Monday, January 20, 2014

ಕನಸುಗಣ್ಣಿನವರು

ಕನಸ ಹೊತ್ತು
ಕಾಯುತ್ತಾ ನಿಂತಿದ್ದಾರೆ
ಕೊಳ್ಳುವ ಕನಸಲ್ಲ
ಬಳ್ಳ ಹಿಡಿದರೆ ಅಳತೆಗೆ ಸಿಕ್ಕುವುದಿಲ್ಲ
ಬೀಳುವ ಕನಸಲ್ಲ
ಕಣ್ಣ ತೆರೆ ಸರಿಯೆ ಕರಗುವುದಿಲ್ಲ
ಅಬ್ಬರದ ಕನಸಲ್ಲ
ಬಿರುಗಾಳಿಗೆ ಸಿಕ್ಕಂತೆ ಸಾಗಬೇಕಿಲ್ಲ
ಕನಸದು ಗೊಬ್ಬರವೂ ಅಲ್ಲ
ಎದುರಾದುದನು ಕಂಡು
ಹಿಂದೆ ಸರಿಯಬೇಕಿಲ್ಲ
ಕನಸ ಹೊತ್ತು
ಕಾಯುತ್ತಾ ನಿಂತಿದ್ದಾರೆ
ಬೆರಗಿನ ಅರಳುಗಣ್ಣುಗಳಿಗೆ
ಎಟಕುತ್ತಿಲ್ಲ ವಾಸ್ತವ
ಬಣ್ಣ ಬಣ್ಣದ ಕನಸು
ಕಿಟಕಿ ಸರಳುಗಳ ಹಿಂದಿನಿಂದಲೇ
ಮುಗಿಲೆತ್ತರಕ್ಕೇರ ಬಯಸಿದರೂ
ಸೂತ್ರ ಹಿಡಿದ ಪುಟ್ಟ
ಕೈಗಳ ಸುತ್ತಿಕೊಂಡಿದೆ
ಬಂದಿಖಾನೆಯಲ್ಲಿರುವ ಹೆತ್ತವರ
ಕೇಡಿನ  ಅದೃಶ್ಯ ಬೇಡಿ
                                 - ಜಯಲಕ್ಷ್ಮೀ ಪಾಟೀಲ್.

ಚಿತ್ರಕೃಪೆ: ಗೂಗಲ್

4 comments:

ಮನಸು said...

ಚೆನ್ನಾಗಿದೆ ಕವನ ಅಕ್ಕಾ. ಎಷ್ಟೋ ಜನ ಕನಸುಗಳ ಹಿಂದೆ ಹೋಗಬೇಕಾಗಿದೆ ಅವರ ಜೀವನ ಕನಸುಗಳಿಗೆ ಸೀಮಿತವಾಗಿಬಿಟ್ಟಿದೆ

ಕನಸು ಕಂಗಳ ಹುಡುಗ said...

ಕನಸುಗಳ ಜಾಲ ಹಿಡಿಯ ಹೊರಟರೆ
ಒಂದು ನೂರಾದೀತು...
ಅದೊಂದು ರಂಗು ರಂಗಿನ ಪಂಚರಂಗಿ...

ಸೂತ್ರ ಹಿಡಿದ ಪುಟ್ಟ
ಕೈಗಳ ಸುತ್ತಿಕೊಂಡಿದೆ
ಬಂದಿಖಾನೆಯಲ್ಲಿರುವ ಹೆತ್ತವರ
ಕೇಡಿನ ಅದೃಶ್ಯ ಬೇಡಿ

ಈ ಸಾಲುಗಳು ಸೋಜಿಗವೆನಿಸಿದವು...
super...

Jayalaxmi said...

ಥ್ಯಾಂಕ್ಸ್ ಸುಗುಣಾ. ಹೌದು. :(

Jayalaxmi said...

‘ಕನಸುಗಳ ಹಿಡಿಯ ಹೊರಟರೆ ಒಂದು ನೂರಾದೀತು!’ ಆಹಾ!!
ಥ್ಯಾಂಕ್ಸ್ ರಘು. :)