Wednesday, May 13, 2015

ಸರೋವರ

ಬಗ್ಗಡವನ್ನೆಲ್ಲ ತಳಕೆ ತಳ್ಳಿ ಕಸದಿಂದ ರಸ ಸೋಸಿ 
ಅದರಲ್ಲೊಂದಿಷ್ಟು ಹೂಗಳನ್ನರಳಿಸಿಕೊಂಡು 
ತನ್ನ ಪಾಡಿಗೆ ತಾನಿತ್ತು ಶಾಂತವಾಗಿ ತಿಳಿ ನೀರ ಸರೋವರ
ತರಲೆ ಸುಬ್ಬನೊಬ್ಬನಿಗೆ ತರಂಗಗಳ ನೋಡುವ ಬಯಕೆ
ದಡದಿ ನಿಂತು ಕಲ್ಲೊಂದ ಬೀಸಿದ ಸೂಂಯ್ಯೆಂದು 
ಬುಗುರೆಯ ಚಾಟಿಯ ತೆರೆದಿ ಅಡ್ಡಡ್ಡಲಾಗಿ 
ಶಾಂತತೆ ಕಲಕಿ ಕಲ್ಲು ಕೆದಕುತಿರೆ ತಳದ ಕೆಸರ 
ಅಲೆಅಲೆಯಾಗಿ ದಡ ತಲುಪಿ ಮರಳುತಿದ್ದವು 
ನೋವ ಭಾವಗಳು ಕೊಳದ ಮುಖದಲಿ 
ಬೀಸಿದ ಕಲ್ಲು ಎದೆಗೆ ನಾಟಿ ಮುಲುಗತೊಡಗಿತು ಕೊಳ 
ಬಯಸಿದ್ದು ನೆರವೇರಿ ಕಲ್ಲೆಸೆದವನ ಮುಖ ಕಮಲದಂತರಳಿತ್ತು

                                                               - (ಮಾರ್ಚ್ ೨೦ - ೨೦೧೫)

2 comments:

Badarinath Palavalli said...

ಕಲ್ಲು ಎಸೆದವನಿಗೆಂತ ವಿಕೃತಿ. ತಿಳಿಯಾಗ ಬಿಡನವನು ಬಗ್ಗಡ!

ಮನಸಿನಮನೆಯವನು said...

ಶಾಂತತೆಯ ಬಂಧನದಲ್ಲಿದ್ದ ತರಂಗಗಳಿಗೆ ಸದ್ದು ಮಾಡುವ ಮನಸ್ಸಿನಿಂದ ಬಿಡುಗಡೆ ಸಿಕ್ಕಿ ನಲಿವ ರೀತಿಯದು. ಇಲ್ಲ ಅಂತೀರಾ.