ಪದಕಗಳ ಬಾಚಿದವಳು ನಾನಾದರೆ ಹೇಳಿ<br />ನಿಮ್ಮ ಕಷ್ಟದ ಬೆವರಿಗೆ ನನ್ನ ಹೆಸರ ಫಲಕವನಂಟಿಸಿ<br />ಸುಖವನ್ನನುಭವಿಸುತ್ತಿರುವವಳು ನಾನಾದರೆ ಹೇಳಿ<br /><br />ನೀವು ಉಸಿರಾಡುವ ಗಾಳಿ ಕಲುಷಿತಗೊಂಡಿದ್ದು<br />ನನ್ನಿಂದ ಎನ್ನುವುದಾದರೆ ಹೇಳಿ<br />ನೀವು ಕುಡಿಯುವ ನೀರು ಕೊಚ್ಚೆಯಾಗಿದ್ದು<br />ನನ್ನಿಂದ ಎನ್ನುವುದಾದರೆ ಹೇಳಿ<br /><br />ದೇಶ ಒಂದು ಜಾತಿ ಎರಡು ಎಂಬ ಬೇಧ <br />ಬಗೆದಿದ್ದವಳು ನಾನಾದರೆ ಹೇಳಿ<br />ತಾಯಿ ಉಣಿಸಿದ ಹಾಲನು ವಿಷವಾಗಿಸಿಕೊಂಡು<br />ನಿಮ್ಮನ್ನು ಕೊಂದವಳು ನಾನಾದರೆ ಹೇಳಿ<br /><br />ನಿಮ್ಮ ಕೊಂಕಿನ ಕೊಕ್ಕೆಗೆ ಸಿಗಿಬೀಳುತ್ತೇನೆ<br />ನಿಮ್ಮ ನೋಟದಲುಗಿಗೆ ನಲಗುತ್ತೇನೆ<br />ನಿಮ್ಮ ಹಿತ್ತಾಳೆ ಕಿವಿಯ ಲೋಲಾಕಾಗುತ್ತೇನೆ<br />ನಿಮ್ಮ ದ್ವೇಷದ ಗಾಣಕ್ಕೆ ಕೊರಳೊಡ್ಡುತ್ತೇನೆ<br /><br />ನಿಮ್ಮ ಕಲ್ಪನೆಗಳಿಗೆ ಹೊಣೆ ನಾನಲ್ಲ<br />ನಿಮ್ಮ ಹಿತ್ತಾಳೆ ಕಿವಿ ಸದ್ದೂ ನಾನಲ್ಲ<br />ನಿಮ್ಮ ನೋಟದ ಮಿತಿಯೂ ನಾನಲ್ಲ<br />ನೀವಂದುಕೊಂಡಂತೆ ನಾನಿರಬೇಕಿಲ್ಲ<br /><br />- ಜಯಲಕ್ಷ್ಮೀ ಪಾಟೀಲ್<br /><br />(25 Feb 2016)<br /></div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com1tag:blogger.com,1999:blog-4925720126176198020.post-57787736138606841982017-02-20T13:38:00.003+05:302017-02-20T14:19:54.385+05:30ವರ್ತಮಾನ ಪುರಾತನ<div dir="ltr" style="text-align: left;" trbidi="on">
<b><br /></b>
<b>ಪುರಾತನ ಕಲೆಯಿದು ಕೌದಿ ಹೊಲೆವ ಮಾಟ ಪುರುಸೊತ್ತಿನ ಆಟ<br /><br />ಸಣ್ಣ ದೊಡ್ಡ ತರಾವರಿ ತುಕಡಿಗಳ ರಾಶಿ ಅಡಗಿಸಿಕೊಂಡ ಗಂಟು<br /><br />ಬಿಚ್ಚಿ ನೋಡಿದರೆ ಏನೆಲ್ಲ ಉಂಟು ಎಲ್ಲದರ ಜೊತೆಗೂ ನೆನಪಿನ ನಂಟು<br /><br /><br />ಮುದಿಸೀರೆ ಮದವಳಿದ ಧೋತರ ಜೊತೆಯಾಗಿ ಅಡಿಯ ಪದರಾಗಿ<br /><br />ಹರೆಯದ ಸೀರೆಯದು ಮೇಲ್ಪದರು ನಡುವೆ ಸಿಕ್ಕಿಕೊಂಡವೆಲ್ಲ ಹರುಕು<br /><br />ಮುರುಕು ಮುಲುಕುವ ಕಾಣದ ಕಾಣಬಾರದ ಮೆದುವಾದ ಹತ್ತಿ ಬಟ್ಟೆ <br /><br /><br />ಪುಟ್ಟ ಲಂಗದ ತುಕುಡಿ ಪುಗ್ಗಾ ಪೋಲಕದ ತುಂಡುಗಳು ಕೌದಿಯಲಿ ಅಲ್ಲಲ್ಲಿ<br /><br />ಹಾರ್ಯಾರಿ ಹೂವಾಗಿ ಚಿಟ್ಟ್ಯಾಗಿ ಕಲರ್ಫುಲ್ಲಾಗಿ ಕುಳಿತ ಚೆಂದದ ಭಂಗಿ<br /><br />ಪೋರನ ಅಂಗಿ ಚೊಣ್ಣ ಚಲ್ಲಣಗಳು ಇದೀಗ ಆನೆ ಒಂಟೆಗಳ ಮೆರವಣಿಗೆಯ ಸಾಲು<br /><br /><br />ಲಂಗ ಪೋಲಕಗಳೇ ಹೂ ಚಿಟ್ಟೆಗಳ್ಯಾಕೆ ಅಂಗಿ ಚೊಣ್ಣಗಳೇಕಿಲ್ಲ<br /><br />ಹಾಗಂತ ನೀವು ಕೇಳುವ ಹಾಗಿಲ್ಲ ಹೂ ಚಿಟ್ಟೆಗಳ<br /><br />ನಾಜೂಕು ಆನೆ ಒಂಟೆಗಳಿಗಿಲ್ಲ ಎಂದರೆ ಸಾಕಲ್ಲ!<br /><br /><br />ಹಚ್ಚಹಸರಿನ ಹಚ್ಚಡದ ಎಂಟೂ ದಿಕ್ಕಿಗೂ ಪ್ರತಿಫಲನ ತ್ರಿಕೋನ<br /><br />ಹುಡುಗಿಯರ ಪುಗಡಿಯಾಟ ಹುಡುಗರ ಪಗಡೆಯಾಟ ನಡುನಡುವೆ<br /><br />ದಾರದ ಸಾಲು ಎಳೆಗಳು ಅವು ನಮ್ಮೆದುರಿನ ಲಕ್ಷ್ಮಣ ರೇಖೆಗಳು <br /><br /><br />ಜೋಕೆ, ದಾಟುವ ಭರದಲ್ಲಿ ಉಗುರ ಸೀಳಿ ಗೆ ಸಿಲುಕಿ ದಾರ <br /><br />ನರ ನಾಡಿಗಳಿಗೆ ವ್ಯಾಪಿಸೀತು ನೋವ ಧಾರ ಬದುಕಿಡೀ<br /><br />ಅದರ ನೆನಪಿನ ಕೊರಗಿನ ಮರುಗಿನ ರಾಗ ಏಕತಾರ<br /><br /><br />ಗೆರೆ ದಾಟುವ ಆಟಕ್ಕೆ ಕುಂಟಾಬಿಲ್ಲೆಯೆಂದು ಹೆಸರು<br /><br />ಕನಸ ಬಿಲ್ಲೆಯ ಕಣ್ಣಿಗೊತ್ತಿ ಮುತ್ತಿಕ್ಕಿ ಗೆರೆಗೆ ತಾಗದಂತೆ<br /><br />ಹುಸಿ ಹೋಗದಂತೆ ಚಿಮ್ಮಿ ಎಸೆದರೆ ಬೇಕಾದ ಚೌಕದಲ್ಲಿ ಅದು ಸೆರೆ<br /><br /><br />ಜೊತೆಗಿದ್ದುದು ದೂರವಾಗಿ ಒಂಟಿ ಕಾಲಿನ ಸರ್ಕಸ್ಸು ಗುರಿ ಸೇರಲು <br /><br />ಗೆರೆ ದಾಟುತ್ತಲೇ ಅಳಿಯದಂತೆ ನೋಡಿಕೊಳ್ಳುವ ಬಿಸಿನೆಸ್ಸು<br /><br />ಮನೋವ್ಯಾಪಾರವದು ಬಲು ಗೌಪ್ಯ ಲೋಕಕೆ ಲಾಭ ನಷ್ಟಗಳಷ್ಟೆ ಸತ್ಯ<br /><br /><br />ಕೆಂಪು ಹಸಿರು ಬಾವುಟದ ಏರು ಯೌವ್ವನ ತೇರು ಕೇಂದ್ರ ಬಿಂದು<br /><br />ಸುತ್ತಲೂ ಜೋಡಿ ಇಜ್ಜೋಡಿಗಳ ಮೇಳ ಬಯಲಾಟದ ಕುಣಿತ<br /><br />ಧಿಥೈ ಧಿಮಿ ತಕಿಟ ಧಿಥೈ ಧಿಮಿ ತಕಿಟ ಧಿಥೈ ಧಿಮಿ ತಕಿಟ ಥೈ<br /><br /><br />ತಾಳ ಹಿಡಿದ ಕೈಗೆ ಬೆರಳುಗಳು ನೂರಾರು ಅಬ್ಬರದ ಜೋರು<br /><br />ಸಂಪ್ರದಾಯದ ಬೇರು ಸುತ್ತುತ್ತ ಬದುವ ಬಿತ್ತುತ್ತ ಬೆಳೆಯುತಿದೆ ವೃತ್ತ<br /><br />ಅಲ್ಲಲ್ಲಿ ಅಲ್ಲಲ್ಲಿ ಎದೆಯ ಹಂಬಲದ ದಿಗಿಣಕೆ ತಾಳೆಯಾಗದ ತಾಳ<br /><br /><br />ಕುಣಿತದ ಬಿರುಸಿಗೆ ಸಿಂಗಾರಗಳೆಲ್ಲ ಕಳಚಿ ಮನಸು ಬಿಳಚಿ ಎದ್ದೂಬಿದ್ದೂ <br /><br />ಹೆಕ್ಕಿ ಆಯ್ದು ಮತ್ತೆ ಮತ್ತೆ ಸಿಂಗಾರಗೊಂಡು ಕಾಲನ ಹಿಡಿದಿಡುವ ಹಂಬಲ<br /><br />ಕುಣಿವ ಕಾಲ್ಗಳಿಗೂ ದಣಿವ ಕಾಲ್ಗಳಿಗೂ ಆಸರೆ ಒಂದೇ ನೆಲ ಜಲ<br /><br /><br />ಕವುಚಿ ಮಲಗಿದ ಜೀವಕೆ ನೆನಪುಗಳ ರಾಶಿ ಕಣ್ಣ ರೆಪ್ಪೆಯಡಿ ಹಾಕಿ <br /><br />ಕೌದಿ ನೇಯುತಿದೆ ನಿದ್ದೆ ನಲಿವಿನ ಜೊತೆಗೆ ನೋವೂ ಕುತ್ತಿ<br /><br />ಚಿತ್ತಾರವಾದುದ ಕಂಡು ಮನಸೆಲ್ಲ ಒದ್ದೆಮುದ್ದೆ</b><br />
<b><br /><br />-</b> ಜಯಲಕ್ಷ್ಮೀ ಪಾಟೀಲ್ (24 Nov 2016)<b><br /> </b><br />
<br /></div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com4tag:blogger.com,1999:blog-4925720126176198020.post-69654988841677093762017-02-11T13:58:00.003+05:302020-11-12T23:33:09.111+05:30ಶ್ರೀರಂಗರ ಎರಡು ಕಾದಂಬರಿಗಳಲ್ಲಿನ ಸ್ತ್ರೀಯರು<div dir="ltr" style="text-align: left;" trbidi="on">
<b><span style="font-size: large;"> </span><span style="font-size: x-large;">ಶ್ರೀರಂಗರ ಕಾದಂಬರಿಗಳಲ್ಲಿಯ ಸ್ತ್ರೀಯರು.</span></b><br />
<br /><span style="font-size: medium;">
ಶ್ರೀರಂಗರು ಬರೆದ ನಾಟಕಗಳನ್ನು ನೋಡಿ, ಓದಿ ಗೊತ್ತಿದ್ದ ನನಗೆ, ಶ್ರೀರಂಗರು ಹನ್ನೊಂದು ಕಾದಂಬರಿಗಳನ್ನು ಬರೆದಿರುವರೆಂದು ಗೊತ್ತಿರಲಿಲ್ಲ. ಅವರ ಯಾವ ಕಾದಂಬರಿಯನ್ನೂ ಓದಿರಲಿಲ್ಲ ನಾನು. ಡಾ.ವಿಜಯಾ ಅವರು ಫೋನ್ ಮಾಡಿ, ’’ವೆಂಕಟಸುಬ್ಬಯ್ಯವರಿಗಾಗಿ ಶ್ರೀರಂಗರ ಕಾದಂಬರಿಯಲ್ಲಿಯ ಸ್ತ್ರೀ ಪಾತ್ರಗಳ ಕುರಿತು ಬರೆದು ಕೊಡಲು ಸಾಧ್ಯವೇ” ಎಂದಾಗ ನಾಟಕಕಾರರಾದ ಶ್ರೀರಂಗರು ಒಂದೆರೆಡು ಕಾದಂಬರಿಗಳಿಗಿಂತ ಹೆಚ್ಚಿಗೆ ಬರೆದಿರಲಾರರು ಎಂದೆಣಿಸಿ ಸಂತೋಷದಿಂದ ಒಪ್ಪಿಕೊಂಡೆ. ನಂತರ ನೋಡಿದರೆ ಹನ್ನೊಂದು ಕಾದಂಬರಿಗಳು!! ನಿಗದಿತ ಒಂದು ತಿಂಗಳ ಗಡುವಿನಲ್ಲಿ ಅಷ್ಟನ್ನೂ ಓದಿ ಬರೆಯುವುದು ನನ್ನಿಂದಾಗದು ಎಂದರಿವಾಯಿತು. ಕೊನೆಗೆ ಬರಹಕ್ಕಾಗಿ ‘ಅನಾದಿ-ಅನಂತ’ ಮತ್ತು ‘ಗೌತಮನ ಶಾಪ’ ಎಂಬ ಎರಡು ಕಾದಂಬರಿಗಳನ್ನು ಆಯ್ದುಕೊಂಡೆ. ಒಂದು ತಿಂಗಳ ಅವಧಿಯನ್ನು ಕೆಲಸಗಳ ಒತ್ತಡದ ಕಾರಣದಿಂದಾಗಿ ಮೂರು ತಿಂಗಳುಗಳಿಗೆ ವಿಸ್ತರಿಸಿಕೊಂಡಿದ್ದಕ್ಕೆ ಹಿರಿಯರಾದ ವೆಂಕಟಸುಬ್ಬಯ್ಯನವರಲ್ಲಿ ಕ್ಷಮೆ ಕೋರುತ್ತೇನೆ.<br />
<br /></span>
<br />
<span style="font-size: x-large;"><br />
<b><span>ಕಾದಂಬರಿ - ‘ಅನಾದಿ-ಅನಂತ’</span></b></span><br />
<br /><span style="font-size: medium;">
ತನ್ನ ಹೆಂಡತಿ ಸರಲೆಯನ್ನು ಗಾಢವಾಗಿ ಪ್ರೀತಿಸುವ ರಾಮಣ್ಣನೆಂಬ ಸೃಜನಶೀಲ ಬರಹಗಾರ, ಅವರ ಮನೆಯಲ್ಲಿ ತನ್ನ ಅಬಚಿಯ (ಚಿಕ್ಕಮ್ಮನ) ಮಗಳೆಂದು ಸರಲೆ ಕರೆತಂದಿಟ್ಟುಕೊಂಡ ಹುಡುಗಿ ಕುಮುದ. ಈ ಮೂರು ಪಾತ್ರಗಳು ಈ ಕಾದಂಬರಿಯ ಮುಖ್ಯ ಪಾತ್ರಗಳು. <br />
<br />
ಗಂಡು ಹೆಣ್ಣಿನ ನಡುವಣ ಪ್ರೀತಿ, ಆಕರ್ಷಣೆ, ದೈಹಿಕ ವಾಂಛೆ, ಸ್ವೀಕಾರ, ನಿರಾಕಾರಣ, ಅನಿವಾರ್ಯತೆ ಈ ಕಾದಂಬರಿಯ ವಸ್ತು. ವರ್ಷಾನುಗಟ್ಟಲೆ ಖಾಯಿಲೆ ಮಲಗಿರುವ ಹೆಂಡತಿಯನ್ನು ರಾಮಣ್ಣ ಅಪಾರವಾಗಿ ಪ್ರೀತಿಸುತಿದ್ದರೂ, ಕುಮುದೆಯೊಡನೆ ದೈಹಿಕ ಸಂಪರ್ಕ ಬೆಳೆಸುತ್ತಾನೆ. ಆಗಷ್ಟೇ ಹರೆಯಕ್ಕೆ ಕಾಲಿಟ್ಟ ಕುಮುದಳ ಮನಸು ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗದೆ, ತನಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವನಾದ ರಾಮಣ್ಣನೆಡೆಗೆ ಬೆಳೆಸಿಕೊಳ್ಳುವ ಪ್ರೀತಿ, ಸರಲೆಯೆಡೆಗೆ ಸಣ್ಣಗಿನ ಮತ್ಸರಕ್ಕೆ ದಾರಿಯಾಗುತ್ತದಾದರೂ, ತನಗೆ ಆಶ್ರಯ ನೀಡಿದವಳು ಎನ್ನುವ ಒಳಎಚ್ಚರಿಕೆ ಅದನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗುತ್ತದೆ. ಸರಲಳ ಸಾವಿನ ನಂತರ ಕುಮುದಳ ಸಹವಾಸ ಅಸಹನೀಯವೆನಿಸಿ ರಾಮಣ್ಣ ಅವಳನ್ನು ಮನೆಯಿಂದ ಆಚೆ ಹಾಕಬೇಕು ಎಂದುಕೊಳ್ಳುತ್ತಿರುವಾಗಲೇ ಕುಮುದ ತಾನು ಬಸುರಿ ಎನ್ನುವುದನ್ನು ರಾಮಣ್ಣನಿಗೆ ತಿಳಿಸುತ್ತಾಳೆ. ರಾಮಣ್ಣ ಕುಮುದಳನ್ನು ಮದುವೆಯಾಗುತ್ತಾನೆ. ಮದುವೆಯಾದರೂ ಅಂತರದ ದಾಂಪತ್ಯ ಅವರದಾಗುತ್ತದೆ. ಇದು ಈ ಕಾದಂಬರಿಯ ಸಾರಾಂಶ.<br />
<br />
ಈ ಕಾದಂಬರಿಯಲ್ಲಿ ಬರುವ ಸ್ತ್ರೀ ಪಾತ್ರಗಳೆಂದರೆ ಸರಲೆ, ಕುಮುದ ಮತ್ತು ಕುಮುದಳು ಅತ್ತೆ ಎಂದು ಕರೆಯುವ ಅವಳ ದೂರದ ಸಂಬಂಧಿ. ರಾಮಣ್ಣನ ಸ್ನೇಹಿತನ ಹೆಂಡತಿ ಎನ್ನುವ ಪಾತ್ರವೂ ಈ ಕಾದಂಬರಿಯಲ್ಲಿದೆಯಾದರೂ ಹೀಗೆ ಬಂದು ಹಾಗೆ ಹೋಗುವ ಪಾತ್ರ ಅದಾದ್ದರಿಂದ ಆ ಪಾತ್ರ ವಿವರಣೆಗೆ ಸಿಕ್ಕುವುದೇ ಇಲ್ಲ.<br />
<br />
ಈ ಕಾದಂಬರಿಯಲ್ಲಿನ ಸ್ತ್ರೀ ಪಾತ್ರಗಳು ವ್ಯವಹಾರಿಕವಾಗಿ ಮನೆಯಲ್ಲಿಯೇ ಇದ್ದು ಮನೆ, ಗಂಡ, ಮಕ್ಕಳು ಮತ್ತು ಅವರುಗಳ ಬೇಕು ಬೇಡಗಳನ್ನು ನೋಡುಕೊಳ್ಳುವಲ್ಲಿಗೇ ಸೀಮಿತಗೊಂಡಂಥವು. ಮನೆಯ ಹೊರಗೆ ಕೆಲಸ ಮಾಡುವುದಂತೂ ದೂರ, ಆ ನಿಟ್ಟಿನಲ್ಲಿ ಯೋಚಿಸಿಯೂ ಗೊತ್ತಿಲ್ಲದಂಥವು. ಆದರೆ ಸರಲೆ ಮತ್ತು ಕುಮುದ ಪಾತ್ರಗಳು ವೈಚಾರಿಕ ನೆಲೆಗಟ್ಟಿನಲ್ಲಿ ಯೋಚಿಸುವಂಥ ಸ್ತ್ರೀ ಪಾತ್ರಗಳು ಎನ್ನುವುದು ವಿಶೇಷ. ಈ ಕಾದಂಬರಿಯ ಹೂರಣ ಮಾನಸಿಕ ಸಂಘರ್ಷ.</span><br />
<br />
<br />
<br />
<b><span style="font-size: large;">ಸರಲೆ.</span></b><br />
<br /><span style="font-size: medium;">
ರಾಮಣ್ಣನ ಮಡದಿ. ಸುಶೀಲೆ ಮತ್ತು ಸುಗುಣೆ. ಹನ್ನೆರಡು ವರ್ಷದ ತನ್ನ ಚಿಕ್ಕಮ್ಮನ ಅನಾಥ ಮಗಳನ್ನು ತನ್ನೊಡನೆ ಕರೆದುಕೊಂಡು ಬಂದು, ಮನೆಯಲ್ಲಿಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುವಂಥ ಮಾತೃಹೃದಯಿ. ಬರಹಗಾರ ಪತಿಯ ಸ್ಪೂರ್ತಿಯ ಸೆಲೆಯಾದವಳು. ಅವನಿಗನುಕೂಲವಾದವಳು. ಅವನ ಬರಹಗಳ ಮೊದಲ ಓದುಗಳು ಮತ್ತು ವಿಮರ್ಶಕಳೂ ಸಹ! ಎಲ್ಲರೂ ಬಯಸುವಂಥ ಸುಂದರ ದಾಂಪತ್ಯ ರಾಮಣ್ಣ-ಸರಲೆಯರದ್ದಾಗಿರುತ್ತದೆ. ಗಂಡನ ಲೋಪಗಳನ್ನೂ ವಿಶೇಷಣಗಳನ್ನಾಗಿಸಿ, ಸಹಿಸಿಯೂ ಸಹಿಸಿದ್ದನ್ನು ತೋರಿಸಿಕೊಳ್ಳದ ಸರಲೆಯಂಥ ಪತ್ನಿ ತಮಗಿರಬೇಕು ಎಂದು, ಅಂದು ಬಹುಶಃ ಇಂದೂ ಗಂಡಸರು ಅಂದುಕೊಳ್ಳುವರೇನೋ ಎಂದು ನನ್ನನಿಸಿಕೆ. ಅಲ್ಲದೇ ಆ ಕಾಲಮಾನದ ಕತೆ ಕಾದಂಬರಿಗಳಲ್ಲಿ ಇಂಥ ಆದರ್ಶಮಯ ವ್ಯಕ್ತಿಚಿತ್ರಣ ಸಾಮಾನ್ಯವಾಗಿತ್ತು ಮತ್ತು ಆಪ್ಯವಾಗಿತ್ತು. ಇಂದಿನ ಸಾಹಿತ್ಯದಲ್ಲಿ ಯಾರಾದರೂ ಇಂಥ ಪಾತ್ರಗಳನ್ನು ಸೃಷ್ಟಿಸಿದ್ದೇ ಆದರೆ ಬಹುಶಃ ಇಂದಿನ ಪೀಳಿಗೆ ಅದನ್ನು ವಾಸ್ತವಕ್ಕೆ ಬಲು ದೂರ ಎನ್ನುವ ಕಾರಣ ಕೊಟ್ಟು ಸ್ವೀಕರಿಸಲು ಹಿಂಜರಿಯಬಹುದೇನೋ… <br />
<br />
ಗಂಡ ರಾಮಣ್ಣನಿಗೋಸ್ಕರ, ಅವನಿಗನುಕೂಲವಾಗಿ ಬದುಕುವುದೇ ತನ್ನ ಜೀವನದ ಸಾರ್ಥಕತೆ ಎಂದು ಭಾವಿಸಿ ಜೀವಿಸುತ್ತಿದ್ದ ಸರಲೆ, ಕುಮುದ ಮನೆಗೆ ಬಂದ ಎರಡು ಮೂರು ವರ್ಷಕ್ಕೆಲ್ಲ ದೀರ್ಘ ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾಳೆ. ಮನೆಯ ಕೆಲಸವೆಲ್ಲ ಹದಿನೈದು-ಹದಿನಾರರ ಹರೆಯದ ಕುಮುದಳ ಮೇಲೆ ಬೀಳುವುದನ್ನು ಕಂಡು ತನ್ನ ಅಸಹಾಯಕ ಸ್ಥಿತಿಗೆ ಕೊರಗುತ್ತಾಳೆ. ಕುಮುದಳ ಬಳಲಿಕೆ ನೀಗಲೆಂದು ಗಂಡ ರಾಮಣ್ಣನಿಗೆ ಅವಳನ್ನು ಸಿನಿಮಾಗೆ ಕರೆದುಕೊಂಡು ಹೋಗಲು ಬಲವಂತಪಡಿಸಿ ಅವರಿಬ್ಬರನ್ನು ಸಿನಿಮಾಗೆ ಕಳುಹಿಸಿಕೊಡುತ್ತಾಳೆ. ಮೂರೂ ಪಾತ್ರಗಳು ಅವುಗಳ ಸ್ವಸ್ಥಾನದಲ್ಲಿರುವವರೆಗೆ ಎಲ್ಲವೂ ಸರಿಯಾಗಿರುತ್ತದೆ. ಆದರೆ ರಾಮಣ್ಣ ಮತ್ತು ಕುಮುದಳ ನಡುವೆ ಸಂಬಂಧವೇರ್ಪಟ್ಟ ಮೇಲೆ ಮೇಲ್ನೋಟಕ್ಕೆ ಯಾವ ಬದಲಾವಣೆ ಕಾಣಿಸದಿದ್ದರೂ ಮೂರೂ ಅಂತರಂಗಗಳು ಅಲ್ಲೋಲ ಕಲ್ಲೋಲಗೊಳ್ಳುತ್ತವೆ. ಹಾಸಿಗೆ ಹಿಡಿದ ಸರಲೆಯ ಸಹನೆಯ ಕುರಿತು ಅಚ್ಚರಿಯಾಗುವುದು ಈ ಹೊತ್ತಿನಲ್ಲೆ! ರಾಮಣ್ಣ ಮತ್ತು ಕುಮುದರ ಸಂಬಂಧ ಶುರುವಾದ ನಂತರ, ಅವರಿಬ್ಬರೂ ಸರಲೆಯ ಎದಿರು ನಡುವಳಿಕೆಯಲ್ಲಿ ಮೊದಲಿನಂತೆಯೇ ಇದ್ದರೂ ಸರಲೆಯ ಸೂಕ್ಷ್ಮ ಮನಸಿಗೆ ಅವರಿಬ್ಬರ ಸಂಬಂಧದ ಸುಳಿವು ಸಿಕ್ಕುಬಿಡುತ್ತದೆ. ಆದರೆ ತಪ್ಪಿಯೂ ತನಗದು ಗೊತ್ತಾಗಿದೆ ಎಂದು ಸರಲೆ ತೋರಗೊಡುವುದಿಲ್ಲ. ಆದರೂ ಇದು ಓದುಗರಿಗೆ ಗ್ರಹಿಕೆಯಾಗುವುದು ಎರಡು ಪ್ರಸಂಗದಲ್ಲಿ, ಒಮ್ಮೆ ಕುಮುದಳೊಡನೆ ಮತ್ತೊಮ್ಮೆ ರಾಮಣ್ಣನೊಡನೆ ಮಾತಾನಾಡುವಾಗ ತನ್ನ ಸಹನೆ ಉಳಿಸಿಕೊಳ್ಳಲು ಮಲಗಿದಲ್ಲಿಯೇ ಸರಲೆ ಮುಖ ತಿರುಗಿಸಿ ಏನೊಂದೂ ಮಾತನಾಡದೆ ಮೌನವಹಿಸುವಾಗ. ನೋವು, ಅಸಹನೆಯನ್ನು ಮೀರಿದ, ವಾಸ್ತವಪ್ರಜ್ಞೆ ಸರಲೆಯನ್ನು ಈ ವಿಷಯದಲ್ಲಿ ಮೌನವಹಿಸುವಂತೆ ಮಾಡುತ್ತದೆಯೇ? ಇನ್ನೊಬ್ಬರ ಆಸರೆಯಿಲ್ಲದೆ ಬದುಕಲಾಗದ ಅಸಹಾಯಕ ಸ್ಥಿತಿಯಲ್ಲಿ, ಅದೂ ರಾಮಣ್ಣ ಮತ್ತು ಕುಮುದಳ ಮೇಲೆಯೇ ತಾನು ಅವಲಂಬಿತಳಾಗಿರುವುದೂ ಮತ್ತು ಖಾಯಿಲೆಯ ನಿಃಶ್ಯಕ್ತಿಯ ಕಾರಣದಿಂದಾಗಿ ರಾಮಣ್ಣನಿಗೆ ಸುಖ ಕೊಡಲಾಗದ ಅನಿವಾರ್ಯತೆಯೂ ಸೇರಿ ಅವರಿಬ್ಬರ ಸಂಬಂಧ ಗೊತ್ತಾಗಿಯೂ, ರಾಮಣ್ಣನ ಮೇಲಿನ ಪ್ರೀತಿಯಿಂದಾಗಿ ಸರಲೆ ಈ ಕುರಿತ ತನ್ನೊಳಗಿನ ನೋವನ್ನು ತೋರಗೊಡುವುದಿಲ್ಲವೇ ಎಂಬ ಅನಿಸಿಕೆ ಮೂಡುತ್ತದೆ. ಆದರೆ ಸರಲೆಯ ನೋವು ಪ್ರಕಟಗೊಳ್ಳುವುದು ಇನ್ನೊಂದು ರೀತಿಯಲ್ಲಿ. ಅದು ತಾನಿನ್ನು ಹೆಚ್ಚು ದಿನ ಬದುಕುವುದಿಲ್ಲವಾದ್ದರಿಂದ ರಾಮಣ್ಣ ತಾನು ಬದುಕಿರುವಾಗಲೇ ಇನ್ನೊಂದು ಮದುವೆಯಾಗಬೇಕೆಂದು ಆಗಾಗ ಅವನಿಗೆ ಬಲವಂತಪಡಿಸುವುದರ ಮೂಲಕ. ಮೊದಮೊದಲು ರಾಮಣ್ಣನಿಗೆ ’ಇನ್ನೊಂದು ಮದುವೆಯಾಗಿ’ ಎನ್ನುವ ಸರಲೆ ನಂತರ ನೇರವಾಗಿ ಕುಮುದಳನ್ನೇ ಮದುವೆಯಾಗಲು ಸೂಚಿಸುತ್ತಾಳೆ. ರಾಮಣ್ಣ ಸತತವಾಗಿ ಸರಲೆಯ ಮಾತನ್ನು ನಿರಾಕರಿಸುತ್ತಾ ಬರುತ್ತಾನೆ. ಕೊನೆಗೊಮ್ಮೆ ‘ಆಯ್ತು ಅದರ ಬಗ್ಗೆ (ಕುಮುದಳನ್ನು ಮದುವೆಯಾಗುವುದರ ಬಗ್ಗೆ) ವಿಚಾರ ಮಾಡ್ತೀನಿ’ ಎನ್ನುತ್ತಾನೆ ರಾಮಣ್ಣ. ಅಂದೇ ಸರಲೆ ಸಾಯುತ್ತಾಳೆ. ರಾಮಣ್ಣ ಮದುವೆಯ ಕುರಿತು ಯೋಚಿಸುತ್ತೇನೆ ಎನ್ನುವವರೆಗೂ ಅವನ ನಿರಾಕರಣೆಯ ಹಿಂದಿನ ತನ್ನ ಮೇಲಿನ ಪ್ರೀತಿ ಅಷ್ಟುದಿನ ಸರಲೆಯನ್ನು ಜೀವದಿಂದಿರುವಂತೆ ನೋಡಿಕೊಂಡಿತ್ತು ಎನಿಸುತ್ತದೆ ನನಗೆ. <br />
<br />
<br />
<br /></span>
<br />
<b><span style="font-size: large;">ಕುಮುದ.</span></b><br />
<br /><span style="font-size: medium;">
ಮಾನಸಿಕ ಸಂಘರ್ಷದ ಅದ್ಭುತ ಚಿತ್ರಣ ಕುಮುದ ಪಾತ್ರದ್ದು. ಬಹುಶಃ ಕನ್ನಡದಲ್ಲಿ ಇಷ್ಟು ವಿಶದವಾಗಿ ಮಾನಸಿಕ ಒಳತೋಟಿಯನ್ನು ತೆರೆದಿಟ್ಟ ಇನ್ನೊಂದು ಕಾದಂಬರಿ ಇರಲಾರದೇನೋ… </span><br />
<br /><span style="font-size: medium;">
ಸರಲೆಯ ಅಬಚಿ(ಚಿಕ್ಕಮ್ಮ)ಯ ಮಗಳು ಕುಮುದ. ಹನ್ನೆರೆಡು ವರ್ಷದವಳಿದ್ದಗಲೇ ಸರಲೆಯೊಂದಿಗೆ ಆಕೆಯ ಗಂಡನ ಮನೆಗೆ ಬಂದು, ಸರಲೆ ಮತ್ತು ರಾಮಣ್ಣನ ಸಹೃದಯತೆಯಿಂದಾಗಿ ಯಾವ ಕೊರತೆಯೂ ಬಾರದಂತೆ ಬೆಳೆದವಳು. ಕುಮುದ ಹರೆಯಕ್ಕೆ ಕಾಲಿಡುವ ಹೊತ್ತಿಗೆ ಸರಲೆ ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾಳೆ. ಈ ಮನೆಗೆ ಬಂದ ಮೊದಲ ದಿನದಿಂದಲೇ ಕುಮುದೆಗೆ ಅದೇನು ಅಂತ ಅರ್ಥವಾಗದ ಆಕರ್ಷಣೆ ರಾಮಣ್ಣನ ಬಗ್ಗೆ. ಮುಂದೆ ಸರಲೆ ಹಾಸಿಗೆ ಹಿಡಿದು ಮೂರ್ನಾಲ್ಕು ವರ್ಷಗಳ ನಂತರ ಆಕಸ್ಮಿಕವಾಗಿ ರಾಮಣ್ಣನ ಕೈ ಸೋಕಿದ್ದೇ ನೆಪವಾಗಿ ರಾಮಣ್ಣ ಮತ್ತು ಕುಮುದಳ ನಡುವೆ ದೈಹಿಕ ಸಂಪರ್ಕವೇರ್ಪಡುತ್ತದೆ. ತಾನು ತನ್ನ ಹೆಂಡತಿಯನ್ನು ಅಪಾರವಾಗಿ ಪ್ರೀತಿಸುತ್ತೇನೆ ಎನ್ನುವ ರಾಮಣ್ಣನ ಪಾಲಿಗೆ ಕುಮುದ ದಾಹ ನೀಗಿಸಿಕೊಳ್ಳುವ ಒಂದು ಸಾಧನವಾದರೆ, ಕುಮುದ ನಿಜವಾಗಿಯೂ ರಾಮಣ್ಣನನ್ನು ಪ್ರೀತಿಸತೊಡಗುತ್ತಾಳೆ. ಹಗಲು ಹೆಂಡತಿಯೊಂದಿಗೆ ಆಪ್ತವಾಗಿ ಮಾತಾಡುವ, ರಾತ್ರಿ ತನ್ನೊಡನೆ ಸ್ವಲ್ಪ ಕಾಲ ಕಳೆಯುವ ರಾಮಣ್ಣ ಕುಮುದಳ ಪಾಲಿಗೆ ಒಗಟಾಗುತ್ತಾನೆ. ಅವನು ನಿಜವಾಗಿ ಪ್ರೀತಿಸುವುದು ಯಾರನ್ನು ಎನ್ನುವ ಗೊಂದಲ ಕುಮುದಳನ್ನು ಅಸ್ವಸ್ಥಳನ್ನಾಗಿಸುತ್ತದೆ. ತನ್ನನ್ನೇ ಅವನು ಪ್ರೀತಿಸಬೇಕು ಎನ್ನುವ ಪ್ರೀತಿಸುವ ಜೀವದ ಸಹಜ ಹಂಬಲ. ಜೊತೆಗೇ ತಾನು ಸರಲೆಗೆ ಮೋಸ ಮಾಡುತ್ತಿರುವೆ ಎನ್ನುವ ಪಾಪಪ್ರಜ್ಞೆ, ಸರಲೆಗೆ ತಮ್ಮಿಬ್ಬರ ವಿಷಯ ಗೊತ್ತಾದರೆ, ತಮ್ಮಿಬ್ಬರನ್ನೂ ಅಪಾರವಾಗಿ ಪ್ರೀತಿಸುವ ಅವಳಿಗಾಗುವ ಆಘಾತ ನೆನೆದು ಒಂದೆರೆಡು ಸಲ ಕಂಗಾಲಾಗುತ್ತಾಳೆ. ಅಕ್ಕನಿಗೆ ನೋವಾಗದಂತೆ ಇರಬೇಕೆಂದುಕೊಂಡರೂ ರಾಮಣ್ಣನೆಡೆಗಿನ ಸೆಳೆತ ಅದನ್ನು ಸಾಧ್ಯವಾಗಿಸುವುದಿಲ್ಲ. </span><br />
<br /><span style="font-size: medium;">
ಆದರೆ ಹಗಲು ಹೊತ್ತಲ್ಲಿ ತನ್ನೆಡೆಗಿನ ರಾಮಣ್ಣನ ನಿರ್ಲಿಪ್ತತೆ, ರಾತ್ರಿಯೂ ಸಹ ಬಂದ ಕೆಲಸ ಮುಗಿಸಿಕೊಂಡು ಹೋಗುವವನಂತಿರುವ ರಾಮಣ್ಣನ ವರ್ತನೆ, ಮೊದಮೊದಲು ಪ್ರೀತಿಯ ಆವೇಶದಲ್ಲಿದ್ದ ಕುಮುದಳ ಗಮನಕ್ಕೆ ಅಷ್ಟಾಗಿ ಬರದೆ, ದಿನಗಳು ಕಳೆದಂತೆ, ವಾಸ್ತವದ ಅರಿವಾಗುತ್ತಿದ್ದಂತೆ, ಅವಳ ಮನಸಿನ ಮೇಲೆ ನೋವಿನ, ಅವಮಾನದ ಗಾಯಗಳಾಗಲು ಕಾರಣವಾಗುತ್ತದೆ. ಕುಮುದ ಅದೆಷ್ಟರ ಮಟ್ಟಿಗೆ ರಾಮಣ್ಣನನ್ನು ಪ್ರೀತಿಸುತ್ತಿರುತ್ತಾಳೆ ಅಂದರೆ ಅವನ ಮನೆಯಾಚೆಯ ಕೆಲವು ಚಟುವಟಿಕೆಗಳು, ಅವನು ಇವಳಿಗೆ ಹೇಳಿರದಿದ್ದರೂ ಇವಳ ಅನುಭೂತಿಗೆ ಬರುವಷ್ಟು! ಅದೂ ಸರಲೆಯ ಗಮನಕ್ಕೂ ಬರುತ್ತದೆ. ಮುಂದೆ ಸರಲೆಯ ಸಾವಿನ ನಂತರ ರಾಮಣ್ಣನಿಂದಾಗಿ ರಾಮಣ್ಣ ಮತ್ತು ಕುಮುದಳ ನಡುವೆ ಅಸಹನೆ ಹೆಚ್ಚುತ್ತಾ ಹೋಗುತ್ತದೆ. ಹೆಂಡತಿಯ ಸಾವಿನ ನಂತರ ರಾಮಣ್ಣನಿಗೆ ಕುಮುದ ಬೇಡವಾಗತೊಡಗುತ್ತಾಳೆ. ಅವಳನ್ನು ಮನೆಯಿಂದ ಆಚೆ ಅಟ್ಟಲು ಯೋಚಿಸುತ್ತಾನೆ. ತನ್ನೆಡೆಗಿನ ರಾಮಣ್ಣನ ನಿರ್ಲಿಪ್ತತೆ ಮತ್ತು ಅಸಹನೆ ಕುಮುದಳನ್ನು ಕಂಗಾಲಾಗಿಸುತ್ತದೆ. ತನ್ನ ಪ್ರೀತಿಗೆ, ಸ್ವಾಭಿಮಾನಕ್ಕೆ ಪದೇ ಪದೇ ಬೀಳುವ ಏಟು ಅವಳನ್ನು ಅಪಾರವಾಗಿ ನೋಯಿಸುತ್ತದೆ, ಹಗಲೂ ರಾತ್ರಿ ಮರುಗಿಸುತ್ತದೆ, ಅದೇ ಅವಳನ್ನು ಪೆಡಸಾಗಿಸುತ್ತದೆ. ಕೊನೆಗೊಮ್ಮೆ ರಾಮಣ್ಣನ ಮನೆಯಿಂದ ತೆರಳಲು ನಿರ್ಧರಿಸಿದ ಕುಮುದೆಗೆ ತನ್ನ ತಿಂಗಳ ಹಿಂದೆಯೇ ಮುಟ್ಟಿನ ದಿನ ಮುಂದೆ ಹೋಗಿರುವುದು ಗಮನಕ್ಕೆ ಬರುತ್ತದೆ. ಮಕ್ಕಳಿಗಾಗಿ ಹಂಬಲಿಸುತಿದ್ದ ಸರಲೆಯನ್ನು ಕುಮುದ ಆ ಹೊತ್ತಲ್ಲಿ ನೆನೆದು ಆರ್ದ್ರವಾದರೂ, ರಾಮಣ್ಣನನ್ನು ನೆನೆದು ತಿರಸ್ಕಾರದ ನಗೆ ಮೂಡುತ್ತದೆ ಅವಳ ಮೊಗದಲ್ಲಿ. ತನ್ನಿಂದ ಮಕ್ಕಳಾಗುವುದು ಸಾಧ್ಯವಿಲ್ಲದಿದ್ದರೂ, ಮಕ್ಕಳು ಮನೆಯಲ್ಲಿ ಓಡಾಡುವುದನ್ನು ಕಣ್ತುಂಬಾ ಕಾಣಬೇಕು ಎಂದು ಬಯಸಿದ್ದ ಸರಲೆ, ಆ ಕಾರಣದಿಂದಾಗಿ ತನ್ನನ್ನು ಮದುವೆಯಾಗಲು ಬಲವಂತ ಪಡಿಸಿದಾಗಲೂ ಒಪ್ಪದಿದ್ದ ರಾಮಣ್ಣನಿಗೆ (ರಾತ್ರಿ ತನ್ನೊಂದಿಗೆ ಕಳೆಯಲು ಅಭ್ಯಂತರವಿಲ್ಲದಿದ್ದವನಿಗೆ ಮದುವೆಯಾಗಲು ಮಾತ್ರ ಅಭ್ಯಂತರ!) ಈಗ ತನ್ನ ಬಸಿರಿನ ವಿಷಯ ತಿಳಿಸಿ ಅವನು ವ್ಯಥೆ ಪಡುವುದನ್ನು ನೋಡಿ ಹೊಟ್ಟೆತುಂಬಾ ನಗಬೇಕು ಎಂದು ಕುಮುದಳ ನೊಂದ ಮನಸು ಬಯಸುತ್ತದೆ.</span><br />
<br /><span style="font-size: medium;">
ಇತ್ತ ರಾಮಣ್ಣನ ಮನಸು ಕುಮುದಳನ್ನು ಮನೆಯಾಚೆ ಹಾಕಲು ನಿರ್ಧರಿಸುತ್ತಿದ್ದಂತೆ, ಅದನ್ನರಿಯದ ಕುಮುದ ರಾಮಣ್ಣನ ಕೋಣೆಗೆ ಬಂದು, ತನ್ನ ಒಡಲಲ್ಲಿ ಅವನ ಚಿಗುರು ಮೂಡಿದ್ದನ್ನು ತಿಳಿಸುತ್ತಾಳೆ. ಅಷ್ಟೊತ್ತು ಕುಮುದಳನ್ನು ಹೊರಹಾಕುವ ಬಗ್ಗೆ ಯೋಚಿಸಿ ನಿರ್ಧರಿಸಿದವನು ಕುಮುದಳ ಮಾತು ಕೇಳುತ್ತಲೇ ಮದುವೆಯಾಗೋಣ ಎನ್ನುತ್ತಾನೆ! ರಾಮಣ್ಣನ ಮನೆಯಿಂದ ಹೊರನಡೆಯಬೇಕು ಎಂದುಕೊಂಡಿದ್ದ ಕುಮುದಳೂ ಸಮ್ಮತಿಸಿಬಿಡುತ್ತಾಳೆ!! ತಾಳಮೇಳವಿಲ್ಲದ ಎರಡು ಜೀವಗಳು ಅನಿವಾರ್ಯವೆಂಬಂತೆ ಮದುವೆಯ ಬಂಧನಕ್ಕೊಳಪಡುತ್ತವೆ!</span><br />
<br /><span style="font-size: medium;">
ಮದುವೆಯಾದರೂ ಘಾಸಿಗೊಂಡ ಕುಮುದಳ ಮನಸು ರಾಮಣ್ಣನನ್ನು ಹತ್ತಿರ ಬರಲು ಬಿಡುವುದೇ ಇಲ್ಲ. ಸ್ವಲ್ಪವಾದರೂ ಸ್ವಾಭಿಮಾನವಿರುವ ಯಾರಿಗೇ ಆಗಲಿ, ‘ತಾನು ಬಳಕೆಯಾದೆ, ಉಪಯೋಗಿಸಲ್ಪಟ್ಟೆ’ ಎನ್ನುವುದು ಮನದಟ್ಟಾದಾಗ ಆಗುವ ಆ ನೋವು, ಅವಮಾನ ಅಳಿಸಲಾಗದಂಥದ್ದು. ಕುಮುದಳೊಡನೆ ಆಗುವುದೂ ಅದೇ. ರಾಮಣ್ಣನನ್ನು ಪ್ರೀತಿಸುತ್ತಿದ್ದರೂ ಅವಳದನ್ನು ಕೃತಿಯಲ್ಲಿ ಪ್ರಕಟಪಡಿಸುವುದೇ ಇಲ್ಲ! ನಿರ್ಲಿಪ್ತ ವಿರಾಗಿಣಿಯಂತೆ ಬದುಕುತ್ತಾಳೆ. ಅವಳ ಮನಸಿಗಾದ ನೋವನ್ನು, ಅವಮಾನವನ್ನು ವಿವರಿಸಲು, ಮದುವೆಯಾಗಿ, ಮಗುವಾದ ನಂತರ ಒಮ್ಮೆ, ರಾಮಣ್ಣನಿಗೆ ತನ್ನಿಲ್ಲಿ ಇನ್ನೂ ಕುಮುದಳಿಗೆ ಪ್ರೇಮವಿದೆ, ಆದರೆ ಆಕೆ ಅದನ್ನು ತೋರಗೊಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ, ಅದರಿಂದ ಅವನು ಉತ್ಸುಕನಾಗಿ ಅವಳನ್ನು ಹೊಂದಲು ಅವಳೆಡೆ ಬರುವ ಈ ಒಂದು ಪ್ರಸಂಗ ಸಾಕು. (ಶ್ರೀರಂಗ ಸಾರಸತ್ವ /ಸಂಪುಟ-೨/ ಪುಟ: ೧೫೧-೧೫೨) </span><br />
<br />
<b style="font-size: large;">“ಕುಮುದ”<br /><br />ತನ್ನನ್ನು ಒಮ್ಮೆ ಚಕಿತಳಾಗಿ ನೋಡಿ ಆಕೆ ಒಮ್ಮೆಲೆ ಮುಗುಳ್ನಗೆ ನಕ್ಕಿದ್ದಳು. ಆಗಲೇ ತಿಳಿಯಬೇಕಾಗಿತ್ತು ತನಗೆ. ಆ ಮುಗುಳ್ನಗೆಯಿಂದ ಮುಖ ಸೌಮ್ಯವಾಗಿ ಕಂಡಿರಲಿಲ್ಲ.<br /><br />“ಕುಮುದ”<br /><br />“ಒಳಗೆ ಬನ್ನಿ”<br /><br />“ಕುಮುದಾ, ಕುಮುದಾ, ಆದದ್ದನ್ನು ನೀನು ಮರೆಯುವೆ ಎಂದು ನನಗನಿಸಿತ್ತು. ಹಾಂಗ ಕೇಳಿದರೆ ನನ್ದೇ ತಪ್ಪು, ನಾನು ಒಪ್ಕೋತೀನಿ.”<br /><br />“ನಿಮ್ಮಂಥ ಪ್ರಗತಿಶೀಲರು ಇದನ್ನು ತಪ್ಪು ಎಂದು ತಿಳಿಯಬೇಕೆ?”<br /><br />“ಆಂ? ಏನೆಂದೆ?”<br /><br />“ಅಲ್ಲ-ಹಳೇ ವಿಚಾರದವರು ಹಾಂಗ ಅನ್ನಬಹುದು, ಆದರೆ ನೀವು…”<br /><br />“ಯಾವುದು? ಏನು? ಯಾವ ವಿಷಯ ನೀನು ಮಾತಾಡ್ತಾ ಇರೋದು?”<br /><br />“ಸೂಳೇರನ್ನ ಮದುವೆಯಾಗೋದು.”<br /><br />“ಕುಮುದಾ!” ಚಾವಟಿಯ ಹೊಡೆತಕ್ಕೆ ಆಕ್ರೋಶಿಸುವವನಂತೆ ಕೂಗಿದ.<br /><br />“ಪ್ರೀತಿಸದೇ ಇದ್ದ ಹೆಂಗಸಿನ ಸಹವಾಸ ಅಂದ್ರ, ಸೂಳೆಯ ಸಹವಾಸ ಅಂತ ನೀವೇ…”<br /><br />“ಕುಮುದಾ, ಕುಮುದಾ, ಯಾಕ ದಂಡಸ್ತಿ ನನ್ನ ಇಂಥಾ ಮಾತಿನಿಂದ? ನಿನ್ನನ್ನ ಪ್ರೀತಿಸದೇ ಇದ್ದರೆ ನಿನ್ನ ಮದುವೆಯಾಗುತ್ತಿದ್ದೆನೆ ನಾ? ಯಾಕ ಇಲ್ಲದ ವಿಚಾರ ತಲೆವಳ್ಗ ತುಂಬಿಕೊಂಡು…”<br /><br />“ನನಗೇ ಮಗು ಬೇಕಾಗಿತ್ತು. ಅದಕ್ಕ ನಿಮ್ಮನ್ನ ನಾ ಜವಾಬ್ದಾರ ಅಂತ ಹಿಡಿಯೂದಿಲ್ಲ. ಈಗಾದ್ರೂ ಸಮಾಧಾನ ಆಯ್ತೊ?”<br /><br />“ಕುಮುದಾ, ಕುಮುದಾ, ಯಾವುದೋ ತಪ್ಪು ಕಲ್ಪನೆಯಿಂದ ನೀನು ಏನೇನೊ ಕಲ್ಪಿಸ್ಕೊಂಡೀದಿ…”<br /><br />“ನನ್ನ ಕಲ್ಪನೆ ತಪ್ಪೋದಿಲ್ಲ. ಈಗ ನೀವು ಇಲ್ಲಿ ಯಾಕ ಬಂದೀರಿ ಅನ್ನೊ ಕಲ್ಪನೆ ನನಗಿದೆ. ಅದನ್ನ ತಪ್ಪು ಅಂತೀರಾ? ಆದರೆ ಒಂದು ಮಾತು. ನಿಮ್ಮ ತೃಪ್ತಿಗೆ ನಾನು ಅಡ್ಡ ಬರೋದಿಲ್ಲ. ಒಂದ್ಮಾತು ಮೊದ್ಲು ನನಗ ತಿಳುಹಿಸಿಕೊಡಿರಿ. ಈಗ ನೀವು ಇಲ್ಲಿ ಬಂದಿದ್ದು, ನಾ ನಿಮ್ಮ ಮದುವೇ ಹೆಂಡತಿ ಅನ್ನೋ ಅಧಿಕಾರದಿಂದಲೊ, ಇಲ್ಲಾ ನಾನು ಅಂದ್ರೆ ನಿಮಗೆ ಮೋಹಿತಳಾದ ಒಬ್ಬ ಸ್ವೇಚ್ಛಾಚಾರಿಣಿ ಅಂತಲೊ? ಯಾವುದನ್ನ ನೀವು ಹೇಳ್ತೀರಿ, ಆ ಪಾತ್ರ ಅಭಿನಯಿಸಲಿಕ್ಕೆ ನಾ ಸಿದ್ಧ.”</b><br />
<br /><span style="font-size: medium;">
ಕುಮುದಳನ್ನು ಮದುವೆಯಾದ ಹತ್ತು ವರ್ಷಗಳಲ್ಲಿ ರಾಮಣ್ಣನಿಗೆ ತನ್ನಿಂದಾದ ತಪ್ಪು ಅರಿವಾಗಿ ಕುಮುದಳೆಡೆಗೆ ನಿಧಾನವಾಗಿ ಪ್ರೀತಿ ಮೂಡಿದರೂ, ಇದೇ ಕಾರಣದಿಂದಾಗಿ ಕುಮುದ ತನ್ನನ್ನು ದೂರವಿಟ್ಟಿದ್ದರಿಂದಾಗಿ, ಹೇಳಲು ಧೈರ್ಯ ಸಾಲದಾಗುತ್ತದೆ. ರಾಮಣ್ಣನಿಗಾಗಿ ಏರ್ಪಟ್ಟ ದೊಡ್ಡ ಸತ್ಕಾರ ಸಮಾರಂಭದ ಒಂದು ದಿನ, ಕುಮುದಳ ಮನಸಿನಲ್ಲಿ ರಾಮಣ್ಣನೆಡೆಗಿದ್ದ ಪ್ರೀತಿ-ದ್ವೇಷಗಳಲ್ಲಿ ಪ್ರೀತಿಯೇ ಗೆದ್ದಿತು ಅನ್ನುವಷ್ಟರಲ್ಲಿ ಅಂದೇ ಆಗುವ ಅವರಿಬ್ಬರ ಮಗ ಮೋಹನನ ಆಕಸ್ಮಿಕ ಸಾವಿನೊಂದಿಗೆ ಕಾದಂಬರಿ ಅಂತ್ಯ ಕಾಣುತ್ತದೆ. </span><br />
<br /><span style="font-size: medium;">
ಮಗ ಮೋಹನ ಹೋಲಿಕೆಯಲ್ಲಿ, ವಿಶೇಷವಾಗಿ ಮೋಹನನ ಕಣ್ಣುಗಳು, ನೋಟ ಸರಲೆಯನ್ನೇ ಹೋಲುತ್ತಿರುತ್ತವೆ ಎನ್ನುವುದು ಎರಡು ಮೂರು ಕಡೆಗಳಲ್ಲಿ ಈ ಕಾದಂಬರಿಯಲ್ಲಿ ಓದಲು ಸಿಗುತ್ತದೆ. ಅದನ್ನು ಆಧಾರವಾಗಿಟ್ಟುಕೊಂಡು ಯೋಚಿಸುವುದಾದರೆ ಮೋಹನನ ಸಾವು, ರಾಮಣ್ಣನ ಮನಸಿನೊಳಗಿನ ಸರಲೆಯ ಸಾವನ್ನು ಸೂಚಿಸುತ್ತದೆಯೇ ಎನ್ನುವ ಅನುಮಾನ ನನ್ನದು…</span><br />
<br />
<br />
<br />
<br />
<b><span style="font-size: large;">ಕುಮುದಳ ಅತ್ತೆ.</span></b><br />
<br /><span style="font-size: medium;">
ಈ ಪಾತ್ರ ಪಕ್ಕಾ ಹೆಣ್ಣು ಮನಸಿನ ಕಾಂಪ್ರಾಮೈಜಿಂಗ್ ಗುಣವುಳ್ಳದ್ದು. ಗಂಡನಿಗೆ ಹೊರಗಿನದೊಂದು ಸಂಬಂಧವಿದೆಯಂದು ಗೊತ್ತಾದಾಗಲೂ, ಅದರ ಬಗ್ಗೆ ಎಷ್ಟೇ ಅಸಮಾಧಾನವಿದ್ದರೂ, ಕೊನೆಗೆ ಆಡಿ ಸೋತ ಮಗು ಮನೆಗೇ ಬರುವಂತೆ ತನ್ನ ಗಂಡ ತನ್ನಲ್ಲಿಗೇ ಬರುತ್ತಾನೆ ಎಂಬ ಸುಳ್ಳು ಸಮಾಧಾನವನ್ನು ತಂದುಕೊಂಡು, ಜೀವನದಲ್ಲಿ ಸಿಕ್ಕ ಸಣ್ಣಪುಟ್ಟ ಸಂತೋಷಗಳನ್ನೇ ಬದುಕಿಡೀ ಮೆಲುಕು ಹಾಕುತ್ತಾ ಬದುಕನ್ನು ಸಹ್ಯವಾಗಿಸಿಕೊಂಡು ಆಯಸ್ಸು ಸವೆಸಿದ ಜೀವ. ಕುಮುದ ತನ್ನಲ್ಲಿ ಬಂದಾಗಲೆಲ್ಲ ತನ್ನ ಬದುಕನ್ನು ಇಷ್ಟಿಷ್ಟೇ ಅವಳೆದುರು ತೆರೆದುಕೊಳ್ಳುತ್ತಾಳೆ.</span><br />
<br />
<br />
<br /><span style="font-size: medium;">
****************************************************************************</span><br />
<br />
<br />
<br />
<br />
<br />
<b><span style="font-size: x-large;">ಕಾದಂಬರಿ - ‘ಗೌತಮನ ಶಾಪ’</span></b><br />
<br /><span style="font-size: medium;">
ಗುಂಡಾಚಾರಿ ಈ ಕಾದಂಬರಿಯ ಮುಖ್ಯ ಪಾತ್ರ. ಆಸೆಗಳಿರುವ ಆದರೆ ಮಹತ್ವಾಕಾಂಕ್ಷಿಯಲ್ಲದ, ದುಷ್ಟನಲ್ಲದ, ಗಾಳಿ ಬಂದತ್ತ ತೂರಿಕೊಳ್ಳುತ್ತಾ, ಆಸರೆ ಸಿಕ್ಕಲ್ಲೆಲ್ಲ ಅನುಕೂಲ ಮಾಡಿಕೊಳ್ಳುತ್ತಾ, ಮದುವೆಗೆ ಮುಂಚೆ ಹೆಂಗಸರ ಸಹವಾಸ ಮಾಡಿ ಗೌತಮನ ಶಾಪ ಹೊತ್ತ ಇಂದ್ರನಂತಾದವನು. ಆದರೆ ಅದರ ಶಿಕ್ಷೆ ಮಾತ್ರ ಎಂಟು ಮಕ್ಕಳನ್ನು ಹೆತ್ತರೂ ಒಂದೇ ಮಗುವನ್ನು ಉಳಿಸಿಕೊಳ್ಳಲಾಗುವ ಅವನ ಹೆಂಡತಿ ಸುಂದರಕ್ಕನಿಗೆ. ಆ ಒಂದು ಮಗು ಸಹ ಬದುಕುಳಿಯುವುದು ಗುಂಡಾಚಾರಿ ತಾನು ವೈದ್ಯರಲ್ಲಿ ಚಿಕಿತ್ಸೆ ತೊಗೊಂಡ ಕಾರಣದಿಂದಾಗಿ.</span><br />
<br /><span style="font-size: medium;">
ಈ ಕಾದಂಬರಿಯಲ್ಲಿ ಹಲವಾರು ಸ್ತ್ರೀ ಪಾತ್ರಗಳು ಬರುತ್ತವೆ. ಇಲ್ಲಿ ಬರುವ ಸ್ತ್ರೀ ಪಾತ್ರಗಳ್ಯಾವೂ ಹೆಚ್ಚು ಶಿಕ್ಷಣ ಪಡದವುಗಳಲ್ಲ. ಭಾಗಶಃ ಎಲ್ಲ ಸ್ವಭಾವದ ಸ್ತ್ರೀಯರೂ ಈ ಕಾದಂಬರಿಯಲ್ಲಿರುವುದೊಂದು ವಿಶೇಷ. ಜೊತೆಗೆ ಮನೆ ಹೊರಗೂ ದುಡಿಯುವ ಹೆಣ್ಣು ಪಾತ್ರಗಳೂ ಇವೆ. ‘ಅನಂತ-ಅನಾದಿ’ಯಲ್ಲಿಯ ಸ್ತ್ರೀ ಪಾತ್ರಗಳಂತೆ ಕೇವಲ ಮನೆಗೆ ಸೀಮಿತಗೊಂಡ ಪಾತ್ರಗಳಲ್ಲ ಇಲ್ಲಿನವು.</span><br />
<br />
<br />
<span style="font-size: large;"><br />
<b>ಗುಂಡಾಚಾರಿಯ ತಾಯಿ.</b></span><br />
<br /><span style="font-size: medium;">
ಈಕೆಗೊಂದು ಹೆಸರು ಕೊಡದೇ ಗುಂಡಾಚಾರಿಯ ತಾಯಿ ಎಂದೇ ಪ್ರಾಸ್ತಾವಿಸುತ್ತಾ ಹೋಗುತ್ತಾರೆ ಶ್ರೀರಂಗರು. ಲೋಲುಪ, ಫಟಿಂಗ ಗಂಡನನ್ನು ಅನ್ನಲೂ ಆಗದೇ ಆಡಲೂ ಆಗದೇ, ಮಾನಸಿಕವಾಗಿ ನೋವು ಅನುಭವಿಸುತ್ತಲೇ ಮಗನ ಭವಿಷ್ಯವನ್ನು ಚಿಂತಿಸುವ, ಅವನ ವಿದ್ಯೆಯತ್ತ, ಏಳಿಗೆಯತ್ತ ಗಮನ ಹರಿಸುವ ಜೀವ ಗುಂಡಾಚಾರಿಯ ತಾಯಿ. ಮಗನನ್ನು ಶಾಲೆಗೆ ಸೇರಿಸಲು ಆಸಕ್ತಿ ತೋರದ ಗಂಡನಿಗೆ ಹೇಳಿ ಸಾಕಾಗಿ ತಾನೇ ಶಾಲೆಗೆ ಕಳುಹಿಸುತ್ತಾಳೆ. ರಾತ್ರಿ ಮಲಗುವಾಗ ಮಗನಿಗೆ ರಾಮಾಯಣದ ಕತೆಯನ್ನು ಹೇಳುತ್ತಿರುತ್ತಾಳೆ. ಶಾಲೆಯಲ್ಲಿ ದೊಡ್ಡ ಹುಡುಗರ ಸಹವಾಸದಿಂದ ‘ಪ್ರೇಮ’ದ ಬಗ್ಗೆ ಕುತೂಹಲಗೊಂಡು, ಅದನ್ನು ತಿಳಿಯಲು ಉತ್ಸುಕನಾಗಿ, ಕೊನೆಗೊಮ್ಮೆ ತನ್ನ ತಂದೆಯದು ಇನ್ನ್ಯಾರೋ ಹೆಣ್ಣಿನ ಜೊತೆ ಪ್ರೇಮವಿದೆ ಮತ್ತು ಪ್ರೇಮವೆಂದರೆ ಏನು ಎಂದು ತಿಳಿದುಕೊಳ್ಳುತ್ತಾನೆ. ಅವನ ಅಮ್ಮ ಎಂದಿನಂತೆ ರಾತ್ರಿ ರಾಮಾಯಣದ ಕತೆ ಹೇಳುವಾಗ, “ದಶರಥನಿಗೆ ಹಿರಿ ಮಗನ ಮ್ಯಾಲೆ ಭಾಳ ಪ್ರೇಮ” ಎಂದಿದ್ದು ಕೇಳಿ, ತನಗೀಗ ಪ್ರೇಮವೆಂದರೇನು ಎಂದು ಅರ್ಥವಾಗಿದೆ ಎನ್ನುತ್ತಾ, ತನಗೆ ಗೆಳೆಯನಿಂದ ಗೊತ್ತಾದ ಪ್ರೇಮದ ಕುರಿತು ಹೇಳುತ್ತಾನೆ. ತಾಯಿ ಅವಕ್ಕಾಗುತ್ತಾಳೆ.</span><br />
<br /><span style="font-size: medium;">
ಇದೇ ವಿಷಯದಲ್ಲಿ ತಂದೆ ತಾಯಿಯ ನಡುವೆ ಜಗಳವಾಗಿ, ತಂದೆ ತಾಯಿಯ ಮೇಲೆ ಕೈ ಎತ್ತಲು ಹೋದಾಗ ನಡುವೆ ಹೋಗಿ ಅಪ್ಪನಿಂದ ಪೆಟ್ಟು ತಿಂದು, ಮುಂದಿನ ಪೆಟ್ಟುಗಳಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿದ ಗುಂಡಾಚಾರಿ ಮತ್ತೆ ಮನೆಗೆ ಮರಳುವುದೇ ಇಲ್ಲ! ಮಗನ ಅಭ್ಯುದಯವನ್ನೇ ಜೀವನದ ಉದ್ದೇಶವಾಗಿಸಿಕೊಂಡಿದ್ದ ಗುಂಡಾಚಾರಿಯ ತಾಯಿಯ ಪಾತ್ರ ಇಲ್ಲಿಗೆ ಕೊನೆಗೊಳ್ಳುತ್ತದೆ.</span><br />
<br />
<br />
<br />
<b><span style="font-size: large;">ತುಳಸಾಬಾಯಿ.</span></b><br />
<br /><span style="font-size: medium;">
ದೊಡ್ಡೂರ ದೇಶಪಾಂಡೆಯವರ ಹೆಂಡತಿ ತುಳಸಾಬಾಯಿ. ಮನೆಬಿಟ್ಟು ಓಡಿ ಬಂದ ಗುಂಡಾಚಾರಿಗೆ, ತಮ್ಮ ಎತ್ತಿನ ಗಾಡಿಯಿಂದ ಅಕಸ್ಮಾತ್ತಾಗಿ ಕೆಳಗೆ ಬಿದ್ದಿದ್ದ ಆಭರಣದ ಪೆಟ್ಟಿಗೆಯನ್ನು ತಂದು ಕೊಟ್ಟ, ತಾನು ಅನಾಥ ಎಂದು ಹೇಳಿಕೊಂಡ ಹುಡುಗ ಗುಂಡಾಚಾರಿಯನ್ನು ಮನೆಯಲ್ಲಿಟ್ಟುಕೊಂಡು ಸಾಕಲು ಗಂಡನೆದುರು ಇಲ್ಲವೆನ್ನಲಾಗದೇ ಒತ್ತಾಯದಿಂದ ಒಪ್ಪಿಕೊಂಡಾಕೆ. ಮಾತು ಬಲ್ಲಾಕೆ. ಅಷ್ಟೇನು ವಾತ್ಸಲ್ಯಮಯಿ ಅಲ್ಲದ ಈಕೆ ಇರಲು ಮಾತ್ರ ಜಾಗ ಕೊಡೋಣ, ಊಟಕ್ಕಾದರೆ ಅವನು ನಾಲ್ಕಾರು ಮನೆ ‘ಮಧುಕರಿ’ಗೆ, ‘ವಾರದನ್ನ’ಕ್ಕೆ ಹೋಗಲಿ ಎನ್ನುತ್ತಾಳೆ. ಆದರೆ ಇರಲು ಆಶ್ರಯ ಕೊಟ್ಟಿದ್ದಕ್ಕೆ ಪ್ರತಿಯಾಗಿ ಗುಂಡಾಚಾರಿಯಿಂದ ಮನೆಗೆಲಸಗಳನ್ನು ಮಾಡಿಸಿಕೊಳ್ಳುತ್ತಿರುತ್ತಾಳೆ. ತಾವು ಗುಂಡಾಚಾರಿಗೆ ತೋರುತ್ತಿರುವ ಔದಾರ್ಯವನ್ನು ಊರ ಹೆಣ್ಣುಮಕ್ಕಳ ಮುಂದೆಲ್ಲ ಬಣ್ಣಿಸಿ ಹೇಳಿಕೊಳ್ಳುವ ತುಳಸಾಬಾಯಿ ದೊಡ್ಡಸ್ಥಿಕೆಯ ಬಡಿವಾರದ ಹೆಣ್ಣು. ತಾನು ತನ್ನ ಸಂಸಾರ ಅಷ್ಟನ್ನೇ ಯೋಚಿಸುವವಳು. ಮಗಳು ಕಮಲೆಯ ವಿಷಯ ಬಂದಾಗ ಮಾತ್ರ ಪಕ್ಕಾ ಮಾತೃಹೃದಯ. ಗಂಡಸರು ವಿದ್ಯೆ ಕಲಿಯುವುದೇ ಹೆಚ್ಚಿನ ವಿಷಯವಾಗಿದ್ದ ಆ ಕಾಲದಲ್ಲಿ, ಮಗಳ ವಿದ್ಯೆಗಾಗಿ ಮನೆ ಪಾಠಕ್ಕೆ ಮೇಷ್ಟ್ರನ್ನು ನಿಯಮಿಸಲು ಸಮ್ಮತಿಸುವಂಥಾಕೆ. ಮನೆಯಲ್ಲಿರುವ ಮಗಳ ಓರಿಗೆಯ ಗುಂಡಾಚಾರಿಯ ಜೊತೆ ಮಗಳು ಹೆಚ್ಚು ಸಲುಗೆ ಬೆಳಸಿದರೆ ವಯೋಸಹಜವಾಗಿ ಅವರಿಬ್ಬರ ನಡುವೆ ಎಲ್ಲಿ ಪ್ರೀತಿ ಮೂಡಿಬಿಡುವಿದೋ, ಏನಾದರೂ ಎಡವಟ್ಟಾಗುವುದೋ ಎಂದು ಮಾತೃಸಹಜ ಎಚ್ಚರಿಕೆಯಲ್ಲಿರುವಂಥ ಹೆಣ್ಣು ಪಾತ್ರ ತುಳಸಾಬಾಯಿಯದು.</span><br />
<br />
<br />
<br />
<b><span style="font-size: large;">ಕಮಲೆ.</span></b><br />
<br /><span style="font-size: medium;">
ಮನೆ ಬಿಟ್ಟು ಓಡಿ ಬಂದ ಗುಂಡಾಚಾರಿಗೆ ಶುರುವಿನಲ್ಲಿ ಆಶ್ರಯವಿತ್ತ ದೊಡ್ಡೂರ ದೇಶಪಾಂಡೆ ದಂಪತಿಗಳ ಮಗಳು ಕಮಲಾ. ವಿದ್ಯೆ ಬುದ್ದಿಯಲ್ಲಿ ಚುರುಕಾದ, ವಾತ್ಸಲ್ಯಮಯಿ ಹುಡುಗಿ. ತಮ್ಮ ಮನೆಯಲ್ಲಿದ್ದುಕೊಂಡು ಓದುತ್ತಿರುವ ಗುಂಡಣ್ಣನ ಜೊತೆಗೆ ವಿನೋದವಾಗಿ, ಕೀಟಲೆ ಮಾಡಿಕೊಂಡು ಸ್ನೇಹದಿಂದ ಇದ್ದರೂ ಸ್ನೇಹ ಕೆಡದಂತೆ ನಡೆದುಕೊಳ್ಳುವ ಹುಡುಗಿ. ಗುಂಡಣ್ಣನೂ ಅಷ್ಟೇ, ಮಿತಿಮೀರಿ ಎಂದೂ ಆಕೆಯ ಜೊತೆ ನಡೆದುಕೊಳ್ಳುವುದಿಲ್ಲ. ಓದಿನಲ್ಲಿ ಚುರುಕಾಗಿದ್ದ, ಬೆಳ್ಳಗೆ ನೋಡಲು ಲಕ್ಷಣವಾಗಿದ್ದ ಗುಂಡಾಚಾರಿಗೇ ಕಮಲೆಯನ್ನು ದೇಶಪಾಂಡೆಯವರು ಮದುವೆ ಮಾಡಿಕೊಡಬಹುದು, ತುಂಬಾ ಯೋಗ್ಯವಾದ ಜೋಡಿ ಎಂದು ಊರ ಜನ ಊಹೆ ಮಾಡಿಕೊಳ್ಳುತ್ತಾರೆ. ಆದರೆ ಹಾಗಾಗುವುದಿಲ್ಲ.</span><br />
<br />
<br />
<br />
<b><span style="font-size: large;">‘ವಾರದ ಮನೆ’ಯ ಯಜಮಾನಿ.</span></b><br />
<br /><span style="font-size: medium;">
ಗುಂಡಣ್ಣ (ಗುಂಡಾಚಾರಿ)ನಿಗೆ ವಾರದನ್ನ ಬಡಿಸುವ ಮನೆಗಳಲ್ಲಿ ಈಕೆಯ ಮನೆಯೂ ಒಂದು. ಮಕ್ಕಳಿಲ್ಲದಾಕೆ. ಒಮ್ಮೆ ಗುಂಡಣ್ಣನ್ನು ವಿಶೇಷವಾಗಿ ಸಂಜೆ ಹೊತ್ತಲ್ಲಿ ಊಟಕ್ಕೆ ಕರೆಯುತ್ತಾಳೆ. ಗುಂಡಣ್ಣನಿಗೆ ಆಶ್ಚರ್ಯವಾದರೂ ಮಕ್ಕಳಿಲ್ಲದವರು ಅನ್ಯ ಮಕ್ಕಳಿಗೆ ವಿಶೇಷ ಪ್ರೀತಿಯಿಂದ ಊಟ ಬಡಿಸಿದರೆ ಮಕ್ಕಳಾಗುತ್ತವೆ ಅನ್ನುವ ನಂಬಿಕೆ ಹಳ್ಳಿಯಲ್ಲಿರುವುದರಿಂದ ತನ್ನನ್ನು ಆಕೆ ಸಂಜೆ ಹೊತ್ತಲ್ಲಿ ಊಟಕ್ಕೆ ಕರೆದಿರಬಹುದು ಎಂದುಕೊಂಡು ಅವಳ ಮನೆಗೆ ಹೋಗುತ್ತಾನೆ. ಅಲ್ಲಿ ಹೋದ ಮೇಲೆ, ಅವಳ ಗಂಡನ ಗೈರು ಹಾಜರಿಯಲ್ಲಿ ಸುಗ್ರಾಸ ಭೋಜನವೂ ವಿಶೇಷ ಪ್ರೀತಿಯಿಂದಲೇ ಬಡಿಸಲ್ಪಡುತ್ತದೆ. ನಂತರ ಮಾತ್ರ ಗುಂಡಣ್ಣನನ್ನು ಮನೆಯಾಚೆ ಹೋಗಗೊಡದೇ, ತಪ್ಪಿಸಿಕೊಂಡು ಹೋಗಲು ನೋಡಿದರೆ ಕೂಗಿ ಗಲಾಟೆ ಮಾಡುವುದಾಗಿ ಹೆದರಿಸಿ, ಹದಿನಾಲ್ಕರ ಹರೆಯದ ಗುಂಡಣ್ಣನ ಮೇಲೆ ಅತ್ಯಾಚಾರವೆಸಗುತ್ತಾಳೆ ಆ ‘ವಾರದ ಮನೆ’ಯ ಯಜಮಾನಿ. ಇದನ್ನು ಓದಿದಾಗ ಆ ಹೆಣ್ಣಿನ ಬಗ್ಗೆ ಅದೆಂಥ ತಿರಸ್ಕಾರ ಮೂಡುತ್ತದೆಂದರೆ, ಹೆಣ್ಣೆಂದರೆ ವಾತ್ಸಲ್ಯಮಯಿ, ಮಾತೃಹೃದಯಿ, ಘಟವಾಣಿ, ಕೆಟ್ಟ ಸ್ವಭಾವದ ಅತ್ತೆ, ಕೆಟ್ಟ ಸ್ವಭಾವದ ಸೊಸೆ, ಎಂದಷ್ಟೇ ಕೇಳಿ ಕೇಳಿ ಓದಿ ಅಭ್ಯಾಸವಾದ ಮನಸಲ್ಲಿ ಹೊಲಸು ತುಳಿದಂಥ ಹೇಸಿಗೆ, ತಿರಸ್ಕಾರ ಮೂಡುತ್ತದೆ. ಇಂಥ ಹೆಂಗಸರೂ ಇರುತ್ತಾರೆ ಎನ್ನುವುದೂ ಅಲ್ಲಗಳೆಯಲಾಗದ ವಾಸ್ತವದ ಒಂದು ಮುಖ. ಇದರಿಂದ ಆಘಾತಗೊಂಡ ಗುಂಡಣ್ಣ ಆಶ್ರಯ ಕೊಟ್ಟ ದೇಶಪಾಂಡೆಯವರ ಮನೆಗೂ ಹೋಗದೆ, ಆ ಊರನ್ನೇ ತೊರೆಯುತ್ತಾನೆ.</span><br />
<br />
<br />
<br />
<b><span style="font-size: large;">ಬ್ರಾಹ್ಮಣತಿ.</span></b><br />
<br /><span style="font-size: medium;">
ವಾರದ ಮನೆಯ ಯಜಮಾನಿಯ ಮನೆಯಿಂದ ಓಡುತ್ತಲೇ ಊರು ಬಿಟ್ಟ ಗುಂಡಣ್ಣ ಮುಂದೊಂದೂರಲ್ಲಿ ಆಯಾಸವಾಗಿ ಎಚ್ಚರತಪ್ಪಿ ಬೀಳುತ್ತಾನೆ. ಎಚ್ಚರಗೊಂಡ ಮೇಲೆ ವಿಪರೀತ ಬಾಯಾರಿದ ಗುಂಡಣ್ಣನ್ನು ಮನೆಯೊಳಗೆ ಕರೆದು ಉಪಚರಿಸುವವಳೇ ಈ ಬ್ರಾಹ್ಮಣತಿ. ಭಾರತದ ಧ್ಯೇಯವಾಕ್ಯವಾದ ‘ಅತಿಥಿ ದೇವೋಭವ’ವನ್ನು ಅಕ್ಷರಶಃ ಪಾಲಿಸುವ, ಮಕ್ಕಳಿಲ್ಲದ ಬಡ ವೈದ್ಯ ಬ್ರಾಹ್ಮಣ ದಂಪತಿಗಳು. ಪರಿಚಿತನಲ್ಲದ, ನೆಂಟರವನಲ್ಲದ ಗುಂಡಣ್ಣನನ್ನು ತಮ್ಮ ಮನೆಯಲ್ಲಿರುವ ತನಕ ತಿಂಗಳುಗಟ್ಟಲೆ ಮಗನಂತೇ ನೋಡಿಕೊಂಡ ನಿಸ್ವಾರ್ಥ ಮಮತಾಮಯಿ ಈಕೆ. ತಾನಾಗಿಯೇ ಹೊರಡುವೆನೆಂದು ಗುಂಡಾಚಾರಿ ಹೇಳುವ ತನಕ ಅದನ್ನು ಕೇಳುವ ಗೋಜಿಗೇ ಹೋಗದಂಥ ವಿಶಾಲ ಮನಸಿನವರು ಈ ದಂಪತಿಗಳು. ಇಲ್ಲಿ ಮಾತ್ರ ಗಂಡನನ್ನು ಹೊರತುಪಡಿಸಿ ಬರೀ ಹೆಂಡತಿಯ ಕುರಿತು ಹೇಳಲು ನನಗೆ ಸಾಧ್ಯವಾಗುತ್ತಲೇ ಇಲ್ಲ! ಜೀವನದಲ್ಲಿ ಹಾಸುಕೊಕ್ಕಾಗಿಸಿಕೊಂಡ ಆದರ್ಶದ ಅಷ್ಟೊಂದು ಸಾಮ್ಯತೆ ಇಬ್ಬರಲ್ಲೂ ಕಾಣುವುದು ಇದಕ್ಕೆ ಕಾರಣವಾಗಿರಬಹುದು. ಇವರಿಬ್ಬರಲ್ಲಿ ತಂದೆ ತಾಯಿಯನ್ನು ಕಾಣುವ ಗುಂಡಾಚಾರಿ ಇವರಿಬ್ಬರ ವಾತ್ಸಲ್ಯವನ್ನು ದುರುಪಯೋಗಪಡಿಸಿಕೊಳ್ಳಲು ಮನಸು ಮಾಡದೇ, ಅವರಿಗೆ ಇನ್ನು ಹೆಚ್ಚು ದಿನ ಹೊರೆಯಾಗುವುದು ಸರಿಯಲ್ಲ ಎನಿಸಿ ಅಲ್ಲಿಂದ ಹೊರಟು ನಿಲ್ಲುತ್ತಾನೆ. ವೈದ್ಯ ಬ್ರಾಹ್ಮಣ ತಾನೇ ತೆಗೆದ ನೂಲಿನಿಂದ ಮಾಡಿದ, ಅಗಲವಾದ ಜೋಡು ಪಂಚೆಗಳನ್ನು ಉಡುಗೊರೆಯಾಗಿ, ದಕ್ಷಿಣೆಯಾಗಿ ಎಂಟಾಣೆಯನ್ನು ಗುಂಡಾಚಾರಿಗೆ ನೀಡಿದರೆ, ಆ ತಾಯಿ ದಾರಿಗೆ ಬುತ್ತಿ ತಯಾರಿಸಿ, ದಾರಿ ಮದ್ಯದಲ್ಲಿ ಬಾಯಾರಿಕೆಗೆ ಆಸರೆಯಾಗಲೆಂದು, ಹಸನಾಗಿ ಬೆಳಗಿದ ಹಿತ್ತಾಳೆ ತಿರುಗುಣಿ ತಂಬಿಗೆಯಲ್ಲಿ ನೀರು ತುಂಬಿಕೊಡುತ್ತಾಳೆ. ಮುಂದೆ ಯುದ್ಧದ ನಂತರ ಎಲ್ಲೆಡೆ ಹರಡಿದ ಇನ್ಫ್ಲೂಯೆಂಜಾ ಈ ಸಾದ್ವಿಯನ್ನು ಬಲಿ ತೆಗೆದುಕೊಳ್ಳುತ್ತದೆ…</span><br />
<br /><span style="font-size: medium;">
ಈ ದಂಪತಿಗಳ ಬಗ್ಗೆ ಓದುವಾಗ ಮನಸಲಿ ಅದೆಂಥಾ ಧನ್ಯತೆ ತುಂಬಿಕೊಳ್ಳುತ್ತದೆಂದರೆ, ಇಂಥವರ ಸಂತತಿ ಸಾವಿರವಾಗಲಿ ಎಂದು ಮನತುಂಬಿ ಹಾರೈಸುವಷ್ಟು!</span><br />
<br />
<br />
<br />
<b style="font-size: large;">ಚಾಹಾದ ಅಂಗಡಿಯವನ ಹೆಂಡತಿ.</b><br />
<br /><span style="font-size: medium;">
ಜಂಭದ ಹೆಂಗಸು. ತನ್ನ ಕೈಕೆಳಗೆ ಕೆಲಸ ಮಾಡುವ ಹುಡುಗರನ್ನು ಮುಲಾಜಿಲ್ಲದೆ ಹೊಡೆದು ಬಡೆದು ಮಾಡುವ ಕಟು ಹೆಂಗಸು. ವೈದ್ಯ ಬ್ರಾಹ್ಮಣರಿಂದ ಬೀಳ್ಕೊಂಡು, ಪೇಟೆಯೂರಿಗೆ ಬರುವ ಗುಂಡಾಚಾರಿ, ಊಟಕ್ಕೆಂದು ಸಣ್ಣ ಚಹಾದ ಅಂಗಡಿ ಹೊಕ್ಕವನು, ಊಟದ ಸಂಪೂರ್ಣ ಹಣವನ್ನು ನೀಡಲಾಗದೆ ಅಲ್ಲಿಯೇ ಕೆಲಸ ಮಾಡುತ್ತಾ ಚಹಾದ ಅಂಗಡಿಯ ಸಾವ್ಕಾರನ ನಂಬಿಕೆ ಗಳಿಸಿಕೊಂಡವನು, ಮುಂದೆ ಸಾವ್ಕಾರ ಈ ಹೆಣ್ಣನ್ನು ಮದುವೆಯಾಗಿ ಕರೆತಂದು, ಅವಳನ್ನು ಹೋಟೆಲ್ಲಿನ ಅಡುಗೆ ಮನೆಯನ್ನು ನೋಡಿಕೊಳ್ಳಲು ಬಿಡುತ್ತಾನೆ. ಇವಳ ದೌರ್ಜನ್ಯಕ್ಕೆ ಉಪಾಯವೆಂಬಂತೆ ಗುಂಡಾಚಾರಿ ಇವಳನ್ನು ಒಲಿಸಿಕೊಂಡುಬಿಡುತ್ತಾನೆ! ಕಾಲಾನಂತರ ಸಾವ್ಕಾರನಿಗೆ ವಿಷಯ ತಿಳಿದು ಗುಂಡಾಚಾರಿಯನ್ನು ಕೆಲಸದಿಂದ ತೆಗೆದು ಹಾಕುತ್ತಾನೆ.</span><br />
<br />
<br />
<br />
<b style="font-size: large;">ಸುಗುಣಾಬಾಯಿ.</b><br />
<br /><span style="font-size: medium;">
ಈಕೆ ಖಾನಾವಳಿಯೊಂದರ ಒಡತಿ. ಒಂಟಿ ಹೆಂಗಸು. ಗಂಡಸರ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು, ಕೊರಳಲ್ಲಿ ತಾಳಿ ಧರಿಸಿ, ತನ್ನ ಗಂಡ ಸೈನ್ಯದಲ್ಲಿದ್ದಾನೆ, ಸಮುದ್ರದಾಚೆ ಯುದ್ಧಕ್ಕೆ ಹೋಗಿದ್ದಾನೆ, ಅವನು ಮರಳಿ ಬರುವವರೆಗೂ ತಾನು ಹೊತ್ತು ಕಳೆಯಲು ಖಾನಾವಳಿ ತೆರೆದು, ಸೈನ್ಯಕ್ಕೆ ಸೇರುವವರಿಗೆ ಈ ಮೂಲಕ ಸಹಾಯ ಮಾಡುವ ಸತ್ಕಾರ್ಯವನ್ನು ಮಾಡುತ್ತಿರುವೆಂದು ತನ್ನ ಖಾನಾವಳಿಗೆ ಊಟಕ್ಕೆ ಬರುವ ಪ್ರತಿಯೊಬ್ಬ ಗಿರಾಕಿಯ ಬಳಿಯೂ ಹೇಳಿಕೊಳ್ಳುತ್ತಿರುತ್ತಾಳೆ. ನಮ್ಮ ಸಮಾಜದಲ್ಲಿ ಹೆಣ್ಣು ಒಂಟಿಯಾಗಿ ಬದುಕಬೇಕೆಂದರೆ ಎಷ್ಟೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎನ್ನುವುದಕ್ಕೆ ಸುಗುಣಾಬಾಯಿಯ ಈ ತಂತ್ರವೇ ಸಾಕ್ಷಿ.</span><br />
<br /><span style="font-size: medium;">
ಚಹಾದ ಅಂಗಡಿಯ ಕೆಲಸ ಕೆಲಸ ಕಳೆದುಕೊಂಡು ಕೆಲಸ ಅರಸುತ್ತಾ ಬರುವ ಗುಂಡಾಚಾರಿಗೆ ಸುಗುಣಾಬಾಯಿಯ ಖಾನಾವಳಿ ಕಣ್ಣಿಗೆ ಬೀಳುತ್ತದೆ. ಗುಂಡಾಚಾರಿ ಗಂಡಸೆಂಬ ಕಾರಣಕ್ಕೆ ಕೆಲಸ ಕೊಡಲು ನಿರಾಕರಿಸುವ ಸುಗುಣಾಬಾಯಿಯನ್ನು ಗುಂಡಾಚಾರಿ ಇನ್ನಿಲ್ಲದಂತೆ ಬೇಡಿಕೊಂಡು ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ನಿಯತ್ತಾಗಿ ಕೆಲಸ ಮಾಡಿ ಅವಳ ನಂಬಿಕೆ ಗಳಿಸುತ್ತಾನೆ. ಮುಂದೆ ಅವರಿಬ್ಬರ ಸಖ್ಯವೂ ಬೆಳೆಯುತ್ತದೆ. ನಿಜವಾಗಿಯೂ ಆಕೆಗೊಬ್ಬ ಗಂಡ ಇದ್ದಾನೋ ಇಲ್ಲವೋ ಎನ್ನುವುದು ಯಾರಿಗೂ ತಿಳಿಯುದೇ ಇಲ್ಲ. ಯುದ್ಧದ ನಂತರ ಎಲ್ಲೆಡೆ ಹರಡಿದ ಇನ್ಫ್ಲೂಯೆಂಜಾ ರೋಗ ಸುಗುಣಾಬಾಯಿಯನ್ನು ಬಲಿ ತೆಗೆದುಕೊಳ್ಳುತ್ತದೆ. ಸಾಯುವ ಮೊದಲು, ತನ್ನೆಲ್ಲ ಆಸ್ತಿ ಗುಂಡಾಚಾರಿಗೆ ಸೇರಬೇಕು ಎಂದು ಸ್ವಸಂತೋಷದಿಂದ ಬರೆದಿರುವುದಾಗಿ ಸಂದೇಶಪತ್ರ ಬಿಟ್ಟಿರುತ್ತಾಳೆ. ಅದರಿಂದಾಗಿ ಗಂಡನ ಕುರಿತು ಆಕೆ ಕತೆ ಕಟ್ಟಿದ್ದು ಗೊತ್ತಾಗುತ್ತದೆ.</span><br />
<br />
<br />
<br />
<br />
<b style="font-size: large;">ಸುಂದರಕ್ಕ.</b><br />
<br /><span style="font-size: medium;">
ಗುಂಡಾಚಾರಿಯನ್ನು ಮನೆಯಲ್ಲಿಟ್ಟುಕೊಂಡು ಉಪಚರಿಸಿ, ಉಪಕರಿಸಿದ್ದ ವೈದ್ಯ ದಂಪತಿಯ ಸಂಬಂಧಿ. ಆ ಬ್ರಾಹ್ಮಣತಿಯ ತಂಗಿಯ ಮಗಳು. ಸುಂದರಕ್ಕ ಏಳೆಂಟು ವರ್ಷದವಳಾಗಿದ್ದಾಗಲೇ ಅವಳ ತಾಯಿ ಖಾಯಿಲೆಯಿಂದಾಗಿ ತೀರಿಕೊಂಡು, ತಂದೆ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾನೆ. ಆಕೆ ಸುಂದರಕ್ಕನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ತಾಯ ಮಮತೆಯ ಹಂಬಲದ ಸುಂದರಕ್ಕನಿಗೆ, ತನ್ನ ಮದುವೆಯಾದ ಮೇಲೆ ತನ್ನ ಮಕ್ಕಳನ್ನು ತುಂಬಾ ಅಕ್ಕರೆಯಿಂದ ಬೆಳೆಸಬೇಕು ಎಂಬ ಆಕಾಂಕ್ಷೆ ಬಲವಾಗುತ್ತದೆ. ಈ ಮಗುವಿನ ಕಷ್ಟ ನೋಡಲಾಗದೆ ವೈದ್ಯ ದಂಪತಿಗಳು ತಮ್ಮ ಮನೆಯಲ್ಲಿ ತಂದಿಟ್ಟುಕೊಳ್ಳುತ್ತಾರೆ. ಸುಂದರಕ್ಕನ ದೊಡ್ಡಮ್ಮನೂ ತೀರಿಕೊಂಡ ಮೇಲೆ, ಹತ್ತು ವರುಷದ ಸುಂದರಕ್ಕನನ್ನು ಕರೆದುಕೊಂಡು ಊರು ತೊರೆದ ವೈದ್ಯ ಬ್ರಾಹ್ಮಣ ಪೇಟೆಯೂರಿಗೆ ಬರುತ್ತಾನೆ. ಅಲ್ಲಿ ಗುಂಡಾಚಾರಿ ಸಿಕ್ಕು, ಎಲ್ಲ ವಿಚಾರವೂ ತಿಳಿದ ನಂತರ, ವೈದ್ಯ ದಂಪತಿಗಳ ಋಣ ತೀರಿಸಲು ಇದೊಂದು ಅವಕಾಶವೆಂದು ಭಾವಿಸಿದ ಗುಂಡಾಚಾರಿ, ಸುಂದರಕ್ಕನನ್ನು ಮದುವೆಯಾಗುವುದಾಗಿ ಹೇಳುತ್ತಾನೆ. ಗುಂಡಾಚಾರಿಯ ಬಗ್ಗೆ ಸದಭಿಪ್ರಾಯವಿದ್ದ ವೈದ್ಯ, ಗುಂಡಾಚಾರಿ ಮತ್ತು ಸುಂದರಕ್ಕನ ನಡುವೆ ವಯಸ್ಸಿನ ಅಂತರವಿದ್ದರೂ ಸಂತೋಷದಿಂದ ಧಾರೆ ಎರೆದುಕೊಡುತ್ತಾನೆ.</span><br />
<br /><span style="font-size: medium;">
ಮದುವೆಯಾದರೂ ಗಂಡನ ದೃಷಿಯಲ್ಲಿ ಸುಂದರಕ್ಕ ಇನ್ನೂ ಆಟವಾಡಿಕೊಂಡಿರಬೇಕಾದ ಮಗು. ಅವಳನ್ನು ಹಾಗೆಯೇ ನೋಡಿಕೊಳ್ಳುತ್ತಾನೆ. ತನ್ನ ಬಾಲ್ಯವನ್ನು ಮತ್ತೆ ಸಂಭ್ರಮಿಸುತ್ತಾಳೆ ಸುಂದರಕ್ಕ. ಹರೆಯಕ್ಕೆ ಕಾಲಿಡುತ್ತಿರುವಂತೆಯೆ, ಸುಂದರಕ್ಕನ ಮಕ್ಕಳಿಗೆ ಅಕ್ಕರೆ ಉಣಬಡಿಸುವ ಕನಸು ಮತ್ತಷ್ಟು ಚಿಗುರೊಡೆಯುತ್ತದೆ. ಬಾಲಕಿ ಸುಂದರಕ್ಕ ಗೃಹಿಣಿಯಾಗುತ್ತಾಳೆ. ಆದರೆ ವಿಧಿ ಇಲ್ಲೂ ಅವಳ ಜೊತೆ ಆಟವಾಡುತ್ತದೆ. ಒಡಲಲ್ಲಿ ಮೂಡುವ ಮಕ್ಕಳ್ಯಾವೂ ಮುದ್ದಿಸಲು ದಕ್ಕುವುದೇ ಇಲ್ಲ! ಸುಂದರಕ್ಕನಿಗೆ ಚಿಕಿತ್ಸೆ ಕೊಡಿಸಲೆಂದು ಡಾಕ್ಟರಲ್ಲಿಗೆ ಕರೆದುಕೊಂಡು ಹೋದ ಗುಂಡಾಚಾರಿ ಅವಳಲ್ಲಿ ಯಾವ ದೋಷವೂ ಇಲ್ಲವೆಂದು ತಿಳಿದ ಮೇಲೆ ತಾನು ತಪಾಸಣೆಗೊಳಪಡಲು ಮುಂದಾಗುತ್ತಾನೆ. ತಪಾಸಣೆಯಿಂದ ತನಗೆ ಗುಪ್ತ ಖಾಯಿಲೆ ಇರುವುದು ಗೊತ್ತಾಗಿ, ಅದಕ್ಕೆ ಚಿಕಿತ್ಸೆ ಪಡೆದುಕೊಂಡ ಮೇಲೆ, ಸುಂದರಕ್ಕನ ಆಗಿನ ಮಗು ದುರ್ಬಲವಾಗಿದ್ದರೂ ಬದುಕುಳಿಯುತ್ತದೆ. ಎಂಟು ಮಕ್ಕಳಲ್ಲಿ ಉಳಿದ ಈ ಒಬ್ಬ ಮಗನ ಮೇಲೆ ತನ್ನೆಲ್ಲ ಅಕ್ಕರೆಯನ್ನು ಸುರಿದುಬಿಡುತ್ತಾಳೆ. ಸಾಮರಸ್ಯದ ದಾಂಪತ್ಯ ಹೊಂದಿದ ಸಂತೃಪ್ತ ಹೆಣ್ಣು ಸುಂದರಕ್ಕ. </span><br />
<br />
<br />
<b>-<span style="color: #2b00fe;"> ಜಯಲಕ್ಷ್ಮೀ ಪಾಟೀಲ್.</span></b><br />
<div>
*******************************************************************************</div>
<div>
<br />
<div>
<span style="color: #0b5394;">(* ೨೦೧೩ರಲ್ಲಿ ಬರೆದ ಲೇಖನವಿದು. ಏನೇನೋ ಕಾರಣಗಳಿಂದಾಗಿ ವೆಂಕಟಸುಬ್ಬಯ್ಯನವರಿಗೆ ಪುಸ್ತಕವನ್ನು ಇನ್ನೂ ಹೊರತರಲಾಗಿಲ್ಲ. ಇದನ್ನು ಮತ್ತೆ ಓದಿದಾಗ ಅರೆ, ಹೀಗಲ್ಲದೆ ನಾನು ಬೇರೆ ರೀತಿಯಲ್ಲಿ ಬರೆಯಬಹುದಿತ್ತು ಅನಿಸಿ ಆ ಕಾದಂಬರಿಗಳ ಸಂಕಲನವನ್ನು ಕಳುಹಿಸಿ ಕೊಡುವಂತೆ ವೆಂಕಟಸುಬ್ಬಯ್ಯನವರಲ್ಲಿ ಕೋರಿಕೊಂಡೆ. ಅವರೂ ಒಪ್ಪಿಕೊಂಡರಾದರೂ ಅವರದೇ ಆದ ಅನಿವಾರ್ಯತೆಗಳು, ಅನಾರೋಗ್ಯದಿಂದಾಗಿ ಪುಸ್ತಕವನ್ನು ನನಗೆ ಕಳುಹಿಸಿ ಕೊಡಲಾಗಲಿಲ್ಲ... ಹೀಗಾಗಿ ಹುಂಬತನದಿಂದ ಅಂದಾಜಿನಲ್ಲಿ ಈ ಬರಹವನ್ನು ಬದಲಾಯಿಸುವ ಬದಲಿಗೆ ಸುಮ್ಮನಿರುವುದು ಲೇಸು ಅನಿಸಿತು. ಅಕಸ್ಮಾತ್ ಮುಂದೊಮ್ಮೆ ನನ್ನ ಕೈಗೆ ಆ ಸಂಕಲನ ಅಥವಾ ಈ ಎರಡು ಕಾದಂಬರಿಗಳು ಸಿಕ್ಕಿದ್ದೇ ಆದರೆ ಖಂಡಿತ ಈ ಲೇಖನವನ್ನು ತಿದ್ದುವ ಆಸೆ ಇದೆ ನನಗೆ. </span></div>
<div>
<span style="color: #0b5394;">ಈ ಮೂಲಕ ಶ್ರೀರಂಗರ ಕಾದಂಬರಿಗಳ ಓದಿಗೆ ಕಾರಣರಾದ ಡಾ. ವಿಜಯಾ (ವಿಜಯಮ್ಮ) ಅವರಿಗೆ ನನ್ನ ಮನದಾಳದ ಕೃತಜ್ಞತೆಗಳು.)</span></div>
</div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com2tag:blogger.com,1999:blog-4925720126176198020.post-49787321357993594772016-11-08T11:05:00.000+05:302016-11-08T11:06:14.356+05:30 ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಹೋದಂತೆ<div dir="ltr" style="text-align: left;" trbidi="on">
<div class="separator" style="clear: both; text-align: center;">
ಇದು ಇಂದಿನ ಪ್ರಜಾವಾಣಿಯ ‘ಮೆಟ್ರೊ’ ಪುರವಣಿಯಲ್ಲಿನ, ಜನದನಿಯ ಕಿರುಚಿತ್ರದ ಬಗೆಗಿನ ಬರಹವಾದರೂ ನನ್ನ ಒಡಲ ಕುಡಿ ಅಮೋಲ್ ಪಾಟೀಲ್’ ಸಹ ಬರಹದಲ್ಲಿ ಒಡಮೂಡಿದ್ದು ಕಂಡು ಸಂತಸದ ಕಡಲು ಈ ಮಡಿಲು. ಹೀಗೆ ನಿನ್ನ ಕೆಲಸಗಳಿಂದಲೆ ಗುರುತಿಸುವಂತೆ ಎತ್ತರೆತ್ತರಕ್ಕೆ ಬೆಳೆ ಕೂಸೆ.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh5IQflCaeg5XZ0O7ObfbkTQGSyI3tEQ68JyG4HhtTPNQyaX8f1GLy0eDE3dfk9-iNWeLi-btHmMpQW5pzoHJ6IQ72Bns0wQId1ifKOxZUGP8CI8gc049eovw39lS9PVt7uCIcR1MEUy_Ig/s1600/14938311_948737765231634_6079265784393141745_n.jpg" imageanchor="1" style="margin-left: 1em; margin-right: 1em;"><img border="0" height="640" src="https://blogger.googleusercontent.com/img/b/R29vZ2xl/AVvXsEh5IQflCaeg5XZ0O7ObfbkTQGSyI3tEQ68JyG4HhtTPNQyaX8f1GLy0eDE3dfk9-iNWeLi-btHmMpQW5pzoHJ6IQ72Bns0wQId1ifKOxZUGP8CI8gc049eovw39lS9PVt7uCIcR1MEUy_Ig/s640/14938311_948737765231634_6079265784393141745_n.jpg" width="632" /></a></div>
<br /></div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com0tag:blogger.com,1999:blog-4925720126176198020.post-14593587035211373592016-11-04T18:47:00.000+05:302016-11-04T18:47:53.106+05:30ಹೃಸ್ವಕತೆ - ಕನ್ನಡಪ್ರಭ<div dir="ltr" style="text-align: left;" trbidi="on">
http://www.kannadaprabha.com/rajyotsava/articles/tiny-tales-in-kannada/262670.html#.VjnrS7vWsd8.facebook<br />
<br />
<div class="div_friend_article_headline" style="background-color: #ce9e0e; float: left; font-family: Tunga, Arial; font-size: 16px; padding: 10px 0px 0px; width: 657px;">
<h1 style="color: #663300; font-family: Tunga; font-size: 1.9em; font-stretch: normal; line-height: 40px; margin: 0px; padding: 0px;">
<span id="ctl00_ContentPlaceHolder1_lblStoryHeadline1">ಹೃಸ್ವಕತೆ-ಕನಿಷ್ಟ ಸಾಲುಗಳಲ್ಲಿ ಗರಿಷ್ಟವಾದುದನ್ನು ಹೇಳುವ ಬಗೆ!</span></h1>
</div>
<div class="div_friend_article_image" id="ctl00_ContentPlaceHolder1_divimage" style="background-color: #ce9e0e; float: left; font-family: Tunga, Arial; font-size: 16px; margin: 10px 0px; width: 657px;">
<img alt="tiny tales" height="372" src="https://media.kannadaprabha.com/images/article/2015/11/4/hruswakathe12.jpg" title="tiny tales" width="657" /><br />
<div id="ctl00_ContentPlaceHolder1_divcaption" style="background-color: black; color: white; float: left; font-family: Tunga; font-size: 0.8em; font-stretch: normal; line-height: 20px; padding: 5px; width: 647px;">
ಹೃಸ್ವಕತೆ</div>
</div>
<div class="div_friend_article_text" style="background-color: #ce9e0e; font-family: Tunga; font-size: 1.09em; font-stretch: normal; line-height: 30px; margin: 5px 0px 0px; padding: 0px; width: 657px;">
<span id="ctl00_ContentPlaceHolder1_lblDetailNews1"></span><br />
<div>
<span id="ctl00_ContentPlaceHolder1_lblDetailNews1">1)<span class="Apple-tab-span" style="white-space: pre;"> </span>ಮಾರಾಟಕ್ಕಿದೆ: ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ. </span></div>
<span id="ctl00_ContentPlaceHolder1_lblDetailNews1">
<div>
– ಅರ್ನೆಸ್ಟ್ ಹೇಮಿಂಗ್ವೇ [ಅಮೇರಿಕಾದ ಖ್ಯಾತ ಕತೆಗಾರ, ಪತ್ರಕರ್ತ)</div>
<div>
(For sale: baby shoes, never worn. – Ernest Hemingway) </div>
<div>
2) ಡೈನಾಸರ್: ಅವನು ನಿದ್ದೆಯಿಂದೆದ್ದಾಗ ಆ ಡೈನಾಸರ್ ಇನ್ನೂ ಅಲ್ಲಿಯೇ ಇತ್ತು. </div>
<div>
- ಅಗಸ್ತೊ ಮಾಂಟರ್ರೊಸೊ [ಗ್ವಾಟಾಮಾಲೆನ್ ದೇಶದ ಖ್ಯಾತ ಸ್ಪ್ಯಾನಿಶ್ ಕತೆಗಾರ] </div>
<div>
(The Dinosaur: When he woke up, the dinosaur was still there. – Augusto Monterroso)</div>
<div>
ಈ ಎರಡು ಜಗತ್ತಿನ ಅತಿ ಸಣ್ಣ ಕತೆಗಳನ್ನು ಎಸ್. ದಿವಾಕರ್ ಸರ್ (ಖ್ಯಾತ ವಿಮರ್ಶಕ, ಕತೆಗಾರ) ನಮಗೆಲ್ಲ ‘ಈ ಹೊತ್ತಿಗೆ’ಯ ಚರ್ಚೆಯವೊಂದರಲ್ಲಿ ಹೇಳುತ್ತಾ ಅವುಗಳು ಜಗತ್ತಿನಾದ್ಯಂತ ಚರ್ಚೆಯಾದ ಬಗೆಯನ್ನು ವಿವರಿಸುತ್ತಿದ್ದರೆ ಅದನ್ನು ಕೇಳುತ್ತಿದ್ದ ನನ್ನ ಮೈ ನವಿರೆದ್ದಿತ್ತು! ಅಲ್ಲಿದ್ದ ಉಳಿದವರ ಸ್ಥಿತಿಯೂ ನನಗಿಂತ ಭಿನ್ನವಾಗಿರಲಿಲ್ಲ. ಜಗತ್ತಿನಾದ್ಯಾಂತ ತುಂಬಾ ಪ್ರಸಿದ್ಧಿ ಹೊಂದಿದ್ದು ಡೈನಾಸರ್ ಕತೆಯಾದರೂ (ಈ ಒಂದು ಸಾಲಿನ ಕತೆಗೆ ಮುನ್ನೂರು ಪುಟದ ವಿಮರ್ಶೆ ಬರೆದಿದ್ದಾರಂತೆ ಒಬ್ಬರು! ಕನ್ನಡದಲ್ಲಿ ಎಸ್. ದಿವಾಕರ್ ಸರ್ ಸಹ ಈ ಕತೆಯ ಕುರಿತು ಪುಟಗಳಗಟ್ಟಲೆ ವಿಮರ್ಶೆ ಬರೆದಿದ್ದಾರೆ.) ಮಗುವಿನ ಶೂ ಕತೆ ಸಹ ಕಡಿಮೆ ತಾಕತ್ತಿನದೇನಲ್ಲ. </div>
<div>
ನಂತರ ‘ಈ ಹೊತ್ತಿಗೆ’ಯ ಕಥಾ ಕಮ್ಮಟದಲ್ಲೂ ಈ ಅತಿ ಸಣ್ಣ ಕತೆಗಳ ಪ್ರಸ್ತಾಪವಾಯಿತು. ನಾನಿನ್ನೂ ಕಮ್ಮಟದ ಗುಂಗಿನಲ್ಲಿದ್ದಾಗಲೇ ಮನೋಹರ್ ನಾಯಕ್ (ಮುಂಬೈನ ಧ್ವನಿಮುದ್ರಣ (Audio Recording) ಸಂಸ್ಥೆಯಾದ ಲಿಂಗೊ ಇಂಡಿಯಾ ಲಿಮಿಟೆಡ್ನೇ ಮಾಲಿಕರು) ಅವರು ಫೇಸ್ಬುಸಕ್ನರಲ್ಲಿರುವ Terribly Tiny Tale ಪುಟದಿಂದಾಯ್ದ ಕತೆಗಳನ್ನು ಕನ್ನಡದಲ್ಲಿ ಭಾವಾನುವಾದ ಮಾಡುವ ಚಟುವಟಿಕೆಯೊಂದನ್ನು ತಮ್ಮ ಸ್ನೇಹ ಬಳಗದಲ್ಲಿ ಶುರು ಮಾಡಿದರು. ಅದು ನನಗೆ ತುಂಬಾ ಆಸಕ್ತಿದಾಯಕವೆನಿಸಿ, ಅವರ ಸಾರಥ್ಯದಲ್ಲೇ ಫೇಸ್ ಬುಕ್ ನ ನನ್ನ ಮುಖಪುಟದ ಮೇಲೆ ಮುಂದುವರೆಸಿದೆ. ಇದರಲ್ಲಿ ಸ್ನೇಹಿತರ ಪಾಲ್ಗೊಳ್ಳುವಿಕೆಯ ಉತ್ಸಾಹ ಕಂಡು ಕನ್ನಡ ಭಾಷೆಯದೇ ಇಂಥಾ ಕತೆಗಳಾದರೆ ಎಷ್ಟು ಚೆನ್ನ ಎನ್ನುವುದು ನನ್ನ ಮನದಲ್ಲಿ ಹೊಳೆದು, ಅದು ಹೃಸ್ವಕತೆಯ ಹುಟ್ಟಿಗೆ ಕಾರಣವಾಯಿತು.</div>
<div>
ನಮ್ಮ ಕನ್ನಡಕ್ಕೆ ಕನಿಷ್ಟ ಸಾಲುಗಳಲ್ಲಿ ಗರಿಷ್ಟವಾದುದನ್ನು ಹೇಳುವ ತಾಕತ್ತು ಹೇರಳವಾಗಿ ಇರುವುದರಿಂದ ಅಂಥ ಬಹಳಷ್ಟು ಅತಿ ಸಣ್ಣ ಕತೆಗಳನ್ನು ನಾವು ಕನ್ನಡಿಗರು ಕೊಡಬಲ್ಲೆವು ಅನಿಸಿತು. ಜೊತೆಗೆ ಹೊಸ ಬರಹಗಾರರು ಹೊಟ್ಟಿಕೊಳ್ಳಲು ಒಂದು ಅವಕಾಶವಿದು ಅಂತಲೂ ಅನಿಸಿತು. ಹೊಸ ವರ್ಷದ ಮೊದಲ ದಿನ ಇದನ್ನು ಕಾರ್ಯರೂಪಕ್ಕೆ ತರಬೇಕೆಂದು ನಿಶ್ಚಯಿಸಿದೆ. ಪುಟ್ಕತೆ ಅನ್ಬೇಕು ಅನ್ಕೊಂಡಿದ್ದೆ. ಹೃಸ್ವ ಪದ ಕಡಿಮೆ ಬಳಕೆಯಲ್ಲಿರುವುದರಿಂದ ಮತ್ತು ಅತೀ ಸಣ್ಣ ಅನ್ನುವ ಅರ್ಥವೂ ಇದೆಯಾದ್ದರಿಂದ ಹೃಸ್ವಕತೆ ಅಂದರೆ ಚೆನ್ನಾಗಿರುತ್ತೆ ಅಂದರು ಸ್ನೇಹಿತರಾದ ಮನೋಹರ್ ನಾಯಕ್. ಮನೋಹರ್ ಅವರೊಡನೆ ಪುಟ ವಿನ್ಯಾಸ ಕುರಿತು, ಪ್ರೊಫೈಲ್ ಫೋಟೊ ಮತ್ತದರಲ್ಲಿನ ಬರವಣಿಗೆ ಹೇಗಿರಬೇಕೆಂಬುದರ ಕುರಿತು, ಪುಟವನ್ನು ಸ್ನೇಹಿತರ್ಯಾರಾದರೂ ನನ್ನ ಜೊತೆಯಾಗಿ ನಿರ್ವಹಿಸಬಲ್ಲರಾ ಎನ್ನುವುದರ ಕುರಿತು ಸುಮಾರು ಹೊತ್ತು ಚರ್ಚಿಸಿ, ಕೊನೆಗೆ ಅಂಥವರು ಸಿಗದೇ, ನಾನೊಬ್ಬಳೇ ನಿರ್ವಹಿಸುವುದು ಎಂದಾಗಿ, ಪುಟದ ಪ್ರೊಫೈಲ್ ಮತ್ತು ಕವರ್ ಫೋಟೊಗಳನ್ನು ನನ್ನ ಮಗ ಅಮೋಲ್ ನಿಂದ ತಯಾರಿಸಿಕೊಂಡು (ಫೋಟೊಗಳ ರೀತಿಯಲ್ಲಿ ‘ಟೆರ್ರಿಬಲಿ ಟೈನಿ ಟೇಲ್’ನ ನಿರ್ವಾಹಕರು ಕತೆಗಳನ್ನು ಪ್ರಕಟಿಸುತ್ತಿದ್ದುದನ್ನು ಕಂಡು ಅದನ್ನೇ ಅನುಸರಿಸಿದೆ) ಇದೇ ವರ್ಷದ ಮೊದಲ ದಿನದಂದು ‘ಹೃಸ್ವಕತೆ’ ಪುಟವನ್ನು ಫೇಸ್ಬುಕ್ನಲ್ಲಿ ಪ್ರಾರಂಭಿಸಿಯೇಬಿಟ್ಟೆ.</div>
<div>
ಹೀಗೆ, ೦೧ ಜನವರಿ ೨೦೧೫ರಂದು ‘ಹೃಸ್ವಕತೆ’ ಹುಟ್ಟಿಕೊಂಡಿತು. ೦೨.೦೧.೨೦೧೫ರಂದು ಮೊದಲ ಐದು ಕತೆಗಳು ಪ್ರಕಟಗೊಂಡವು. ನಂತರ ದಿನಕ್ಕೆರೆಡು ಕತೆಗಳು ಭಾನುವಾರದ ಹೊರತಾಗಿ ಪ್ರಕಟಗೊಂಡವು. ಈಗದು ನನ್ನ ಸಮಯದ ಅಭಾವದಿಂದಾಗಿ ಪ್ರತಿ ಗುರುವಾರಕ್ಕೊಮ್ಮೆ ಅಂತಾಗಿದೆ. ಉತ್ತಮವಾದವುಗಳನ್ನೇ ಆಯ್ದು ಪ್ರಕಟಿಸುವುದು ಎಂದು ನಿಶ್ಚಯಿಸಿರುವುದರಿಂದ ಕೆಲವೊಮ್ಮೆ ವಾರಕ್ಕೊಂದೇ ಕತೆ ಪ್ರಕಟಗೊಳ್ಳುವುದೂ ಇದೆ! ಅನೇಕ ಜನ ಸಾಹಿತ್ಯಾಸಕ್ತರು, ಕತೆಗಾರರು, ಹಾಗೂ ಕೋರಿಕೆಯ ಮೇರೆಗೆ ಕೆಲವು ಖ್ಯಾತ ಕತೆಗಾರರು ಇಲ್ಲಿ ಹೃಸ್ವಕತೆಗಳನ್ನು ಬರೆಯುವುದರ ಮೂಲಕ, ಓದಿ ತಮ್ಮ ಅಭಿಪ್ರಾಯಗಳನ್ನು , ಮೆಚ್ಚುಗೆಯನ್ನು ವ್ಯಕ್ತಪಡಿಸುವುದರ ಮೂಲಕ ಭಾಗವಹಿಸುತ್ತಾ ಹೃಸ್ವಕತೆ ಪುಟವನ್ನು ಮುನ್ನಡೆಸುತ್ತಿದ್ದಾರೆ. ಮುಂದುವರೆಸುವ ಭಾರವೂ ಅವರುಗಳ ಹೆಗಲ ಮೇಲಿಯೇ. ನಾನೇನಿದ್ದರೂ ಇಲ್ಲಿ ನಿಮಿತ್ತ ಮಾತ್ರ. </div>
<div>
ಅನೇಕ ವಾಹ್! ವಾಹ್! ಅನ್ನುವಂಥ ಕತೆಗಳು ಹೃಸ್ವಕತೆ ಪುಟದಲ್ಲಿ ಮೂಡಿದ್ದು ನನಗೊಂದು ಪುಟ್ಟ ಸಾರ್ಥಕತೆಯ ಭಾವವನ್ನು ಒದಗಿಸಿವೆ. ಇಲ್ಲಿಯವರೆಗೆ ಒಟ್ಟು 176 ಹೃಸ್ವಕತೆಗಳು ಪ್ರಕಟಗೊಂಡಿವೆ. ‘ಹೃಸ್ವಕತೆ’ ಪುಟಕ್ಕಾಗಿ ಕತೆಗಳನ್ನು ಬರೆಯುತ್ತಿರುವ ಎಲ್ಲ ಕತೆಗಾರರಿಗೂ ನಾನೀ ಹೊತ್ತಲ್ಲಿ ಕೃತಜ್ಞತೆಗಳನ್ನ ಹೇಳಲಿಚ್ಛಿಸುತ್ತೇನೆ. ನಡೆವ ದಾರಿ ಇನ್ನೂ ತುಂಬಾ ಉದ್ದಕಿದೆ. ನಮ್ಮ ಕನ್ನಡದ ಹೃಸ್ವಕತೆಗಳು ಜಗತ್ತಿನ ಅತ್ಯುತ್ತಮ ಅತಿ ಸಣ್ಣ ಕತೆಗಳ ಸಾಲಲ್ಲಿ ಸೇರಬೇಕೆಂಬುದು ನನ್ನಾಸೆ. ಅದು ನೆರವೇರುವುದೆಂಬ ಭರವಸೆಯೂ ನನಗಿದೆ. ಯಾಕೆಂದರೆ ಕನ್ನಡ ಭಾಷೆಯ ಸತ್ವ ಅಂಥದ್ದು.</div>
<div>
ಇಲ್ಲಿ ಬರೀ ಕತೆಗಳ ಬಗ್ಗೆ ಮಾತ್ರವಲ್ಲ, ‘ಹೃಸ್ವಕತೆ’ ಎಂಬ ಶೀರ್ಷಿಕೆಯ ಬಗ್ಗೆಯೂ ಸಹ ಹೃಸ್ವ ಅಲ್ಲ ಅದು ಹ್ರಸ್ವ ಎಂದಾಗಬೇಕು, ನಿಘಂಟಿನಲ್ಲಿ ಹ್ರಸ್ವ ಎಂದಿದೆ ಎಂದು ಅನೇಕರು ಮುಕ್ತವಾಗಿ ಚರ್ಚಿಸಿದ್ದಾರೆ. ಹೌದು ನಿಘಂಟಿನಲ್ಲಿ ಹ್ರಸ್ವ ಎಂದಿದೆ ನಿಜ. ಆದರೆ ಮುಂಚೆ ಹೃಸ್ವ ಎಂದೇ ಬಳಕೆಯಲ್ಲಿತ್ತು ಈ ಪದ. ಜೊತೆಗೆ ಋ ಕಾರ ತನ್ನ ಅಸ್ತಿತ್ವವನ್ನು ಕಳೆದುಕೊಂಡು ನಿಧಾನವಾಗಿ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಅದನ್ನು ಚಿಕ್ಕಂದಿನಿಂದಲೂ ಬಳಸಿದ ವ್ಯಾಮೋಹ ಮತ್ತು ನಾನು ಕಲಿತಿದ್ದು (ಶಾಲೆಯಲ್ಲಿ ಕಲಿಸಿದ್ದು), ಅನೇಕ ಹಿರಿಯ ಖ್ಯಾತ ಸಾಹಿತಿಗಳೂ ಹೃಸ್ವ ಎಂದೇ ಬಳಸಿದ್ದು, ‘ಹೃಸ್ವ’ ಪದ ತಪ್ಪಲ್ಲವೆಂಬ ನಿರ್ಧಾರಕ್ಕೆ ಬರಲು ಕಾರಣವಾಗಿ ಹೃಸ್ವವನ್ನು ಹ್ರಸ್ವವನ್ನಾಗಿಸದೆ ಹಾಗೇ ಉಳಿಸಿಕೊಂಡು ಬಂದಿದ್ದೇನೆ.</div>
<div>
<b>ಹೃಸ್ವಕತೆ:</b> ಸ್ನೇಹಿತರ ಕಿವಿಯಲ್ಲಿ ಮೆಲುದನಿಯಲ್ಲಿ ಗಹನವಾದುದನ್ನು ಚುಟುಕಾಗಿ ಹೇಳಿ ಮುಗಿಸುವಂತೆ, ಅದನಾಲಿಸಿದವರ ಕಣ್ಣಲ್ಲಿ ಮೂಡುವ ಬೆರಗಿನಂತೆ, ನೋವಿನಂತೆ, ನಲಿವಿನಂತೆ, ಅರ್ಥವಾಯಿತು ಎಂದು ತಲೆದೂಗಿದಂತೆ, ಕಣ್ಣು ಕಿರಿದಾಗಿಸಿ ವಿಚಾರ ಮಾಡುವಂತೆ, ಓದಿದವರು ಮರೆಯದಂತೆ ಕಾಡುವ, ಕನಿಷ್ಟ ಸಾಲುಗಳಲ್ಲಿ ಗರಿಷ್ಟವಾದುದನ್ನು ಹೇಳುವ ಬಗೆ! </div>
<div>
</div>
<div>
<b>-ಜಯಲಕ್ಷ್ಮೀ ಪಾಟೀಲ್</b></div>
<div>
<b>ಫೇಸ್ ಬುಕ್ ನಲ್ಲಿ ಹೃಸ್ವ ಕತೆ : http://on.fb.me/1PlR020</b></div>
<div>
</div>
</span></div>
<div class="friend_article_related_div" style="background-color: #ce9e0e; float: left; font-family: Tunga, Arial; font-size: 16px; width: 657px;">
</div>
<div class="div_friend_article_dateline" style="background-color: #ce9e0e; color: #fbf1a4; float: left; font-family: Verdana; font-size: 10px; padding: 0px 0px 5px; width: 657px;">
Published: <span id="ctl00_ContentPlaceHolder1_lblPublishedDate">04 Nov 2015 03:29 PM IST</span><span id="ctl00_ContentPlaceHolder1_divlastupdate"> | Updated: <span id="ctl00_ContentPlaceHolder1_lblModifiedDate">04 Nov 2015 06:04 PM IST</span></span></div>
<div class="div_friend_article_source" style="background-color: #ce9e0e; color: #fbf1a4; float: left; font-family: Verdana; font-size: 10px; padding: 10px 0px 5px; width: 657px;">
Posted by: <span id="ctl00_ContentPlaceHolder1_lblCreatedBy">RK</span><span id="ctl00_ContentPlaceHolder1_divsource"> | Source: <span id="ctl00_ContentPlaceHolder1_lblSource">Online Desk</span></span></div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com0tag:blogger.com,1999:blog-4925720126176198020.post-20920931238934335202016-10-25T12:07:00.001+05:302016-10-25T12:09:09.399+05:30 ತೋಂತನನ ಧಿರಿನ...<div dir="ltr" style="text-align: left;" trbidi="on">
<br />
<br />
ಇದು ನಾನು ಬರೆಯುತ್ತಿರುವ ಕತೆಯ ಭಾಗ. ಕತೇನ ಮುಂದುವರೆಸೋದಾ? ಬೇಡ್ವಾ? ಹೇಳಿ. <img src="https://www.facebook.com/images/emoji.php/v5/f4c/1/16/1f642.png" /><br />
<br />
ತೋಂತನನ ಧಿರಿನ...<br />
------------------------<br />
<br />
“ಐ ಲವ್ ಯೂ”<br />
<br />
“ನಾನೂ”<br />
<br />
“ನಾನೂ ಅಂದ್ರೆ ಏನು ನಾನೂ?? ನನಗರ್ಥವಾಗಲಿಲ್ಲ, ಹಾಗಂದ್ರೆ ಏನು ಹೇಳಿ?” ಹೀಗೆ ಕೇಳುವಾಗ ತುಂಟ ನಗೆಯೊಂದು ಅವನ ಮುಖದಲ್ಲಿ ಮೂಡಿರುವುದನ್ನು ಅವನ ದನಿಯಿಂದಲೇ ಗುರುತಿಸಬಲ್ಲಳು ಅವಳು. ಅದು ಅವಳನ್ನು ಇನ್ನೂ ನಾಚಿಕೊಳ್ಳುವಂತೆ ಮಾಡಿಬಿಡುತ್ತದೆ.<br />
<br />
’ಏನಿಲ್ಲ” ಎಂದು ಬಿಡುತ್ತಾಳೆ ಪಟಕ್ಕಂತ.<br />
<br />
“ರೀ ಬೇಗ, ಫೋನ್ ಬಿಲ್ ಹೆಚ್ಚಾಗುತ್ತೆ”<br />
<br />
“ಊಂಹೂಂ ನನ್ ಕೈಲಾಗಲ್ಲ ಹೋಗ್ರಿ”<br />
<br />
“ಕೈಲೆ ಅಲ್ಲ್ರೀ ಬಾಯಿಲೆ ನೀವು ಹೇಳಬೇಕಾಗಿದ್ದು, ಪ್ಲೀಸ್ ಪ್ಲೀಸ್ ಪ್ಲೀಸ್”<br />
<br />
“ರೀ....”<br />
<br />
“ಏನ್ರೀ..?”<br />
<br />
“ರೀ....” ಸತಾಯಿಸಬೇಡಿ ದಮ್ಮಯ್ಯ ಅನ್ನುವ ಕೋರಿಕೆ ದನಿಯಲ್ಲಿ.<br />
<br />
“ಹೇಳ್ರೀ ಬೇಗ”<br />
<br />
“ಊಂಹೂಂ”<br />
<br />
"ನಾನ್ ಹೇಳಲ್ವಾ? ನಿಮ್ ಥರಾ ಆಡ್ತೀನಾ? ಇವತ್ತಿಗೆ ಆರ್ ತಿಂಗಳಾಯ್ತು, ನಾನು ದಿನಾಲೂ ತಪ್ಪದೇ ಅಷ್ಟಷ್ಟು ಸಲ ಹೇಳ್ತೀನಿ, ನೀವು ಮಾತ್ರ... ಇವತ್ತು ನೀವು ಹೇಳಿಲ್ಲಾಂದ್ರೆ ಅಂದ್ರೆ ನಾನಿನ್ಮುಂದೆ ಮಾತೇ ಆಡಲ್ಲ ಹೋಗಿ. ನಿಜ್ಜ ಹೇಳ್ತಿದೀನಿ!"<br />
<br />
“ ರೀ ಪ್ಲೀssಸ್...”<br />
<br />
“ಸರಿ ಹಾಗಿದ್ರೆ ಹೇಳಿ ಮತ್ತೆ. ಬೇಗ”<br />
<br />
“ಅದು... ಅದು... ಅ.. ಅ..ಅ...” ಅವಳು ಫೋನ್ ಹಿಡಿದ ಅಂಗೈ ಪೂರ್ತಿ ಬೆವರಿ, ಸಣ್ಣಗೆ ಕಂಪಿಸುತ್ತಿರುವ ಹೃದಯ, ಅದರುತ್ತಿರುವ ತುಟಿ, ಮೈಯ ಇಡೀ ರಕ್ತ ಮುಖಕ್ಕೇ ನುಗ್ಗಿತೇನೋ ಎಂಬಂತೆ ಬಿಸಿಯಾದ ಮುಖ, ಲಜ್ಜೆಯಿಂದ ಬಾಗಿದ ಕಣ್ಣುಗಳು...<br />
<br />
“ಹೂಂ....”<br />
<br />
“...........”<br />
<br />
“ಮಗೂ, ಪ್ಲೀಸ್ ಒಂದೇ ಒಂದ್ಸಲ...ಅದೇನ್ ಅಷ್ಟು ಕಷ್ಟದ್ದಾ? ಸೋ ಸಿಂಪಲ್, ನಾನ್ ಹೇಳೊಲ್ವಾ?”<br />
<br />
ಸಹನೆಗೆಡದ ಅವನು ಪುಸಲಾಯಿಸುತ್ತಲೇ ಇದ್ದ. ಅವಳು ಅ... ಅ... ಐ.... ತಡವರಿಸುತ್ತಲೇ ಇದ್ದಳು. ಕೊನೆಗೊಮ್ಮೆ ಅವಳ ಕಣಕಣದಲ್ಲೂ ಹರಿದಾಡುತ್ತಿದ್ದ ಭಾವ ತುಟಿ ಬಿರಿದು ಉಕ್ಕಿದ್ದೂ ಆಯ್ತು! ಆ ಕಡೆಯಿಂದ ಮುತ್ತಿನ ಸುರಿಮಳೆ. ಈ ಕಡೆ ಇವಳು ಸಂಭ್ರಮಕ್ಕೆ ನಡುಗುತ್ತಿರುವ ಕಾಲುಗಳನ್ನು ಗಟ್ಟಿ ನೆಲಕ್ಕೂರುತ್ತಾ ಗೋಡೆಗಾನಿಸಿ ನಿಧಾನಕ್ಕೆ ಕುಳಿತುಕೊಂಡಳು. ಕೆಲ ಕ್ಷಣಗಳ ನಂತರ ಆ ಕಡೆಯಿಂದ ಅವನು ಮೃದುವಾದ ದನಿಯಲ್ಲಿ, <br />
“ಫೋನ್ ಇಡ್ಲಾ...?’<br />
ಇವಳು ಹೇಳಿದಳೋ ಇಲ್ಲವೋ ಅನ್ನುವಷ್ಟು ಮೆಲುದನಿಯಲ್ಲಿ, “ಊಂಹೂಂ......” ಫೋನ್ ಡಿಸ್ಕನೆಕ್ಟ್ ಮಾಡದೆ, ಮಾತೂ ಆಡದೆ ಮೌನವಾಗಿದ್ದುಕೊಂಡೇ ಎಷ್ಟೋ ಹೊತ್ತಿನ ತನಕ ಇಬ್ಬರೂ ಜೊತೆಗಿದ್ದರು, ತಂತಾನೇ ನಿಸ್ತಂತು ನಿಸ್ತೇಜವಾಗುವ ತನಕ....<br />
<br />
ಏನೀ ಮಹಾನಂದವೇ, ಓ ಭಾಮಿನಿ, ಏನೀ ಸಂಭ್ರಮದಂದವೇ, ಬಲು ಚಂದವೆ...<br />
<br />
ತನ್ನನ್ನು ತಾನು ಪ್ರೀತಿಸುವುದಕ್ಕಿಂತಲೂ ಅವನನ್ನು ಪ್ರೀತಿಸುವ ಅವಳ ನಡುವಳಿಕೆಯಲ್ಲಿ, ಮಾತಿನ ಹಿನ್ನೆಲೆಯಲ್ಲಿ ಡಿಫಾಲ್ಟ್ ಎಂಬಂತೆ ಅವನ ಪ್ರತಿ ಹೊಮ್ಮುತ್ತಿದ್ದ ಪ್ರೀತಿ, ಮಾತಾಗಿ ಬರಲು ಮಾತ್ರ ಯಾವಾಗಲೂ ಲಜ್ಜೆಯಿಂದಾಗಿ ತಡವರಿಸುತ್ತಿತ್ತು. ಅದನ್ನವ ಚೆನ್ನಾಗಿ ಬಲ್ಲವನಾಗಿದ್ದರಿಂದಲೇ ಅವಳಿಂದ ಐ ಲವ್ ಯೂ ಹೇಳಿಸಿಕೊಳ್ಳೋದು ಅವನಿಗೆ ಮುದ. ಸತಾಯಿಸಿ ಸತಾಯಿಸಿ ಅವಳಿಂದ ಹೇಳಿಸಿಯೇ ಸೈ. ಕೆಲವೊಮ್ಮೆ ಹೇಳಲೂ ಆಗದೆ, ಹೇಳದಿರಲೂ ಆಗದೆ, ಅವನು ಐ ಲವ್ ಯೂ ಅಂದಾಗಲೆಲ್ಲ “ನಾನೂss...” ಅಂದು ಬಿಡುವಳು. ಮತ್ತೆ ಅವನ ತುಂಟತನ ಶುರು, “ನಾನೂ ಅಂದ್ರೆ ಏನು ನಾನೂ?? ನನಗರ್ಥವಾಗಲಿಲ್ಲ, ಹಾಗಂದ್ರೆ ಏನು ಹೇಳಿ?”<br />
<br />
***<br />
<br />
ಸಾಹಿತ್ಯ ಸಮಾರಂಭವೊಂದರಲ್ಲಿ ಅವರಿಬ್ಬರ ಪರಿಚಯವಾಗಿ ವರ್ಷದ ಮೇಲಾಗಿತ್ತು. ಯಾವುದಾದರೂ ಸಭೆ ಸಮಾರಂಭಗಳಲ್ಲಿ ಆಗಾಗ ಭೇಟಿಯಾದಾಗಲೆಲ್ಲ, ‘ಚೆನ್ನಾಗಿದೀರಾ?’ ‘ಚೆನ್ನಾಗಿದೀನಿ’. ‘ನೀವೂ” “ನಾನೂ’. ಎನ್ನುವುದರ ಜೊತೆಗೆ ಇನ್ನೊಂದೆರೆಡು ಮಾತುಗಳನ್ನು ಬಿಟ್ಟರೆ, ಹೆಚ್ಚು ಮಾತಿಲ್ಲದ್ದವರು ಅವರಿಬ್ಬರೂ. ಅದೊಂದು ದಿನ ಬಾಂದ್ರಾ ರೇಲ್ವೆ ಸ್ಟೇಷನ್ನಿನಲ್ಲಿ ಇವರಿಬ್ಬರ ಅಚಾನಕ್ ಭೇಟಿಯಾಗಿ, ಇಬ್ಬರೂ ಒಂದೇ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಗೊತ್ತಾಗಿ ಜೊತೆಗೂಡಿ ಸ್ಟೆಷನ್ನಿನ ಒಳಗೆ ಬರುವಷ್ಟರಲ್ಲಿ ಲೋಕಲ್ ಟ್ರೇನ್ ಬಂದು ನಿಂತಾಗಿತ್ತು. ಲೇಡೀಸ್ ಕಂಪಾರ್ಟ್ಮೆಂಟ್ ದೂರವಿದ್ದ ಕಾರಣ ತನ್ನ ಜೊತೆಗೇ ಬರಲು ಹೇಳಿದವನ ಮಾತನ್ನು ಒಪ್ಪಿದ ಅವಳು ಟ್ರೇನ್ ಹತ್ತಿದ್ದಳು. ಎಂದಿನಂತೆ ವಿಪರೀತ್ ರಶ್. ಜನರನ್ನು ತಳ್ಳಿಕೊಂಡು ಜಾಗ ಮಾಡಿಕೊಳ್ಳುತ್ತಾ, ಬಾಗಿಲಿಗೆ ತುಸು ದೂರವಾಗಿ ಬೆನ್ನಾಸರೆಗೆ ಜಾಗ ಸಿಕ್ಕಲ್ಲಿ ಬಂದು ನಿಂತವಳು ನುಗ್ಗುವ ಜನರ ಒತ್ತಡಕ್ಕೆ ಕದಲಲೂ ಆಗದೆ ನಿಲ್ಲಲೂ ಆಗದೆ ಒದ್ದಾಡುತ್ತಿರುವಷ್ಟರಲ್ಲಿ, ಅವಳನ್ನು ಮುಂದು ಮಾಡಿಕೊಂಡು ಏರಿದ್ದ ಅವನು ಅವಳ ಎದುರು ನಿಂತು, ಅವಳು ಆಸರೆಯಾಗಿ ನಿಂತ ಆ ಕಬ್ಬಿಣದ ಗೋಡೆಯ ಮೇಲೆ ತನ್ನೆರೆಡೂ ಕೈಗಳನ್ನೂರಿ ಅವಳಿಗೆ ಭದ್ರ ಕೋಟೆಯಾಗಿ ನಿಂತ. ಉಸಿರಾಡಲು ತುಸು ಗಾಳಿ ಸಿಕ್ಕಂತಾಗಿ ಅವಳು ಸಾವರಿಸಿಕೊಂಡು ತಲೆ ಎತ್ತಿ ನೋಡಿದರೆ ನಾಲ್ಕು ಬೆರಳಿನಂತರದಲ್ಲಿ ನಿಂತಿದ್ದ ಅವನು! ಥ್ಯಾಂಕ್ಸ್ ಹೇಳಲು ಬಾಯ್ದೆರದವಳನ್ನು ಸುಮ್ಮನಾಗಿಸಿ ಅರಿವಿಲ್ಲದೆಯೇ ಲಜ್ಜೆಯಿಂದ ನೆಲ ನೋಡುವಂತೆ ಮಾಡಿದ್ದು ಅವನ ಕಣ್ಣುಗಳು! ಆ ಒಂದು ಕ್ಷಣದಲ್ಲಿ ಅದೆಷ್ಟೆಲ್ಲ ಮಾತನಾಡಿದ್ದವು ಮಿತಿಭಾಷಿಯ ಕಣ್ಣುಗಳು! ಉಸಿರಾಡಲು ಸಿಕ್ಕ ತುಸು ಗಾಳಿಗೀಗ ಮಧುರ ಕಂಪೊಂದು ಬೆರೆತು ನಸುಕಂಪನ ಅವಳ ಒಡಲಲ್ಲಿ...<br />
<br />
ಯಾವುದೀ ಹೊಸ ಸಂಚು, ಎದೆಯಂಚಿನಲಿ ಮಿಂಚಿ.... ಮನಸು ಕನಸುಗಳನ್ನು ಕಲಿತಿರುವುದು.. ಗಿರಿ ಕಮರಿಯಾಳದಲಿ ತೆವಳಿಟ್ಟ ಭಾವಗಳ, ಮುಗಿಲ ಮಂಚದಲ್ಲಿಟ್ಟು ತೂಗುತಿಹುದು...<br />
<div>
<br />
- ಜಯಲಕ್ಷ್ಮೀ ಪಾಟೀಲ್</div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com4tag:blogger.com,1999:blog-4925720126176198020.post-69104659204282273152016-10-16T14:00:00.002+05:302016-10-16T14:01:26.407+05:30 ನೆಲ ಸೋಕದ ಕನಸು<div dir="ltr" style="text-align: left;" trbidi="on">
ಆಸರೆ ಬಯಸುವ ಮನಸು<br />
ಜೀಕುವುದು ಅನವರತ ಕನಸು<br />
ಕನಸುಗಳನು ಕೊಲ್ಲುವ ಮೊನಚು <br />
ಶರಗಳನ್ನು ಹೂಡುವನು ಕಾಲ<br />
ಹೆದೆಯೇರಿಸಿ ಬಿಲ್ಲ ಝೇಂಕರಿಸುತ್ತಾ <br />
ಹೂಂಕರಿಸುತ್ತಾ ಅಟ್ಟಹಾಸ<br />
ಅನುಗೊಳ್ಳಬೇಕು ನನಗೆ ನಾನೆ ಎನ್ನುವ ಆಸರೆಗೆ<br />
ಮಟ್ಟಹಾಕಬೇಕು ವಿಕಟ ಅಟ್ಟಹಾಸವ<br />
ಕಾಲನನ್ನು ಕಾಲಲ್ಲಿ ಮೆಟ್ಟಿ ಕುಣಿಸಬೇಕು <br />
ನೆಲ ಸೋಕದ ನನ್ನ ಹೆಜ್ಜೆಗಳ ತಾಳಕ್ಕೆ<br />
ಗೆಜ್ಜೆಗಳ ಝೇಂಕಾರ ಮುಗಿಲು ಮುಟ್ಟಬೇಕು <br />
ಕಾಲ ದಣಿದು ಬಸವಳಿದು ಕಾಲ್ಕೋಳವಾಗುವ <br />
ಮೊದಲು ಸಾಗಬೇಕು ಕುಣಿತದ ಹೆಜ್ಜೆ<br />
ದೂರ ದೂರಕ್ಕೆ ಎತ್ತರೆತ್ತರಕ್ಕೆ <br />
ತೇಲಬೇಕು ಗಾಳಿಯಲ್ಲಿ ಸುಗಂಧವಾಗಿ<br />
ಅದೋ ಅದೋ ಕನಸುಗಳು <br />
ನನಸಾಗಿ ಘಮಗುಡುತ್ತಾ ಮುಗಿಲೇರಿ <br />
ಮುತ್ತಿಕ್ಕಿದ ಮುದಕೆ ಗಗನ ದ್ರವಿಸಿ <br />
ಹನಿಯುತಿದೆ ಭುವಿಯೊಡಲಲಿ <br />
ಮತ್ತೆ ಅದೆಷ್ಟೋ ಕನಸುಗಳ ಮೊಳೆಕೆ<br />
ಕನಸಿಗೂ ಕಾಲನಿಗೂ ಹೊಸ ಹುಟ್ಟು ಏಕಕಾಲದಲ್ಲಿ...<br />
<br />
- ಜಯಲಕ್ಷ್ಮೀ ಪಾಟೀಲ್<br />
<div>
(೧೫-೧೦-೨೦೧೬)</div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com0tag:blogger.com,1999:blog-4925720126176198020.post-27340173417863493812016-09-21T22:47:00.002+05:302016-10-03T16:23:16.782+05:30 ಗೋಪಾಲ್ ವಾಜಪೇಯಿ ಕಾಕಾ...<div dir="ltr" style="text-align: left;" trbidi="on">
ವಾಜಪೇಯಿ ಕಾಕಾ...<br />
ನಾ ನಿಮ್ಮನ್ನ ಮದ್ಲೆ ಸರ್ತಿ ಭೆಟ್ಟಿ ಆಗಿದ್ದು ಯಾವಾಗ ಅಂತ ನೆನಪ ಆಗವಲ್ತು... :( ನಿಮ್ಮನ್ನ ಕಾಕಾ ಅಂತ ನಾನs ಮೊದಲ ಕರ್ದಾಕಿ. ಆಮ್ಯಾಲೆ ಎಲ್ಲಾರಿಗೂ ಇಲ್ಲಿ ನೀವು ಕಾಕಾ ಆದ್ರಿ. ಇನ್ನ ಕೆಲವು ಮಂದಿಗೆ ಮಾಮಾ ಆದ್ರಿ, ದೊಡ್ಡಪ್ಪ ಆದ್ರಿ, ಅಜ್ಜಾರಾದ್ರಿ, ಗೋ ವಾ ಸರ್ ಅಂತೂ ಸುರೂನಿಂದ ಇದ್ದ್ರಿ.<br />
<br />
ಅವತ್ತ ನೆನಪೈತಿ ನಿಮಗ? ಸುನಿಲನ ಹುಟ್ಟಿದ ಹಬ್ಬಾ ಅಂತ ಅಂವಾ ನಮ್ಮೆಲ್ಲಾರ್ನೂ ಕರ್ದಿದ್ದ. ಮರದಿನಾನs ನಮ್ಮನ್ಯಾಗ ‘ಸಂಗೀತ ಸಂಜಿ’ ಇತ್ತು. ಬರ್ರಿ ಕಾಕಾ ಮನಿಗೆ ಅಂದೆ ನಾ. "ಒಬ್ಬಾಂವಗ ಮನಿ ಹುಡುಕ್ಕೊಂಡು ಬರೂದು ಆಗುದಿಲ್ಲ ಜಯಕ್ಕಾ, ಯಾರರ ಜೋಡ ಆದ್ರ ಬರ್ತೀನಿ" ಅಂದ್ರಿ. ನಿಮ್ ಬಾಜೂಕ ನವೀನ್ ಸಾಗರ್ ಕುಂತಿದ್ದ್ರು. ಅವ್ರಿಗೆ ಕೇಳ್ಕೊಂಡೆ. ನವೀನ್ ಹೂಂ ಅಂದೋರು ಅದೇನಾತೋ ಬರ್ಲಿಲ್ಲ, ಆದ್ರ ನೀವು ಬಂದ್ರಿ ಮಗನ್ನ ಕರ್ಕೊಂಡು. ಎಷ್ಟು ಖುಷಿ ಆತಂತೀರಿ ಅವತ್ತ! ಬಂದ್ರಿ, ಭಾರಿ ಖುಷೀಲೆ ಹಾಡಾ ಕೇಳಿದ್ರಿ. ರಮೇಶ್ ಗುರುರಾಜ್ ಸರ್ ರಂಗಗೀತೆ ಹಾಡಿದಾಗಂತೂ ನಿಮ್ಮಾರಿ ನೋಡುವಂಗಿತ್ತು! ಕೂಸಿಗೆ ಜಾತ್ರ್ಯಾಗ ಕಳ್ಕೊಂಡ ಅವ್ವ ಸಿಕ್ಕಷ್ಟು ಖುಷಿ ಇತ್ತು ನಿಮ್ಮ ಮಾರಿ ಮ್ಯಾಲೆ. ಕಣ್ಣಿಗೆ ಕಟ್ಟಿದಂಗೈತಿ ಅವತ್ತಿನ ನಿಮ್ಮ ಖುಷಿ. ಈಗ ಹಿಂಗ ನಾ ಮಾರಿ ಇಳಬಿಟಗೊಂಡು ಕುಂಡ್ರುವಂಗ ನೀವು ಮಾಡಿದ್ದು ನಿಮಗರ ಬರೊಬ್ಬರಿ ಅನಸ್ತೈತಿ?...<br />
<br />
ನಿಮ್ಮ ‘ನಂದ ಭೂಪತಿ’ ಪುಸ್ತಕ ಹೊಳ್ಳಿ ಮತ್ತೊಮ್ಮೆ ಬಿಡುಗಡೆ ಆತಲ್ಲ ಅವತ್ತ, ಅದs ಸುಧಾ ಚಿದಾನಂದ ಗೌಡ ಮತ್ತ ಅವ್ರ ಮನಿಯವ್ರುದೂ ಪುಸ್ತಕ್ಗೋಳೂ ಬಿಡುಗಡೆ ಆದ್ವೂ, ಅವತ್ತ ನಾ ಮಂಗ್ಯಾನಂಥಾಕಿ ಭರ್ತಿ ಸಭಾದಾಗ, ಕುಂವಿ ಅವ್ರು ಹಿಂಗಂದ್ರು ಅಂತ ಯಾರೋ ಅಂದ ಮಾತಿಗೆ ಸಿಟ್ಟಾಗಿ, ಹಂಗೆಂಗಂದ್ರು ಅವ್ರು? ಅನಬಾರ್ದಿತ್ತು, ಹಂಗ ಹಿಂಗ ಅಂತ ಮೈಕ್ ಮುಂದ ನಿಂತು ಒದರ್ಯಾಡಿದೆ. ಹಂಗ ಮಾತಾಡ್ತಾ ಮಾತಾಡ್ತಾ ನಿಮ್ ಕಡೆ ನೋಡ್ದೆ. ನೀವು ಸಾಕ್ ಬಿಡಬೆ ಇನ್ನ ಅಂತ ಸೊನ್ನಿ ಮಾಡಿ ನನ್ನ ಗಪ್ಪ್ ಮಾಡಿದ್ದಲ್ದ, ಅಲ್ಲಿ ನಾ ಹಂಗ ವಿರೋಧಿಸಿ ಮಾತಾಡಿದ್ದಕ್ಕ ಸಿಟ್ಟಾದ ಒಂದಿಬ್ಬರನ್ನ ನನ್ನ ಪರ ನಿಂತು ಸುಮ್ಮ ಮಾಡಿದ್ರಿ. ಆಮ್ಯಾಕ ನಿಮಗ ನನ್ನಿಂದ ನಾಕ್ ಮಂದ್ಯಾಗ ಖಜೀಲ್ಯಾತು ಅನಿಸಿ, ಸಭಾ ಮುಗದ ಮ್ಯಾಲೆ, "ಕಾಕಾ, ನಾ ತಡಕೊಳ್ಳಾಕಾಗದ ಹೆಚ್ಚಿಗ್ ಮಾತಾಡ್ದೆ. ನನ್ನಿಂದ ನೀವು.." <br />
"ಏನಾತ್ ತೊಗೊ ಜಯಕ್ಕಾ. ಆಕ್ಕಿರ್ತಾವು ಹಿಂಗ. ಅದನ್ನ ತಲಿಯೊಳಗ ಇಟಕೊಂಡು ಕುಂಡರ್ಬ್ಯಾಡ್ರಿ. ಹೋಗ್ಲಿ ಬಿಡ್ರಿ" ಅಂತ ಉಲ್ಟಾ ನನ್ನನ್ನs ಸಮಾಧಾನ ಮಾಡಿ ಸರಾಸರಾ ಅಲ್ಲಿಂದ ನಡದುಹೋದ್ರಿ. ಮತ್ತ ಬೇಕಾದಷ್ಟ ಸಲ ಸಿಕ್ಕ್ರಿ, ನಕ್ಕೋತ ಮಾತಾಡಿಸಿದ್ರಿ. ಆದ್ರ ಈಗ ಹಿಂಗ್ಯಾಕ ಹೊಡಮಳ್ಳಿ ಬರಾಕ ದಾರಿಲ್ಲದ ಊರಿಗೆ ನಡದ್ರಿ...?<br />
<br />
ಅವತ್ತ ಮದ್ಯಾನ ಅನಸ್ತೈತಿ, ಫೋನ್ ಮಾಡಿದ್ರಿ. "ಜಯಕ್ಕಾ, ನನ್ನ ‘ಸಂತ್ಯಾಗ ನಿಂತಾನ ಕಬೀರ’ ನಾಟ್ಕಾ ರೀಡಿಂಗ್ ಮಾಡಿದ್ರ ಹೆಂಗ?" ಅಂದ್ರಿ. ನಾ ಗಬಗ್ನ ಒಪಗೊಂಡೆ. ಇಬ್ರೂ ಸೇರೇ ಒಂದಿಷ್ಟು ಮಂದಿ ಉತ್ತರ ಕರ್ನಾಟಕದ ಕಲಾವಿದರನ್ನ ಕೇಳಿದ್ವ್ಯಾದ್ರೂ ನೀವು ಕೇಳಿದಾಗ ಒಪಗೊಂಡು ಬಂದೋರ ಹೆಚ್ಚು. ನಮ್ಮನ್ಯಾಗs ರೀಡಿಂಗ್ ಆತು. ಮಂಜುಳಾ ಬಬಲಾದಿ, ಶ್ರೀಪತಿ ಮಂಜನಬೈಲು, ಧನಂಜಯ್ ಕುಲಕರ್ಣಿ, ಪ್ರಮೋದ್ ಶಿಗ್ಗಾಂವ್, ದಿಲಾವರ್, ರಾಜು ಕುಲಕರ್ಣಿ, ನೀವು, ನಾನು, ಮತ್ತ್ಯಾರಿದ್ದ್ರು...? ಮರತಿನ್ರಿ ಕಾಕಾ, ನೆನಪಾಗವಲ್ತು.. ರಾಜು ಕುಲಕರ್ಣಿ ಅವರಂತೂ ಹೊಸ್ಪೇಟಿಯಿಂದ ಬಂದಿದ್ದ್ರು. ನಾವೆಲ್ಲಾರು ನಾಟ್ಕಾ ವಾಚನಾ ಮಾಡಿದ್ವಿ, ಒಂದಿಷ್ಟು ಮಂದಿ ಹಚಗೊಂಡೋರು ಬಂದು ಕೇಳಿ ಭಲೆ ಅಂದ್ರು. ಮತ್ತೊಂದು ಖುಷಿ ನನ್ನ ಉಡ್ಯಾಗ ಹಾಕಿದ್ರಿ ನೀವು ಅವತ್ತ. ಇವತ್ತ್ಯಾಕ ಹಿಂಗ ಮಾಡಿದ್ರಿ...?<br />
<br />
ಮಗನ ಮದವಿ ಮಾಡಿ, ನಮ್ಮನ್ನೆಲ್ಲಾ ಮನಿಗೆ ಕರ್ಶಿ ಊಟಾ ಹಾಕಿಶಿದ್ರಿ. ಫೋನ್ ಮಾಡೀದಾಗೆಲ್ಲಾ ನಕ್ಕೋತ ಮಾತಾಡಿದ್ದ್ರಿ, ಒಮ್ಮೆ ಫೋನ್ ಮಾಡಿದ್ದಾಗ ನಿಮಗ ಆರಾಮ್ ತಪ್ಪಿತ್ತು. ಸುಸ್ತ್ ಆಗಿದ್ದ್ರೂ ಬ್ಯಾಸರಾ ಮಾಡ್ಕೊಂಡಾಳು ಅಂತ ಭಿಡೇಕ್ ಬಿದ್ದು ನೀವು ದಣದ ದನ್ಯಾಗ ಮಾತಾಡೂದು ಕೇಳಿ ನಾನs ‘ರೆಸ್ಟ್ ಮಾಡ್ರಿ ಕಾಕಾ ನಾ ಮತ್ತ ಮಾತಾಡ್ತೀನಿ.’ ಅಂತ ಫೋನ್ ಇಟ್ಟಾಕಿ ಮತ್ತ ನಿಮಗ ಫೋನ್ ಮಾಡೂದು ಆಗಲಿಲ್ಲ...<br />
<br />
ಧನಂಜಯ್ ಹೇಳಿದ್ರು ಅವತ್ತ, ನೀವು ‘ಬಚ್ಚಾಸಾನಿ’ ನಾಟ್ಕಾ ಬರ್ದು, ಧನಂಜಯ್ ನಿರ್ದೇಶನ ಮಾಡಿ, ನಾನು ಮತ್ತ ಹನುಮಕ್ಕ ಇಬ್ರೂ ಒಂದs ಪಾತ್ರಾನ ಬ್ಯಾರೆ ಬ್ಯಾರೆ ಶೋ ಮಾಡೂದು ಅಂತ. ಅವತ್ತ ಖುಷೀಲೆ ಕುಣಕೋತ ಹೂಂ ಅಂದಿದ್ದೆ. ಯಾಕೊ ತಡಾ ಆಗಾಕತ್ತೈತಲ್ಲಾ ಅಂತ ಅನಿಸಿ ನಿಮ್ಮನ್ನ ಕೇಳಿದ್ರ, "ಧಾರವಾಡದ ಮಂದಿ ಬಗ್ಗೆ ಒಂದಿಷ್ಟು ಬರ್ಯಾಕತ್ತೀನಿ. ಅದನ್ನಿಷ್ಟು ಮುಗಿಶಿಬಿಟ್ಟ್ನೆಪಾ ಅಂದ್ರ ನೆಕ್ಸ್ಟ್ ‘ಬಚ್ಚಾ ಸಾನಿ’ನs. ಮಾಡೂನಂತ ಮಾಡೂನಂತ." ಅಂತಂದ್ರಿ. ಹಂಗಂದೋರು ಹಿಂಗ ಎದ್ದ ಹ್ವಾದ್ರ ಏನ್ ಮಾಡೂನ್ ಹೇಳ್ರಿ ನಾವು...? :(<br />
<br />
ಬದುಕು ಭಾಳ ದಣಿಶೇತ್ರಿ ಕಾಕಾ ನಿಮ್ಮನ್ನ, ಹೊಡತದ ಮ್ಯಾಲೆ ಹೊಡತಾ ಕೊಟ್ಟೂ ಸೋತಿದ್ದು ಅದs ಈಗ! ನೀವು ಗೆದ್ದ್ರಿ ಕಾಕಾ, ನೀವು ಗೆದ್ದ್ರಿ...<br />
<br />
<br />
<div class="separator" style="clear: both;">
<a href="https://blogger.googleusercontent.com/img/b/R29vZ2xl/AVvXsEiZcVXFKaZbeB42wgQKMarOc6p-g9vKSq1eR4i_JvGQDv4vLlFaM2b_1SqNGm1bUeagktV3m6z9-FdgptWqsQ_x7TVU1S-wiiYDDWpJu85gPsr4VosmL4PjLGK7b4YUo0eD0ZJGaXHiOSW4/s1600/11949460_817240871726596_1859351507432833350_n.jpg" imageanchor="1" style="margin-left: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEiZcVXFKaZbeB42wgQKMarOc6p-g9vKSq1eR4i_JvGQDv4vLlFaM2b_1SqNGm1bUeagktV3m6z9-FdgptWqsQ_x7TVU1S-wiiYDDWpJu85gPsr4VosmL4PjLGK7b4YUo0eD0ZJGaXHiOSW4/s320/11949460_817240871726596_1859351507432833350_n.jpg" width="320" /></a></div>
(ಜೂನ್ ೧, ೧೯೫೧- ಸೆಪ್ಟೆಂಬರ್ ೨೦, ೨೦೧೬)<br />
<div>
<br /></div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com2tag:blogger.com,1999:blog-4925720126176198020.post-48059458226600532972016-09-12T23:52:00.000+05:302016-09-13T09:49:56.760+05:30 ನೀರಡಿಸಿದೆ ನೀರು<div dir="ltr" style="text-align: left;" trbidi="on">
<br />
<br />
ನೀರಡಿಸಿದೆ ನೀರು, ಭಯಗೊಂಡಿದೆ ಭುವಿಯು (೨)<br />
<br />
ಇಲ್ಲದೆ ಹೋದರೆ ಜೀವಜಲ<br />
<br />
ಬದುಕುವೆಯಾ ನೀ ಮರುಳ ಮರುಳ<br />
<br />
<br />
ಜುಳುಜುಳು ನಾದವ ಕಾಪಿಡು ನೀ<br />
<br />
ಹರಿಯುವ ತೊರೆಯನು ಕಾಪಿಡು ನೀ<br />
<br />
ಜಿನುಗುವ ಸೆಲೆಯ ಕಾಪಿಡು ನೀ<br />
<br />
ಹನಿಹನಿ ಪ್ರತಿಹನಿ ಕಾಪಿಡು ನೀ <br />
<br />
ಸೊರಗಿದೆ ಕಡಲು ಒಣಗಿದೆ ಮುಗಿಲು (೨)<br />
<br />
ಜ್ವಲಿಸುತ ಅಳುತಿದೆ ಇಳೆಯಾ ಒಡಲು<br />
<br />
ನೀರಡಿಸಿದೆ ನೀರು ಭಯಗೊಂಡಿದೆ ಭುವಿಯು (೨)<br />
<br />
<br />
ಉಸಿರಿಗೆ ಹಸಿರಿಗೆ ನೀರು ನೆಲೆ<br />
<br />
ಅರಿಯದೆ ಹೋದೆವು ಅದರ ಬೆಲೆ<br />
<br />
ಜೀವದ ಸೆಲೆಯ ಉಳಿಸೋಣ<br />
<br />
ಬದುಕಿನ ಬಿಂದಿಗೆ ಭರಿಸೋಣ<br />
<br />
ಮುಂದಿನ ಪೀಳಿಗೆ ಕಾಣದು ನಾಳೆಯ (೨)<br />
<br />
ಉಳಿಸದೆ ಹೋದರೆ ಶರಧಿಯ ಮರುಳ<br />
<br />
ನೀರಡಿಸಿದೆ ನೀರು, ಭಯಗೊಂಡಿದೆ ಭುವಿಯು (೨)<br />
<div>
<br />
<br />
<div class="MsoNormal">
<span style="font-family: "tunga" , sans-serif;"><span style="line-height: 18.4px;">ಹಿಂದಿ ಮೂಲ: ಮುನ್ನಾ ಧೀಮನ್</span></span></div>
<div class="MsoNormal">
<span style="font-family: "tunga" , sans-serif;"><span style="line-height: 18.4px;">ಅನುವಾದ: ಜಯಲಕ್ಷ್ಮೀ ಪಾಟೀಲ್ (15 ಜುಲೈ 2012)</span></span><br />
<span style="font-family: "tunga" , sans-serif;"><span style="line-height: 18.4px;"><br /></span></span>
<br /><br />JAL NAA JAAYE JAL<br /><br />JAL NAA JAAYE JAL (2)<br /><br />DHARAA NAA KAL HO MAARUTHAL<br /><br />SAMBHAL JAA RE AB PAAGAL PAAGAL<br /><br />JAL NAA JAAYE JAL<br /><br />JAL NAA JAAYE JAL (2)<br /><br /><br />ANTRA 1<br /><br />SAAGAR SAAGAR PEHRA DE<br /><br />GAAGAR GAAGAR PEHRA DE<br /><br />BOOND BOOND PAR PEHRA DE<br /><br />BAADAL BAADAL PEHRA DE<br /><br />NADI HAI PYAASI<br /><br />GHADAA HAI PYAASA (2)<br /><br />MAR NA JAAYE KAL AREY PAAGAL<br /><br />JAL NAA JAAYE JAL<br /><br />JAL NAA JAAYE JAL (2)<br /><br /><br /><br /><br />ANTRA 2<br /><br />SAANSON KA AUR BOONDON KA<br /><br />DONON KA BAL EK SAA<br /><br />DONON JEEVAN BAANTEIN<br /><br />DONON KA PHAL EK SAA<br /><br />BOONDON KO BHI<br /><br />SAANSON JAISI (2)<br /><br />MAAN KE CHAL , AREY SAMAJH LE PAAGAL<br /><br />JAL NAA JAAYE JAL<br /><br />JAL NAA JAAYE JAL (2)</div>
</div>
<div class="MsoNormal">
<br /></div>
<div class="MsoNormal">
- Munna Dhiman</div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com0tag:blogger.com,1999:blog-4925720126176198020.post-59807521776438009192016-08-31T19:47:00.004+05:302016-08-31T19:47:47.888+05:30ಮರಳ ಮೇಲೆ ಬರೆದು ನನ್ನ ಹೆಸರ <div dir="ltr" style="text-align: left;" trbidi="on">
ಮರಳ ಮೇಲೆ ಬರೆದು ನನ್ನ ಹೆಸರ ಮರಳಿ ಅಳಿಸದಿರು<br />ನಿಜ ನುಡಿಯುತಿವೆ ಕಣ್ಣುಗಳು ತುಳುಕುತಿರುವ ಪ್ರೀತಿಯ ತಡೆಹಿಡಿಯದಿರು ||ಪ||<br /><br />ಕಂಡಿದ್ದಕ್ಕೆಲ್ಲ ಕತೆ ಕಟ್ಟುವರು ಕಂಡಕಂಡವರೆಲ್ಲ <br />ಎಲ್ಲರಿಗೂ ಕಾರಣಗಳ ಅರುಹುತ ಅಲೆಯದಿರು ||1||<br /><br /><br />ಎದುರಾದವರೆಲ್ಲ ಅಶ್ವಿನಿದೇವತೆಗಳಲ್ಲ<br />ಪ್ರೀತಿಯ ನೋವದು ಬಲು ಅಮೂಲ್ಯ ಅನ್ಯರೆದುರು ಅದನು ತೆರೆದಿಡದಿರು ||2||<br /><br />ಕಂಡಿದ್ದಕ್ಕೆಲ್ಲ ಕತೆ ಕಟ್ಟುವರು ಕಂಡಕಂಡವರೆಲ್ಲ <br />ಎಲ್ಲರಿಗೂ ಕಾರಣಗಳ ಅರುಹುತ ಅಲೆಯದಿರು ||3||<br /><br />ಭಾವನೆಗಳ ನಗರಿಯಲಿ ಈಗ ಆಲಿಕಲ್ಲಿನ ಮುಸಲ ಧಾರೆ<br />ಹೃದಯವ ಗಾಜಿನ ಪೆಟ್ಟಿಗೆಯಲ್ಲಿಟ್ಟು ಪ್ರದರ್ಶನಕ್ಕಿಡದಿರು ||4||<div>
<br /></div>
<div>
- (ಅನುವಾದ) ಜಯಲಕ್ಷ್ಮೀ ಪಾಟೀಲ್<br /><div>
<br /></div>
<div>
*</div>
<div>
<br /></div>
<div>
ret par likh ke mera naam mitaayaa naa karo<br />aankh sach bolati hai pyaar chhupaayaa naa karo<br /><br />log har baat kaa afasaanaa banaa lete hai<br />sabako haalaat ki rudaad sunaayaa naa karo<br /><br />yeh zururi nahi har shakhs masihaa hi ho<br />pyaar ke zakhm amaanat hai dikhaayaa naa karo<br /><br />shahar e ehasaas mein patharaav bahut hai mohasin<br />dil ko shishe ke jharokho mein sajaayaa naa karo</div>
<div>
<br /></div>
<div>
- Unknown Lyricist </div>
<div>
<br /></div>
<div>
<a href="https://www.youtube.com/watch?v=S7xnCkYKnFY">https://www.youtube.com/watch?v=S7xnCkYKnFY</a></div>
<div>
<br /></div>
<div>
<br /></div>
</div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com2tag:blogger.com,1999:blog-4925720126176198020.post-36843588282139709722016-08-27T13:24:00.001+05:302017-08-01T17:25:52.116+05:30ಒಲೆ<div dir="ltr" style="text-align: left;" trbidi="on">
ಮುರಳಿ ಮೋಹನನ ಮಾತು ಗಾನ ವಾಹ್ವಾ ವಾಹ್ವಾ<br />
<br />
ಮಿಂದೇಳುತ್ತಿದ್ದಾರೆ ಗೋಪ ಗೋಪಿಯರೆಲ್ಲ ಹಾಲಿನಲ್ಲಿ<br />
<br />
ಅಡುಗೆ ಮನೆಯಲ್ಲಿ ಅವಳ ಕೈಯಲ್ಲಿ ಊದುಗೊಳವೆ<br />
<br />
ಮತ್ತೆ ಮತ್ತೆ ಸೆರೆಯುಬ್ಬಿ ಕಣ್ತುಂಬಿ ಬರುತ್ತಿರುವುದು ಉರಿ<br />
<br />
ಯದ ಹಸಿಹಸಿ ಕಟ್ಟಿಗೆ, ಮಡಿಲು ತುಂಬಿಕೊಳ್ಳುವ ಬಯಕೆ<br />
<br />
ತಟ್ಟಿದ ಬೆರಣಿಯನ್ನೂ ಪುಟುವಿಗೆ ಇಟ್ಟಾಗಿದೆ ಒಲೆಗೆ<br />
<br />
ಊಫ್… ಊಫ್… ತಿತ್ತಿ ತುಂಬಿಕೊಳ್ಳುತ್ತಿವೆ ಹೊಗೆಗೆ ಒಳಗೆ<br />
<br />
ಹೊರಗೆ ಹೆಣ್ಣಿಗಾಗಿ ಕನಿಕರಿಸುವ ಚರ್ಚೆಗೆ ಅಮಲು<br />
<br />
ರನ್ನ ಪಂಪರಾದಿಯಾಗಿ ಇಂದಿನವರೆಗೂ ಹರಿಯಿತದರ ಹೊನಲು<br />
<br />
ನಡು ನಡುವೆ ಮಧು’ರ ಮಾತು ಮೆಲು ನಗು ಛೇಡಿಸುವಿಕೆ<br />
<br />
ಗೆ ಇಲ್ಲೊಂದು ನಿಡಿದಾದ ನಿಟ್ಟುಸಿರು ಬಿಸಿಗೆ ಹೊತ್ತಬಾರದೆ ಒಲೆ<br />
<br />
ಹಾಳಾದ್ದು ಬೆಂಕಿಪೊಟ್ಟಣದ ತುಂಬಾ ಮದ್ದಲ್ಲದ ಮದ್ದು<br />
<br />
ತಡ ಮಾಡಿದರೆ ಪ್ರತಿಷ್ಠೆ ಹಾಳಾಗಿ ಬೀಳದಿರುವುದೆ ಗುದ್ದು?<br />
<br />
ಪೆಟ್ಟುಂಡ ಮನಸದು ಒಡೆದ ಕಟ್ಟಿಗೆಯಂತೆ ಸಿಬಿರು ಸಿಬಿರು<br />
<br />
ಹೊಗೆಗಿಂಡಿಯಿಂದಿಣುಕುವ ಬಿಸಿಲು ಕೋಲಿಗೆ ನೆಟ್ಟ ದಿಟ್ಟಿ<br />
<br />
ಸುಟ್ಟ ಕನಸುಗಳ ಸಾಲು ಮೆರವಣಿಗೆಯ ತುದಿಯಲ್ಲಿ ಕಣ್ಣೀರ ಬಿಂದು<br />
<br />
ಬಿಂದು ಬಿಂದು ಸೇರಿ ಮಿಂದು ಹೊತ್ತಿಕೊಳ್ಳುತ್ತಲೇ ಇಲ್ಲ ಒಲೆ<br />
<br />
ಹಸಿ ಕಟ್ಟಿಗೆ ಹುಸಿ ಮದ್ದು ಇತ್ಯಾದಿ ರವುದಿ ಸಬೂಬು<br />
<br />
ಗಳಿಂದ ಇಂಗಲಾರದು ಬದುಕ ಬಯಕೆ ಸಾಕು ಸಹಜ ಕಾತರ<br />
<br />
ಹತ್ತದ ಒಲೆಯೀಗ ಅಗ್ನಿ ಪರ್ವತ ಜ್ವಾಲೆ<br />
<br />
ಎದ್ದು ನಿಂತು ಒದರಿ ನೆರಿಗೆ ನೇರ ನಡೆದಳು ಬಯಲಿಗೆ<br />
<div>
<br /></div>
<div>
- ಜಯಲಕ್ಷ್ಮೀ ಪಾಟೀಲ್<br />
<br />
<div>
<div>
<span style="font-size: x-small;"><br /></span></div>
<div>
<br /></div>
</div>
</div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com0tag:blogger.com,1999:blog-4925720126176198020.post-9583815591866794112016-08-18T18:41:00.005+05:302023-11-15T21:39:29.868+05:30ಇಳಿಸಿದಂತೆ ಯಾವುದೋ ಋಣಭಾರವ - ಗುಲ್ಜಾರ್<div dir="ltr" style="text-align: left;" trbidi="on">
<br />
<br />Din kuch aise gujaarataa hai koyi - Gulzar<br />
<br /><br /></div><div dir="ltr" style="text-align: left;" trbidi="on"><div dir="ltr" trbidi="on"><div dir="ltr" trbidi="on">ಇಳಿಸಿದಂತೆ ಯಾವುದೋ ಋಣಭಾರವ</div><div dir="ltr" trbidi="on">ದೂಡುತ್ತಿರುವೆ ನಿತ್ಯವೂ ದಿನವ</div></div><div dir="ltr" trbidi="on"><br /></div><div dir="ltr" trbidi="on">ಈ ಮನೆಯಲಿ ಯಾರೋ ಗುರುತಿಸಿದಂತೆ ನನ್ನ</div><div dir="ltr" trbidi="on">ಕನ್ನಡಿಯ ಕಂಡು ತುಸು ಸಮಾಧಾನ</div></div><div dir="ltr" style="text-align: left;" trbidi="on"><br />ಮತ್ತೆ ಯಾರೋ ಎಸೆಯುತಿಹರು ಕಲ್ಲ<br />
ಪಕ್ವಗೊಂಡಿರಬಹುದು ಮರದಲ್ಲಿನ ಫಲ<br /><br />ನಿನಗ್ಯಾರೋ ಮಾಡಲು ಹೊರಟಂತಿದೆ ಮೋಸ<br />
ಮತ್ತೆ ಕಣ್ಣಲ್ಲಿ ಕಾಣುತಿದೆ ರಕ್ತದ ಹನಿಗಳ ವಾಸ<br /><br />ಯಾರೋ ನನ್ನನ್ನು ಕರೆಯುತ್ತಿರುವಂಥ ಅನಿಸಿಕೆ<br />
ಆಗಿನಿಂದಲೂ ಇಲ್ಲಿ ಬರೀ ನಿಶ್ಯಬ್ದದ ಆಲಿಕೆ</div><div dir="ltr" style="text-align: left;" trbidi="on"><br />
<br />
- ಜಯಲಕ್ಷ್ಮೀ ಪಾಟೀಲ್ (ಅನುವಾದ)<br />
<br />
*<br />
- <a href="https://www.facebook.com/gulzaronline/">Gulzar</a><br />
<br />Din kuch aise gujaarataa hai koyi</div><div dir="ltr" style="text-align: left;" trbidi="on">
jaise ehasaan utaarataa hai ko_ii<br />
<br />
aa_iinaa dekh ke tasallii hu_ii<br />
ham ko is ghar me.n jaanataa hai ko_ii<br />
<br />
pak gayaa hai shazar pe phal shayaad<br />
phir se patthar uchhalataa hai ko_ii<br />
<br />
phir nazar me.n lahuu ke chhii.nTe hai.n<br />
tum ko shaayad mughaalataa hai ko_ii<br />
<br />
der se guu.Njate.n hai.n sannaaTe<br />
jaise ham ko pukaarataa hai ko_ii</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com2tag:blogger.com,1999:blog-4925720126176198020.post-8683750666021280572016-08-18T08:30:00.005+05:302016-08-18T11:56:04.800+05:30ಔದಾರ್ಯ<div dir="ltr" style="text-align: left;" trbidi="on">
ಮೀಸೆಯಲುಗಿಸಿ ಮೂಸುತ್ತಿದ್ದವು ನೊಣಗಳು<br />
ಮಿಕ್ಕಿದನ್ನ ವಡೆ ಚೂರು ಪಾಯಸವಂಟಿದ ಪತ್ರೊಳೆ <br />
ಗುಪ್ಪೆ ಗುಪ್ಪೆಗೂ ತಿಪ್ಪೆಯಲಿ ಗುಂಪಾಗಿ ಮುತ್ತಿಗೆ<br />
ಸದ್ದಿಲ್ಲದಂತೆ ಪಾದಗಳೂರಿ ಪಾಲಿಗೆ ಬಂದ ನಾಯಿ<br />
ಗುಂಪಿಗೆ ಗುಂಪೇ ಹೆದರಿ ಹಾರಿ ಗುಂಯಿಗುಟ್ಟಿದವು<br />
ಹೆದರಿಸದೆ ಕಮಕ್ ಕಿಮಕ್ ಅನ್ನದೆ ಜೊತೆಗೂಡಿದ್ದೇ <br />
ನಾಯಿಯ ಔದಾರ್ಯಕೆ ಹಿಗ್ಗಿ ಕೊಂಡಾಡಿ ಬಾಲ <br />
ಸವರಿ ತಲೆ ಮೇಲೇರಿ ಬೆನ್ನ ಸವಾರಿ ಸೂಪರ್ರುರೀ<br />
ದೊಡ್ಡ ಪಾಲು ದೊಡ್ಡ ಬಾಯಿಗೆ ಮಿಕ್ಕಿ ಉಳಿದರೆ ಸಣ್ಣವರಿಗೆ<br />
ವಿಳಂಬಿಸದೆ ಶ್ವಾನಸ್ವಾಮಿಗಳು ಆಹಾರ ಸೇವಿಸಿ ಸಂತೃಪ್ತಿ<br />
ನಿಂತ ನೆಲೆಯ ವೀಕ್ಷಿಸಿ ಹಾಗೇ ಗಿರ್ರನೆ ಸ್ವಪ್ರದಕ್ಷಿಣೆ ರಿಂಗ್ ರಿಂಗ್<br />
ರೋಡಿಗಿಳಿದು ಬಿಜಯಂಗೈದರು ಘನಗಾಂಭಿರ್ಯದಿಂದ<br />
ಮುರುಕಿರಿದ್ದ ನೊಣಗಳು ಎಗರಿ ಬಿದ್ದವು ಶುಷ್ಕ ತಿಪ್ಪೆಯ ಮೇಲೆ<br />
<br />
- ಜಯಲಕ್ಷ್ಮೀ ಪಾಟೀಲ್<br />
<div>
<br /></div>
</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com2tag:blogger.com,1999:blog-4925720126176198020.post-22574527162867434452016-08-16T13:49:00.000+05:302016-08-16T13:49:01.038+05:30ಹೆಣ್ಣೆಂದರೆ<div dir="ltr" style="text-align: left;" trbidi="on">
<br /><br />ದ್ರೌಪದಿಯ ದರುಶನವಾಯ್ತು!<br />ತಟ್ಟನೆ ತಿರುಗಿದೆ ಮತ್ತೊಮ್ಮೆ ಮಗದೊಮ್ಮೆ<br />ಇನ್ನೊಮ್ಮೆ ಎದುರಾಗಿತ್ತು ಅದೇ ಸಂಬೋಧನೆ<br /><br />ಎದುರಿಗೆ ಐಸ್ಕ್ರೀಮಿನಂಥಾ ತಣ್ಣಗಿನ ಸಿಹಿದನಿ<br />ಮೆಚ್ಚುಗೆಯ ಮಾತದು ಕೊಂಕಿನ ಸೋಂಕಿಲ್ಲ<br />ನನ್ನೊಳಗಿನ ಅಗ್ನಿಕನ್ಯೆ ನಂದಾದೀಪವಾಗ<br /><br />ನನ್ನ ನಾಟಕದ ದ್ರೌಪದಿಯ ಪಾತ್ರಕ್ಕೆ ನೀನೆ ಫಿಟ್ಟು<br />ಹೀಡಂಬಿ ಪಾತ್ರಕ್ಕೆ ಉಮಾಶ್ರಿ ಪರ್ಫೆಕ್ಟು<br />ಲಲಿತಕ್ಕ ಅಂದು ಹೇಳಿದ್ದು ಅನುರುಣಿಸಿತು ಮನದಿ<br /><br />ನಿಲುವುಗನ್ನಡಿಯ ಎದುರಿನ ಅಲಂಕೃತ ರೂಪ<br />ರೂಪಗಳನು ದಾಟಿ ದ್ವಾಪರ ಯುಗದ ರಾಜಕಾರಣ<br />ದ ಚಾಟಿ ಏಟಿನ್ನು ಅನುಭವಿಸುತಲಿತ್ತು ಕಲಿಯುಗದಲ್ಲಿ<br /><br />ಉರಿಯ ಉಯ್ಯಾಲೆಯಲ್ಲಿ ಬೆಂದವಳನ್ನು ಬಳಸಿತ್ತು<br />ಅಂಚಲ್ಲಿನ್ನು ಕೆಂಪು ಉಳಿಸಿಕೊಂಡ ತಣ್ಣಗಿನ ಕೆಂಡ<br />ದ ಸೀರೆ ಉಟ್ಟವಳು ಮಾತ್ರ ಇನ್ನೂ ಧಗ ಧಗ<br /><br />ಶಿರದ ಮೇಲಿನ ಗುಗ್ಗಳ ಎದೆಯೊಳಗಿನ ಕಿಚ್ಚು ನೀನು<br />ನೀನಾಗಿ ನಟಿಸಿಯೇ ಜ್ವಲಿಸಿ ತಪಿಸುವ ನಾನು<br />ಪಾಂಡವರನ್ನು ಪಣಕ್ಕಿಟ್ಟು ಕೀಚಕರ ಕೊಲ್ಲಬಯಸುತ್ತೇನೆ<br /><br />ಚೌಪದಿಗಳಂತೆ ವರ್ತಿಸುವ ಪಂಚರೊಡನೆಯ ಬದುಕು<br />ಸಾವಿರ ಹೆಂಡಿರ ಗಂಡನಿಗಿದ್ದಷ್ಟು ಸುಲಭವೆಲ್ಲಿತ್ತೆ ನಾರಿ ನಿನಗೆ <br />ತುಳಿದ ಸಪ್ತಪದಿ ಆಸೆಗಳನ್ನರಳಿಸಿತ್ತೇ ಇಲ್ಲಾ ನಿನ್ನ ಕೆರಳಿಸಿತ್ತೆ?<br /><br />ದ್ರೌಪದಿಯ ಚೌಪದಿ ಸಪ್ತಪದಿಗೇ ಸೀಮಿತವಾಯಿತೆ ಮತ್ತೆ<br />ನಕ್ಕ ನಗುವಿಗೂ ಸತ್ತ ಮಗುವಿಗೂ ದಿಕ್ಕು ದೆಶೆ ತಪ್ಪಿ ಮಹಾಭಾರತ<br />ಹೆಣ್ಣೆಂದರೆ ಕರಗುವ ಐಸ್ಕ್ರೀ ಮ್ ಚಪ್ಪರಿಸಬಹುದಾದ ನಾಲಿಗೆ ಸ್ವಾದ!<br /><br />- ಜಯಲಕ್ಷ್ಮೀ ಪಾಟೀಲ್<br />(ಫೇಸ್ಬುಕ್ ನ 'ಚೌ ಚೌಪದಿ' ಗುಂಪು ಈ ಪದ್ಯಕ್ಕೆ ಪ್ರೇರಣೆ)</div>
<div class="blogger-post-footer">ಜಯಲಕ್ಷ್ಮೀ ಪಾಟೀಲ್.</div>Jayalaxmihttp://www.blogger.com/profile/00230397964148079817noreply@blogger.com4