Thursday, November 20, 2014

ನಿರೀಕ್ಷೆ



ಮನದ ಸುಂಟರಗಾಳಿ ಮೇಲೆದ್ದು
ಕಣ್ಣ ಹೊಕ್ಕ ಕಸವ ಕಳೆಯುವಲ್ಲಿ
ನನ್ನ ತಿತ್ತಿ ದಣಿಯಿತು
ಊದಲು ಉಸಿರು ತುಂಬಿ
ತುಂಬಿ ಓಹ್ ಏದುಸಿರು
ಕಸರು ಉಳಿದ ಕಣ್ಣುಗಳಿಗೆ
ಪಾರದರ್ಶಕ ಮನದಲೂ ಹುನ್ನಾರ!
ಬಿಂಬಗಳು ಒಂದಕ್ಕೆರಡಾಗಿ
ಎರಡು ಒಂದಾಗಿ...
ಕಾಯುತ್ತಾ ಕುಳಿತಿದ್ದೇನೆ ಸುಮ್ಮನೆ,
ಹುನ್ನಾರ ತುಂಬಿದ ಕಣ್ಣುಗಳಲಿ
ಪ್ರತಿಫಲಿಸಬೇಕಾದ ನಿಚ್ಚಳತೆಗಾಗಿ


                                              - ಜಯಲಕ್ಷ್ಮೀ ಪಾಟೀಲ್

1 comment:

ಮನಸಿನಮನೆಯವನು said...

"ಹುನ್ನಾರ ತುಂಬಿದ ಕಣ್ಣುಗಳಲಿ
ಪ್ರತಿಫಲಿಸಬೇಕಾದ ನಿಚ್ಚಳತೆಗಾಗಿ" Nice lines